<p><strong>ಬೆಂಗಳೂರು:</strong> `ಎನ್.ಟಿ.ರಾಮರಾವ್ ಅವರು ಬರೀ ಆಂಧ್ರಪ್ರದೇಶದವರಲ್ಲ. ಇಡೀ ದೇಶವೇ ಸ್ಮರಿಸುವಂತಹ ಕಲಾವಿದರಾಗಿದ್ದ ಅವರು ಸಾಮಾಜಿಕ ಕಾಳಜಿಯನ್ನೂ ಹೊಂದಿದ್ದರು' ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಹೇಳಿದರು.<br /> <br /> ಕರ್ನಾಟಕ ತೆಲುಗು ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಎನ್ಟಿ ರಾಮರಾವ್ ಅವರ 91 ನೇ ಜಯಂತಿ ಹಾಗೂ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಆಂಧ್ರಪದೇಶದಲ್ಲಿ ಕರ್ನಾಟಕದ ಅಕಾಡೆಮಿಗಳಿಗೆ ನಿವೇಶನವನ್ನು ನೀಡಲಾಗಿದೆ. ಅದರಂತೆ, ತೆಲುಗು ಅಕಾಡೆಮಿಗಳಿಗೆ ನಿವೇಶನವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಲಾಗುವುದು' ಎಂದು ಭರವಸೆ ನೀಡಿದರು.<br /> <br /> ಮಾಜಿ ಶಿಕ್ಷಣ ಸಚಿವ ಎಂ.ರಘುಪತಿ, `ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೌಹಾರ್ದತೆಯ ಸಂಕೇತವಾಗಿ ಡಾ.ರಾಜ್ಕುಮಾರ್, ಎನ್.ಟಿ. ರಾಮರಾವ್ ಮತ್ತು ಎನ್.ಜಿ.ರಾಮಚಂದ್ರ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು. ಇದರಿಂದ ರಾಜ್ಯಗಳ ನಡುವಿನ ಸಂಬಂಧ ವೃದ್ಧಿಯಾಗುತ್ತದೆ' ಎಂದರು. `ಕಲಾವಿದರು ರಾಜ್ಯ ರಾಜ್ಯಗಳ ನಡುವೆ ಸ್ನೇಹ ಸೇತುವಾಗುತ್ತಾರೆ. ಈ ಮೂರು ರಾಜ್ಯಗಳಿಗೂ ಈ ಮೂರೂ ಕಲಾವಿದರು ಸ್ನೇಹ ಸೇತುವಾಗಿದ್ದರು' ಎಂದು ಹೇಳಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಶ್ರುತಿ, `ತೆಲುಗು ಅಕಾಡೆಮಿಯು ಕರ್ನಾಟಕದ ಕಲಾವಿದರಿಗೆ ಎನ್ಟಿಆರ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ' ಎಂದರು.<br /> <br /> ನಟ ರವಿಚಂದ್ರನ್ ಮಾತನಾಡಿ, `ಈ ರೀತಿಯ ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳು ನೆನಪಿಟ್ಟುಕೊಳ್ಳುವಂತಹ ಸಿನಿಮಾಗಳನ್ನು ಇನ್ನೂ ಮಾಡಬೇಕಾಗಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಎನ್.ಟಿ.ರಾಮರಾವ್ ಅವರು ಬರೀ ಆಂಧ್ರಪ್ರದೇಶದವರಲ್ಲ. ಇಡೀ ದೇಶವೇ ಸ್ಮರಿಸುವಂತಹ ಕಲಾವಿದರಾಗಿದ್ದ ಅವರು ಸಾಮಾಜಿಕ ಕಾಳಜಿಯನ್ನೂ ಹೊಂದಿದ್ದರು' ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಹೇಳಿದರು.<br /> <br /> ಕರ್ನಾಟಕ ತೆಲುಗು ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಎನ್ಟಿ ರಾಮರಾವ್ ಅವರ 91 ನೇ ಜಯಂತಿ ಹಾಗೂ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಆಂಧ್ರಪದೇಶದಲ್ಲಿ ಕರ್ನಾಟಕದ ಅಕಾಡೆಮಿಗಳಿಗೆ ನಿವೇಶನವನ್ನು ನೀಡಲಾಗಿದೆ. ಅದರಂತೆ, ತೆಲುಗು ಅಕಾಡೆಮಿಗಳಿಗೆ ನಿವೇಶನವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಲಾಗುವುದು' ಎಂದು ಭರವಸೆ ನೀಡಿದರು.<br /> <br /> ಮಾಜಿ ಶಿಕ್ಷಣ ಸಚಿವ ಎಂ.ರಘುಪತಿ, `ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೌಹಾರ್ದತೆಯ ಸಂಕೇತವಾಗಿ ಡಾ.ರಾಜ್ಕುಮಾರ್, ಎನ್.ಟಿ. ರಾಮರಾವ್ ಮತ್ತು ಎನ್.ಜಿ.ರಾಮಚಂದ್ರ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು. ಇದರಿಂದ ರಾಜ್ಯಗಳ ನಡುವಿನ ಸಂಬಂಧ ವೃದ್ಧಿಯಾಗುತ್ತದೆ' ಎಂದರು. `ಕಲಾವಿದರು ರಾಜ್ಯ ರಾಜ್ಯಗಳ ನಡುವೆ ಸ್ನೇಹ ಸೇತುವಾಗುತ್ತಾರೆ. ಈ ಮೂರು ರಾಜ್ಯಗಳಿಗೂ ಈ ಮೂರೂ ಕಲಾವಿದರು ಸ್ನೇಹ ಸೇತುವಾಗಿದ್ದರು' ಎಂದು ಹೇಳಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಶ್ರುತಿ, `ತೆಲುಗು ಅಕಾಡೆಮಿಯು ಕರ್ನಾಟಕದ ಕಲಾವಿದರಿಗೆ ಎನ್ಟಿಆರ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ' ಎಂದರು.<br /> <br /> ನಟ ರವಿಚಂದ್ರನ್ ಮಾತನಾಡಿ, `ಈ ರೀತಿಯ ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳು ನೆನಪಿಟ್ಟುಕೊಳ್ಳುವಂತಹ ಸಿನಿಮಾಗಳನ್ನು ಇನ್ನೂ ಮಾಡಬೇಕಾಗಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>