<p><strong>ಮಂಗಳೂರು: </strong>ಸಾಬೂನು ಹಾಗೂ ಚಾಕೊಲೇಟ್ ಸಿರಪ್ ಒಳಗೆ ಅಡಿಗಿಸಿ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿಯನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬುಧವಾರ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 800.600 ಗ್ರಾಂ ತೂಕದ ಚಿನ್ನ ತುಂಡುಗಳನ್ನು ಹಾಗೂ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಮಂಜೇಶ್ವರದ ಮೇಲಂಗಡಿ ಮನೆಯ ನಿವಾಸಿ ಅಬ್ದುಲ್ ಗಫೂರ್ (30) ಬಂಧಿತ ಆರೋಪಿ. ದುಬೈನಿಂದ ವಿಮಾನದಲ್ಲಿ ಬಂದಿಳಿದ ಆರೋಪಿಯು ಲಕ್ಸ್ ಬ್ರಾಂಡಿನ ಸಾಬೂನಿನಲ್ಲಿ ‘ಅಮೆರಿಕನ್ ಗಾರ್ಡನ್’ ಚಾಕಲೇಟ್ ಸಿರಪ್ನಲ್ಲಿ ಚಿನ್ನದ ತುಂಡುಗಳನ್ನು ಹಾಗೂ ಹರಳುಗಳನ್ನು ಅಡಗಿಸಿ ಕಳ್ಳಸಾಗಣೆ ಮಾಡಿದ್ದ. ವಶಪಡಿಸಿಕೊಂಡ ಚಿನ್ನದ ಮೌಲ್ಯ ₨ 24,09,806 ಎಂದು ಅಂದಾಜಿಸಲಾಗಿದೆ.<br /> <br /> ಕಸ್ಟಮ್ಸ್ ಸಹಾಯಕ ಆಯುಕ್ತ ಕೃಷ್ಣಕುಮಾರ್ ಪ್ರಸಾದ್, ಅಧೀಕ್ಷಕರಾದ ಬಿ.ಪ್ರಭಾಕರ ಪೂಜಾರಿ, ಲಯೊನೆಲ್ ಫರ್ನಾಂಡಿಸ್, ಸೇಂದಿಲ್ ಮುರುಗನ್, ಬಿ.ಎ.ಕೃಷ್ಣಪ್ಪ, ಎಚ್.ಜಿ.ಯೋಗೇಶ್, ನಿರೀಕ್ಷಕರಾದ ಜಿ.ಕುಮಾರಸ್ವಾಮಿ, ಪ್ರೀತಿ ಸುಮಾ, ಎಸ್.ರಾಜನ್ ಬೆಹೆರ ಹಾಗೂ ಅಂಕಿತ್ ಕುಮಾರ್ ಸಿಬ್ಬಂದಿ ಗುಲಾಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಸಾಬೂನು ಹಾಗೂ ಚಾಕೊಲೇಟ್ ಸಿರಪ್ ಒಳಗೆ ಅಡಿಗಿಸಿ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿಯನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬುಧವಾರ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 800.600 ಗ್ರಾಂ ತೂಕದ ಚಿನ್ನ ತುಂಡುಗಳನ್ನು ಹಾಗೂ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಮಂಜೇಶ್ವರದ ಮೇಲಂಗಡಿ ಮನೆಯ ನಿವಾಸಿ ಅಬ್ದುಲ್ ಗಫೂರ್ (30) ಬಂಧಿತ ಆರೋಪಿ. ದುಬೈನಿಂದ ವಿಮಾನದಲ್ಲಿ ಬಂದಿಳಿದ ಆರೋಪಿಯು ಲಕ್ಸ್ ಬ್ರಾಂಡಿನ ಸಾಬೂನಿನಲ್ಲಿ ‘ಅಮೆರಿಕನ್ ಗಾರ್ಡನ್’ ಚಾಕಲೇಟ್ ಸಿರಪ್ನಲ್ಲಿ ಚಿನ್ನದ ತುಂಡುಗಳನ್ನು ಹಾಗೂ ಹರಳುಗಳನ್ನು ಅಡಗಿಸಿ ಕಳ್ಳಸಾಗಣೆ ಮಾಡಿದ್ದ. ವಶಪಡಿಸಿಕೊಂಡ ಚಿನ್ನದ ಮೌಲ್ಯ ₨ 24,09,806 ಎಂದು ಅಂದಾಜಿಸಲಾಗಿದೆ.<br /> <br /> ಕಸ್ಟಮ್ಸ್ ಸಹಾಯಕ ಆಯುಕ್ತ ಕೃಷ್ಣಕುಮಾರ್ ಪ್ರಸಾದ್, ಅಧೀಕ್ಷಕರಾದ ಬಿ.ಪ್ರಭಾಕರ ಪೂಜಾರಿ, ಲಯೊನೆಲ್ ಫರ್ನಾಂಡಿಸ್, ಸೇಂದಿಲ್ ಮುರುಗನ್, ಬಿ.ಎ.ಕೃಷ್ಣಪ್ಪ, ಎಚ್.ಜಿ.ಯೋಗೇಶ್, ನಿರೀಕ್ಷಕರಾದ ಜಿ.ಕುಮಾರಸ್ವಾಮಿ, ಪ್ರೀತಿ ಸುಮಾ, ಎಸ್.ರಾಜನ್ ಬೆಹೆರ ಹಾಗೂ ಅಂಕಿತ್ ಕುಮಾರ್ ಸಿಬ್ಬಂದಿ ಗುಲಾಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>