<p><strong>ಸಾಗರ:</strong> ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿ ಸುವುದರಿಂದ ಇತರರಿಗೂ ಸಾಧನೆ ಮಾಡಲು ಹಾಗೂ ಸೇವಾ ಕಾರ್ಯ ಕೈಗೊಳ್ಳಲು ಸ್ಫೂರ್ತಿ ಎಂದು ನಗರಸಭಾ ಸದಸ್ಯ ಸೈಯದ್ ಇಕ್ಬಾಲ್ ಹೇಳಿದರು. ಸ್ನೇಹ ಬಳಗ ಸಂಸ್ಥೆ ಈಚೆಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಹಲವು ವ್ಯಕ್ತಿಗಳು ಸ್ವಾರ್ಥ ಮನೋಭಾವ ಇಲ್ಲದೆ ಸೇವೆ ಸಲ್ಲಿಸುತ್ತಾ ಇರುತ್ತಾರೆ. ಅಂಥವರಿಗೆ ಯಾವುದೇ ಸನ್ಮಾನ ಅಥವಾ ಪುರಸ್ಕಾರಗಳ ನಿರೀಕ್ಷೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜ ಅವರ ಸೇವೆ ಸ್ಮರಿಸುವುದು ಅತ್ಯಗತ್ಯ ಎಂದರು.<br /> <br /> ನಗರಸಭಾ ಸದಸ್ಯ ಅರವಿಂದ್ ಸಿ.ರಾಯ್ಕರ್ ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸ ಲಾಯಿತು. ನಾಟಿ ವೈದ್ಯೆ ಭಾಗೀರತಿ ಬಾಪಾಟ್, ಪುರಷೋತ್ತಮ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.<br /> <br /> ಪುರಸಭಾ ಮಾಜಿ ಸದಸ್ಯ ಕೋರಿ ನಾಗರಾಜ್, ಸದಾನಂದ್ಗೌಡ, ದಿನಕರ್, ಶಿವಕುಮಾರ್ ಹಾಜರಿದ್ದರು. ಸುರೇಶ್ ಸ್ವಾಗತಿಸಿದರು. ಎಂ.ಗಣಪತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿ ಸುವುದರಿಂದ ಇತರರಿಗೂ ಸಾಧನೆ ಮಾಡಲು ಹಾಗೂ ಸೇವಾ ಕಾರ್ಯ ಕೈಗೊಳ್ಳಲು ಸ್ಫೂರ್ತಿ ಎಂದು ನಗರಸಭಾ ಸದಸ್ಯ ಸೈಯದ್ ಇಕ್ಬಾಲ್ ಹೇಳಿದರು. ಸ್ನೇಹ ಬಳಗ ಸಂಸ್ಥೆ ಈಚೆಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಹಲವು ವ್ಯಕ್ತಿಗಳು ಸ್ವಾರ್ಥ ಮನೋಭಾವ ಇಲ್ಲದೆ ಸೇವೆ ಸಲ್ಲಿಸುತ್ತಾ ಇರುತ್ತಾರೆ. ಅಂಥವರಿಗೆ ಯಾವುದೇ ಸನ್ಮಾನ ಅಥವಾ ಪುರಸ್ಕಾರಗಳ ನಿರೀಕ್ಷೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜ ಅವರ ಸೇವೆ ಸ್ಮರಿಸುವುದು ಅತ್ಯಗತ್ಯ ಎಂದರು.<br /> <br /> ನಗರಸಭಾ ಸದಸ್ಯ ಅರವಿಂದ್ ಸಿ.ರಾಯ್ಕರ್ ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸ ಲಾಯಿತು. ನಾಟಿ ವೈದ್ಯೆ ಭಾಗೀರತಿ ಬಾಪಾಟ್, ಪುರಷೋತ್ತಮ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.<br /> <br /> ಪುರಸಭಾ ಮಾಜಿ ಸದಸ್ಯ ಕೋರಿ ನಾಗರಾಜ್, ಸದಾನಂದ್ಗೌಡ, ದಿನಕರ್, ಶಿವಕುಮಾರ್ ಹಾಜರಿದ್ದರು. ಸುರೇಶ್ ಸ್ವಾಗತಿಸಿದರು. ಎಂ.ಗಣಪತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>