<p>ರಂಜಾನ್ ಪವಿತ್ರ ಮಾಸ ಸಂಯಮದೊಂದಿಗೆ ಸಹಬಾಳ್ವೆಯ ಮಂತ್ರವನ್ನೂ ಹೇಳಿಕೊಡುತ್ತದೆ. ಸೌಹಾರ್ದ ಹಾಗೂ ಸಮನ್ವಯವನ್ನು ಬದುಕಿನಲ್ಲಿ ಅಳವಡಿಸಲು ಸಹಾಯ ಮಾಡುವಂತಿರುತ್ತವೆ ಇಫ್ತಾರ್ ಕೂಟಗಳು.<br /> <br /> ಯಾವುದೇ ಧಾರ್ಮಿಕ ಎಲ್ಲೆಗಳಿಲ್ಲದೆ, ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟಗಳನ್ನು ಹಲವೆಡೆ ಏರ್ಪಡಿಸಲಾಗುತ್ತದೆ. ಒಣಹಣ್ಣುಗಳು, ಹಣ್ಣುಗಳ ರಾಶಿ, ಸೌತೆ, ಬೀಟ್ರೂಟ್ಗಳು, ಸಮೋಸಾ, ಪಫ್ಗಳು, ಕಬಾಬ್, ಬಿರಿಯಾನಿಗಳೆಲ್ಲವೂ ಇಫ್ತಾರ್ ಕೂಟದ ಖಾದ್ಯಗಳು. <br /> <br /> ಆದರೆ ಉಪವಾಸ ಮುರಿಯಲು ಮಾತ್ರ ಖರ್ಜೂರದ ಹಣ್ಣು, ಒಂದಷ್ಟು ಗುಟುಕು ಜೀವಜಲವೇ ಆಗಬೇಕು. ಖರ್ಜೂರ ಪವಿತ್ರ ಮಕ್ಕಾ ಮದೀನಾದಲ್ಲಿ ಬೆಳೆಯುವ ಹಣ್ಣಾಗಿರುವುದರಿಂದಲೇ ಇದಕ್ಕೆ ಉಪವಾಸ ಮುರಿಯುವ ಹೆಗ್ಗಳಿಕೆ ಇದೆ.<br /> <br /> ಇದರಲ್ಲಿರುವ ಪೌಷ್ಟಿಕಾಂಶಗಳಿಂದಾಗಿ ತಿಂಗಳುಗಟ್ಟಲೆ ಉಪವಾಸವಿದ್ದರೂ ನಿತ್ರಾಣ ಎನಿಸುವುದಿಲ್ಲ. ಅರಕ್ತರಾಗುವುದಿಲ್ಲ. ಎರಡು ಖರ್ಜೂರ ತಿಂದರೂ ಒಂದು ಸಂಪೂರ್ಣ ಊಟದ ಶಕ್ತಿಯನ್ನು ಖರ್ಜೂರ ನೀಡುತ್ತದೆ. ಇದೇ ಕಾರಣಕ್ಕೆ ಶಿವರಾತ್ರಿಯ ಉಪವಾಸ ಮುರಿಯುವಾಗಲೂ ತುಪ್ಪದಲ್ಲಿ ಅದ್ದಿದ ಖರ್ಜೂರವನ್ನು ಸೇವಿಸಲಾಗುತ್ತದೆ. <br /> <br /> ಖರ್ಜೂರದ ಸೇವನೆಯಿಂದಲೇ ಉಪವಾಸವಿದ್ದರೂ ಮುಖ ಕಳೆಗುಂದುವುದಿಲ್ಲ. ಹೊಸ ಕಾಂತಿ ಹುಟ್ಟುತ್ತದೆ.<br /> <br /> ಖರ್ಜೂರದೊಂದಿಗೆ ಎಲ್ಲ ಬಗೆಯ ಹುಳಿ, ಸಿಹಿಯೊಗರಿನ ಹಣ್ಣುಗಳ ಸೇವನೆಯೂ ಇಫ್ತಾರ್ ಕೂಟದ ಒಂದು ಅಂಗವಾಗಿದೆ. ಹಣ್ಣುಗಳು ಸೃಷ್ಟಿಕರ್ತ ನೀಡಿರುವ ಆಹಾರ. ಅದನ್ನು ಎಲ್ಲರೂ ಸಮಪಾಲಾಗಿ ಹಂಚಿಕೊಂಡು ಸವಿಯಬೇಕು ಎನ್ನುವುದೇ ಇದರ ಸಂದೇಶ.<br /> <br /> ಉಪವಾಸವನ್ನು ಮುರಿಯುವಲ್ಲಿ ಖರ್ಜೂರದಷ್ಟೇ ಮಹತ್ವದ ಪಾತ್ರವನ್ನು ಸಮೋಸಗಳು ವಹಿಸುತ್ತವೆ. ಈರುಳ್ಳಿ ಪಲ್ಯ ಹಾಗೂ ಖೀಮಾ ಭರಿತ ಸಮೋಸಾಗಳಲ್ಲಿ ಆಲೂಗಡ್ಡೆಗಿಲ್ಲ ಜಾಗ. 12 ಗಂಟೆಗಳಿಗಿಂತಲೂ ಹೆಚ್ಚುಕಾಲ ಖಾಲಿ ಹೊಟ್ಟೆಯಲ್ಲಿರುವಾಗ ಆಲೂಗಡ್ಡೆ ಸೇವಿಸಿದರೆ ವಾತದ ಸಮಸ್ಯೆಯಾಗಬಹುದು ಎಂದೇ ಈ ಸಂದರ್ಭದಲ್ಲಿ ಆಲೂಗಡ್ಡೆ ವರ್ಜ್ಯ. <br /> ಮಧ್ಯಾಹ್ನದಿಂದಲೇ ಈರುಳ್ಳಿಭರಿತ ಸಮೋಸಾಗಳ ತಯಾರಿ ಆರಂಭವಾಗುತ್ತದೆ. <br /> ಹೆಚ್ಚಿದ ಈರುಳ್ಳಿಗೆ ನೀರು ಸೋಕಿಸದೆ ಪಲ್ಯದಂತೆ ಒಗ್ಗರಣೆ ಹಾಕಿ, ಗೋಧಿ, ಮೈದಾ ಹಿಟ್ಟಿನ ಮಿಶ್ರಣದ ಪುಡಿಕೆಗಳಿಗೆ ಈ ಮಿಶ್ರಣವನ್ನು ತುಂಬಿ, ಬಾಯಿ ಕಟ್ಟಿ, ಎಣ್ಣೆಯಲ್ಲಿ ತೇಲಿಬಿಟ್ಟಾಗ, ಬರುವ ಘಂ.. ಎಂಬ ಘಮಲು ಎಣ್ಣೆಯ ಕಮರು ಹುಟ್ಟಿಸುವುದೇ ಇಲ್ಲ. <br /> <br /> ಕೇವಲ ಖಾದ್ಯಗಳನ್ನು ಸವಿಯುವುದು ಮಾತ್ರ ಇಫ್ತಾರ್ ಕೂಟವಲ್ಲ. ಖಾದ್ಯಗಳನ್ನು ಎಲ್ಲರೊಡಗೂಡಿ ಸವಿಯುವುದೇ ಇದರ ಮಹತ್ವವಾಗಿದೆ. <br /> <br /> ಮನೆಯಲ್ಲಾದರೆ ದಶ್ತರಖಾನಾ ಹಾಸಿಕೊಂಡು ಎಲ್ಲರೂ ಊಟ ಮಾಡುವ ಸೊಗಸೇ ಬೇರೆ. `ದಶ್ತರಖಾನಾ~ಗೆ ತನ್ನದೇ ಆದ ಮಹತ್ವವಿದೆ. ಇದೊಂಥರ ವಿಶ್ವಕುಟುಂಬದ ಭಾವವನ್ನೇ ಸಾರುವಂತಿದೆ. ಎಲ್ಲರೂ, ಎಲ್ಲರೊಡಗೂಡಿ, ಇರುವುದನ್ನು ಹಂಚಿಕೊಂಡು, ಆಹಾರವನ್ನು ಸವಿಯುತ್ತ, ಭಗವಂತನಿಗೆ ಈ ದಿನಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುವುದೇ ಆಗಿದೆ.<br /> <br /> ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿದೆಯಲ್ಲ, ಇಲ್ಲಿ ಹಾಸಿರುವಷ್ಟರಲ್ಲಿ ಎಲ್ಲರೂ ಕೂರಬೇಕು ಎನ್ನುವಂತಿದೆ. ಸಾಮೂಹಿಕ ಕೂಟಗಳಲ್ಲಿ ಪಂಕ್ತಿ ವ್ಯವಸ್ಥೆ ಮಾಡುವುದೂ ಇದೇ ಉದ್ದೇಶದಿಂದ. <br /> <br /> ದೇಶ, ಭಾಷೆ, ಧರ್ಮ ಯಾವುದಾದರೇನು? ಭಗವಂತ ನೀಡಿರುವ ಸಕಲ ಸಮೃದ್ಧಿಯಲ್ಲಿ ಸಮಪಾಲು ಪಡೆಯಬೇಕು. ಅದು ನಮ್ಮ ಅಗತ್ಯಕ್ಕೆ ಬೇಕಿರುವಷ್ಟು ಎನ್ನುವುದೂ ಇಫ್ತಾರ್ ಕೂಟದ ಆಶಯವಾಗಿದೆ.<br /> <br /> ಸೌಹಾರ್ದ ಹಾಗೂ ಸಮಬಾಳ್ವೆಗೆ ಹೆಸರಾದ ಹೈದರಾಬಾದ್ ಕರ್ನಾಟಕದಲ್ಲಿ ಇಫ್ತಾರ್ ಕೂಟಗಳಿಗೆ ತನ್ನದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿಯೂ ಆ ಭಾಗದ ಶಾಸಕರು, ಸಂಸದರು ತಮ್ಮ ಸ್ನೇಹಿತರಿಗಾಗಿ ಇಫ್ತಾರ್ ಕೂಟಗಳನ್ನು ಏರ್ಪಡಿಸುತ್ತಾರೆ.<br /> <br /> ಈ ಸಂಪ್ರದಾಯ ಎಲ್ಲೆಡೆಯೂ ಮುಂದುವರಿದಿದೆ. ಇಫ್ತಾರ್ ಔತಣ ನೀಡಿದವರಿಗಾಗಿ ಹಾಗೂ ತಮ್ಮ ಆತ್ಮೀಯರಿಗಾಗಿ ಮುಸ್ಲಿಂ ಬಾಂಧವರು ಹಬ್ಬದ ದಿನ ಶೀರ್ಕುರ್ಮಾ ಕಳುಹಿಸಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. <br /> <br /> ಹಬ್ಬದ ಹಿಂದಿನ ದಿನವೇ ಉಗುರು ಬಿಸಿ ನೀರಿನಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ನೆನೆಸಿ ಇಡಲಾಗುತ್ತದೆ. ಮದರಂಗಿ ಹಚ್ಚಿದ ಕೆಂಬಣ್ಣದ ಚಿಗುರು ಬೆರಳುಗಳು, ವಾತ್ಸಲ್ಯದ ಮಡಿಕೆ ಬಿದ್ದಿರುವ ಅಮ್ಮನ ಕೈ ಬೆರಳುಗಳು ಈ ಒಣಹಣ್ಣುಗಳನ್ನು ಉದ್ದುದ್ದಕ್ಕೆ ಹೆಚ್ಚಿಡುತ್ತವೆ. ನಂತರ ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಲಾಗುತ್ತದೆ.<br /> <br /> ಖರ್ಜೂರ, ಗಸಗಸೆಯೊಂದಿಗೆ ಕುದಿಸಿದ ಹಾಲಿಗೆ ಶ್ಯಾವಿಗೆ ಎಳೆಯನ್ನು ಹಾಕಿ ಶೀರ್ಕುರ್ಮಾ ತಯಾರಿಸಲಾಗುತ್ತದೆ. ಇದಕ್ಕೆ ಒಣ ಹಣ್ಣುಗಳ ಅಲಂಕಾರ ವಿಶಿಷ್ಟ ರುಚಿಯನ್ನೂ ನೋಟವನ್ನೂ ನೀಡುತ್ತದೆ.<br /> <br /> ಇಫ್ತಾರ್ ಕೂಟ ಹಾಗೂ ಶೀರ್ಕುರ್ಮಾದ ವಿನಿಮಯದೊಂದಿಗೆ ಸ್ನೇಹ, ಸೌಹಾರ್ದ, ಸಮಬಾಳ್ವೆಯ ಸವಿ ವರ್ಷವಿಡೀ ಸವಿಯುವಂತೆ ಆಗುತ್ತದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಜಾನ್ ಪವಿತ್ರ ಮಾಸ ಸಂಯಮದೊಂದಿಗೆ ಸಹಬಾಳ್ವೆಯ ಮಂತ್ರವನ್ನೂ ಹೇಳಿಕೊಡುತ್ತದೆ. ಸೌಹಾರ್ದ ಹಾಗೂ ಸಮನ್ವಯವನ್ನು ಬದುಕಿನಲ್ಲಿ ಅಳವಡಿಸಲು ಸಹಾಯ ಮಾಡುವಂತಿರುತ್ತವೆ ಇಫ್ತಾರ್ ಕೂಟಗಳು.<br /> <br /> ಯಾವುದೇ ಧಾರ್ಮಿಕ ಎಲ್ಲೆಗಳಿಲ್ಲದೆ, ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟಗಳನ್ನು ಹಲವೆಡೆ ಏರ್ಪಡಿಸಲಾಗುತ್ತದೆ. ಒಣಹಣ್ಣುಗಳು, ಹಣ್ಣುಗಳ ರಾಶಿ, ಸೌತೆ, ಬೀಟ್ರೂಟ್ಗಳು, ಸಮೋಸಾ, ಪಫ್ಗಳು, ಕಬಾಬ್, ಬಿರಿಯಾನಿಗಳೆಲ್ಲವೂ ಇಫ್ತಾರ್ ಕೂಟದ ಖಾದ್ಯಗಳು. <br /> <br /> ಆದರೆ ಉಪವಾಸ ಮುರಿಯಲು ಮಾತ್ರ ಖರ್ಜೂರದ ಹಣ್ಣು, ಒಂದಷ್ಟು ಗುಟುಕು ಜೀವಜಲವೇ ಆಗಬೇಕು. ಖರ್ಜೂರ ಪವಿತ್ರ ಮಕ್ಕಾ ಮದೀನಾದಲ್ಲಿ ಬೆಳೆಯುವ ಹಣ್ಣಾಗಿರುವುದರಿಂದಲೇ ಇದಕ್ಕೆ ಉಪವಾಸ ಮುರಿಯುವ ಹೆಗ್ಗಳಿಕೆ ಇದೆ.<br /> <br /> ಇದರಲ್ಲಿರುವ ಪೌಷ್ಟಿಕಾಂಶಗಳಿಂದಾಗಿ ತಿಂಗಳುಗಟ್ಟಲೆ ಉಪವಾಸವಿದ್ದರೂ ನಿತ್ರಾಣ ಎನಿಸುವುದಿಲ್ಲ. ಅರಕ್ತರಾಗುವುದಿಲ್ಲ. ಎರಡು ಖರ್ಜೂರ ತಿಂದರೂ ಒಂದು ಸಂಪೂರ್ಣ ಊಟದ ಶಕ್ತಿಯನ್ನು ಖರ್ಜೂರ ನೀಡುತ್ತದೆ. ಇದೇ ಕಾರಣಕ್ಕೆ ಶಿವರಾತ್ರಿಯ ಉಪವಾಸ ಮುರಿಯುವಾಗಲೂ ತುಪ್ಪದಲ್ಲಿ ಅದ್ದಿದ ಖರ್ಜೂರವನ್ನು ಸೇವಿಸಲಾಗುತ್ತದೆ. <br /> <br /> ಖರ್ಜೂರದ ಸೇವನೆಯಿಂದಲೇ ಉಪವಾಸವಿದ್ದರೂ ಮುಖ ಕಳೆಗುಂದುವುದಿಲ್ಲ. ಹೊಸ ಕಾಂತಿ ಹುಟ್ಟುತ್ತದೆ.<br /> <br /> ಖರ್ಜೂರದೊಂದಿಗೆ ಎಲ್ಲ ಬಗೆಯ ಹುಳಿ, ಸಿಹಿಯೊಗರಿನ ಹಣ್ಣುಗಳ ಸೇವನೆಯೂ ಇಫ್ತಾರ್ ಕೂಟದ ಒಂದು ಅಂಗವಾಗಿದೆ. ಹಣ್ಣುಗಳು ಸೃಷ್ಟಿಕರ್ತ ನೀಡಿರುವ ಆಹಾರ. ಅದನ್ನು ಎಲ್ಲರೂ ಸಮಪಾಲಾಗಿ ಹಂಚಿಕೊಂಡು ಸವಿಯಬೇಕು ಎನ್ನುವುದೇ ಇದರ ಸಂದೇಶ.<br /> <br /> ಉಪವಾಸವನ್ನು ಮುರಿಯುವಲ್ಲಿ ಖರ್ಜೂರದಷ್ಟೇ ಮಹತ್ವದ ಪಾತ್ರವನ್ನು ಸಮೋಸಗಳು ವಹಿಸುತ್ತವೆ. ಈರುಳ್ಳಿ ಪಲ್ಯ ಹಾಗೂ ಖೀಮಾ ಭರಿತ ಸಮೋಸಾಗಳಲ್ಲಿ ಆಲೂಗಡ್ಡೆಗಿಲ್ಲ ಜಾಗ. 12 ಗಂಟೆಗಳಿಗಿಂತಲೂ ಹೆಚ್ಚುಕಾಲ ಖಾಲಿ ಹೊಟ್ಟೆಯಲ್ಲಿರುವಾಗ ಆಲೂಗಡ್ಡೆ ಸೇವಿಸಿದರೆ ವಾತದ ಸಮಸ್ಯೆಯಾಗಬಹುದು ಎಂದೇ ಈ ಸಂದರ್ಭದಲ್ಲಿ ಆಲೂಗಡ್ಡೆ ವರ್ಜ್ಯ. <br /> ಮಧ್ಯಾಹ್ನದಿಂದಲೇ ಈರುಳ್ಳಿಭರಿತ ಸಮೋಸಾಗಳ ತಯಾರಿ ಆರಂಭವಾಗುತ್ತದೆ. <br /> ಹೆಚ್ಚಿದ ಈರುಳ್ಳಿಗೆ ನೀರು ಸೋಕಿಸದೆ ಪಲ್ಯದಂತೆ ಒಗ್ಗರಣೆ ಹಾಕಿ, ಗೋಧಿ, ಮೈದಾ ಹಿಟ್ಟಿನ ಮಿಶ್ರಣದ ಪುಡಿಕೆಗಳಿಗೆ ಈ ಮಿಶ್ರಣವನ್ನು ತುಂಬಿ, ಬಾಯಿ ಕಟ್ಟಿ, ಎಣ್ಣೆಯಲ್ಲಿ ತೇಲಿಬಿಟ್ಟಾಗ, ಬರುವ ಘಂ.. ಎಂಬ ಘಮಲು ಎಣ್ಣೆಯ ಕಮರು ಹುಟ್ಟಿಸುವುದೇ ಇಲ್ಲ. <br /> <br /> ಕೇವಲ ಖಾದ್ಯಗಳನ್ನು ಸವಿಯುವುದು ಮಾತ್ರ ಇಫ್ತಾರ್ ಕೂಟವಲ್ಲ. ಖಾದ್ಯಗಳನ್ನು ಎಲ್ಲರೊಡಗೂಡಿ ಸವಿಯುವುದೇ ಇದರ ಮಹತ್ವವಾಗಿದೆ. <br /> <br /> ಮನೆಯಲ್ಲಾದರೆ ದಶ್ತರಖಾನಾ ಹಾಸಿಕೊಂಡು ಎಲ್ಲರೂ ಊಟ ಮಾಡುವ ಸೊಗಸೇ ಬೇರೆ. `ದಶ್ತರಖಾನಾ~ಗೆ ತನ್ನದೇ ಆದ ಮಹತ್ವವಿದೆ. ಇದೊಂಥರ ವಿಶ್ವಕುಟುಂಬದ ಭಾವವನ್ನೇ ಸಾರುವಂತಿದೆ. ಎಲ್ಲರೂ, ಎಲ್ಲರೊಡಗೂಡಿ, ಇರುವುದನ್ನು ಹಂಚಿಕೊಂಡು, ಆಹಾರವನ್ನು ಸವಿಯುತ್ತ, ಭಗವಂತನಿಗೆ ಈ ದಿನಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುವುದೇ ಆಗಿದೆ.<br /> <br /> ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿದೆಯಲ್ಲ, ಇಲ್ಲಿ ಹಾಸಿರುವಷ್ಟರಲ್ಲಿ ಎಲ್ಲರೂ ಕೂರಬೇಕು ಎನ್ನುವಂತಿದೆ. ಸಾಮೂಹಿಕ ಕೂಟಗಳಲ್ಲಿ ಪಂಕ್ತಿ ವ್ಯವಸ್ಥೆ ಮಾಡುವುದೂ ಇದೇ ಉದ್ದೇಶದಿಂದ. <br /> <br /> ದೇಶ, ಭಾಷೆ, ಧರ್ಮ ಯಾವುದಾದರೇನು? ಭಗವಂತ ನೀಡಿರುವ ಸಕಲ ಸಮೃದ್ಧಿಯಲ್ಲಿ ಸಮಪಾಲು ಪಡೆಯಬೇಕು. ಅದು ನಮ್ಮ ಅಗತ್ಯಕ್ಕೆ ಬೇಕಿರುವಷ್ಟು ಎನ್ನುವುದೂ ಇಫ್ತಾರ್ ಕೂಟದ ಆಶಯವಾಗಿದೆ.<br /> <br /> ಸೌಹಾರ್ದ ಹಾಗೂ ಸಮಬಾಳ್ವೆಗೆ ಹೆಸರಾದ ಹೈದರಾಬಾದ್ ಕರ್ನಾಟಕದಲ್ಲಿ ಇಫ್ತಾರ್ ಕೂಟಗಳಿಗೆ ತನ್ನದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿಯೂ ಆ ಭಾಗದ ಶಾಸಕರು, ಸಂಸದರು ತಮ್ಮ ಸ್ನೇಹಿತರಿಗಾಗಿ ಇಫ್ತಾರ್ ಕೂಟಗಳನ್ನು ಏರ್ಪಡಿಸುತ್ತಾರೆ.<br /> <br /> ಈ ಸಂಪ್ರದಾಯ ಎಲ್ಲೆಡೆಯೂ ಮುಂದುವರಿದಿದೆ. ಇಫ್ತಾರ್ ಔತಣ ನೀಡಿದವರಿಗಾಗಿ ಹಾಗೂ ತಮ್ಮ ಆತ್ಮೀಯರಿಗಾಗಿ ಮುಸ್ಲಿಂ ಬಾಂಧವರು ಹಬ್ಬದ ದಿನ ಶೀರ್ಕುರ್ಮಾ ಕಳುಹಿಸಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. <br /> <br /> ಹಬ್ಬದ ಹಿಂದಿನ ದಿನವೇ ಉಗುರು ಬಿಸಿ ನೀರಿನಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ನೆನೆಸಿ ಇಡಲಾಗುತ್ತದೆ. ಮದರಂಗಿ ಹಚ್ಚಿದ ಕೆಂಬಣ್ಣದ ಚಿಗುರು ಬೆರಳುಗಳು, ವಾತ್ಸಲ್ಯದ ಮಡಿಕೆ ಬಿದ್ದಿರುವ ಅಮ್ಮನ ಕೈ ಬೆರಳುಗಳು ಈ ಒಣಹಣ್ಣುಗಳನ್ನು ಉದ್ದುದ್ದಕ್ಕೆ ಹೆಚ್ಚಿಡುತ್ತವೆ. ನಂತರ ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಲಾಗುತ್ತದೆ.<br /> <br /> ಖರ್ಜೂರ, ಗಸಗಸೆಯೊಂದಿಗೆ ಕುದಿಸಿದ ಹಾಲಿಗೆ ಶ್ಯಾವಿಗೆ ಎಳೆಯನ್ನು ಹಾಕಿ ಶೀರ್ಕುರ್ಮಾ ತಯಾರಿಸಲಾಗುತ್ತದೆ. ಇದಕ್ಕೆ ಒಣ ಹಣ್ಣುಗಳ ಅಲಂಕಾರ ವಿಶಿಷ್ಟ ರುಚಿಯನ್ನೂ ನೋಟವನ್ನೂ ನೀಡುತ್ತದೆ.<br /> <br /> ಇಫ್ತಾರ್ ಕೂಟ ಹಾಗೂ ಶೀರ್ಕುರ್ಮಾದ ವಿನಿಮಯದೊಂದಿಗೆ ಸ್ನೇಹ, ಸೌಹಾರ್ದ, ಸಮಬಾಳ್ವೆಯ ಸವಿ ವರ್ಷವಿಡೀ ಸವಿಯುವಂತೆ ಆಗುತ್ತದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>