<p>ನವದೆಹಲಿ (ಪಿಟಿಐ): ಪಿ.ಜೆ. ಥಾಮಸ್ ಅವರನ್ನು ಸಿವಿಸಿಯಾಗಿ ಮಾಡಿದ ನೇಮಕವು ~ಒಂದು ತಪ್ಪು ತೀರ್ಮಾನವಾಗಿತ್ತು~ ಎಂದು ಸೋಮವಾರ ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ~ಇದರ ಪೂರ್ಣ ಹೊಣೆಯನ್ನು ನಾನು ಹೊರುವೆ~ ಎಂದು ಘೋಷಿಸಿದರು.<br /> <br /> ಎಡಪಕ್ಷಗಳು ಪ್ರಧಾನಿಯ ಹೇಳಿಕೆಯಿಂದ ತೃಪ್ತಿಯಾಗದೇ ಸಭಾತ್ಯಾಗ ಮಾಡಿದವು.<br /> <br /> ~ಜಮ್ಮುವಿನಲ್ಲಿ ಏನು ಹೇಳಿದ್ದೇನೋ ಅದನ್ನು ಪುನರಾವರ್ತಿಸಲು ನಾನು ಹಿಂಜರಿಯುವುದಿಲ್ಲ. ನಿಶ್ಚಿತವಾಗಿ ಇದೊಂದು ತಪ್ಪು ತೀರ್ಮಾನವಾಗಿತ್ತು. ನಾನು ಅದರ ಪೂರ್ಣ ಜವಾಬ್ದಾರಿ ಹೊರುವೆ~ ಎಂದು ಸಿಂಗ್ ಹೇಳಿದರು.<br /> <br /> ಪ್ರಧಾನಿಯವರು ಸ್ವ ಇಚ್ಛೆಯ ಹೇಳಿಕೆ ನೀಡಿದ್ದನ್ನು ವಿರೋಧ ಪಕ್ಷಗಳು ಪ್ರತಿಭಟಿಸಿದಾಗ ಸಿಂಗ್ ಈ ಘೋಷಣೆ ಮಾಡಿದರು.<br /> <br /> ಪ್ರಧಾನಿ ಮಾಡಿದ ಸ್ವ ಇಚ್ಛೆಯ ಹೇಳಿಕೆಯಲ್ಲಿ ಹೊಣೆಗಾರಿಕೆಯ ಪ್ರಸ್ತಾವವೇ ಇರಲಿಲ್ಲ. ಕೇವಲ ಥಾಮಸ್ ಅವರನ್ನು ಕೇಂದ್ರೀಯ ಜಾಗೃತಾ ಆಯುಕ್ತರಾಗಿ (ಸಿವಿಸಿ) ನೇಮಕ ಮಾಡಿದ್ದಕ್ಕೆ ಪೂರ್ವದ ಘಟನಾವಳಿಗಳು ಮತ್ತು ಕಳೆದ ವಾರ ಸುಪ್ರೀಂಕೋರ್ಟ್ ಈ ನೇಮಕಾತಿಯನ್ನು ರದ್ದು ಪಡಿಸಿದ ಸಂದರ್ಭಗಳ ವಿವರಣೆಯನ್ನಷ್ಟೇ ಹೇಳಿಕೆಯಲ್ಲಿ ವಿವರಿಸಲಾಗಿದ್ದುದನ್ನು ಕಂಡು ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿದವು.<br /> <br /> ~ನಾವು ಸುಪ್ರೀಂಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ ಮತ್ತು ಅಂಗೀಕರಿಸುತ್ತೇವೆ. ಹೊಸ ಸಿವಿಸಿ ನೇಮಕಾತಿ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಸರ್ಕಾರವು ಪಾಲಿಸುತ್ತದೆ~ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಪಿ.ಜೆ. ಥಾಮಸ್ ಅವರನ್ನು ಸಿವಿಸಿಯಾಗಿ ಮಾಡಿದ ನೇಮಕವು ~ಒಂದು ತಪ್ಪು ತೀರ್ಮಾನವಾಗಿತ್ತು~ ಎಂದು ಸೋಮವಾರ ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ~ಇದರ ಪೂರ್ಣ ಹೊಣೆಯನ್ನು ನಾನು ಹೊರುವೆ~ ಎಂದು ಘೋಷಿಸಿದರು.<br /> <br /> ಎಡಪಕ್ಷಗಳು ಪ್ರಧಾನಿಯ ಹೇಳಿಕೆಯಿಂದ ತೃಪ್ತಿಯಾಗದೇ ಸಭಾತ್ಯಾಗ ಮಾಡಿದವು.<br /> <br /> ~ಜಮ್ಮುವಿನಲ್ಲಿ ಏನು ಹೇಳಿದ್ದೇನೋ ಅದನ್ನು ಪುನರಾವರ್ತಿಸಲು ನಾನು ಹಿಂಜರಿಯುವುದಿಲ್ಲ. ನಿಶ್ಚಿತವಾಗಿ ಇದೊಂದು ತಪ್ಪು ತೀರ್ಮಾನವಾಗಿತ್ತು. ನಾನು ಅದರ ಪೂರ್ಣ ಜವಾಬ್ದಾರಿ ಹೊರುವೆ~ ಎಂದು ಸಿಂಗ್ ಹೇಳಿದರು.<br /> <br /> ಪ್ರಧಾನಿಯವರು ಸ್ವ ಇಚ್ಛೆಯ ಹೇಳಿಕೆ ನೀಡಿದ್ದನ್ನು ವಿರೋಧ ಪಕ್ಷಗಳು ಪ್ರತಿಭಟಿಸಿದಾಗ ಸಿಂಗ್ ಈ ಘೋಷಣೆ ಮಾಡಿದರು.<br /> <br /> ಪ್ರಧಾನಿ ಮಾಡಿದ ಸ್ವ ಇಚ್ಛೆಯ ಹೇಳಿಕೆಯಲ್ಲಿ ಹೊಣೆಗಾರಿಕೆಯ ಪ್ರಸ್ತಾವವೇ ಇರಲಿಲ್ಲ. ಕೇವಲ ಥಾಮಸ್ ಅವರನ್ನು ಕೇಂದ್ರೀಯ ಜಾಗೃತಾ ಆಯುಕ್ತರಾಗಿ (ಸಿವಿಸಿ) ನೇಮಕ ಮಾಡಿದ್ದಕ್ಕೆ ಪೂರ್ವದ ಘಟನಾವಳಿಗಳು ಮತ್ತು ಕಳೆದ ವಾರ ಸುಪ್ರೀಂಕೋರ್ಟ್ ಈ ನೇಮಕಾತಿಯನ್ನು ರದ್ದು ಪಡಿಸಿದ ಸಂದರ್ಭಗಳ ವಿವರಣೆಯನ್ನಷ್ಟೇ ಹೇಳಿಕೆಯಲ್ಲಿ ವಿವರಿಸಲಾಗಿದ್ದುದನ್ನು ಕಂಡು ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿದವು.<br /> <br /> ~ನಾವು ಸುಪ್ರೀಂಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ ಮತ್ತು ಅಂಗೀಕರಿಸುತ್ತೇವೆ. ಹೊಸ ಸಿವಿಸಿ ನೇಮಕಾತಿ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಸರ್ಕಾರವು ಪಾಲಿಸುತ್ತದೆ~ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>