<p><strong>ಶನಿವಾರಸಂತೆ</strong>: ಸುಳುಗಳಲೆ ಗ್ರಾಮ 40-50 ವರ್ಷಗಳ ಹಿಂದೆ ಕಾಲೋನಿಯಾಗಿದ್ದು ಇದೀಗ ಗ್ರಾಮವಾಗಿ ಬೆಳೆದಿದೆ. ಇಷ್ಟು ವರ್ಷಗಳಾದರೂ ಈ ಪುಟ್ಟ ಗ್ರಾಮಕ್ಕೆ ಸೌಲಭ್ಯವೆನ್ನುವುದು ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ಗ್ರಾಮಸ್ಥರ ಆರೋಪ.<br /> <br /> ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಈ ಗ್ರಾಮ ಜನಸಂಖ್ಯೆ 1,600. ಮನೆಗಳು 150. ಶೇ 70 ಜನ ಪರಿಶಿಷ್ಟ ಜಾತಿ-ಪಂಗಡದವರು. ಇವರಲ್ಲೂ ಕೂಲಿಕಾರ್ಮಿಕರೇ ಹೆಚ್ಚು.<br /> <br /> ಗ್ರಾಮದಲ್ಲಿ ಕುಡಿಯುವ ನೀರಿಗೆ ಬರವಿಲ್ಲ. ಸಚಿವ ಅಪ್ಪಚ್ಚುರಂಜನ್ ಅವರ ಶಾಸಕರ ಅನುದಾನದಿಂದ, ಮಳೆ ಹಾನಿ ನಿಧಿಯಿಂದ ಡಾಂಬರೀಕರಣ ರಸ್ತೆಗಳಾಗಿವೆ.<br /> <br /> ಗ್ರಾಮದಲ್ಲಿ ರಸ್ತೆಗಳೇನೋ ಇವೆ. ಆದರೆ, ರಸ್ತೆ ಬದಿಯಲ್ಲಿ ಚರಂಡಿಗಳೇ ಇಲ್ಲ. ವ್ಯವಸ್ಥಿತವಾದ ಸಿಮೆಂಟ್ ಚರಂಡಿಗಳಿಲ್ಲದಿರುವುದೇ ಈ ಗ್ರಾಮದ ಮುಖ್ಯ ಸಮಸ್ಯೆ. ವಿದ್ಯುತ್ ಕಂಬಗಳು ಅಲಂಕಾರಕ್ಕಿರುವಂತಿವೆ. ಏಕೆಂದರೆ ಇದರ ದೀಪಗಳು ಬೆಳಗುವುದೇ ಇಲ್ಲ. <br /> <br /> ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿದು ಬರುವ ನೀರು ಮನೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಸ್ಪಂದಿಸುತ್ತಲೇ ಇಲ್ಲ ಎಂದು ಗ್ರಾಮಸ್ಥರಾದ ಶಾಂತಪ್ಪ, ನಂದಾ ಕೃಷ್ಣಪ್ಪ, ಮಂಜುನಾಥ್, ವಾಸು, ಬೋಜಮ್ಮ ಹಾಗೂ ಸುತ್ತಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ.ಧರ್ಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸವಿತಾ ಸತೀಶ್, ಜೆ.ಆರ್.ಫಾಲಾಕ್ಷ ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲಿಸಿ ಹೋದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಸದಸ್ಯೆ ಸವಿತಾ ಪರಿಶಿಷ್ಟ ಜಾತಿ ನಿಧಿಯಿಂದ ಅಡ್ಡರಸ್ತೆಗೆ 20 ಮೀಟರ್ ಮಾತ್ರ ಚರಂಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.<br /> ಮೋರಿಯೊಂದು ತಡೆಗೋಡೆ ಇಲ್ಲದ ಕಾರಣ ಕುಸಿಯುತ್ತಿದೆ. ಕೊಳಚೆ ನೀರು ಹರಿದು ಸುಳುಗಳಲೆ ಕೆರೆ ಸೇರುತ್ತದೆ. ತಡೆಗೋಡೆ ಕುಸಿತದಿಂದ ವೇದಾಕುಮಾರ್ ಅವರ ಮನೆಯೂ ಸೇರಿದಂತೆ 3-4 ಕುಟುಂಬಗಳ ಮನೆಯ ಹಿಂಬದಿ ಕುಸಿಯುತ್ತಿದೆ.<br /> <br /> <strong>ಉದ್ಯೋಗ ಖಾತ್ರಿ</strong><br /> ರಸ್ತೆಯಲ್ಲಿ ನೀರಿನ ಪೈಪ್ಲೈನ್ ಒಂದು 4-5 ತಿಂಗಳಿನಿಂದ ಒಡೆದದ್ದು ಇನ್ನೂ ಹಾಗೇ ಇದೆ. ನೀರು ರಸ್ತೆಯಲ್ಲಿ ಹರಿದುಹೋಗುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.<br /> <br /> ಒಟ್ಟಿನಲ್ಲಿ ರಸ್ತೆಗಳ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ, ವಿದ್ಯುತ್ ಕಂಬಗಳಲ್ಲಿ ದೀಪಗಳನ್ನು ಅಳವಡಿಸಿ, ಮೋರಿಗೆ ತಡೆಗೋಡೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ. <br /> <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ</strong>: ಸುಳುಗಳಲೆ ಗ್ರಾಮ 40-50 ವರ್ಷಗಳ ಹಿಂದೆ ಕಾಲೋನಿಯಾಗಿದ್ದು ಇದೀಗ ಗ್ರಾಮವಾಗಿ ಬೆಳೆದಿದೆ. ಇಷ್ಟು ವರ್ಷಗಳಾದರೂ ಈ ಪುಟ್ಟ ಗ್ರಾಮಕ್ಕೆ ಸೌಲಭ್ಯವೆನ್ನುವುದು ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ಗ್ರಾಮಸ್ಥರ ಆರೋಪ.<br /> <br /> ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಈ ಗ್ರಾಮ ಜನಸಂಖ್ಯೆ 1,600. ಮನೆಗಳು 150. ಶೇ 70 ಜನ ಪರಿಶಿಷ್ಟ ಜಾತಿ-ಪಂಗಡದವರು. ಇವರಲ್ಲೂ ಕೂಲಿಕಾರ್ಮಿಕರೇ ಹೆಚ್ಚು.<br /> <br /> ಗ್ರಾಮದಲ್ಲಿ ಕುಡಿಯುವ ನೀರಿಗೆ ಬರವಿಲ್ಲ. ಸಚಿವ ಅಪ್ಪಚ್ಚುರಂಜನ್ ಅವರ ಶಾಸಕರ ಅನುದಾನದಿಂದ, ಮಳೆ ಹಾನಿ ನಿಧಿಯಿಂದ ಡಾಂಬರೀಕರಣ ರಸ್ತೆಗಳಾಗಿವೆ.<br /> <br /> ಗ್ರಾಮದಲ್ಲಿ ರಸ್ತೆಗಳೇನೋ ಇವೆ. ಆದರೆ, ರಸ್ತೆ ಬದಿಯಲ್ಲಿ ಚರಂಡಿಗಳೇ ಇಲ್ಲ. ವ್ಯವಸ್ಥಿತವಾದ ಸಿಮೆಂಟ್ ಚರಂಡಿಗಳಿಲ್ಲದಿರುವುದೇ ಈ ಗ್ರಾಮದ ಮುಖ್ಯ ಸಮಸ್ಯೆ. ವಿದ್ಯುತ್ ಕಂಬಗಳು ಅಲಂಕಾರಕ್ಕಿರುವಂತಿವೆ. ಏಕೆಂದರೆ ಇದರ ದೀಪಗಳು ಬೆಳಗುವುದೇ ಇಲ್ಲ. <br /> <br /> ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿದು ಬರುವ ನೀರು ಮನೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಸ್ಪಂದಿಸುತ್ತಲೇ ಇಲ್ಲ ಎಂದು ಗ್ರಾಮಸ್ಥರಾದ ಶಾಂತಪ್ಪ, ನಂದಾ ಕೃಷ್ಣಪ್ಪ, ಮಂಜುನಾಥ್, ವಾಸು, ಬೋಜಮ್ಮ ಹಾಗೂ ಸುತ್ತಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ.ಧರ್ಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸವಿತಾ ಸತೀಶ್, ಜೆ.ಆರ್.ಫಾಲಾಕ್ಷ ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲಿಸಿ ಹೋದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಸದಸ್ಯೆ ಸವಿತಾ ಪರಿಶಿಷ್ಟ ಜಾತಿ ನಿಧಿಯಿಂದ ಅಡ್ಡರಸ್ತೆಗೆ 20 ಮೀಟರ್ ಮಾತ್ರ ಚರಂಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.<br /> ಮೋರಿಯೊಂದು ತಡೆಗೋಡೆ ಇಲ್ಲದ ಕಾರಣ ಕುಸಿಯುತ್ತಿದೆ. ಕೊಳಚೆ ನೀರು ಹರಿದು ಸುಳುಗಳಲೆ ಕೆರೆ ಸೇರುತ್ತದೆ. ತಡೆಗೋಡೆ ಕುಸಿತದಿಂದ ವೇದಾಕುಮಾರ್ ಅವರ ಮನೆಯೂ ಸೇರಿದಂತೆ 3-4 ಕುಟುಂಬಗಳ ಮನೆಯ ಹಿಂಬದಿ ಕುಸಿಯುತ್ತಿದೆ.<br /> <br /> <strong>ಉದ್ಯೋಗ ಖಾತ್ರಿ</strong><br /> ರಸ್ತೆಯಲ್ಲಿ ನೀರಿನ ಪೈಪ್ಲೈನ್ ಒಂದು 4-5 ತಿಂಗಳಿನಿಂದ ಒಡೆದದ್ದು ಇನ್ನೂ ಹಾಗೇ ಇದೆ. ನೀರು ರಸ್ತೆಯಲ್ಲಿ ಹರಿದುಹೋಗುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.<br /> <br /> ಒಟ್ಟಿನಲ್ಲಿ ರಸ್ತೆಗಳ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ, ವಿದ್ಯುತ್ ಕಂಬಗಳಲ್ಲಿ ದೀಪಗಳನ್ನು ಅಳವಡಿಸಿ, ಮೋರಿಗೆ ತಡೆಗೋಡೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ. <br /> <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>