<p><strong>ರಾಮನಗರ</strong>: ಜಿಲ್ಲೆಯಾದ್ಯಂತ ಎರಡು ವರ್ಷದಿಂದ ಎದುರಾಗಿದ್ದ ತೀವ್ರ ಬರಗಾಲ ಈಗಿಲ್ಲ ಎಂಬುದನ್ನು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಎರೇಹಳ್ಳಿ ಗ್ರಾಮದ ಕೊಳವೆ ಬಾವಿಯೊಂದು ಸಾರಿ ಸಾರಿ ಹೇಳುತ್ತಿದೆ!<br /> <br /> ಪಂಪ್, ಮೋಟಾರು ಅಥವಾ ವಿದ್ಯುತ್ ಸಂಪರ್ಕವೇ ಇಲ್ಲದೆ ಇಲ್ಲಿನ ಕೊಳವೆ ಬಾವಿಯಿಂದ ನೀರು ಸದಾ ಹೊರಕ್ಕೆ ಚಿಮ್ಮುತ್ತಿದೆ. ಇದರಿಂದ ಗ್ರಾಮದ ಜನರು ಸಂತಸಗೊಂಡಿದ್ದಾರೆ. ಸದಾ ನೀರು ತುಂಬಿ ಹರಿಯುವುದರಿಂದ ಆ ನೀರು ಹೊಳೆಗೆ ಸೇರುವ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದಾರೆ.<br /> <br /> `ಗ್ರಾಮದಲ್ಲಿ 70ರಿಂದ 80 ಮನೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಇದನ್ನು ಅರಿತು ಒಂದೂವರೆ ತಿಂಗಳ ಹಿಂದೆ ಈ ಕೊಳವೆ ಬಾವಿ ಕೊರೆಸಲಾಯಿತು. ಇಲ್ಲಿ ಹೆಚ್ಚಿನ ಪ್ರಮಾಣದ ನೀರು ದೊರೆತಿದೆ. ಆದರೆ ನೀರಿನ ವೇಗ ಹೆಚ್ಚಿರುವ ಕಾರಣ ಪಂಪು, ಮೋಟಾರು ನೆರವಿಲ್ಲದೆ ನೀರು ಹೊರ ಚಿಮ್ಮುತ್ತಿದೆ' ಎಂದು ಗ್ರಾಮದ ನಿವಾಸಿ ವೆಂಕಟೇಶ್ ತಿಳಿಸಿದರು.<br /> <br /> `ಕೊಳವೆ ಬಾವಿ ಬಳಿಯೇ ಸುವರ್ಣ ಮುಖಿ ನದಿ ಹರಿಯುವ ಹೊಳೆ ಇರುವ ಕಾರಣ ಇದರ ನೀರನ್ನು ಹೊಳೆಗೆ ಹರಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ವಿದ್ಯುತ್ ಇರಲಿ, ಇಲ್ಲದಿರಲಿ ಈ ಕೊಳವೆ ಬಾವಿಯಿಂದ ಮಾತ್ರ ನೀರು ಬರುತ್ತಿದೆ. ಇದರಿಂದ ಗ್ರಾಮದ ಜನರಿಗೆ ಅನುಕೂಲವಾಗಿದೆ. ಪಂಚಾಯಿತಿಯವರು ಮೋಟಾರು, ಪಂಪ್ ಅಳವಡಿಸುವ ಕೆಲಸ ಯಾವಾಗ ಮಾಡುತ್ತಾರೋ ಗೊತ್ತಿಲ್ಲ.<br /> <br /> ಅಲ್ಲಿಯವರೆಗೆ ಹೀಗೆ ನೀರು ಬರಲಿ ಎಂಬುದು ಗ್ರಾಮದ ಜನರ ಕೋರಿಕೆಯಾಗಿದೆ' ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಜಿಲ್ಲೆಯಾದ್ಯಂತ ಎರಡು ವರ್ಷದಿಂದ ಎದುರಾಗಿದ್ದ ತೀವ್ರ ಬರಗಾಲ ಈಗಿಲ್ಲ ಎಂಬುದನ್ನು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಎರೇಹಳ್ಳಿ ಗ್ರಾಮದ ಕೊಳವೆ ಬಾವಿಯೊಂದು ಸಾರಿ ಸಾರಿ ಹೇಳುತ್ತಿದೆ!<br /> <br /> ಪಂಪ್, ಮೋಟಾರು ಅಥವಾ ವಿದ್ಯುತ್ ಸಂಪರ್ಕವೇ ಇಲ್ಲದೆ ಇಲ್ಲಿನ ಕೊಳವೆ ಬಾವಿಯಿಂದ ನೀರು ಸದಾ ಹೊರಕ್ಕೆ ಚಿಮ್ಮುತ್ತಿದೆ. ಇದರಿಂದ ಗ್ರಾಮದ ಜನರು ಸಂತಸಗೊಂಡಿದ್ದಾರೆ. ಸದಾ ನೀರು ತುಂಬಿ ಹರಿಯುವುದರಿಂದ ಆ ನೀರು ಹೊಳೆಗೆ ಸೇರುವ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದಾರೆ.<br /> <br /> `ಗ್ರಾಮದಲ್ಲಿ 70ರಿಂದ 80 ಮನೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಇದನ್ನು ಅರಿತು ಒಂದೂವರೆ ತಿಂಗಳ ಹಿಂದೆ ಈ ಕೊಳವೆ ಬಾವಿ ಕೊರೆಸಲಾಯಿತು. ಇಲ್ಲಿ ಹೆಚ್ಚಿನ ಪ್ರಮಾಣದ ನೀರು ದೊರೆತಿದೆ. ಆದರೆ ನೀರಿನ ವೇಗ ಹೆಚ್ಚಿರುವ ಕಾರಣ ಪಂಪು, ಮೋಟಾರು ನೆರವಿಲ್ಲದೆ ನೀರು ಹೊರ ಚಿಮ್ಮುತ್ತಿದೆ' ಎಂದು ಗ್ರಾಮದ ನಿವಾಸಿ ವೆಂಕಟೇಶ್ ತಿಳಿಸಿದರು.<br /> <br /> `ಕೊಳವೆ ಬಾವಿ ಬಳಿಯೇ ಸುವರ್ಣ ಮುಖಿ ನದಿ ಹರಿಯುವ ಹೊಳೆ ಇರುವ ಕಾರಣ ಇದರ ನೀರನ್ನು ಹೊಳೆಗೆ ಹರಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ವಿದ್ಯುತ್ ಇರಲಿ, ಇಲ್ಲದಿರಲಿ ಈ ಕೊಳವೆ ಬಾವಿಯಿಂದ ಮಾತ್ರ ನೀರು ಬರುತ್ತಿದೆ. ಇದರಿಂದ ಗ್ರಾಮದ ಜನರಿಗೆ ಅನುಕೂಲವಾಗಿದೆ. ಪಂಚಾಯಿತಿಯವರು ಮೋಟಾರು, ಪಂಪ್ ಅಳವಡಿಸುವ ಕೆಲಸ ಯಾವಾಗ ಮಾಡುತ್ತಾರೋ ಗೊತ್ತಿಲ್ಲ.<br /> <br /> ಅಲ್ಲಿಯವರೆಗೆ ಹೀಗೆ ನೀರು ಬರಲಿ ಎಂಬುದು ಗ್ರಾಮದ ಜನರ ಕೋರಿಕೆಯಾಗಿದೆ' ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>