ಸವಿತಾ ಸಾವು: ಯುವ ಕಾಂಗ್ರೆಸ್ಪ್ರತಿಭಟನೆ
ಬೆಂಗಳೂರು: `ಜೀವ ರಕ್ಷಕ ಕಾನೂನು ಮತ್ತು ಧರ್ಮದ ಹೆಸರಿನಲ್ಲಿ ಐರ್ಲೆಂಡ್ ವೈದ್ಯರು ಭಾರತೀಯ ಮೂಲದ ಡಾ.ಸವಿತಾ ಹಾಲಪ್ಪನವರ ಅವರನ್ನು ಕೊಲೆ ಮಾಡಿದ್ದಾರೆ~ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸದಸ್ಯರು ನಗರದ ಆನಂದ್ರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ನೆ.ಲ.ನರೇಂದ್ರಬಾಬು, `ಕ್ಯಾಥೋಲಿಕರಲ್ಲಿ ಗರ್ಭಪಾತವು ಧರ್ಮ ವಿರೋಧಿ ಕಾರ್ಯ ಎಂದು ಹೇಳಲಾಗುತ್ತದೆ. ಆದರೆ ಈ ಕಾರಣ ನೀಡಿ ಭಾರತೀಯ ಮೂಲದ ಹಿಂದೂ ಮಹಿಳೆಯ ಜೀವಕ್ಕೆ ಅಪಾಯವಿದ್ದ ಸಂದರ್ಭದಲ್ಲೂ ಗರ್ಭಪಾತಕ್ಕೆ ಅವಕಾಶ ಮಾಡಿಕೊಡದೇ ಐರ್ಲೆಂಡ್ ವೈದ್ಯರು ಅಮಾನವೀಯತೆ ಪ್ರದರ್ಶಿಸಿದ್ದಾರೆ~ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.