ಸಿಜೇರಿಯನ್ ಸಂಕಷ್ಟ
ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿನ ನರ್ಸಿಂಗ್ ಹೋಂಗಳಲ್ಲಿ ಹಣದ ಆಸೆಗೆ ಸಿಜೇರಿಯನ್ ಹೆರಿಗೆ ಮಾಡಿಸುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ರೈತ ಮಹಿಳೆಯರು, ಕೂಲಿಕಾರ್ಮಿಕರುಗಳು, ಬಾವಿಯಿಂದ ನೀರು ಸೇದುವುದು, ಹೊಲಗದ್ದೆಗಳಲ್ಲಿ ಕೆಲಸ ಮಡುವುದು, ಬಟ್ಟೆ ಒಗೆಯುವುದು, ಭಾರವಾದ ವಸ್ತುಗಳನ್ನು ಎತ್ತುವುದು ಆಗದಿರಲು ಕಾರಣವಾಗಿ, ರೈತ ಮಹಿಳೆಯನ್ನೇ ಅವಲಂಬಿತವಾಗಿರುವ ಕೆಲವು ಕುಟುಂಬಗಳು ತೀರಾ ಸಂಕಷ್ಟಕ್ಕೆ ಸಿಲುಕಿವೆ. ದೇಶದ ಬೆನ್ನೆಲುಬಾಗಿರುವ ರೈತರನ್ನು ಮಳೆರಾಯ, ಕೆಲವು ಮಧ್ಯವರ್ತಿಗಳು, ವರ್ತಕರು, ಸಾಲಗಾರರು ಸಂಕಷ್ಟಕ್ಕೆ ಸಿಲುಕಿಸಿದರೆ, ರೈತ ಮಹಿಳೆಯರನ್ನು ಸಿಜೇರಿಯನ್ ಸಂಕಷ್ಟಕ್ಕೆ ಸಿಲುಕಿಸಿದೆ. ಸಿಜೇರಿಯನ್ನಿಂದಲೇ ಹಣಗಳಿಸಿ ಶ್ರಿಮಂತರಾಗಬೇಕೆಂದು ಆಸೆ ಪಡುವ ಪ್ರಿಯ (ವೈದ್ಯರುಗಳೇ) ನರ್ಸಿಂಗ್ ಹೋಂ ಗಳೇ ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ಹಗಲಿರುಳು ದುಡಿದು ನಿಮಗೆ ಅನ್ನ ನೀಡುತ್ತಿರುವ ಇಂತಹ ರೈತ ಮಹಿಳೆಯರನ್ನು ನಿಮ್ಮ ಸಹೋದರಿಯಂತೆ ಕಾಣಿ, ನಿಮ್ಮ ಮಕ್ಕಳಂತೆ ಕಾಣಿರಿ ಎಂಬುದೇ ನಮ್ಮ ಪ್ರಾರ್ಥನೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.