<p><strong>ದಾವಣಗೆರೆ: </strong>ಸಮಾನತೆಯ ಸಮಾಜದ ಕಸನು ಕಂಡಿದ್ದ ಭಗತ್ ಸಿಂಗ್ ಅಪ್ರತಿಮ ದೇಶಭಕ್ತ. ಕೇವಲ 23 ವರ್ಷಕ್ಕೆ ನೇಣುಗಂಬ ಏರಿದ ಅವರು ಗಾಂಧೀಜಿಯಷ್ಟೇ ಜನಪ್ರಿಯತೆ ಹೊಂದಿದ್ದ ಮಹಾನ್ ಹೋರಾಟಗಾರ ಎಂದು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಜೇಷನ್ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕುಕ್ಕುವಾಡ ಸ್ಮರಿಸಿದರು.<br /> <br /> ಭಗತ್ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 83ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್ಒ, ಎಐಡಿವೈಒ ಹಾಗೂ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ‘ದಿ ಲೆಜೆಂಡ್ ಆಫ್ ಭಗತ್ಸಿಂಗ್’ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ತಮ್ಮ 12ನೇ ವಯಸ್ಸಿಗೆ ಜಲಿಯನ್ ವಾಲಬಾಗ್ ಹತ್ಯಾಕಾಂಡದಲ್ಲಿ ಸುಮಾರು 2 ಸಾವಿರ ಹೋರಾಟಗಾರರು ಮಡಿದ ಘಟನೆಯಿಂದ ಮನನೊಂದ ಅವರು, ಬಾಲ್ಯದಲ್ಲೇ ಗಾಂಧೀಜಿ ಅವರ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು.<br /> ಆದರೆ, ಚೌರಿಚೌರ ಪ್ರಕರಣದ ನಂತರ ಗಾಂಧೀಜಿ ಸತ್ಯಾಗ್ರಹ ವಾಪಸ್ ಪಡೆದ ಘಟನೆಯಿಂದ ಮನನೊಂದು ಗಾಂಧಿವಾದದಿಂದ ವಿಮುಖರಾಗಿದ್ದರು ಎಂದು ವಿವರ ನೀಡಿದರು.<br /> <br /> ಮುಂದೆ 1928ರಲ್ಲಿ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟನೆ ನಡೆಸಿದ ಲಾಲ್ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಅವರನ್ನು ಗುಂಡಿಕ್ಕಿಕೊಂದರು. ಜೈಲಿನಲ್ಲಿದ್ದಾಗಲೂ ಅಲ್ಲಿನ ಸಮಸ್ಯೆ ವಿರುದ್ಧ ದೀರ್ಘಾವಧಿ ಉಪವಾಸ ಕೈಗೊಂಡಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.<br /> <br /> ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಂಚಾಲಕ, ಡಾ.ವಸುದೇಂದ್ರ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್ ವಿಚಾರ, ಆದರ್ಶಗಳಿಂದ ಇಂದಿನ ಯುವ ಸಮುದಾಯ ವಿಮುಖವಾಗಿದೆ. ಹಾಗಾಗಿ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯದಂತಹ ಸಮಸ್ಯೆ ಸಮಾಜವನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಿದರು.<br /> <br /> ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಘಟಕಿ ಶಬನಂ ಮಾತನಾಡಿ, ಭಗತ್ಸಿಂಗ್ ಹಿಂಸೆ, ಉಗ್ರವಾದವನ್ನು ಎಂದೂ ಪ್ರತಿಪಾದಿಸಲಿಲ್ಲ. ಕ್ರಾಂತಿಯು ಭಾರತೀಯರ ಆತ್ಮ ರಕ್ಷಣೆ ಹಾಗೂ ಸ್ವಾಭಿಮಾನದ ಪ್ರತೀಕ. ಸಂಪೂರ್ಣ ಸ್ವರಾಜ್ಯವೇ ಅವರ ಹೋರಾಟದ ಗುರಿಯಾಗಿತ್ತು ಎಂದು ಪ್ರತಿಪಾದಿಸಿದರು.<br /> <br /> ಪಿ.ಪರಶುರಾಮ್, ತಿಪ್ಪೇಸ್ವಾಮಿ, ಭಾರತಿ, ಲತಾ, ಬನಶ್ರೀ, ವಿನಯ್, ಸುಮಾ, ವಿನಯ್ಕುಮಾರಿ ಭಾಗವಹಿಸಿದ್ದರು.<br /> ಕಾರ್ಯಕ್ರಮಕ್ಕೂ ಮೊದಲು ಪಾಲಿಕೆ ಮುಂಭಾಗ ಇರುವ ಭಗತ್ಸಿಂಗ್ ಪ್ರತಿಮೆಗೆ ಸಂಘಟನೆಯ ಕಾರ್ಯಕ್ರರ್ತರು ಮಾಲಾರ್ಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಸಮಾನತೆಯ ಸಮಾಜದ ಕಸನು ಕಂಡಿದ್ದ ಭಗತ್ ಸಿಂಗ್ ಅಪ್ರತಿಮ ದೇಶಭಕ್ತ. ಕೇವಲ 23 ವರ್ಷಕ್ಕೆ ನೇಣುಗಂಬ ಏರಿದ ಅವರು ಗಾಂಧೀಜಿಯಷ್ಟೇ ಜನಪ್ರಿಯತೆ ಹೊಂದಿದ್ದ ಮಹಾನ್ ಹೋರಾಟಗಾರ ಎಂದು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಜೇಷನ್ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕುಕ್ಕುವಾಡ ಸ್ಮರಿಸಿದರು.<br /> <br /> ಭಗತ್ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 83ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್ಒ, ಎಐಡಿವೈಒ ಹಾಗೂ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ‘ದಿ ಲೆಜೆಂಡ್ ಆಫ್ ಭಗತ್ಸಿಂಗ್’ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ತಮ್ಮ 12ನೇ ವಯಸ್ಸಿಗೆ ಜಲಿಯನ್ ವಾಲಬಾಗ್ ಹತ್ಯಾಕಾಂಡದಲ್ಲಿ ಸುಮಾರು 2 ಸಾವಿರ ಹೋರಾಟಗಾರರು ಮಡಿದ ಘಟನೆಯಿಂದ ಮನನೊಂದ ಅವರು, ಬಾಲ್ಯದಲ್ಲೇ ಗಾಂಧೀಜಿ ಅವರ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು.<br /> ಆದರೆ, ಚೌರಿಚೌರ ಪ್ರಕರಣದ ನಂತರ ಗಾಂಧೀಜಿ ಸತ್ಯಾಗ್ರಹ ವಾಪಸ್ ಪಡೆದ ಘಟನೆಯಿಂದ ಮನನೊಂದು ಗಾಂಧಿವಾದದಿಂದ ವಿಮುಖರಾಗಿದ್ದರು ಎಂದು ವಿವರ ನೀಡಿದರು.<br /> <br /> ಮುಂದೆ 1928ರಲ್ಲಿ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟನೆ ನಡೆಸಿದ ಲಾಲ್ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಅವರನ್ನು ಗುಂಡಿಕ್ಕಿಕೊಂದರು. ಜೈಲಿನಲ್ಲಿದ್ದಾಗಲೂ ಅಲ್ಲಿನ ಸಮಸ್ಯೆ ವಿರುದ್ಧ ದೀರ್ಘಾವಧಿ ಉಪವಾಸ ಕೈಗೊಂಡಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.<br /> <br /> ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಂಚಾಲಕ, ಡಾ.ವಸುದೇಂದ್ರ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್ ವಿಚಾರ, ಆದರ್ಶಗಳಿಂದ ಇಂದಿನ ಯುವ ಸಮುದಾಯ ವಿಮುಖವಾಗಿದೆ. ಹಾಗಾಗಿ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯದಂತಹ ಸಮಸ್ಯೆ ಸಮಾಜವನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಿದರು.<br /> <br /> ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಘಟಕಿ ಶಬನಂ ಮಾತನಾಡಿ, ಭಗತ್ಸಿಂಗ್ ಹಿಂಸೆ, ಉಗ್ರವಾದವನ್ನು ಎಂದೂ ಪ್ರತಿಪಾದಿಸಲಿಲ್ಲ. ಕ್ರಾಂತಿಯು ಭಾರತೀಯರ ಆತ್ಮ ರಕ್ಷಣೆ ಹಾಗೂ ಸ್ವಾಭಿಮಾನದ ಪ್ರತೀಕ. ಸಂಪೂರ್ಣ ಸ್ವರಾಜ್ಯವೇ ಅವರ ಹೋರಾಟದ ಗುರಿಯಾಗಿತ್ತು ಎಂದು ಪ್ರತಿಪಾದಿಸಿದರು.<br /> <br /> ಪಿ.ಪರಶುರಾಮ್, ತಿಪ್ಪೇಸ್ವಾಮಿ, ಭಾರತಿ, ಲತಾ, ಬನಶ್ರೀ, ವಿನಯ್, ಸುಮಾ, ವಿನಯ್ಕುಮಾರಿ ಭಾಗವಹಿಸಿದ್ದರು.<br /> ಕಾರ್ಯಕ್ರಮಕ್ಕೂ ಮೊದಲು ಪಾಲಿಕೆ ಮುಂಭಾಗ ಇರುವ ಭಗತ್ಸಿಂಗ್ ಪ್ರತಿಮೆಗೆ ಸಂಘಟನೆಯ ಕಾರ್ಯಕ್ರರ್ತರು ಮಾಲಾರ್ಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>