<p><strong>ಹೊಸಪೇಟೆ: </strong>ಹಂಪಿಯಲ್ಲಿ ಹೆಚ್ಚು ಹೆಚ್ಚು ನಾಗರಿಕ ಸೌಲಭ್ಯಗಳನ್ನು ನೀಡಬೇಕು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ಹೇಳಿಕೆ ನೀಡುವ ಸರ್ಕಾರ ತಿಳಿದು ತಿಳಿಯದೇ ಒಂದೊಂದೇ ಸೇವೆಗಳನ್ನು ಹಂಪಿಯಿಂದ ಮಾಯ ಮಾಡುತ್ತಿದೆ. ಇಂತಹ ಮಾಯವಾಗುತ್ತಿರುವ ಸೇವೆಗಳ ಸಾಲಿಗೆ ಸೇರಿಕೊಂಡಿದೆ ಅಂಚೆ ಸೇವೆ.<br /> <br /> ಹಂಪಿ ಐತಿಹಾಸಿಕ ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿದ್ದರು ಸರ್ಕಾರ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿ ಗರಿಗೆ ಮೂಲ ಸೌಕರ್ಯಗಳನ್ನು ನೀಡುತ್ತಿಲ್ಲ, ಖಾಸಗಿ ಸೌಕರ್ಯಗಳು ಇಲ್ಲ, ಸರ್ಕಾರಿ ಸೌಕರ್ಯಗಳು ಇಲ್ಲದೆ ಪ್ರವಾಸಿಗರ ಬವಣೆ ಮಾತ್ರ ಮುಂದುವರಿದಿದೆ. <br /> <br /> ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಾಹಿತಿ ಕೇಂದ್ರವನ್ನು ತೆಗೆದು ಹಾಕ ಲಾಗಿದೆ. ಅಂಚೆ ಸೇವೆ ಸಹ ಈಗ ಸದ್ದು ಗದ್ದಲವಿಲ್ಲದೆ ಮಾಯವಾಗಿರುವುದು ಪ್ರವಾಸಿಗರ ಪಾಲಿಗೆ ನುಂಗಲಾರದ ತುತ್ತಾಗಿದೆ.<br /> <br /> ಸುಮಾರು 60 ವರ್ಷಗಳಲ್ಲಿ ಹಂತ ಹಂತವಾಗಿ ಬೆಳೆದು ಶಾಖಾ ಕಚೇರಿಯಿಂದ ಸ್ವತಂತ್ರ ನಿರ್ವಹಣೆಯ ಉಪ ಅಂಚೆ ಕಚೇರಿಯಾಗಿ ಸೇವೆ ಒದಗಿಸುತ್ತಿದ್ದ ಇಲ್ಲಿನ ಅಂಚೆ ಇಲಾಖೆ ಕಚೇರಿಯಲ್ಲಿ ಮಾಸಿಕ ಲಕ್ಷಾಂತರ ಮುಖಬೆಲೆಯ ಸ್ಟಾಂಪ್ ಮಾರಾಟ ಮಾಡುತ್ತಿದ್ದುದು ದಾಖಲೆಯಾಗಿತ್ತು.<br /> <br /> ರಾಜಧಾನಿ, ಮಹಾನಗರಪಾಲಿಕೆ, ಜಿಲ್ಲಾ ಕೇಂದ್ರಗಳಿಗೆ ಸಮನಾಗಿ ಗಣಕೀಕರಣ, ಇಂಟರ್ನೆಟ್ನಂಥ ಆಧುನಿಕ ಸೇವೆಗಳನ್ನು ನೀಡುತ್ತಿದ್ದ ಕಚೇರಿ ಇಲ್ಲಿನ ಶಾಖೆ ಹೆಚ್ಚಿನ ಸಂಖ್ಯೆ ಯಲ್ಲಿ ವಿದೇಶಿ ಪಾರ್ಸಲ್ಗಳನ್ನು ರವಾನಿಸುತ್ತಿತ್ತು.<br /> <br /> ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಂಚೆ ಕಚೇರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರ, ಎಟಿಎಂ ಸೇರಿದಂತೆ ಸರ್ಕಾರಿ ಸೌಲಭ್ಯಗಳ ಮಳಿಗೆ ಗಳನ್ನು ಸಹ ತೆರವುಗೊಳಿಸಲಾಗಿದೆ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡಿಸಿದಂತಾಗಿದೆ.<br /> <br /> ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ವ್ಯಾಪಾರಸ್ಥರು ಒಂದು ರೂಪಾಯಿ ಮುಖಬೆಲೆಯ ಅಂಚೆ ಸ್ಟಾಂಪ್ ಅನ್ನು 10 ರೂಪಾಯಿಗೆ ಮಾರಿ ಪ್ರವಾಸಿಗರಿಂದ ಹಣ ದೋಚುತ್ತಿದ್ದಾರೆ ಎನ್ನಲಾಗುತ್ತಿದೆ.<br /> <br /> ಆಗ್ರಹ: ಸರ್ಕಾರಿ ಸೇವೆಗೆ ಸರ್ಕಾರವೇ ಸ್ಥಳಾವಕಾಶ ನೀಡದಿರುವುದು ವಿಷಾದನೀಯ, ಇಂತಹ ಕಾರ್ಯಗಳು ಅವ್ಯವಹಾರಕ್ಕೆ ಅವಕಾಶ ಮಾಡಿ ಕೊಟ್ಟಂತಾಗಿದೆ.<br /> <br /> ತಕ್ಷಣವೇ ಸಾಲು ಮಂಟಪ ಅಥವಾ ದೇವಸ್ಥಾನದ ಒಂದು ಪಾರ್ಶ್ವದಲ್ಲಾದರೂ ಸ್ಥಳಾವಕಾಶ ನೀಡಿ ಅತ್ಯಂತ ಅವಶ್ಯಕ ವಾದ ಅಂಚೆ ಸೇವೆಯನ್ನು ಸಾರ್ವ ಜನಿಕರು ಹಾಗೂ ಪ್ರವಾಸಿಗರಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಸರ್ಕಾರವನ್ನು ಸ್ಥಳೀಯ ನಿವಾಸಿ ಮೋಹನ್ ಚಿಕ್ಕಭಟ್ಟ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಹಂಪಿಯಲ್ಲಿ ಹೆಚ್ಚು ಹೆಚ್ಚು ನಾಗರಿಕ ಸೌಲಭ್ಯಗಳನ್ನು ನೀಡಬೇಕು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ಹೇಳಿಕೆ ನೀಡುವ ಸರ್ಕಾರ ತಿಳಿದು ತಿಳಿಯದೇ ಒಂದೊಂದೇ ಸೇವೆಗಳನ್ನು ಹಂಪಿಯಿಂದ ಮಾಯ ಮಾಡುತ್ತಿದೆ. ಇಂತಹ ಮಾಯವಾಗುತ್ತಿರುವ ಸೇವೆಗಳ ಸಾಲಿಗೆ ಸೇರಿಕೊಂಡಿದೆ ಅಂಚೆ ಸೇವೆ.<br /> <br /> ಹಂಪಿ ಐತಿಹಾಸಿಕ ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿದ್ದರು ಸರ್ಕಾರ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿ ಗರಿಗೆ ಮೂಲ ಸೌಕರ್ಯಗಳನ್ನು ನೀಡುತ್ತಿಲ್ಲ, ಖಾಸಗಿ ಸೌಕರ್ಯಗಳು ಇಲ್ಲ, ಸರ್ಕಾರಿ ಸೌಕರ್ಯಗಳು ಇಲ್ಲದೆ ಪ್ರವಾಸಿಗರ ಬವಣೆ ಮಾತ್ರ ಮುಂದುವರಿದಿದೆ. <br /> <br /> ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಾಹಿತಿ ಕೇಂದ್ರವನ್ನು ತೆಗೆದು ಹಾಕ ಲಾಗಿದೆ. ಅಂಚೆ ಸೇವೆ ಸಹ ಈಗ ಸದ್ದು ಗದ್ದಲವಿಲ್ಲದೆ ಮಾಯವಾಗಿರುವುದು ಪ್ರವಾಸಿಗರ ಪಾಲಿಗೆ ನುಂಗಲಾರದ ತುತ್ತಾಗಿದೆ.<br /> <br /> ಸುಮಾರು 60 ವರ್ಷಗಳಲ್ಲಿ ಹಂತ ಹಂತವಾಗಿ ಬೆಳೆದು ಶಾಖಾ ಕಚೇರಿಯಿಂದ ಸ್ವತಂತ್ರ ನಿರ್ವಹಣೆಯ ಉಪ ಅಂಚೆ ಕಚೇರಿಯಾಗಿ ಸೇವೆ ಒದಗಿಸುತ್ತಿದ್ದ ಇಲ್ಲಿನ ಅಂಚೆ ಇಲಾಖೆ ಕಚೇರಿಯಲ್ಲಿ ಮಾಸಿಕ ಲಕ್ಷಾಂತರ ಮುಖಬೆಲೆಯ ಸ್ಟಾಂಪ್ ಮಾರಾಟ ಮಾಡುತ್ತಿದ್ದುದು ದಾಖಲೆಯಾಗಿತ್ತು.<br /> <br /> ರಾಜಧಾನಿ, ಮಹಾನಗರಪಾಲಿಕೆ, ಜಿಲ್ಲಾ ಕೇಂದ್ರಗಳಿಗೆ ಸಮನಾಗಿ ಗಣಕೀಕರಣ, ಇಂಟರ್ನೆಟ್ನಂಥ ಆಧುನಿಕ ಸೇವೆಗಳನ್ನು ನೀಡುತ್ತಿದ್ದ ಕಚೇರಿ ಇಲ್ಲಿನ ಶಾಖೆ ಹೆಚ್ಚಿನ ಸಂಖ್ಯೆ ಯಲ್ಲಿ ವಿದೇಶಿ ಪಾರ್ಸಲ್ಗಳನ್ನು ರವಾನಿಸುತ್ತಿತ್ತು.<br /> <br /> ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಂಚೆ ಕಚೇರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರ, ಎಟಿಎಂ ಸೇರಿದಂತೆ ಸರ್ಕಾರಿ ಸೌಲಭ್ಯಗಳ ಮಳಿಗೆ ಗಳನ್ನು ಸಹ ತೆರವುಗೊಳಿಸಲಾಗಿದೆ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡಿಸಿದಂತಾಗಿದೆ.<br /> <br /> ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ವ್ಯಾಪಾರಸ್ಥರು ಒಂದು ರೂಪಾಯಿ ಮುಖಬೆಲೆಯ ಅಂಚೆ ಸ್ಟಾಂಪ್ ಅನ್ನು 10 ರೂಪಾಯಿಗೆ ಮಾರಿ ಪ್ರವಾಸಿಗರಿಂದ ಹಣ ದೋಚುತ್ತಿದ್ದಾರೆ ಎನ್ನಲಾಗುತ್ತಿದೆ.<br /> <br /> ಆಗ್ರಹ: ಸರ್ಕಾರಿ ಸೇವೆಗೆ ಸರ್ಕಾರವೇ ಸ್ಥಳಾವಕಾಶ ನೀಡದಿರುವುದು ವಿಷಾದನೀಯ, ಇಂತಹ ಕಾರ್ಯಗಳು ಅವ್ಯವಹಾರಕ್ಕೆ ಅವಕಾಶ ಮಾಡಿ ಕೊಟ್ಟಂತಾಗಿದೆ.<br /> <br /> ತಕ್ಷಣವೇ ಸಾಲು ಮಂಟಪ ಅಥವಾ ದೇವಸ್ಥಾನದ ಒಂದು ಪಾರ್ಶ್ವದಲ್ಲಾದರೂ ಸ್ಥಳಾವಕಾಶ ನೀಡಿ ಅತ್ಯಂತ ಅವಶ್ಯಕ ವಾದ ಅಂಚೆ ಸೇವೆಯನ್ನು ಸಾರ್ವ ಜನಿಕರು ಹಾಗೂ ಪ್ರವಾಸಿಗರಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಸರ್ಕಾರವನ್ನು ಸ್ಥಳೀಯ ನಿವಾಸಿ ಮೋಹನ್ ಚಿಕ್ಕಭಟ್ಟ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>