<p><strong>ಶಿವಮೊಗ್ಗ: </strong>20ನೇ ಶತಮಾನದ ಕೊನೆಯವರೆಗೂ ಸಾಹಿತ್ಯ ಚರಿತ್ರೆಗಳನ್ನು ಲಿಂಗ ರಾಜಕಾರಣ ಆಳಿದ್ದು, ಇದನ್ನು ಪ್ರಶ್ನಿಸುವ ಮೂಲಕ ಹೊಸ ಚರಿತ್ರೆ ಕಟ್ಟುವ ಪ್ರತಿ ರಾಜಕಾರಣ ಮಾಡುವ ತುರ್ತಿದೆ ಎಂದು ಲೇಖಕಿ ಡಾ.ಶಾಂತಾ ಇಮ್ರಾಪುರ ಪ್ರತಿಪಾದಿಸಿದರು.<br /> <br /> ಕರ್ನಾಟಕ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ ಸ್ವೀಕರಿಸಿ ಅವರು ಮಾತನಾಡಿದರು.ಇದುವರೆಗಿನ ಸಾಹಿತ್ಯ ಚರಿತ್ರೆಗಳು ಮಹಿಳಾ ಸಾಹಿತ್ಯವನ್ನು ಒಟ್ಟು ಸೃಜನಶೀಲತೆಯ ಭಾಗವನ್ನಾಗಿ ಗುರುತಿಸಿಲ್ಲ. <br /> <br /> ಮಹಿಳೆ ಸಾಹಿತ್ಯ ಕುರಿತು ವಿಶೇಷ ಅಧ್ಯಯನವನ್ನೂ ಕನ್ನಡ ಸಾಹಿತ್ಯ ಸಂದರ್ಭ ಬೆಳೆಸಿಲ್ಲ. ಹಾಗಾಗಿ, ಇದನ್ನು ಪ್ರಶ್ನಿಸುವ ಕೆಲಸ ಆಗಬೇಕಿದೆ ಎಂದರು.ಮಹಿಳೆ ತನ್ನ ಅಸ್ಮಿತೆಯನ್ನು ಅಕ್ಷರದಲ್ಲಿ ದಾಖಲಿಸಲು ಹೊರಟಿರುವುದು ಕ್ರಾಂತಿಕಾರಕ ಕೆಲಸ. ಅದನ್ನು ಸಾಹಿತ್ಯ ಚರಿತ್ರೆ ಗುರುತಿಸಬೇಕಿತ್ತು ಎಂದರು.<br /> <br /> <strong>ಅನುವಾದ ಕೃತಿ `ಕಲಿ-ಕತೆ:</strong> ವ್ಹಾಯಾ ಬೈಪಾಸ್~ಗೆ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ ಸ್ವೀಕರಿಸಿದ ಪ್ರೊ.ಧರಣೇಂದ್ರ ಕುರಕುರಿ ಮಾತನಾಡಿ, ಅನುವಾದಿತ ಕೃತಿಗಳು ವ್ಯಾಪಕ ಚರ್ಚೆಗೆ ಒಳಗಾಗಬೇಕು ಎಂದರು. <br /> <br /> ಅನುವಾದಿತ ಕೃತಿಗಳನ್ನು ಎರಡನೇ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆದಿವೆ. ಆದರೆ, ಇತ್ತೀಚೆಗೆ ಅನುವಾದ ಸಾಹಿತ್ಯಕ್ಕೆ ಮಹತ್ವ ಬರುತ್ತಿದೆ; ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಬೇಕಾಗಿದೆ ಎಂದರು.<br /> <br /> `ಕಲಿ-ಕತೆ: ವ್ಹಾಯಾ ಬೈಪಾಸ್~ ಕೃತಿ ಕುರಿತು ಡಾ.ಎಸ್. ಸಿರಾಜ್ ಅಹಮದ್ ಮಾತನಾಡಿ, ಇದು ಆಧುನಿಕ ಕಾದಂಬರಿಯೂ ಹೌದು, ಇತಿಹಾಸವನ್ನು ಹೊಸ ರೀತಿಯಲ್ಲಿ ನೋಡಲು ಒತ್ತಾಯಿಸುವ ಕಾದಂಬರಿಯೂ ಹೌದು ಎಂದು ವಿಶ್ಲೇಷಿಸಿದರು.<br /> <br /> ಡಾ.ಶಾಂತ ಇಮ್ರಾಪುರ ಅವರ `ಮಧ್ಯ ಯುಗದ ಮಹಿಳಾ ಸಾಹಿತ್ಯ ಮತ್ತು ಸೃಜನಶೀಲತೆ~ ಕೃತಿ ಕುರಿತು ಡಾ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಈ ಕೃತಿ ವಚನ ಚಳವಳಿಯನ್ನು ಆಕಾರ ವಸ್ತುವನ್ನಾಗಿ ಇಟ್ಟುಕೊಂಡಿದ್ದು, ಮಹಿಳೆಗೂ ವಿಶೇಷ ಅಭಿವ್ಯಕ್ತಿ ಕ್ರಮವಿದೆ ಎಂಬುದನ್ನು ಪ್ರತಿಪಾದಿಸುತ್ತದೆ ಎಂದರು.<br /> <br /> ನಾ.ಡಿಸೋಜ ಬಹುಮಾನಕ್ಕೆ ಪಾತ್ರವಾದ ರಾಧೇಶ ತೋಳ್ಪಾಡಿ ಅವರ `ಹಲೋ ಹಲೋ ಚಂದಮಾಮ~ ಕೃತಿ ಕುರಿತು ಮಾತನಾಡಿದ ವಿಜಯಶ್ರೀ, ಈ ಕೃತಿಯಲ್ಲಿ ಶೈಲಿ, ಪ್ರಾಸ, ಲಾಲಿತ್ಯ ಅದ್ಭುತವಾಗಿ ಮೂಡಿಬಂದಿವೆ ಎಂದರು.<br /> <br /> ಹಾ.ಮಾ.ನಾಯಕ ಬಹುಮಾನಕ್ಕೆ ಪಾತ್ರವಾದ `ಆಳ-ನಿರಾಳ 3~ ಕೃತಿಯ ಅಂಕಣ ಬರಹಗಾರ ಪ್ರೊ.ಕೆ.ವಿ. ತಿರುಮಲೇಶ್ ಅನುಪ ಸ್ಥಿತಿಯಲ್ಲಿ ಲೇಖಕ ಲೇಖಕ ಶೇಷಾದ್ರಿ ಕಿನಾರ ಬಹುಮಾನ ಸ್ವೀಕರಿಸಿದರು. <br /> ಕರ್ನಾಟಕ ಸಂಘದ ಉಪಾಧ್ಯಕ್ಷೆ ವಿಜಯಾ ಶ್ರೀಧರ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಗೌರವ ಕಾರ್ಯದರ್ಶಿ ಎಚ್.ಡಿ. ಉದಯಶಂಕರಶಾಸ್ತ್ರಿ ಸ್ವಾಗತಿಸಿದರು. ಪ್ರೊ. ಕಿರಣ್ ದೇಸಾಯಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>20ನೇ ಶತಮಾನದ ಕೊನೆಯವರೆಗೂ ಸಾಹಿತ್ಯ ಚರಿತ್ರೆಗಳನ್ನು ಲಿಂಗ ರಾಜಕಾರಣ ಆಳಿದ್ದು, ಇದನ್ನು ಪ್ರಶ್ನಿಸುವ ಮೂಲಕ ಹೊಸ ಚರಿತ್ರೆ ಕಟ್ಟುವ ಪ್ರತಿ ರಾಜಕಾರಣ ಮಾಡುವ ತುರ್ತಿದೆ ಎಂದು ಲೇಖಕಿ ಡಾ.ಶಾಂತಾ ಇಮ್ರಾಪುರ ಪ್ರತಿಪಾದಿಸಿದರು.<br /> <br /> ಕರ್ನಾಟಕ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ ಸ್ವೀಕರಿಸಿ ಅವರು ಮಾತನಾಡಿದರು.ಇದುವರೆಗಿನ ಸಾಹಿತ್ಯ ಚರಿತ್ರೆಗಳು ಮಹಿಳಾ ಸಾಹಿತ್ಯವನ್ನು ಒಟ್ಟು ಸೃಜನಶೀಲತೆಯ ಭಾಗವನ್ನಾಗಿ ಗುರುತಿಸಿಲ್ಲ. <br /> <br /> ಮಹಿಳೆ ಸಾಹಿತ್ಯ ಕುರಿತು ವಿಶೇಷ ಅಧ್ಯಯನವನ್ನೂ ಕನ್ನಡ ಸಾಹಿತ್ಯ ಸಂದರ್ಭ ಬೆಳೆಸಿಲ್ಲ. ಹಾಗಾಗಿ, ಇದನ್ನು ಪ್ರಶ್ನಿಸುವ ಕೆಲಸ ಆಗಬೇಕಿದೆ ಎಂದರು.ಮಹಿಳೆ ತನ್ನ ಅಸ್ಮಿತೆಯನ್ನು ಅಕ್ಷರದಲ್ಲಿ ದಾಖಲಿಸಲು ಹೊರಟಿರುವುದು ಕ್ರಾಂತಿಕಾರಕ ಕೆಲಸ. ಅದನ್ನು ಸಾಹಿತ್ಯ ಚರಿತ್ರೆ ಗುರುತಿಸಬೇಕಿತ್ತು ಎಂದರು.<br /> <br /> <strong>ಅನುವಾದ ಕೃತಿ `ಕಲಿ-ಕತೆ:</strong> ವ್ಹಾಯಾ ಬೈಪಾಸ್~ಗೆ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ ಸ್ವೀಕರಿಸಿದ ಪ್ರೊ.ಧರಣೇಂದ್ರ ಕುರಕುರಿ ಮಾತನಾಡಿ, ಅನುವಾದಿತ ಕೃತಿಗಳು ವ್ಯಾಪಕ ಚರ್ಚೆಗೆ ಒಳಗಾಗಬೇಕು ಎಂದರು. <br /> <br /> ಅನುವಾದಿತ ಕೃತಿಗಳನ್ನು ಎರಡನೇ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆದಿವೆ. ಆದರೆ, ಇತ್ತೀಚೆಗೆ ಅನುವಾದ ಸಾಹಿತ್ಯಕ್ಕೆ ಮಹತ್ವ ಬರುತ್ತಿದೆ; ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಬೇಕಾಗಿದೆ ಎಂದರು.<br /> <br /> `ಕಲಿ-ಕತೆ: ವ್ಹಾಯಾ ಬೈಪಾಸ್~ ಕೃತಿ ಕುರಿತು ಡಾ.ಎಸ್. ಸಿರಾಜ್ ಅಹಮದ್ ಮಾತನಾಡಿ, ಇದು ಆಧುನಿಕ ಕಾದಂಬರಿಯೂ ಹೌದು, ಇತಿಹಾಸವನ್ನು ಹೊಸ ರೀತಿಯಲ್ಲಿ ನೋಡಲು ಒತ್ತಾಯಿಸುವ ಕಾದಂಬರಿಯೂ ಹೌದು ಎಂದು ವಿಶ್ಲೇಷಿಸಿದರು.<br /> <br /> ಡಾ.ಶಾಂತ ಇಮ್ರಾಪುರ ಅವರ `ಮಧ್ಯ ಯುಗದ ಮಹಿಳಾ ಸಾಹಿತ್ಯ ಮತ್ತು ಸೃಜನಶೀಲತೆ~ ಕೃತಿ ಕುರಿತು ಡಾ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಈ ಕೃತಿ ವಚನ ಚಳವಳಿಯನ್ನು ಆಕಾರ ವಸ್ತುವನ್ನಾಗಿ ಇಟ್ಟುಕೊಂಡಿದ್ದು, ಮಹಿಳೆಗೂ ವಿಶೇಷ ಅಭಿವ್ಯಕ್ತಿ ಕ್ರಮವಿದೆ ಎಂಬುದನ್ನು ಪ್ರತಿಪಾದಿಸುತ್ತದೆ ಎಂದರು.<br /> <br /> ನಾ.ಡಿಸೋಜ ಬಹುಮಾನಕ್ಕೆ ಪಾತ್ರವಾದ ರಾಧೇಶ ತೋಳ್ಪಾಡಿ ಅವರ `ಹಲೋ ಹಲೋ ಚಂದಮಾಮ~ ಕೃತಿ ಕುರಿತು ಮಾತನಾಡಿದ ವಿಜಯಶ್ರೀ, ಈ ಕೃತಿಯಲ್ಲಿ ಶೈಲಿ, ಪ್ರಾಸ, ಲಾಲಿತ್ಯ ಅದ್ಭುತವಾಗಿ ಮೂಡಿಬಂದಿವೆ ಎಂದರು.<br /> <br /> ಹಾ.ಮಾ.ನಾಯಕ ಬಹುಮಾನಕ್ಕೆ ಪಾತ್ರವಾದ `ಆಳ-ನಿರಾಳ 3~ ಕೃತಿಯ ಅಂಕಣ ಬರಹಗಾರ ಪ್ರೊ.ಕೆ.ವಿ. ತಿರುಮಲೇಶ್ ಅನುಪ ಸ್ಥಿತಿಯಲ್ಲಿ ಲೇಖಕ ಲೇಖಕ ಶೇಷಾದ್ರಿ ಕಿನಾರ ಬಹುಮಾನ ಸ್ವೀಕರಿಸಿದರು. <br /> ಕರ್ನಾಟಕ ಸಂಘದ ಉಪಾಧ್ಯಕ್ಷೆ ವಿಜಯಾ ಶ್ರೀಧರ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಗೌರವ ಕಾರ್ಯದರ್ಶಿ ಎಚ್.ಡಿ. ಉದಯಶಂಕರಶಾಸ್ತ್ರಿ ಸ್ವಾಗತಿಸಿದರು. ಪ್ರೊ. ಕಿರಣ್ ದೇಸಾಯಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>