<p><strong>ಬೆಂಗಳೂರು: </strong> `ಬೆಂಗಳೂರನ್ನು ಕಟ್ಟಿ ಬೆಳೆಸುವಲ್ಲಿ ಸದ್ದಿಲ್ಲದೇ ದುಡಿಯುತ್ತಿರುವ ಅದೆಷ್ಟೊ ಜನರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಷದ ವಿಚಾರ~ ಎಂದು ನಟ ರಮೇಶ್ ಅರವಿಂದ್ ಶ್ಲಾಘಿಸಿದರು. <br /> ನಮ್ಮ ಬೆಂಗಳೂರು ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ `ನಮ್ಮ ಬೆಂಗಳೂರು 2011~ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ಸೆಲೆಬ್ರಿಟಿ ಮತ್ತು ನಾಯಕ ಈ ಎರಡು ಪದಗಳು ವಿಭಿನ್ನ. ಚಿತ್ರರಂಗದಲ್ಲಿ ಸಾಧನೆ ಮಾಡುವವರು ಸೆಲೆಬ್ರಿಟಿಗಳಾಬಹುದು ಆದರೆ ಯಾವ ಅಪೇಕ್ಷೆಯನ್ನು ಬಯಸದೇ ಸಾಮಾಜಿಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವವರೇ ನಿಜವಾದ ನಾಯಕರು. ಅವರನ್ನು ಸದಾ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ~ ಎಂದು ಹೇಳಿದರು.<br /> <br /> ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್, `ನಗರ ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ನಿಜವಾದ ನಾಯಕರನ್ನು ಹುಡುಕಿ ಅವರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಪ್ರತಿಷ್ಠಾನವು ಸದಾ ಬದ್ದವಾಗಿದೆ ~ ಎಂದು ಹೇಳಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, `ಸರ್ಕಾರ ನೌಕರನಾಗಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿರುವುದಕ್ಕೆ ಹರ್ಷಿಸುತ್ತೇನೆ. ಪ್ರಶಸ್ತಿಯಲ್ಲಿರುವ ಒಂದು ಲಕ್ಷ ರೂಪಾಯಿಯನ್ನು ಸೇವೆಯಲ್ಲಿರುವಾಗಲೇ ಮೃತರಾಗುವ ಅರಣ್ಯ ಇಲಾಖೆಯ ಅಧಿಕಾರಿಗಳ ಕುಟುಂಬಗಳಿಗೆ ನೀಡಲು ಬಯಸುತ್ತೇನೆ~ ಎಂದು ಹೇಳಿದರು. <br /> <br /> ಬಿಯಾಂಡ್ ಕಾರ್ಲ್ಟರ್ನ್ ಟವರ್ ಸಂಸ್ಥೆಯ ಉದಯ ವಿಜಯನ್ ( ನಾಗರಿಕ ), ಕ್ಯಾನ್ಸರ್ ರೋಗಿಗಳ ಉಚಿತ ಆಸ್ಪತ್ರೆ ಕರುಣಾಶ್ರಯದ ಕಲಾದೇವರಾಜನ್, ಘನತ್ಯಾಜ್ಯ ನಿರ್ವಹಣಾ ದುಂಡು ಮೇಜು ಸಂಸ್ಥೆಯ ಮೀನಾಕ್ಷಿ ಭರತ್ ( ಸಂಸ್ಥೆ), ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, ಬಿಬಿಎಂಪಿ ಪೌರ ಕಾರ್ಮಿಕರಾದ ಲಕ್ಷ್ಮಮ್ಮ ( ಸರ್ಕಾರಿ ನೌಕರರು), ಕೃಷ್ಣ ಬೈರೇಗೌಡ ( ಚುನಾಯಿತ ಪ್ರತಿನಿಧಿ), ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಯೋಗಿನಾಥ್ ( ಸರ್ಕಾರಿ ಸಂಸ್ಥೆ), ಸಾಹಸ್ ಶೂನ್ಯ ತ್ಯಾಜ್ಯ ಪರಿಹಾರ ಸಂಸ್ಥೆಯ ವಿಲ್ಮಾ ರೋಡ್ರಿಗ್ರಸ್ (ಸಾಮಾಜಿಕ ಉದ್ಯಮಿ), ನ್ಯಾಯಮೂರ್ತಿ ಸುಧೀಂದ್ರರಾವ್ (ವರ್ಷದ ಬೆಂಗಳೂರಿಗ) ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. <br /> <br /> ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಜೀವನೋತ್ಸವ ತಂಡದಿಂದ ಜನಪದ ನೃತ್ಯವನ್ನು ಪ್ರದರ್ಶಿಸಲಾಯಿತು. ಅಂಧ ಗಾಯಕ ಜಿ.ಎ.ನಾಗೇಶ್ ಅವರು ಗಾಯನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಸಿನಿತಾರೆಯರಾದ ಧೃವ ಸರ್ಜಾ ಮತ್ತು ನೀತು ಅವರಿಂದ ನಡೆದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. <br /> <br /> ಅವಾಸ್ ಸಂಸ್ಥೆಯ ಟ್ರಸ್ಟಿ ಅನಿತಾ ರೆಡ್ಡಿ, ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾದ ಎಚ್.ಎಸ್.ಬಲರಾಂ, ಅಶೋಕ್ ಸೂಟಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> `ಬೆಂಗಳೂರನ್ನು ಕಟ್ಟಿ ಬೆಳೆಸುವಲ್ಲಿ ಸದ್ದಿಲ್ಲದೇ ದುಡಿಯುತ್ತಿರುವ ಅದೆಷ್ಟೊ ಜನರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಷದ ವಿಚಾರ~ ಎಂದು ನಟ ರಮೇಶ್ ಅರವಿಂದ್ ಶ್ಲಾಘಿಸಿದರು. <br /> ನಮ್ಮ ಬೆಂಗಳೂರು ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ `ನಮ್ಮ ಬೆಂಗಳೂರು 2011~ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ಸೆಲೆಬ್ರಿಟಿ ಮತ್ತು ನಾಯಕ ಈ ಎರಡು ಪದಗಳು ವಿಭಿನ್ನ. ಚಿತ್ರರಂಗದಲ್ಲಿ ಸಾಧನೆ ಮಾಡುವವರು ಸೆಲೆಬ್ರಿಟಿಗಳಾಬಹುದು ಆದರೆ ಯಾವ ಅಪೇಕ್ಷೆಯನ್ನು ಬಯಸದೇ ಸಾಮಾಜಿಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವವರೇ ನಿಜವಾದ ನಾಯಕರು. ಅವರನ್ನು ಸದಾ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ~ ಎಂದು ಹೇಳಿದರು.<br /> <br /> ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್, `ನಗರ ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ನಿಜವಾದ ನಾಯಕರನ್ನು ಹುಡುಕಿ ಅವರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಪ್ರತಿಷ್ಠಾನವು ಸದಾ ಬದ್ದವಾಗಿದೆ ~ ಎಂದು ಹೇಳಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, `ಸರ್ಕಾರ ನೌಕರನಾಗಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿರುವುದಕ್ಕೆ ಹರ್ಷಿಸುತ್ತೇನೆ. ಪ್ರಶಸ್ತಿಯಲ್ಲಿರುವ ಒಂದು ಲಕ್ಷ ರೂಪಾಯಿಯನ್ನು ಸೇವೆಯಲ್ಲಿರುವಾಗಲೇ ಮೃತರಾಗುವ ಅರಣ್ಯ ಇಲಾಖೆಯ ಅಧಿಕಾರಿಗಳ ಕುಟುಂಬಗಳಿಗೆ ನೀಡಲು ಬಯಸುತ್ತೇನೆ~ ಎಂದು ಹೇಳಿದರು. <br /> <br /> ಬಿಯಾಂಡ್ ಕಾರ್ಲ್ಟರ್ನ್ ಟವರ್ ಸಂಸ್ಥೆಯ ಉದಯ ವಿಜಯನ್ ( ನಾಗರಿಕ ), ಕ್ಯಾನ್ಸರ್ ರೋಗಿಗಳ ಉಚಿತ ಆಸ್ಪತ್ರೆ ಕರುಣಾಶ್ರಯದ ಕಲಾದೇವರಾಜನ್, ಘನತ್ಯಾಜ್ಯ ನಿರ್ವಹಣಾ ದುಂಡು ಮೇಜು ಸಂಸ್ಥೆಯ ಮೀನಾಕ್ಷಿ ಭರತ್ ( ಸಂಸ್ಥೆ), ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, ಬಿಬಿಎಂಪಿ ಪೌರ ಕಾರ್ಮಿಕರಾದ ಲಕ್ಷ್ಮಮ್ಮ ( ಸರ್ಕಾರಿ ನೌಕರರು), ಕೃಷ್ಣ ಬೈರೇಗೌಡ ( ಚುನಾಯಿತ ಪ್ರತಿನಿಧಿ), ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಯೋಗಿನಾಥ್ ( ಸರ್ಕಾರಿ ಸಂಸ್ಥೆ), ಸಾಹಸ್ ಶೂನ್ಯ ತ್ಯಾಜ್ಯ ಪರಿಹಾರ ಸಂಸ್ಥೆಯ ವಿಲ್ಮಾ ರೋಡ್ರಿಗ್ರಸ್ (ಸಾಮಾಜಿಕ ಉದ್ಯಮಿ), ನ್ಯಾಯಮೂರ್ತಿ ಸುಧೀಂದ್ರರಾವ್ (ವರ್ಷದ ಬೆಂಗಳೂರಿಗ) ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. <br /> <br /> ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಜೀವನೋತ್ಸವ ತಂಡದಿಂದ ಜನಪದ ನೃತ್ಯವನ್ನು ಪ್ರದರ್ಶಿಸಲಾಯಿತು. ಅಂಧ ಗಾಯಕ ಜಿ.ಎ.ನಾಗೇಶ್ ಅವರು ಗಾಯನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಸಿನಿತಾರೆಯರಾದ ಧೃವ ಸರ್ಜಾ ಮತ್ತು ನೀತು ಅವರಿಂದ ನಡೆದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. <br /> <br /> ಅವಾಸ್ ಸಂಸ್ಥೆಯ ಟ್ರಸ್ಟಿ ಅನಿತಾ ರೆಡ್ಡಿ, ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾದ ಎಚ್.ಎಸ್.ಬಲರಾಂ, ಅಶೋಕ್ ಸೂಟಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>