<p><strong>ಗ್ಹಾ </strong>(<strong>ಪಾಕಿಸ್ತಾನ) (ಎಎಫ್ಪಿ): </strong>ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಹುಟ್ಟೂರು ಪಾಕಿಸ್ತಾನದ ಗ್ಹಾ ಗ್ರಾಮದ ಅಭಿವೃದ್ಧಿಗೆ ನೀಡಿದ್ದ ಹತ್ತಾರು ಸಾವಿರ ಡಾಲರ್ ನೆರವಿನಲ್ಲಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಕಾಮಗಾರಿಗಳು ಪೂರ್ಣವಾಗದೆ ಗ್ರಾಮದ ಜನರು ಪರಿತಪಿಸುವಂತಾಗಿದೆ. <br /> <br /> ಆದರೆ, ಸಿಂಗ್ ಅವರ `ಮಾದರಿ ಗ್ರಾಮ~ದ ಕನಸು ಈ ವರ್ಷಾಂತ್ಯದಲ್ಲಿ ಸಾಕಾರಗೊಳ್ಳುವ ಆಶಾಭಾವ ಮೂಡಿದೆ. <br /> <br /> ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಪ್ರಧಾನಿ ಸಿಂಗ್ ಅವರಿಗೆ ಪಾಕ್ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಸಿಂಗ್ ಹುಟ್ಟೂರಿಗೆ ಭೇಟಿ ನೀಡಲಿದ್ದು, ಅಷ್ಟರಲ್ಲಿ ಸ್ಥಗಿತವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕುವ ಸಾಧ್ಯತೆ ಇದೆ.<br /> <br /> ಮನಮೋಹನ್ ಸಿಂಗ್ ನೀಡಿರುವ ಈ ನೆರವು ಅವರ ಸಹಪಾಠಿ ಗುಲಾಂ ಮುಹಮ್ಮದ್ ಖಾನ್ ಅವರ ಮೊಗದಲ್ಲಿ ಆನಂದ ತಂದಿದೆ. `ಮನಮೋಹನ್ ಗ್ರಾಮದ ಅಭಿವೃದ್ಧಿಗೆ ನೆರವು ನೀಡುತ್ತಾರೆಂದು ನಾನು ಕನಸಿನಲ್ಲೂ ನೆನಸಿರಲಿಲ್ಲ. ನಮ್ಮದೇ ಸರ್ಕಾರ ಮಾಡದ ಕಾರ್ಯವನ್ನು ಭಾರತದ ಪ್ರಧಾನಿ ಮಾಡಿದ್ದಾರೆ. <br /> <br /> ಆದರೆ, `ಕೈಗೆ ಬಂದಿದ್ದು ಬಾಯಿಗೆ ಇಲ್ಲ~ ಎನ್ನುವಂತೆ ಕಾಮಗಾರಿಗಳು ಅರ್ಧಂಬರ್ಧವಾಗಿದೆ~ ಎಂದಿರುವ ಖಾನ್, ತಮ್ಮದೇ ಸರ್ಕಾರದ ಉದಾಸೀನತೆಗೆ ವ್ಯಥೆಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ಹಾ </strong>(<strong>ಪಾಕಿಸ್ತಾನ) (ಎಎಫ್ಪಿ): </strong>ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಹುಟ್ಟೂರು ಪಾಕಿಸ್ತಾನದ ಗ್ಹಾ ಗ್ರಾಮದ ಅಭಿವೃದ್ಧಿಗೆ ನೀಡಿದ್ದ ಹತ್ತಾರು ಸಾವಿರ ಡಾಲರ್ ನೆರವಿನಲ್ಲಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಕಾಮಗಾರಿಗಳು ಪೂರ್ಣವಾಗದೆ ಗ್ರಾಮದ ಜನರು ಪರಿತಪಿಸುವಂತಾಗಿದೆ. <br /> <br /> ಆದರೆ, ಸಿಂಗ್ ಅವರ `ಮಾದರಿ ಗ್ರಾಮ~ದ ಕನಸು ಈ ವರ್ಷಾಂತ್ಯದಲ್ಲಿ ಸಾಕಾರಗೊಳ್ಳುವ ಆಶಾಭಾವ ಮೂಡಿದೆ. <br /> <br /> ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಪ್ರಧಾನಿ ಸಿಂಗ್ ಅವರಿಗೆ ಪಾಕ್ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಸಿಂಗ್ ಹುಟ್ಟೂರಿಗೆ ಭೇಟಿ ನೀಡಲಿದ್ದು, ಅಷ್ಟರಲ್ಲಿ ಸ್ಥಗಿತವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕುವ ಸಾಧ್ಯತೆ ಇದೆ.<br /> <br /> ಮನಮೋಹನ್ ಸಿಂಗ್ ನೀಡಿರುವ ಈ ನೆರವು ಅವರ ಸಹಪಾಠಿ ಗುಲಾಂ ಮುಹಮ್ಮದ್ ಖಾನ್ ಅವರ ಮೊಗದಲ್ಲಿ ಆನಂದ ತಂದಿದೆ. `ಮನಮೋಹನ್ ಗ್ರಾಮದ ಅಭಿವೃದ್ಧಿಗೆ ನೆರವು ನೀಡುತ್ತಾರೆಂದು ನಾನು ಕನಸಿನಲ್ಲೂ ನೆನಸಿರಲಿಲ್ಲ. ನಮ್ಮದೇ ಸರ್ಕಾರ ಮಾಡದ ಕಾರ್ಯವನ್ನು ಭಾರತದ ಪ್ರಧಾನಿ ಮಾಡಿದ್ದಾರೆ. <br /> <br /> ಆದರೆ, `ಕೈಗೆ ಬಂದಿದ್ದು ಬಾಯಿಗೆ ಇಲ್ಲ~ ಎನ್ನುವಂತೆ ಕಾಮಗಾರಿಗಳು ಅರ್ಧಂಬರ್ಧವಾಗಿದೆ~ ಎಂದಿರುವ ಖಾನ್, ತಮ್ಮದೇ ಸರ್ಕಾರದ ಉದಾಸೀನತೆಗೆ ವ್ಯಥೆಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>