<p><strong>ಹೊನ್ನಾಳಿ:</strong> ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 42ನೇ ವಾರ್ಷಿಕ ಪುಣ್ಯಾರಾಧನೆ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. <br /> ಇಂದಿನ ದಿನಗಳಲ್ಲಿ ಎಲ್ಲಾ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದರಿಂದ ಜನತೆಗೆ ಹೆಚ್ಚಿನ ಅನುಕೂಲವಾಗುತ್ತಲಿದೆ ಎಂದು ತಿಳಿಸಿದರು.<br /> <br /> ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದ ದಂಪತಿಗೆ ಸರ್ಕಾರ ರೂ.10ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. <br /> ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮನುಕುಲದ ಅಭಿವೃದ್ಧಿಗಾಗಿ ಮಠ-ಮಾನ್ಯಗಳು ದುಡಿಯುತ್ತವೆ. ಅವುಗಳ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. <br /> <br /> ಹೊನ್ನಾಳಿಯ ಹಿರೇಕಲ್ಮಠದ ಸ್ವಾಮೀಜಿ ಬಗ್ಗೆ ಈ ಭಾಗದ ಭಕ್ತರು ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರೆ. ಸ್ವಾಮೀಜಿ ಅವರ ಸಮಾಜಮುಖಿ ಚಿಂತನೆಗಳು ಇದಕ್ಕೆ ಕಾರಣ. ಅಂತಹ ಸ್ವಾಮೀಜಿಯವರನ್ನು ಪಡೆದ ನೀವೇ ಪುಣ್ಯವಂತರು ಎಂದು ಶ್ಲಾಘಿಸಿದರು. <br /> <br /> ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಆಶಿರ್ವಚನ ನೀಡಿ, ನೂತನ ದಂಪತಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಧರ್ಮವಂತರಾಗಿ, ನೀತಿವಂತರಾಗಿ ಬಾಳ್ವೆ ನಡೆಸಿ, ಮೋಕ್ಷ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು. <br /> <br /> ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೌಕಿಕ ಬದುಕಿನಲ್ಲಿದ್ದುಕೊಂಡೇ ಪಾರಮಾರ್ಥಿಕ ಸಾಧನೆ ಮಾಡಬೇಕು. ನೂತನ ದಂಪತಿಗಳು ಮೌಲ್ಯಾಧಾರಿತ -ಗುಣಾತ್ಮಕ ಜೀವನ ನಡೆಸುವ ಸಂಕಲ್ಪ ಮಾಡಿ. ಜೀವನ ಪೂರ್ತಿ ಜತೆಯಾಗಿರಿ ಎಂದು ತಿಳಿಸಿದರು. <br /> <br /> ಆಸೆ ಬೆನ್ನತ್ತಿ ಹೋಗುವವನು ಲೋಕಕ್ಕೆ ದಾಸನಾಗುತ್ತಾನೆ. ಆಸೆಯನ್ನು ದಾಸನನ್ನಾಗಿ ಮಾಡಿಕೊಂಡವನಿಗೆ ಲೋಕವೇ ದಾಸನಾಗುತ್ತದೆ. ಇದು ಸಾಮಾನ್ಯ ಮನುಷ್ಯ ಮತ್ತು ಮಹಾತ್ಮರಿಗೆ ಇರುವ ವ್ಯತ್ಯಾಸ ಎಂದರು.<br /> <br /> ಡಿ.ಜಿ. ಶಾಂತನಗೌಡ, ವಿಶಾಲಾಕ್ಷಿ ಆಲ್ಬರ್ಟ್, ಚಾಟಿ ಶೇಖರಪ್ಪ, ಎಸ್.ಎಂ. ವೀರೇಶ್, ನವಲೆ ಪಂಚಣ್ಣ, ಜಯದೇವಪ್ಪ ಇತರರು ಮಾತನಾಡಿದರು. ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಮನಾಳು ಮಠದ ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. <br /> <br /> ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷೆ ತಿಪ್ಪಮ್ಮ, ಸಂಪತ್ರಾಜ್, ರತ್ನಮ್ಮ, ಕೆ.ಜಿ. ವೀರಭದ್ರಪ್ಪ, ಸೋಮಶೇಖರಪ್ಪ ಇತರರು ಇದ್ದರು. ಶಾಂತಾ ಹಿರೇಮಠ ಪ್ರಾರ್ಥಿಸಿದರು. ಚೆನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ವಿಜಯಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿ-ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 42ನೇ ವಾರ್ಷಿಕ ಪುಣ್ಯಾರಾಧನೆ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. <br /> ಇಂದಿನ ದಿನಗಳಲ್ಲಿ ಎಲ್ಲಾ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದರಿಂದ ಜನತೆಗೆ ಹೆಚ್ಚಿನ ಅನುಕೂಲವಾಗುತ್ತಲಿದೆ ಎಂದು ತಿಳಿಸಿದರು.<br /> <br /> ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದ ದಂಪತಿಗೆ ಸರ್ಕಾರ ರೂ.10ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. <br /> ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮನುಕುಲದ ಅಭಿವೃದ್ಧಿಗಾಗಿ ಮಠ-ಮಾನ್ಯಗಳು ದುಡಿಯುತ್ತವೆ. ಅವುಗಳ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. <br /> <br /> ಹೊನ್ನಾಳಿಯ ಹಿರೇಕಲ್ಮಠದ ಸ್ವಾಮೀಜಿ ಬಗ್ಗೆ ಈ ಭಾಗದ ಭಕ್ತರು ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರೆ. ಸ್ವಾಮೀಜಿ ಅವರ ಸಮಾಜಮುಖಿ ಚಿಂತನೆಗಳು ಇದಕ್ಕೆ ಕಾರಣ. ಅಂತಹ ಸ್ವಾಮೀಜಿಯವರನ್ನು ಪಡೆದ ನೀವೇ ಪುಣ್ಯವಂತರು ಎಂದು ಶ್ಲಾಘಿಸಿದರು. <br /> <br /> ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಆಶಿರ್ವಚನ ನೀಡಿ, ನೂತನ ದಂಪತಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಧರ್ಮವಂತರಾಗಿ, ನೀತಿವಂತರಾಗಿ ಬಾಳ್ವೆ ನಡೆಸಿ, ಮೋಕ್ಷ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು. <br /> <br /> ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೌಕಿಕ ಬದುಕಿನಲ್ಲಿದ್ದುಕೊಂಡೇ ಪಾರಮಾರ್ಥಿಕ ಸಾಧನೆ ಮಾಡಬೇಕು. ನೂತನ ದಂಪತಿಗಳು ಮೌಲ್ಯಾಧಾರಿತ -ಗುಣಾತ್ಮಕ ಜೀವನ ನಡೆಸುವ ಸಂಕಲ್ಪ ಮಾಡಿ. ಜೀವನ ಪೂರ್ತಿ ಜತೆಯಾಗಿರಿ ಎಂದು ತಿಳಿಸಿದರು. <br /> <br /> ಆಸೆ ಬೆನ್ನತ್ತಿ ಹೋಗುವವನು ಲೋಕಕ್ಕೆ ದಾಸನಾಗುತ್ತಾನೆ. ಆಸೆಯನ್ನು ದಾಸನನ್ನಾಗಿ ಮಾಡಿಕೊಂಡವನಿಗೆ ಲೋಕವೇ ದಾಸನಾಗುತ್ತದೆ. ಇದು ಸಾಮಾನ್ಯ ಮನುಷ್ಯ ಮತ್ತು ಮಹಾತ್ಮರಿಗೆ ಇರುವ ವ್ಯತ್ಯಾಸ ಎಂದರು.<br /> <br /> ಡಿ.ಜಿ. ಶಾಂತನಗೌಡ, ವಿಶಾಲಾಕ್ಷಿ ಆಲ್ಬರ್ಟ್, ಚಾಟಿ ಶೇಖರಪ್ಪ, ಎಸ್.ಎಂ. ವೀರೇಶ್, ನವಲೆ ಪಂಚಣ್ಣ, ಜಯದೇವಪ್ಪ ಇತರರು ಮಾತನಾಡಿದರು. ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಮನಾಳು ಮಠದ ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. <br /> <br /> ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷೆ ತಿಪ್ಪಮ್ಮ, ಸಂಪತ್ರಾಜ್, ರತ್ನಮ್ಮ, ಕೆ.ಜಿ. ವೀರಭದ್ರಪ್ಪ, ಸೋಮಶೇಖರಪ್ಪ ಇತರರು ಇದ್ದರು. ಶಾಂತಾ ಹಿರೇಮಠ ಪ್ರಾರ್ಥಿಸಿದರು. ಚೆನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ವಿಜಯಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿ-ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>