<p>ಬಸವೇಶ್ವರ ನಗರದ ಶ್ರೀ ಸಪ್ತಕ ಸಂಗೀತ ಅಕಾಡೆಮಿ ಇತ್ತೀಚೆಗೆ `ಸಪ್ತಕ ಸಂಗೀತೋತ್ಸವ~ ಕಾರ್ಯಕ್ರಮ ಆಯೋಜಿಸಿತ್ತು. ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಸಂಗೀತೋತ್ಸವ, ಜಾನಪದ, ಸಮೂಹ ಗಾಯನ ಗೋಷ್ಠಿಗಳು ಮನಸೆಳೆದವು.<br /> <br /> ಮೊದಲ ದಿನ ಯಶವಂತ ಹಳಿಬಂಡಿ ಹಾಡಿದ `ಹೋಗು ಮನಸೇ ಹೋಗು~, ಉಪಾಸನಾ ಮೋಹನ್ (ಮುನಿಯ ಬೇಡವೇ ಗೆಳತಿ), ಪಂಚಮ್ ಹಳಿಬಂಡಿ (`ಶಾನುಭೋಗರ ಮಗಳು~), ನಾಗಚಂದ್ರಕಾ ಭಟ್ (`ಪ್ರೀತಿ ಕೊಟ್ಟ ರಾಧೆಗೆ~) ಗೀತೆಗಳ ಜೊತೆಗೆ ಸಪ್ತಕದ ವಿದ್ಯಾರ್ಥಿಗಳ ಸಮೂಹ ಗಾಯನ ದಿನದ ರಂಗನ್ನು ಹಿಮ್ಮಡಿಗೊಳಿಸಿತ್ತು.<br /> <br /> ಎರಡನೇ ದಿನ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಗೆ ಕವಿ ದೊಡ್ಡರಂಗೇಗೌಡ `ಶ್ರೀ ಸಪ್ತಕ ವಾರ್ಷಿಕ ಪ್ರಶಸ್ತಿ~ ಪ್ರದಾನ ಮಾಡಿದರು.<br /> <br /> ನಂತರ ನಡೆದ ಸಂಗೀತೋತ್ಸವದಲ್ಲಿ ಮೈಸೂರು ಮಹಾದೇವಪ್ಪ, ಬಾನಂದೂರು ಕೆಂಪಯ್ಯ, ಲಕ್ಷ್ಮಣದಾಸ್, ರಮೇಶ್ಚಂದ್ರ, ಕೆ.ಎಸ್.ಸುರೇಖಾ, ಗಾಯತ್ರಿ ಕೇಶವ್ ಸೇರಿದಂತೆ ಇತರೆ ಗಾಯಕರು ಜಾನಪದ, ಭಕ್ತಿ ಗೀತೆಗಳ ಗಾಯನ ಸಂಗೀತಾಸಕ್ತರ ಮನಸೂರೆಗೊಂಡಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವೇಶ್ವರ ನಗರದ ಶ್ರೀ ಸಪ್ತಕ ಸಂಗೀತ ಅಕಾಡೆಮಿ ಇತ್ತೀಚೆಗೆ `ಸಪ್ತಕ ಸಂಗೀತೋತ್ಸವ~ ಕಾರ್ಯಕ್ರಮ ಆಯೋಜಿಸಿತ್ತು. ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಸಂಗೀತೋತ್ಸವ, ಜಾನಪದ, ಸಮೂಹ ಗಾಯನ ಗೋಷ್ಠಿಗಳು ಮನಸೆಳೆದವು.<br /> <br /> ಮೊದಲ ದಿನ ಯಶವಂತ ಹಳಿಬಂಡಿ ಹಾಡಿದ `ಹೋಗು ಮನಸೇ ಹೋಗು~, ಉಪಾಸನಾ ಮೋಹನ್ (ಮುನಿಯ ಬೇಡವೇ ಗೆಳತಿ), ಪಂಚಮ್ ಹಳಿಬಂಡಿ (`ಶಾನುಭೋಗರ ಮಗಳು~), ನಾಗಚಂದ್ರಕಾ ಭಟ್ (`ಪ್ರೀತಿ ಕೊಟ್ಟ ರಾಧೆಗೆ~) ಗೀತೆಗಳ ಜೊತೆಗೆ ಸಪ್ತಕದ ವಿದ್ಯಾರ್ಥಿಗಳ ಸಮೂಹ ಗಾಯನ ದಿನದ ರಂಗನ್ನು ಹಿಮ್ಮಡಿಗೊಳಿಸಿತ್ತು.<br /> <br /> ಎರಡನೇ ದಿನ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಗೆ ಕವಿ ದೊಡ್ಡರಂಗೇಗೌಡ `ಶ್ರೀ ಸಪ್ತಕ ವಾರ್ಷಿಕ ಪ್ರಶಸ್ತಿ~ ಪ್ರದಾನ ಮಾಡಿದರು.<br /> <br /> ನಂತರ ನಡೆದ ಸಂಗೀತೋತ್ಸವದಲ್ಲಿ ಮೈಸೂರು ಮಹಾದೇವಪ್ಪ, ಬಾನಂದೂರು ಕೆಂಪಯ್ಯ, ಲಕ್ಷ್ಮಣದಾಸ್, ರಮೇಶ್ಚಂದ್ರ, ಕೆ.ಎಸ್.ಸುರೇಖಾ, ಗಾಯತ್ರಿ ಕೇಶವ್ ಸೇರಿದಂತೆ ಇತರೆ ಗಾಯಕರು ಜಾನಪದ, ಭಕ್ತಿ ಗೀತೆಗಳ ಗಾಯನ ಸಂಗೀತಾಸಕ್ತರ ಮನಸೂರೆಗೊಂಡಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>