<p>ಹುಕ್ಕೇರಿ: ಶಿಕ್ಷಣದ ಮೂಲಕ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವೆಂದು ನಂಬಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಸಮಾಜದಲ್ಲಿ ಕಲಿತ ಸುಶಿಕ್ಷಿತ ಯುವಕರನ್ನು ಸೇರಿ ಇತರ ಯುವಕರು ದಾರಿ ತಪ್ಪುತ್ತಿರುವುದಕ್ಕೆ ಸಂಸದ ರಮೇಶ್ ಕತ್ತಿ ಆತಂಕ ವ್ಯಕ್ತಪಡಿಸಿದರು. <br /> <br /> ಬುಧವಾರ ಮದಮಕ್ಕನಾಳ ರಸ್ತೆ ಬದಿಯಲ್ಲಿರುವ ಪ್ರೇಮ ಬಾಳು ಸಂಧ್ಯಾಶ್ರಮದಲ್ಲಿ ಹುಕ್ಕೇರಿ ತಾಲ್ಲೂಕು ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನೇತ್ರದಾನ ಅರಿವು ಪ್ರತಿಜ್ಞಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಭಾರತದ ಜನಸಂಖ್ಯೆ 121 ಕೋಟಿ ಇದ್ದರೂ ಕೂಡಾ ದೇಹದಾನ ಅಥವಾ ನೇತ್ರದಾನ ಮಾಡುವವರ ಸಂಖ್ಯೆ ಕಡಿಮೆ. ಮರಣಾನಂತರ ಅದನ್ನು ಕೊಡುವದರಿಂದ ಆಗಬಹುದಾದ ಪ್ರಯೋಜ ಕುರಿತು ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ವಿಜಯ ರವದಿ ಕೈಕೊಂಡ ಕ್ರಮ ಮೆಚ್ಚುವಂತಹದು ಎಂದರು.<br /> <br /> ಹಳ್ಳಿಗಳಲ್ಲಿ ಅರಿವು ಮೂಡಿಸಿ ಅಂಧತ್ವದ ಸಂಖ್ಯೆ ಕಡಿಮೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಗಳು, ಸಂಘ- ಸಂಸ್ಥೆಗಳು ಪ್ರಯತ್ನಿಸಲು ಕರೆ ನೀಡಿದರು. <br /> <br /> ಜಿಲ್ಲಾ ಆಸ್ಪತ್ರೆಯ ನೇತ್ರ ಸಹಾಯಕ ಶ್ರೀನಿವಾಸ ಮಾತನಾಡಿ ನೇತ್ರದಾನದ ಮಹತ್ವ ಕುರಿತು ವಿವರ ನೀಡಿದರು. ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. <br /> <br /> ವಿತರಣೆ: ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಅತಿಥಿಗಳು ಗೌರವಿ ಸಿದರು. ಮುರಗೇಶ ಡಫಳಾ ಪೂರೆ ಮತ್ತು ಮಹಾನಂದಾ ಜಾಗನೂರಿ ಮಾತನಾಡಿದರು.<br /> <br /> ಪ.ಪಂ.ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಪುರಸಭೆ ಅಧ್ಯಕ್ಷ ಅಮರ ನಲವಡೆ, ಉದಪುಡಿ ಶಿವಸಾಗರ ಸಕ್ಕರೆ ಕಾರ್ಖಾನೆ ನಿರ್ದೇಶಕ ಕೆ.ಎಲ್.ಜಿನರಾಳಿ, ವಸಂತ ನಿಲಜಗಿ ಮತ್ತಿತರು ಉಪಸ್ಥಿತರಿದ್ದರು. <br /> <br /> ಕಾರ್ಯಕ್ರಮದಲ್ಲಿ 45 ಜನರು ಮರಣೋತ್ತರ ನೇತ್ರದಾನ ಮಾಡುವು ದಾಗಿ ಹೆಸರು ನೊಂದಾಯಿಸಿದರು. <br /> ಸಂಸ್ಥೆಯ ಅಧ್ಯಕ್ಷ ವಿಜಯ ರವದಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಬಿ.ಎಲ್. ಬಂದಾಯಿ ನಿರೂಪಿಸಿದರು. ಸಹನಾ ರವದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಕ್ಕೇರಿ: ಶಿಕ್ಷಣದ ಮೂಲಕ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವೆಂದು ನಂಬಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಸಮಾಜದಲ್ಲಿ ಕಲಿತ ಸುಶಿಕ್ಷಿತ ಯುವಕರನ್ನು ಸೇರಿ ಇತರ ಯುವಕರು ದಾರಿ ತಪ್ಪುತ್ತಿರುವುದಕ್ಕೆ ಸಂಸದ ರಮೇಶ್ ಕತ್ತಿ ಆತಂಕ ವ್ಯಕ್ತಪಡಿಸಿದರು. <br /> <br /> ಬುಧವಾರ ಮದಮಕ್ಕನಾಳ ರಸ್ತೆ ಬದಿಯಲ್ಲಿರುವ ಪ್ರೇಮ ಬಾಳು ಸಂಧ್ಯಾಶ್ರಮದಲ್ಲಿ ಹುಕ್ಕೇರಿ ತಾಲ್ಲೂಕು ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನೇತ್ರದಾನ ಅರಿವು ಪ್ರತಿಜ್ಞಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಭಾರತದ ಜನಸಂಖ್ಯೆ 121 ಕೋಟಿ ಇದ್ದರೂ ಕೂಡಾ ದೇಹದಾನ ಅಥವಾ ನೇತ್ರದಾನ ಮಾಡುವವರ ಸಂಖ್ಯೆ ಕಡಿಮೆ. ಮರಣಾನಂತರ ಅದನ್ನು ಕೊಡುವದರಿಂದ ಆಗಬಹುದಾದ ಪ್ರಯೋಜ ಕುರಿತು ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ವಿಜಯ ರವದಿ ಕೈಕೊಂಡ ಕ್ರಮ ಮೆಚ್ಚುವಂತಹದು ಎಂದರು.<br /> <br /> ಹಳ್ಳಿಗಳಲ್ಲಿ ಅರಿವು ಮೂಡಿಸಿ ಅಂಧತ್ವದ ಸಂಖ್ಯೆ ಕಡಿಮೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಗಳು, ಸಂಘ- ಸಂಸ್ಥೆಗಳು ಪ್ರಯತ್ನಿಸಲು ಕರೆ ನೀಡಿದರು. <br /> <br /> ಜಿಲ್ಲಾ ಆಸ್ಪತ್ರೆಯ ನೇತ್ರ ಸಹಾಯಕ ಶ್ರೀನಿವಾಸ ಮಾತನಾಡಿ ನೇತ್ರದಾನದ ಮಹತ್ವ ಕುರಿತು ವಿವರ ನೀಡಿದರು. ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. <br /> <br /> ವಿತರಣೆ: ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಅತಿಥಿಗಳು ಗೌರವಿ ಸಿದರು. ಮುರಗೇಶ ಡಫಳಾ ಪೂರೆ ಮತ್ತು ಮಹಾನಂದಾ ಜಾಗನೂರಿ ಮಾತನಾಡಿದರು.<br /> <br /> ಪ.ಪಂ.ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಪುರಸಭೆ ಅಧ್ಯಕ್ಷ ಅಮರ ನಲವಡೆ, ಉದಪುಡಿ ಶಿವಸಾಗರ ಸಕ್ಕರೆ ಕಾರ್ಖಾನೆ ನಿರ್ದೇಶಕ ಕೆ.ಎಲ್.ಜಿನರಾಳಿ, ವಸಂತ ನಿಲಜಗಿ ಮತ್ತಿತರು ಉಪಸ್ಥಿತರಿದ್ದರು. <br /> <br /> ಕಾರ್ಯಕ್ರಮದಲ್ಲಿ 45 ಜನರು ಮರಣೋತ್ತರ ನೇತ್ರದಾನ ಮಾಡುವು ದಾಗಿ ಹೆಸರು ನೊಂದಾಯಿಸಿದರು. <br /> ಸಂಸ್ಥೆಯ ಅಧ್ಯಕ್ಷ ವಿಜಯ ರವದಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಬಿ.ಎಲ್. ಬಂದಾಯಿ ನಿರೂಪಿಸಿದರು. ಸಹನಾ ರವದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>