<p>ಹಿರಿಯೂರು: `ಸ್ವಾಮಿ ಈ ವರ್ಷ ಯುಗಾದಿ ಹಬ್ಬ ಮಾಡ್ಲಿಲ್ಲ. ಹಟ್ಟಿಯಲ್ಲಿ ಸೂತಕದ ವಾತಾವರಣ ಇದೆ. ನಮ್ಮ ಊರಿನ ಉಮ್ಮಣ್ಣ ಮತ್ತು ತಿಪ್ಪೇಸ್ವಾಮಿ ಸತ್ತಿದ್ದಾರೆ. ತಿಪ್ಪೇಸ್ವಾಮಿಗೆ ಎರಡು ಸಣ್ಣ ಮಕ್ಕಳಿವೆ. ಹೇಗೋ ಕೂಲಿ- ನಾಲಿ ಮಾಡಿ ಸಂಸಾರ ತೂಗಿಸುತ್ತಿದ್ದ. ಅಪಘಾತ ತಿಪ್ಪೇಸ್ವಾಮಿ ಕುಟುಂಬ ಬೀದಿಗೆ ಬೀಳುವಂತೆ ಮಾಡಿದೆ~.<br /> <br /> ತಾಲ್ಲೂಕಿನ ಹಿಂಡಸಕಟ್ಟೆಗೆ ಭಾನುವಾರ ಸಂಜೆ ಮೃತಪಟ್ಟವರ ಕುಟುಂಬದವರಿಗೆ ತಲಾ ್ಙ 25 ಸಾವಿರ ವೈಯಕ್ತಿಕ ಪರಿಹಾರ ವಿತರಿಸಲು ಆಗಮಿಸಿದ್ದ ಶಾಸಕ ಡಿ. ಸುಧಾಕರ್ ಎದುರಿಗೆ ಗ್ರಾಮಸ್ಥರು ಮೃತರ ಕುಟುಂಬದ ಸ್ಥಿತಿಯನ್ನು ಬಿಚ್ಚಿಟ್ಟದ್ದು ಹೀಗೆ.<br /> <br /> ಸರ್ಕಾರದಿಂದ ್ಙ 1 ಲಕ್ಷ ಪರಿಹಾರ ಘೋಷಣೆಯಾಗಿದೆ. ಆದಷ್ಟು ಬೇಗ ಹಣ ಸಿಗುವಂತೆ ಮಾಡುತ್ತೇನೆ. ಮಕ್ಕಳ ಓದಿಗೆ ನೆರವು ನೀಡುತ್ತೇನೆ. ನಿಮ್ಮ ದುಃಖದಲ್ಲಿ ಭಾಗಿಯಾಗಿರುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.<br /> <br /> ನಾಯ್ಕರಕೊಟ್ಟಿಗೆಯಲ್ಲಿ ನಾಗಪ್ಪ- ಕೋಡಮ್ಮ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯ ಮಗ ರಮೇಶ (22) ಮೃತಪಟ್ಟಿದ್ದ. ಕೋಡಮ್ಮ ಅಪಘಾತ ಸಂಭವಿಸಿ ನಾಲ್ಕು ದಿನಗಳಾಗಿದ್ದರೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ಅವನನ್ನು ಮರೆಯುವುದಾದರೂ ಹೇಗೆ ಎಂದು ಬಿಕ್ಕಿ ಬಿಕ್ಕಿ ಅತ್ತರು.<br /> <br /> ಬಡಗೊಲ್ಲರಹಟ್ಟಿಯ ನೇತ್ರಮ್ಮ (19) ಯಲ್ಲದಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ದಾವಣಗೆರೆ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದು, ಮಗಳು ಬದುಕಿ ಮನೆಗೆ ಬರುತ್ತಾಳೆ ಎಂದು ಕನಸು ಕಂಡಿದ್ದ ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.<br /> <br /> ಹಿಂಡಸಕಟ್ಟೆ ದಲಿತ ಕಾಲೊನಿಯ ಹನುಮಪ್ಪನಿಗೆ 2 ಗಂಡು ಮತ್ತು 2 ಹೆಣ್ಣು ಮಕ್ಕಳು. ಪಿತ್ರಾರ್ಜಿತವಾಗಿ ಬಂದಿರುವ ಭೂಮಿ ಕೇವಲ 1 ಎಕರೆ. ಅದನ್ನು 4 ಜನ ಸಹೋದರರು ಹಂಚಿಕೊಳ್ಳಬೇಕು. ಭೂಮಿ ಹಂಚಿಕೆಯಾದರೆ ಈತನ ಪತ್ನಿ ಮತ್ತು 4 ಮಕ್ಕಳಿಗೆ ಉಳಿಯುವುದು ಕೇವಲ ಕಾಲು ಎಕರೆ ಮಾತ್ರ. ಮನೆಯಲ್ಲಿ ದುಡಿಯುವ ವ್ಯಕ್ತಿ ಈಗಿಲ್ಲ. ಮುಂದೆ ಹೇಗೆ ಎಂಬ ಪ್ರಶ್ನೆ ಆ ಕುಟುಂಬದ್ದು.<br /> <br /> ಅಪಘಾತದಲ್ಲಿ ಮೃತಪಟ್ಟಿರುವ ಚಿಗಳಿಕಟ್ಟೆಯ ಮಹೇಶ್, ಹನುಮಣ್ಣ, ಶಾರದಮ್ಮ, ದೇವಮ್ಮ, ನೀಲಮ್ಮ, ಬ್ಯಾರಮಡು ಗ್ರಾಮದ ಕರೀಂಸಾಬ್, ಸೀಗೆಹಟ್ಟಿಯ ಬಾಲಜ್ಜ, ಹಂದಿಗನಡು ಗ್ರಾಮದ ಮೈಲಾರಿ ಬಹುತೇಕ ಎಲ್ಲರ ಮನೆಗಳ ಒಳಗೆ ಹೋಗಲು ತಲೆತಗ್ಗಿಸಿಯೆ ಪ್ರವೇಶಿಸಬೇಕು. ಬಹುತೇಕರಿಗೆ ಕೂಲಿಯೇ ಆಧಾರ. ಸರ್ಕಾರ ಘೋಷಿಸಿರುವ ್ಙ 1 ಲಕ್ಷ ಮತ್ತು ಶಾಸಕರು ಕೊಟ್ಟಿರುವ ್ಙ 25 ಸಾವಿರ ರೂಪಾಯಿಯೇ ಈಗ ಅವರಿಗೆ ಆಧಾರ.<br /> <br /> ಅಪಘಾತ ಸಂಭವಿಸಿದಾಗ ಬಾಯಿ ಮಾತಿನ ಸಾಂತ್ವನ ಹೇಳುತ್ತಿದ್ದವರೇ ಹೆಚ್ಚು. ಆದರೆ, ಶಾಸಕ ಸುಧಾಕರ್ ಚಿತ್ರದುರ್ಗದ ಆಸ್ಪತ್ರೆಗೆ ಬಂದು ಗಾಯಗೊಂಡವರಿಗೆ ತಲಾ ್ಙ 5 ಸಾವಿರ ಕೊಟ್ಟು ಹೋಗಿದ್ದರು. ಈಗ ಮನೆ ಬಾಗಿಲಿಗೆ ಬಂದು ್ಙ 25 ಸಾವಿರ ಕೊಟ್ಟಿದ್ದಾರೆ. ಈ ರೀತಿ ಧೈರ್ಯ ತುಂಬಿ, ಆರ್ಥಿಕ ನೆರವು ಕೊಟ್ಟವರನ್ನು ನೋಡಿರಲಿಲ್ಲ. ಜತೆಗೆ ಮೃತರ ಮಕ್ಕಳಿಗೆ ಓದಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಪಿಲ್ಲಾಜನಹಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ನಿಂಗಪ್ಪ ಸುದ್ದಿಗಾರರಿಗೆ ತಿಳಿಸಿದರು.<br /> <br /> ಅಪಘಾತ ಸಂಭವಿಸಲು ಬಸ್ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣ. ಈ ಮಾರ್ಗದಲ್ಲಿ ಹೆಚ್ಚು ಬಸ್ ಓಡಿಸಬೇಕು. ತಮ್ಮ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಡಾಂಬರು ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಹಿರಿಯೂರಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾದ ಜ್ಯೋತಿ, ಮಾಲಾಶ್ರೀ, ವಿಮಲಾಕ್ಷಿ ಮತ್ತಿತರರು ಶಾಸಕರಿಗೆ ಮನವಿ ಮಾಡಿದರು.<br /> <br /> ಹಿರಿಯೂರು- ಉಡುವಳ್ಳಿ- ಹಿಂಡಸಕಟ್ಟೆ- ಕೆಕೆ ಹಟ್ಟಿ- ಹಂದಿಗನಡು- ಚಿಗಳಿಕಟ್ಟೆ- ಬ್ಯಾರಮಡು- ಶೇಷಪ್ಪನಹಳ್ಳಿ- ದಸೂಡಿ ಮಾರ್ಗವಾಗಿ ನಿತ್ಯ ಆರು ಬಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟಕ್ಕೆ ಸಾರಿಗೆ ಸಚಿವರ ಜತೆ ಚರ್ಚಿಸಿ ವ್ಯವಸ್ಥೆ ಮಾಡಿಸುವುದಾಗಿ ಎಂದು ಸುಧಾಕರ್ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: `ಸ್ವಾಮಿ ಈ ವರ್ಷ ಯುಗಾದಿ ಹಬ್ಬ ಮಾಡ್ಲಿಲ್ಲ. ಹಟ್ಟಿಯಲ್ಲಿ ಸೂತಕದ ವಾತಾವರಣ ಇದೆ. ನಮ್ಮ ಊರಿನ ಉಮ್ಮಣ್ಣ ಮತ್ತು ತಿಪ್ಪೇಸ್ವಾಮಿ ಸತ್ತಿದ್ದಾರೆ. ತಿಪ್ಪೇಸ್ವಾಮಿಗೆ ಎರಡು ಸಣ್ಣ ಮಕ್ಕಳಿವೆ. ಹೇಗೋ ಕೂಲಿ- ನಾಲಿ ಮಾಡಿ ಸಂಸಾರ ತೂಗಿಸುತ್ತಿದ್ದ. ಅಪಘಾತ ತಿಪ್ಪೇಸ್ವಾಮಿ ಕುಟುಂಬ ಬೀದಿಗೆ ಬೀಳುವಂತೆ ಮಾಡಿದೆ~.<br /> <br /> ತಾಲ್ಲೂಕಿನ ಹಿಂಡಸಕಟ್ಟೆಗೆ ಭಾನುವಾರ ಸಂಜೆ ಮೃತಪಟ್ಟವರ ಕುಟುಂಬದವರಿಗೆ ತಲಾ ್ಙ 25 ಸಾವಿರ ವೈಯಕ್ತಿಕ ಪರಿಹಾರ ವಿತರಿಸಲು ಆಗಮಿಸಿದ್ದ ಶಾಸಕ ಡಿ. ಸುಧಾಕರ್ ಎದುರಿಗೆ ಗ್ರಾಮಸ್ಥರು ಮೃತರ ಕುಟುಂಬದ ಸ್ಥಿತಿಯನ್ನು ಬಿಚ್ಚಿಟ್ಟದ್ದು ಹೀಗೆ.<br /> <br /> ಸರ್ಕಾರದಿಂದ ್ಙ 1 ಲಕ್ಷ ಪರಿಹಾರ ಘೋಷಣೆಯಾಗಿದೆ. ಆದಷ್ಟು ಬೇಗ ಹಣ ಸಿಗುವಂತೆ ಮಾಡುತ್ತೇನೆ. ಮಕ್ಕಳ ಓದಿಗೆ ನೆರವು ನೀಡುತ್ತೇನೆ. ನಿಮ್ಮ ದುಃಖದಲ್ಲಿ ಭಾಗಿಯಾಗಿರುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.<br /> <br /> ನಾಯ್ಕರಕೊಟ್ಟಿಗೆಯಲ್ಲಿ ನಾಗಪ್ಪ- ಕೋಡಮ್ಮ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯ ಮಗ ರಮೇಶ (22) ಮೃತಪಟ್ಟಿದ್ದ. ಕೋಡಮ್ಮ ಅಪಘಾತ ಸಂಭವಿಸಿ ನಾಲ್ಕು ದಿನಗಳಾಗಿದ್ದರೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ಅವನನ್ನು ಮರೆಯುವುದಾದರೂ ಹೇಗೆ ಎಂದು ಬಿಕ್ಕಿ ಬಿಕ್ಕಿ ಅತ್ತರು.<br /> <br /> ಬಡಗೊಲ್ಲರಹಟ್ಟಿಯ ನೇತ್ರಮ್ಮ (19) ಯಲ್ಲದಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ದಾವಣಗೆರೆ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದು, ಮಗಳು ಬದುಕಿ ಮನೆಗೆ ಬರುತ್ತಾಳೆ ಎಂದು ಕನಸು ಕಂಡಿದ್ದ ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.<br /> <br /> ಹಿಂಡಸಕಟ್ಟೆ ದಲಿತ ಕಾಲೊನಿಯ ಹನುಮಪ್ಪನಿಗೆ 2 ಗಂಡು ಮತ್ತು 2 ಹೆಣ್ಣು ಮಕ್ಕಳು. ಪಿತ್ರಾರ್ಜಿತವಾಗಿ ಬಂದಿರುವ ಭೂಮಿ ಕೇವಲ 1 ಎಕರೆ. ಅದನ್ನು 4 ಜನ ಸಹೋದರರು ಹಂಚಿಕೊಳ್ಳಬೇಕು. ಭೂಮಿ ಹಂಚಿಕೆಯಾದರೆ ಈತನ ಪತ್ನಿ ಮತ್ತು 4 ಮಕ್ಕಳಿಗೆ ಉಳಿಯುವುದು ಕೇವಲ ಕಾಲು ಎಕರೆ ಮಾತ್ರ. ಮನೆಯಲ್ಲಿ ದುಡಿಯುವ ವ್ಯಕ್ತಿ ಈಗಿಲ್ಲ. ಮುಂದೆ ಹೇಗೆ ಎಂಬ ಪ್ರಶ್ನೆ ಆ ಕುಟುಂಬದ್ದು.<br /> <br /> ಅಪಘಾತದಲ್ಲಿ ಮೃತಪಟ್ಟಿರುವ ಚಿಗಳಿಕಟ್ಟೆಯ ಮಹೇಶ್, ಹನುಮಣ್ಣ, ಶಾರದಮ್ಮ, ದೇವಮ್ಮ, ನೀಲಮ್ಮ, ಬ್ಯಾರಮಡು ಗ್ರಾಮದ ಕರೀಂಸಾಬ್, ಸೀಗೆಹಟ್ಟಿಯ ಬಾಲಜ್ಜ, ಹಂದಿಗನಡು ಗ್ರಾಮದ ಮೈಲಾರಿ ಬಹುತೇಕ ಎಲ್ಲರ ಮನೆಗಳ ಒಳಗೆ ಹೋಗಲು ತಲೆತಗ್ಗಿಸಿಯೆ ಪ್ರವೇಶಿಸಬೇಕು. ಬಹುತೇಕರಿಗೆ ಕೂಲಿಯೇ ಆಧಾರ. ಸರ್ಕಾರ ಘೋಷಿಸಿರುವ ್ಙ 1 ಲಕ್ಷ ಮತ್ತು ಶಾಸಕರು ಕೊಟ್ಟಿರುವ ್ಙ 25 ಸಾವಿರ ರೂಪಾಯಿಯೇ ಈಗ ಅವರಿಗೆ ಆಧಾರ.<br /> <br /> ಅಪಘಾತ ಸಂಭವಿಸಿದಾಗ ಬಾಯಿ ಮಾತಿನ ಸಾಂತ್ವನ ಹೇಳುತ್ತಿದ್ದವರೇ ಹೆಚ್ಚು. ಆದರೆ, ಶಾಸಕ ಸುಧಾಕರ್ ಚಿತ್ರದುರ್ಗದ ಆಸ್ಪತ್ರೆಗೆ ಬಂದು ಗಾಯಗೊಂಡವರಿಗೆ ತಲಾ ್ಙ 5 ಸಾವಿರ ಕೊಟ್ಟು ಹೋಗಿದ್ದರು. ಈಗ ಮನೆ ಬಾಗಿಲಿಗೆ ಬಂದು ್ಙ 25 ಸಾವಿರ ಕೊಟ್ಟಿದ್ದಾರೆ. ಈ ರೀತಿ ಧೈರ್ಯ ತುಂಬಿ, ಆರ್ಥಿಕ ನೆರವು ಕೊಟ್ಟವರನ್ನು ನೋಡಿರಲಿಲ್ಲ. ಜತೆಗೆ ಮೃತರ ಮಕ್ಕಳಿಗೆ ಓದಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಪಿಲ್ಲಾಜನಹಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ನಿಂಗಪ್ಪ ಸುದ್ದಿಗಾರರಿಗೆ ತಿಳಿಸಿದರು.<br /> <br /> ಅಪಘಾತ ಸಂಭವಿಸಲು ಬಸ್ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣ. ಈ ಮಾರ್ಗದಲ್ಲಿ ಹೆಚ್ಚು ಬಸ್ ಓಡಿಸಬೇಕು. ತಮ್ಮ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಡಾಂಬರು ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಹಿರಿಯೂರಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾದ ಜ್ಯೋತಿ, ಮಾಲಾಶ್ರೀ, ವಿಮಲಾಕ್ಷಿ ಮತ್ತಿತರರು ಶಾಸಕರಿಗೆ ಮನವಿ ಮಾಡಿದರು.<br /> <br /> ಹಿರಿಯೂರು- ಉಡುವಳ್ಳಿ- ಹಿಂಡಸಕಟ್ಟೆ- ಕೆಕೆ ಹಟ್ಟಿ- ಹಂದಿಗನಡು- ಚಿಗಳಿಕಟ್ಟೆ- ಬ್ಯಾರಮಡು- ಶೇಷಪ್ಪನಹಳ್ಳಿ- ದಸೂಡಿ ಮಾರ್ಗವಾಗಿ ನಿತ್ಯ ಆರು ಬಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟಕ್ಕೆ ಸಾರಿಗೆ ಸಚಿವರ ಜತೆ ಚರ್ಚಿಸಿ ವ್ಯವಸ್ಥೆ ಮಾಡಿಸುವುದಾಗಿ ಎಂದು ಸುಧಾಕರ್ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>