<p><strong>ಸಿದ್ದಾಪುರ: </strong> ಬಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಮುಳುಗುತ್ತಿದ್ದ ತನ್ನ ಸಹಪಾಠಿಯನ್ನು ನಾಗೇಂದ್ರ ಜಿ. ಎಂಬ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಹೆಗ್ಗರಣಿ ಸಮೀಪದ ಬೆಣ್ಣಳ್ಳಿಯಲ್ಲಿ ಈಚೆಗೆ ನಡೆದಿದೆ.<br /> <br /> ನಾಗೇಂದ್ರ ಮತ್ತು ವೀಣಾ ಒಟ್ಟಿಗೆ ಹೆಗ್ಗರಣಿ ಸಮೀಪದ ಉಂಚಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೊಳೆಯಲ್ಲಿ ಅಕಸ್ಮಾತ್ ಬಿದ್ದ ವೀಣಾಳನ್ನು ಕೈಹಿಡಿದು ಹೊಳೆಯಿಂದ ದಂಡೆಗೆ ಎಳೆಯಲು ನಾಗೇಂದ್ರ ಪ್ರಯತ್ನ ಮಾಡಿದ.<br /> <br /> ಆ ಸಂದರ್ಭದಲ್ಲಿ ತಾನೂ ಹೊಳೆಗೆ ಬಿದ್ದ. ಆದರೂ ಹೆದರದೇ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಈತ, ತನ್ನ ಕೈಯಲ್ಲಿದ್ದ ಕೊಡೆಯನ್ನು ಹೊಳೆಯ ದಂಡೆಯ ಪೊದೆಗೆ ಸಿಕ್ಕಿಸಿದ. ಮತ್ತೊಂದು ಕೈಯಿಂದ ವೀಣಾಳನ್ನು ಹಿಡಿದುಕೊಂಡು ಹೊಳೆಯ ದಡಕ್ಕೆ ಕರೆತಂದ. <br /> <br /> ಆ ಸಮಯದಲ್ಲಿ ಅಲ್ಲಿಗೆ ಬಂದ ವಿನಾಯಕ ಎಂಬ ಹುಡುಗ ಅವರಿಬ್ಬರನ್ನು ಮನೆಗೆ ತಲುಪಿಸಿದ ಎಂದು ಸ್ಥಳೀಯರು ಘಟನೆಯ ವಿವರ ನೀಡಿದ್ದಾರೆ. ವೀಣಾ ಬೆಣ್ಣಳ್ಳಿಯ ವೆಂಕಟ್ರಮಣ ಭಟ್ಟರ ಮಗಳಾಗಿದ್ದು, ನಾಗೇಂದ್ರ ಅವರ ತಂಗಿಯ ಮಗ ಎಂದು ಊರವರು ತಿಳಿಸಿದ್ದಾರೆ. ಈ ರೀತಿ ತನ್ನ ಜೀವದ ಹಂಗುದೊರೆದು ಬಾಲಕಿಯ ಪ್ರಾಣ ಕಾಪಾಡಿದ ನಾಗೇಂದ್ರನ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಹೆಗ್ಗರಣಿ ಭಾಗದ ಸಾರ್ವಜನಿಕರು ಕೊಂಡಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ: </strong> ಬಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಮುಳುಗುತ್ತಿದ್ದ ತನ್ನ ಸಹಪಾಠಿಯನ್ನು ನಾಗೇಂದ್ರ ಜಿ. ಎಂಬ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಹೆಗ್ಗರಣಿ ಸಮೀಪದ ಬೆಣ್ಣಳ್ಳಿಯಲ್ಲಿ ಈಚೆಗೆ ನಡೆದಿದೆ.<br /> <br /> ನಾಗೇಂದ್ರ ಮತ್ತು ವೀಣಾ ಒಟ್ಟಿಗೆ ಹೆಗ್ಗರಣಿ ಸಮೀಪದ ಉಂಚಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೊಳೆಯಲ್ಲಿ ಅಕಸ್ಮಾತ್ ಬಿದ್ದ ವೀಣಾಳನ್ನು ಕೈಹಿಡಿದು ಹೊಳೆಯಿಂದ ದಂಡೆಗೆ ಎಳೆಯಲು ನಾಗೇಂದ್ರ ಪ್ರಯತ್ನ ಮಾಡಿದ.<br /> <br /> ಆ ಸಂದರ್ಭದಲ್ಲಿ ತಾನೂ ಹೊಳೆಗೆ ಬಿದ್ದ. ಆದರೂ ಹೆದರದೇ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಈತ, ತನ್ನ ಕೈಯಲ್ಲಿದ್ದ ಕೊಡೆಯನ್ನು ಹೊಳೆಯ ದಂಡೆಯ ಪೊದೆಗೆ ಸಿಕ್ಕಿಸಿದ. ಮತ್ತೊಂದು ಕೈಯಿಂದ ವೀಣಾಳನ್ನು ಹಿಡಿದುಕೊಂಡು ಹೊಳೆಯ ದಡಕ್ಕೆ ಕರೆತಂದ. <br /> <br /> ಆ ಸಮಯದಲ್ಲಿ ಅಲ್ಲಿಗೆ ಬಂದ ವಿನಾಯಕ ಎಂಬ ಹುಡುಗ ಅವರಿಬ್ಬರನ್ನು ಮನೆಗೆ ತಲುಪಿಸಿದ ಎಂದು ಸ್ಥಳೀಯರು ಘಟನೆಯ ವಿವರ ನೀಡಿದ್ದಾರೆ. ವೀಣಾ ಬೆಣ್ಣಳ್ಳಿಯ ವೆಂಕಟ್ರಮಣ ಭಟ್ಟರ ಮಗಳಾಗಿದ್ದು, ನಾಗೇಂದ್ರ ಅವರ ತಂಗಿಯ ಮಗ ಎಂದು ಊರವರು ತಿಳಿಸಿದ್ದಾರೆ. ಈ ರೀತಿ ತನ್ನ ಜೀವದ ಹಂಗುದೊರೆದು ಬಾಲಕಿಯ ಪ್ರಾಣ ಕಾಪಾಡಿದ ನಾಗೇಂದ್ರನ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಹೆಗ್ಗರಣಿ ಭಾಗದ ಸಾರ್ವಜನಿಕರು ಕೊಂಡಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>