<p><strong>ಚಿಕ್ಕಮಗಳೂರು:</strong> ಮನೋರಂಜನೆಯ ನೆಪದಲ್ಲಿ ದೃಶ್ಯ ಮಾಧ್ಯಮ ಜನತೆಯನ್ನು ದಾರಿ ತಪ್ಪಿಸುತ್ತಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯ ಅಬ್ದುಲ್ ರೆಹಮಾನ್ ಪಾಶಾ ವಿಷಾದಿಸಿದರು.</p>.<p>ನಗರದ ಸವೂರ್ ಸಭಾಂಗಣದಲ್ಲಿ ಬೆಳ್ಳಿ ಮಂಡಲದ ಪ್ರಥಮ ಕಾರ್ಯಕ್ರಮ ವನ್ನು ನಗರದಲ್ಲಿ ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.</p>.<p>ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಗೊಳುವ ದೃಶ್ಯಗಳು ಕೂಡ ರಂಜನೀಯವಾಗಿ ವ್ಯಾಪಾರಿ ಮನೋಭಾವದಿಂದ ಬಿತ್ತರಗೊಳ್ಳುತ್ತಿವೆ. ಜಾಗತೀಕ ಪರಿಣಾಮದಿಂದಾಗಿ ದೃಶ್ಯ ಮಾಧ್ಯಮ ದಿಕ್ಕು ತಪ್ಪುತ್ತಿದೆ ಎಂದರು.</p>.<p>ಚಲಿಸುವ ದೃಶ್ಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು ಸಾಂಸ್ಕೃತಿಕ ದಿವಾಳಿಗೆ ದಾರಿ ಮಾಡಿದೆ. ಎಲ್ಲವನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದೆ. ಈ ಮಾಧ್ಯಮವು ಸಮಾಜದ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾಗಿ ದ್ದಾಗ ಅದು ತನ್ನ ಶ್ರೇಷ್ಠತೆ ಉಳಿಸಿಕೊಳ್ಳುತ್ತದೆ ಎಂದ ಬೆಳ್ಳಿಮಂಡಲದ ಮಾಜಿ ಸಂಚಾಲಕ ಡಿ.ಎಚ್. ನಟರಾಜ್, ಶಾಲಾ, ಕಾಲೇಜುಗಳಲ್ಲಿ ಚಿತ್ರಕೂಟ ರಚಿಸಿ, ಶಿಬಿರ ಏರ್ಪಡಿಸಲಾಗುವುದು. ಜತೆಗೆ ಸೃಜನಶೀಲ ಚಲನಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.</p>.<p>ಸಂಚಾಲಕ ಬಿ.ಎನ್.ಜ್ವಾಲನಪ್ಪ, ಸಹ ಸಂಚಾಲಕಿ ಪದ್ಮ ಶಿವಶಂಕರ್, ಖಜಾಂಚಿ ದಿನೇಶ್ ಪಟವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಪ್ರೆಂಚ್ ಭಾಷೆಯ ಮೂರು ಚಿತ್ರಗಳ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಮನೋರಂಜನೆಯ ನೆಪದಲ್ಲಿ ದೃಶ್ಯ ಮಾಧ್ಯಮ ಜನತೆಯನ್ನು ದಾರಿ ತಪ್ಪಿಸುತ್ತಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯ ಅಬ್ದುಲ್ ರೆಹಮಾನ್ ಪಾಶಾ ವಿಷಾದಿಸಿದರು.</p>.<p>ನಗರದ ಸವೂರ್ ಸಭಾಂಗಣದಲ್ಲಿ ಬೆಳ್ಳಿ ಮಂಡಲದ ಪ್ರಥಮ ಕಾರ್ಯಕ್ರಮ ವನ್ನು ನಗರದಲ್ಲಿ ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.</p>.<p>ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಗೊಳುವ ದೃಶ್ಯಗಳು ಕೂಡ ರಂಜನೀಯವಾಗಿ ವ್ಯಾಪಾರಿ ಮನೋಭಾವದಿಂದ ಬಿತ್ತರಗೊಳ್ಳುತ್ತಿವೆ. ಜಾಗತೀಕ ಪರಿಣಾಮದಿಂದಾಗಿ ದೃಶ್ಯ ಮಾಧ್ಯಮ ದಿಕ್ಕು ತಪ್ಪುತ್ತಿದೆ ಎಂದರು.</p>.<p>ಚಲಿಸುವ ದೃಶ್ಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು ಸಾಂಸ್ಕೃತಿಕ ದಿವಾಳಿಗೆ ದಾರಿ ಮಾಡಿದೆ. ಎಲ್ಲವನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದೆ. ಈ ಮಾಧ್ಯಮವು ಸಮಾಜದ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾಗಿ ದ್ದಾಗ ಅದು ತನ್ನ ಶ್ರೇಷ್ಠತೆ ಉಳಿಸಿಕೊಳ್ಳುತ್ತದೆ ಎಂದ ಬೆಳ್ಳಿಮಂಡಲದ ಮಾಜಿ ಸಂಚಾಲಕ ಡಿ.ಎಚ್. ನಟರಾಜ್, ಶಾಲಾ, ಕಾಲೇಜುಗಳಲ್ಲಿ ಚಿತ್ರಕೂಟ ರಚಿಸಿ, ಶಿಬಿರ ಏರ್ಪಡಿಸಲಾಗುವುದು. ಜತೆಗೆ ಸೃಜನಶೀಲ ಚಲನಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.</p>.<p>ಸಂಚಾಲಕ ಬಿ.ಎನ್.ಜ್ವಾಲನಪ್ಪ, ಸಹ ಸಂಚಾಲಕಿ ಪದ್ಮ ಶಿವಶಂಕರ್, ಖಜಾಂಚಿ ದಿನೇಶ್ ಪಟವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಪ್ರೆಂಚ್ ಭಾಷೆಯ ಮೂರು ಚಿತ್ರಗಳ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>