<p><strong>ಕಂಪ್ಲಿ: </strong>ಇಲ್ಲಿಗೆ ಸಮೀಪದ ಸುಗ್ಗೇನಹಳ್ಳಿ ಗ್ರಾಮದ ಚಲುವಾದಿ ದೇವದಾಸಿ ಶೇಕಮ್ಮ ಅವರ ಹೊಲದ ಕಬ್ಬಿನ ಬೆಳೆ ಮಂಗಳವಾರ ರಾತ್ರಿ ಮಳೆ ಗಾಳಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.<br /> <br /> ಈ ಕಬ್ಬಿನ ಬೆಳೆ ಇನ್ನು ನಾಲ್ಕು ತಿಂಗಳಲ್ಲಿ ಕಟಾವು ಸಿದ್ಧವಾಗುತ್ತಿತ್ತು. ಆದರೆ ವರುಣ ಮತ್ತು ವಾಯುದೇವನ ಆರ್ಭಟಕ್ಕೆ ಸುಮಾರು ಒಂದು ಎಕರೆ ಕಬ್ಬಿನ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಇದನ್ನೇ ನಂಬಿದ್ದ ದೇವದಾಸಿ ಕುಟುಂಬ ಕಂಗಾಲಾಗಿದೆ.<br /> <br /> `ಒಂದು ಎಕರೆಗೆ ಇಲ್ಲಿಯವರೆಗೆ ಸುಮಾರು ರೂ. 50 ಸಾವಿರ ವೆಚ್ಚ ಮಾಡಿದ್ದು, ಮಾರಾಟ ಮಾಡಿದ ಮೇಲೆ ಹೊಲದ ಮಾಲೀಕ ಮಲ್ಲಪ್ಪನಿಗೆ ಗುತ್ತಿಗೆ ಪಾವತಿಸಿ ಇನ್ನುಳಿದ ಹಣದಲ್ಲಿ ನನ್ನ ಮಗ ಚಲುವಾದಿ ಪುರುಷೋತ್ತಮಗೆ ವಿವಾಹ ಮಾಡಬೇಕು ಅಂದುಕೊಂಡಿದ್ದೆ. ಆದರೆ ವಿಧಿ ನನ್ನನ್ನು ಕೈಹಿಡಿಯಲಿಲ್ಲ~ ಎಂದು ದೇವದಾಸಿ ಶೇಕಮ್ಮ ದುಃಖದಿಂದ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕಬ್ಬಿನ ಬೀಜ ಮತ್ತು ರಸಾಯನಿಕ ಗೊಬ್ಬರಕ್ಕೆ ಆರ್ಥಿಕ ನೆರವು ನೀಡಿದ್ದ ಸಿರುಗುಪ್ಪ ದೇಶನೂರು ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಕಬ್ಬಿನ ಬೆಳೆ ಹಾಳಾಗಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಅದೇ ರೀತಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಲ್ಲಿಯೂ ಈ ಬಗ್ಗೆ ಮನವಿ ಮಾಡಿದ್ದೇನೆ. ಸರ್ಕಾರ, ಶಾಸಕರು, ಗಮನಹರಿಸಿ ನನಗಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಅವರು ವಿನಂತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ: </strong>ಇಲ್ಲಿಗೆ ಸಮೀಪದ ಸುಗ್ಗೇನಹಳ್ಳಿ ಗ್ರಾಮದ ಚಲುವಾದಿ ದೇವದಾಸಿ ಶೇಕಮ್ಮ ಅವರ ಹೊಲದ ಕಬ್ಬಿನ ಬೆಳೆ ಮಂಗಳವಾರ ರಾತ್ರಿ ಮಳೆ ಗಾಳಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.<br /> <br /> ಈ ಕಬ್ಬಿನ ಬೆಳೆ ಇನ್ನು ನಾಲ್ಕು ತಿಂಗಳಲ್ಲಿ ಕಟಾವು ಸಿದ್ಧವಾಗುತ್ತಿತ್ತು. ಆದರೆ ವರುಣ ಮತ್ತು ವಾಯುದೇವನ ಆರ್ಭಟಕ್ಕೆ ಸುಮಾರು ಒಂದು ಎಕರೆ ಕಬ್ಬಿನ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಇದನ್ನೇ ನಂಬಿದ್ದ ದೇವದಾಸಿ ಕುಟುಂಬ ಕಂಗಾಲಾಗಿದೆ.<br /> <br /> `ಒಂದು ಎಕರೆಗೆ ಇಲ್ಲಿಯವರೆಗೆ ಸುಮಾರು ರೂ. 50 ಸಾವಿರ ವೆಚ್ಚ ಮಾಡಿದ್ದು, ಮಾರಾಟ ಮಾಡಿದ ಮೇಲೆ ಹೊಲದ ಮಾಲೀಕ ಮಲ್ಲಪ್ಪನಿಗೆ ಗುತ್ತಿಗೆ ಪಾವತಿಸಿ ಇನ್ನುಳಿದ ಹಣದಲ್ಲಿ ನನ್ನ ಮಗ ಚಲುವಾದಿ ಪುರುಷೋತ್ತಮಗೆ ವಿವಾಹ ಮಾಡಬೇಕು ಅಂದುಕೊಂಡಿದ್ದೆ. ಆದರೆ ವಿಧಿ ನನ್ನನ್ನು ಕೈಹಿಡಿಯಲಿಲ್ಲ~ ಎಂದು ದೇವದಾಸಿ ಶೇಕಮ್ಮ ದುಃಖದಿಂದ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕಬ್ಬಿನ ಬೀಜ ಮತ್ತು ರಸಾಯನಿಕ ಗೊಬ್ಬರಕ್ಕೆ ಆರ್ಥಿಕ ನೆರವು ನೀಡಿದ್ದ ಸಿರುಗುಪ್ಪ ದೇಶನೂರು ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಕಬ್ಬಿನ ಬೆಳೆ ಹಾಳಾಗಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಅದೇ ರೀತಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಲ್ಲಿಯೂ ಈ ಬಗ್ಗೆ ಮನವಿ ಮಾಡಿದ್ದೇನೆ. ಸರ್ಕಾರ, ಶಾಸಕರು, ಗಮನಹರಿಸಿ ನನಗಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಅವರು ವಿನಂತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>