<p>ಜೇವರ್ಗಿ: ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅವರ ಭಾಗದಲ್ಲಿರುವ ಪ್ರಚಲಿತ ವಿದ್ಯಮಾನಗಳು, ಸಾಹಿತ್ಯ, ಗ್ರಾಮೀಣ ಕಲೆಗಳು ಹಾಗೂ ಸಂಸ್ಕೃತಿಯ ಅರಿವು ಅಗತ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನಬಸಪ್ಪ ಅಭಿಪ್ರಾಯಪಟ್ಟರು.<br /> <br /> ಅವರು ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ ಗುಲ್ಬರ್ಗ ಜಿಲ್ಲಾ ಜಾನಪದ ಸಂಭ್ರಮ-2011 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.<br /> <br /> ಇದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಿಂದ-ತಹಸೀಲ್ದಾರ್ ಕಚೇರಿವರೆಗೆ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಆಕರ್ಷಕ ನೃತ್ಯ, ಡೊಳ್ಳಿನ ಕುಣಿತ ನೆರೆದ ಜನರ ಗಮನ ಸೆಳೆದವು.<br /> <br /> ಜಾನಪದ ಸಾಹಿತಿ ಡಾ.ಎಂ.ಎಸ್. ವಾಲಿ ಆಶಯ ನುಡಿ ಪ್ರಸ್ತುತಪಡಿಸಿದರು. ಜಾನಪದ ಸಾಹಿತಿ ಡಾ.ಚಕ್ಕೆರೆ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು.<br /> <br /> ಜನಪದ ಗದ್ಯ ಸಾಹಿತ್ಯ ಎಂಬ ವಿಷಯದ ಬಗ್ಗೆ ಡಾ. ಶ್ರೀಶೈಲ ನಾಗರಾಳ, ಜನಪದ ಪದ್ಯ ಸಾಹಿತ್ಯದ ಬಗ್ಗೆ ಡಾ.ಹನುಮಂತರಾವ್ ದೊಡ್ಡಮನಿ, ಜನಪದ ಸಂಕೀರ್ಣ ಸಾಹಿತ್ಯದ ಬಗ್ಗೆ ಪ್ರೊ. ಸೂಗಯ್ಯ ಹಿರೇಮಠ ವಿಷಯ ಮಂಡಿಸಿದರು. ಅಪ್ಪಾಸಾಬ ಕೋಳಕೂರ ಕಾರ್ಯಕ್ರಮವನ್ನು ನಿರ್ವಹಿಸಿದರು.<br /> <br /> ನಂತರ ಜಾನಪದ ಕಲಾವಿದರೊಂದಿಗೆ ಅಕಾಡೆಮಿ ಅಧ್ಯಕ್ಷರು ವಿಚಾರ-ವಿನಿಮಯ ನಡೆಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೇವರ್ಗಿ: ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅವರ ಭಾಗದಲ್ಲಿರುವ ಪ್ರಚಲಿತ ವಿದ್ಯಮಾನಗಳು, ಸಾಹಿತ್ಯ, ಗ್ರಾಮೀಣ ಕಲೆಗಳು ಹಾಗೂ ಸಂಸ್ಕೃತಿಯ ಅರಿವು ಅಗತ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನಬಸಪ್ಪ ಅಭಿಪ್ರಾಯಪಟ್ಟರು.<br /> <br /> ಅವರು ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ ಗುಲ್ಬರ್ಗ ಜಿಲ್ಲಾ ಜಾನಪದ ಸಂಭ್ರಮ-2011 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.<br /> <br /> ಇದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಿಂದ-ತಹಸೀಲ್ದಾರ್ ಕಚೇರಿವರೆಗೆ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಆಕರ್ಷಕ ನೃತ್ಯ, ಡೊಳ್ಳಿನ ಕುಣಿತ ನೆರೆದ ಜನರ ಗಮನ ಸೆಳೆದವು.<br /> <br /> ಜಾನಪದ ಸಾಹಿತಿ ಡಾ.ಎಂ.ಎಸ್. ವಾಲಿ ಆಶಯ ನುಡಿ ಪ್ರಸ್ತುತಪಡಿಸಿದರು. ಜಾನಪದ ಸಾಹಿತಿ ಡಾ.ಚಕ್ಕೆರೆ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು.<br /> <br /> ಜನಪದ ಗದ್ಯ ಸಾಹಿತ್ಯ ಎಂಬ ವಿಷಯದ ಬಗ್ಗೆ ಡಾ. ಶ್ರೀಶೈಲ ನಾಗರಾಳ, ಜನಪದ ಪದ್ಯ ಸಾಹಿತ್ಯದ ಬಗ್ಗೆ ಡಾ.ಹನುಮಂತರಾವ್ ದೊಡ್ಡಮನಿ, ಜನಪದ ಸಂಕೀರ್ಣ ಸಾಹಿತ್ಯದ ಬಗ್ಗೆ ಪ್ರೊ. ಸೂಗಯ್ಯ ಹಿರೇಮಠ ವಿಷಯ ಮಂಡಿಸಿದರು. ಅಪ್ಪಾಸಾಬ ಕೋಳಕೂರ ಕಾರ್ಯಕ್ರಮವನ್ನು ನಿರ್ವಹಿಸಿದರು.<br /> <br /> ನಂತರ ಜಾನಪದ ಕಲಾವಿದರೊಂದಿಗೆ ಅಕಾಡೆಮಿ ಅಧ್ಯಕ್ಷರು ವಿಚಾರ-ವಿನಿಮಯ ನಡೆಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>