<p><strong>ಯಳಂದೂರು: </strong>ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹತ್ತು ಹಲವು ಪ್ರಶಸ್ತಿಗಳಿಸಿರುವ ಈತ ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ಕ್ರೀಡಾಕೂಟದಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡವನು. ಹುಟ್ಟು ಮೂಗನಾದ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದು. ವ್ಯಾಸಂಗದಲ್ಲೂ ಚುರುಕು ಎನಿಸಿಕೊಂಡಿರುವ ಈತ ಶಾಲೆಯ ಕಣ್ಮಣಿ.<br /> <br /> ಇದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಯಲ್ಲಿ ವ್ಯಾಸಂಗ ಮಾಡು ತ್ತಿರುವ, ತಾಲ್ಲೂಕಿನ ವೈ,ಕೆ. ಮೋಳೆ ಗ್ರಾಮದ ಡಿ. ರಾಜೇಂದ್ರನ ಸಾಧನೆ.<br /> <br /> ಗ್ರಾಮದ ದೊಡ್ಡರಾಜು ಹಾಗೂ ಕುಸುಮಬಾಲೆ ದಂಪತಿಯ ಮಗನಾದ ಈತ ಹುಟ್ಟು ಮೂಗ. ಆದರೆ ಯಾವಾಗಲೂ ಚಟುವಟಿಕೆ ಯಿಂದ ಇರುವ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದೆ ಇರುತ್ತಿದ್ದ. `ಗುಂಡು ಎಸೆತ, ಬರ್ಜಿ ಎಸೆತ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಈತನಿಗೆ ಇಷ್ಟ ಎಂಬುದನ್ನು ತನ್ನ ಕೈ ಸನ್ನೆಯಿಂದಲೇ ಹೇಳುತ್ತಾನೆ. ಈ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತು ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾನೆ. <br /> ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲೇ ಬಹುಮಾನದಿಂದ ವಂಚಿತನಾದ ಈತ, ಇದರಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ~ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಕ ಎಲ್.ಡಿ. ಉಮೇಶ್. <br /> <br /> ಮುಂದೆಯೂ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಹಾಗೂ ಶಾಲೆಯಲ್ಲಿ ಒಳ್ಳೆ ಅಂಕ ಪಡೆದು ಕೊಳ್ಳಬೇಕು ಎಂಬುದನ್ನು ತನ್ನ ಸ್ನೇಹಿತನಿಗೆ ಸನ್ನೆಯಿಂದಲೇ ಹೇಳುವ ಈತನ ಯಶಸ್ಸಿಗೆ ಪೋಷಕರು ಹಾಗೂ ಶಿಕ್ಷಕರು ಒಳ್ಳೆಯ ಮಾರ್ಗದರ್ಶಕ ರಾಗುವ ಅವಶ್ಯಕತೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: </strong>ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹತ್ತು ಹಲವು ಪ್ರಶಸ್ತಿಗಳಿಸಿರುವ ಈತ ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ಕ್ರೀಡಾಕೂಟದಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡವನು. ಹುಟ್ಟು ಮೂಗನಾದ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದು. ವ್ಯಾಸಂಗದಲ್ಲೂ ಚುರುಕು ಎನಿಸಿಕೊಂಡಿರುವ ಈತ ಶಾಲೆಯ ಕಣ್ಮಣಿ.<br /> <br /> ಇದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಯಲ್ಲಿ ವ್ಯಾಸಂಗ ಮಾಡು ತ್ತಿರುವ, ತಾಲ್ಲೂಕಿನ ವೈ,ಕೆ. ಮೋಳೆ ಗ್ರಾಮದ ಡಿ. ರಾಜೇಂದ್ರನ ಸಾಧನೆ.<br /> <br /> ಗ್ರಾಮದ ದೊಡ್ಡರಾಜು ಹಾಗೂ ಕುಸುಮಬಾಲೆ ದಂಪತಿಯ ಮಗನಾದ ಈತ ಹುಟ್ಟು ಮೂಗ. ಆದರೆ ಯಾವಾಗಲೂ ಚಟುವಟಿಕೆ ಯಿಂದ ಇರುವ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದೆ ಇರುತ್ತಿದ್ದ. `ಗುಂಡು ಎಸೆತ, ಬರ್ಜಿ ಎಸೆತ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಈತನಿಗೆ ಇಷ್ಟ ಎಂಬುದನ್ನು ತನ್ನ ಕೈ ಸನ್ನೆಯಿಂದಲೇ ಹೇಳುತ್ತಾನೆ. ಈ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತು ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾನೆ. <br /> ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲೇ ಬಹುಮಾನದಿಂದ ವಂಚಿತನಾದ ಈತ, ಇದರಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ~ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಕ ಎಲ್.ಡಿ. ಉಮೇಶ್. <br /> <br /> ಮುಂದೆಯೂ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಹಾಗೂ ಶಾಲೆಯಲ್ಲಿ ಒಳ್ಳೆ ಅಂಕ ಪಡೆದು ಕೊಳ್ಳಬೇಕು ಎಂಬುದನ್ನು ತನ್ನ ಸ್ನೇಹಿತನಿಗೆ ಸನ್ನೆಯಿಂದಲೇ ಹೇಳುವ ಈತನ ಯಶಸ್ಸಿಗೆ ಪೋಷಕರು ಹಾಗೂ ಶಿಕ್ಷಕರು ಒಳ್ಳೆಯ ಮಾರ್ಗದರ್ಶಕ ರಾಗುವ ಅವಶ್ಯಕತೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>