<p><strong>ಬೆಂಗಳೂರು: </strong>ಅನಿರ್ಬನ್ ಲಾಹಿರಿ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಪುರವಂಕರ ಬೆಂಗಳೂರು ತಂಡ ಇಲ್ಲಿ ನಡೆಯುತ್ತಿರುವ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪ್ರವೇಶಿಸಿತು.<br /> <br /> ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಎರಡನೇ ದಿನವಾದ ಗುರುವಾರ ಲಾಹಿರಿ 66 ಸ್ಟ್ರೋಕ್ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಇದರಿಂದಾಗಿ ಬೆಂಗಳೂರು ತಂಡ (276) ಮೂರನೇ ಸ್ಥಾನ ಪಡೆದು ನಾಲ್ಕರಘಟ್ಟಕ್ಕೆ ಅರ್ಹತೆ ಗಳಿಸಿತು. ತಂಡದ ಇನ್ನೊಬ್ಬ ಸ್ಪರ್ಧಿ ಮಾನವ್ ಜೈನ್ 71 ಅವಕಾಶಗಳನ್ನು ಬಳಸಿಕೊಂಡರು. <br /> <br /> ಶ್ರೀಲಂಕಾದ ಮಿಥುನ್ ಪೆರೇರಾ (65) ನಿಖರ ಆಟದ ಬಲದಿಂದ ನವರತ್ನ ಅಹಮದಾಬಾದ್ ತಂಡ (273) ಅಗ್ರಸ್ಥಾನದೊಂದಿಗೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ವಿಕ್ರಾಂತ್ ಚೋಪ್ರಾ (68) ಅವರೂ ತಂಡದ ನೆರವಿಗೆ ನಿಂತರು. <br /> <br /> ಲಂಕಾದ ಅನುರಾ ರೋಹನ (65) ಎರಡನೇ ದಿನವೂ ಪ್ರಭಾವಿ ಪ್ರದರ್ಶನ ನೀಡಿ ಚೆನ್ನೈ ತಂಡ (274) ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡದ ಎಸ್ಎಸ್ಪಿ ಚೌರಾಸಿಯ 71 ಅವಕಾಶ ಬಳಸಿಕೊಂಡರು. <br /> <br /> ಪ್ರಮುಖ ಆಟಗಾರರನ್ನು ಹೊಂದಿದ್ದರೂ ಶುಭ್ಕಾಮನ ನೋಯ್ಡಾ (ಜೀವ್ ಮಿಲ್ಖಾ ಸಿಂಗ್), 3ಸಿ ದೆಹಲಿ (ಶಿವ ಕಪೂರ್) ಮತ್ತು ಡಿಎಲ್ಎಫ್ ಗುಡಗಾಂವ್ (ಜ್ಯೋತಿ ರಾಂಧವ ಹಾಗೂ ಹಿಮ್ಮತ್ ರಾಯ್) ತಂಡಗಳು ನಾಲ್ಕರಘಟ್ಟ ಪ್ರವೇಶಿಸಲು ವಿಫಲವಾದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅನಿರ್ಬನ್ ಲಾಹಿರಿ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಪುರವಂಕರ ಬೆಂಗಳೂರು ತಂಡ ಇಲ್ಲಿ ನಡೆಯುತ್ತಿರುವ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪ್ರವೇಶಿಸಿತು.<br /> <br /> ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಎರಡನೇ ದಿನವಾದ ಗುರುವಾರ ಲಾಹಿರಿ 66 ಸ್ಟ್ರೋಕ್ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಇದರಿಂದಾಗಿ ಬೆಂಗಳೂರು ತಂಡ (276) ಮೂರನೇ ಸ್ಥಾನ ಪಡೆದು ನಾಲ್ಕರಘಟ್ಟಕ್ಕೆ ಅರ್ಹತೆ ಗಳಿಸಿತು. ತಂಡದ ಇನ್ನೊಬ್ಬ ಸ್ಪರ್ಧಿ ಮಾನವ್ ಜೈನ್ 71 ಅವಕಾಶಗಳನ್ನು ಬಳಸಿಕೊಂಡರು. <br /> <br /> ಶ್ರೀಲಂಕಾದ ಮಿಥುನ್ ಪೆರೇರಾ (65) ನಿಖರ ಆಟದ ಬಲದಿಂದ ನವರತ್ನ ಅಹಮದಾಬಾದ್ ತಂಡ (273) ಅಗ್ರಸ್ಥಾನದೊಂದಿಗೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ವಿಕ್ರಾಂತ್ ಚೋಪ್ರಾ (68) ಅವರೂ ತಂಡದ ನೆರವಿಗೆ ನಿಂತರು. <br /> <br /> ಲಂಕಾದ ಅನುರಾ ರೋಹನ (65) ಎರಡನೇ ದಿನವೂ ಪ್ರಭಾವಿ ಪ್ರದರ್ಶನ ನೀಡಿ ಚೆನ್ನೈ ತಂಡ (274) ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡದ ಎಸ್ಎಸ್ಪಿ ಚೌರಾಸಿಯ 71 ಅವಕಾಶ ಬಳಸಿಕೊಂಡರು. <br /> <br /> ಪ್ರಮುಖ ಆಟಗಾರರನ್ನು ಹೊಂದಿದ್ದರೂ ಶುಭ್ಕಾಮನ ನೋಯ್ಡಾ (ಜೀವ್ ಮಿಲ್ಖಾ ಸಿಂಗ್), 3ಸಿ ದೆಹಲಿ (ಶಿವ ಕಪೂರ್) ಮತ್ತು ಡಿಎಲ್ಎಫ್ ಗುಡಗಾಂವ್ (ಜ್ಯೋತಿ ರಾಂಧವ ಹಾಗೂ ಹಿಮ್ಮತ್ ರಾಯ್) ತಂಡಗಳು ನಾಲ್ಕರಘಟ್ಟ ಪ್ರವೇಶಿಸಲು ವಿಫಲವಾದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>