<p><strong>ನವದೆಹಲಿ (ಪಿಟಿಐ)</strong>: ಸಿಖ್ ಉಗ್ರವಾದಕ್ಕೆ ಮರು ಜೀವ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ದೇಶದಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಯುವಕರಿಗೆ ಅಲ್ಲಿನ ಐಎಸ್ಐ ತರಬೇತಿ ನೀಡುತ್ತಿದೆ ಎಂದು ಆಪಾದಿಸಿದೆ.<br /> ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ನವಾಬ್ ಷರೀಫ್ ಅವರು ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಭಾರತ ಈ ಹೇಳಿಕೆ ನೀಡಿದೆ.<br /> <br /> `ಪಂಜಾಬ್ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಐಎಸ್ಐ ಸಂಚು ರೂಪಿಸಿದೆ' ಎಂದು ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಬುಧವಾರ ಇಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.<br /> <br /> ಪಾಕಿಸ್ತಾನದ ಐಎಸ್ಐ ಕೇಂದ್ರಗಳಲ್ಲಿ ಸಿಖ್ ಯುವಕರಿಗೆ ತರಬೇತಿ ಕೊಡಲಾಗುತ್ತಿದೆ. ಜೈಲಿನಲ್ಲಿರುವ ವ್ಯಕ್ತಿಗಳು, ನಿರುದ್ಯೋಗಿ ಯುವಕರು, ಅಪರಾಧಿಗಳು ಹಾಗೂ ಕಳ್ಳಸಾಗಣೆದಾರರನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.<br /> <br /> ಯೂರೋಪ್ ಮತ್ತು ಅಮೆರಿಕದಲ್ಲಿ ನೆಲೆಸಿರುವ ಯುವಕರನ್ನು ಸಹ ಉಗ್ರವಾದದತ್ತ ಸೆಳೆಯಲಾಗುತ್ತಿದೆ. ಬೃಹತ್ ಪ್ರಮಾಣದ ಅತ್ಯಾಧುನಿಕ ಆಯುಧ, ಆರ್ಡಿಎಕ್ಸ್ ಸೇರಿದಂತೆ ಸ್ಫೋಟಕಗಳನ್ನು ಗಡಿಭಾಗದ ಮೂಲಕ ಭಾರತದೊಳಗೆ ರವಾನಿಸಲಾಗುತ್ತಿದೆ ಎಂದು ಶಿಂಧೆ ವಿವರಿಸಿದರು.<br /> <br /> ಕಳೆದ ಒಂದು ವರ್ಷದಲ್ಲಿ ರಾಜಸ್ತಾನ ಮತ್ತು ಪಂಜಾಬ್ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಗಾಧ ಪ್ರಮಾಣದ ಆರ್ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ)</strong>: ಸಿಖ್ ಉಗ್ರವಾದಕ್ಕೆ ಮರು ಜೀವ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ದೇಶದಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಯುವಕರಿಗೆ ಅಲ್ಲಿನ ಐಎಸ್ಐ ತರಬೇತಿ ನೀಡುತ್ತಿದೆ ಎಂದು ಆಪಾದಿಸಿದೆ.<br /> ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ನವಾಬ್ ಷರೀಫ್ ಅವರು ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಭಾರತ ಈ ಹೇಳಿಕೆ ನೀಡಿದೆ.<br /> <br /> `ಪಂಜಾಬ್ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಐಎಸ್ಐ ಸಂಚು ರೂಪಿಸಿದೆ' ಎಂದು ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಬುಧವಾರ ಇಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.<br /> <br /> ಪಾಕಿಸ್ತಾನದ ಐಎಸ್ಐ ಕೇಂದ್ರಗಳಲ್ಲಿ ಸಿಖ್ ಯುವಕರಿಗೆ ತರಬೇತಿ ಕೊಡಲಾಗುತ್ತಿದೆ. ಜೈಲಿನಲ್ಲಿರುವ ವ್ಯಕ್ತಿಗಳು, ನಿರುದ್ಯೋಗಿ ಯುವಕರು, ಅಪರಾಧಿಗಳು ಹಾಗೂ ಕಳ್ಳಸಾಗಣೆದಾರರನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.<br /> <br /> ಯೂರೋಪ್ ಮತ್ತು ಅಮೆರಿಕದಲ್ಲಿ ನೆಲೆಸಿರುವ ಯುವಕರನ್ನು ಸಹ ಉಗ್ರವಾದದತ್ತ ಸೆಳೆಯಲಾಗುತ್ತಿದೆ. ಬೃಹತ್ ಪ್ರಮಾಣದ ಅತ್ಯಾಧುನಿಕ ಆಯುಧ, ಆರ್ಡಿಎಕ್ಸ್ ಸೇರಿದಂತೆ ಸ್ಫೋಟಕಗಳನ್ನು ಗಡಿಭಾಗದ ಮೂಲಕ ಭಾರತದೊಳಗೆ ರವಾನಿಸಲಾಗುತ್ತಿದೆ ಎಂದು ಶಿಂಧೆ ವಿವರಿಸಿದರು.<br /> <br /> ಕಳೆದ ಒಂದು ವರ್ಷದಲ್ಲಿ ರಾಜಸ್ತಾನ ಮತ್ತು ಪಂಜಾಬ್ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಗಾಧ ಪ್ರಮಾಣದ ಆರ್ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>