<p>ಬೆಂಗಳೂರು: `ತೈಲ ಬೆಲೆ ಏರಿಕೆಯಿಂದ ನಾಗರಿಕರಿಗೆ ಅಧಿಕ ಹೊರೆಯಾಗಿದೆ. ರಾಜ್ಯ ಸರ್ಕಾರ ತೈಲದ ಮೇಲಿನ ಸೆಸ್ ತೆರಿಗೆಯನ್ನು ಇಳಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಲ್ಲಿ ಒತ್ತಾಯಿಸಿದರು. <br /> <br /> ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನವೀಕೃತ ಜಸ್ಮಾದೇವಿ ಭವನ ಕಲ್ಯಾಣ ಮಂಟಪವನ್ನುಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕೇಂದ್ರ ಸರ್ಕಾರ ಎರಡು ತಿಂಗಳಲ್ಲಿ ನಾಲ್ಕು ಬಾರಿ ಬೆಲೆ ಏರಿಕೆ ಮಾಡಿದೆ. ಯುಪಿಎ ಅಂಗ ಪಕ್ಷಗಳು ಬೆಲೆ ಏರಿಕೆ ಇಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯ ಸರ್ಕಾರ ಕೂಡ ಈ ಕುರಿತು ಕ್ರಮ ಕೈಗೊಳ್ಳಲು ಚಿಂತಿಸಲಿದೆ~ ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಜಸ್ಮಾದೇವಿ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಸಚಿವ ಆರ್.ಆಶೋಕ, `ಭೋವಿ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಬಳಿ ಇದೆ. ಈ ಕುರಿತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಆಶ್ವಾಸನೆ ನೀಡಿದರು.<br /> <br /> `ಯಾವುದೇ ಸಮುದಾಯಗಳು ಸರ್ಕಾರ ನೀಡುವ ಅನುದಾನದ ಮೇಲೆ ಅವಲಂಬಿತವಾಗಬಾರದು. ಸರ್ಕಾರ ನೀಡುವ ಹಣ ತಾತ್ಕಾಲಿಕ ಪ್ರೋತ್ಸಾಹ ಮಾತ್ರ. ಸ್ವಯಂ ಶಕ್ತಿಯಿಂದ ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕು~ ಎಂದು ಸಲಹೆ ಮಾಡಿದರು.<br /> <br /> `ಸಮುದಾಯಗಳು ಪ್ರಗತಿ ಹೊಂದಲು ಶಿಕ್ಷಣ ಅವಶ್ಯಕವಾಗಿದೆ. ಎಲ್ಲಾ ಜನರು ವಿದ್ಯಾವಂತರಾದರೆ ಸಮುದಾಯದ ಏಳಿಗೆಯಾಗುತ್ತದೆ. ಇಂತಹ ಸಮುದಾಯಗಳು ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಬೇಕು~ ಎಂದು ಕರೆ ನೀಡಿದರು.<br /> <br /> ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, `ಸರ್ಕಾರ ಭೋವಿ ಜನಾಂಗದ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅಧಿಕಾರಿ ನೇಮಕ ಮಾಡಬೇಕು. ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ನಿಗಮ ಮಂಡಳಿಗೆ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು~ ಎಂದು ಮನವಿ ಮಾಡಿದರು.<br /> <br /> ಕೆ.ಸಿ.ಜನರಲ್ ಆಸ್ಪತ್ರೆಯ ನಿವೃತ್ತ ಅಧೀಕ್ಷಕ ಡಾ.ಎಂ.ರಾಮಯ್ಯ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಎಚ್.ವೀರಪ್ಪ, ಮಾಜಿ ಶಾಸಕಿ ಶಕುಂತಲಾ ಚೌಗ್ಲೆ ಅವರಿಗೆ ಜಸ್ಮಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. <br /> <br /> ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ರಘು, ಮಾಜಿ ಉಪಮೇಯರ್ ಎನ್.ದಯಾನಂದ್, ಬಿಬಿಎಂಪಿ ಸದಸ್ಯರಾದ ಎಂ.ಕೃಷ್ಣ, ಕೆ.ಚಂದ್ರಶೇಖರ್, ಜಸ್ಮಾ ದೇವಿ ಭವನದ ಶಿಲ್ಪಿ ಪ್ರಶಾಂತ್ ಜಿ.ಪೊಲ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ತೈಲ ಬೆಲೆ ಏರಿಕೆಯಿಂದ ನಾಗರಿಕರಿಗೆ ಅಧಿಕ ಹೊರೆಯಾಗಿದೆ. ರಾಜ್ಯ ಸರ್ಕಾರ ತೈಲದ ಮೇಲಿನ ಸೆಸ್ ತೆರಿಗೆಯನ್ನು ಇಳಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಲ್ಲಿ ಒತ್ತಾಯಿಸಿದರು. <br /> <br /> ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನವೀಕೃತ ಜಸ್ಮಾದೇವಿ ಭವನ ಕಲ್ಯಾಣ ಮಂಟಪವನ್ನುಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕೇಂದ್ರ ಸರ್ಕಾರ ಎರಡು ತಿಂಗಳಲ್ಲಿ ನಾಲ್ಕು ಬಾರಿ ಬೆಲೆ ಏರಿಕೆ ಮಾಡಿದೆ. ಯುಪಿಎ ಅಂಗ ಪಕ್ಷಗಳು ಬೆಲೆ ಏರಿಕೆ ಇಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯ ಸರ್ಕಾರ ಕೂಡ ಈ ಕುರಿತು ಕ್ರಮ ಕೈಗೊಳ್ಳಲು ಚಿಂತಿಸಲಿದೆ~ ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಜಸ್ಮಾದೇವಿ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಸಚಿವ ಆರ್.ಆಶೋಕ, `ಭೋವಿ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಬಳಿ ಇದೆ. ಈ ಕುರಿತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಆಶ್ವಾಸನೆ ನೀಡಿದರು.<br /> <br /> `ಯಾವುದೇ ಸಮುದಾಯಗಳು ಸರ್ಕಾರ ನೀಡುವ ಅನುದಾನದ ಮೇಲೆ ಅವಲಂಬಿತವಾಗಬಾರದು. ಸರ್ಕಾರ ನೀಡುವ ಹಣ ತಾತ್ಕಾಲಿಕ ಪ್ರೋತ್ಸಾಹ ಮಾತ್ರ. ಸ್ವಯಂ ಶಕ್ತಿಯಿಂದ ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕು~ ಎಂದು ಸಲಹೆ ಮಾಡಿದರು.<br /> <br /> `ಸಮುದಾಯಗಳು ಪ್ರಗತಿ ಹೊಂದಲು ಶಿಕ್ಷಣ ಅವಶ್ಯಕವಾಗಿದೆ. ಎಲ್ಲಾ ಜನರು ವಿದ್ಯಾವಂತರಾದರೆ ಸಮುದಾಯದ ಏಳಿಗೆಯಾಗುತ್ತದೆ. ಇಂತಹ ಸಮುದಾಯಗಳು ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಬೇಕು~ ಎಂದು ಕರೆ ನೀಡಿದರು.<br /> <br /> ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, `ಸರ್ಕಾರ ಭೋವಿ ಜನಾಂಗದ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅಧಿಕಾರಿ ನೇಮಕ ಮಾಡಬೇಕು. ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ನಿಗಮ ಮಂಡಳಿಗೆ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು~ ಎಂದು ಮನವಿ ಮಾಡಿದರು.<br /> <br /> ಕೆ.ಸಿ.ಜನರಲ್ ಆಸ್ಪತ್ರೆಯ ನಿವೃತ್ತ ಅಧೀಕ್ಷಕ ಡಾ.ಎಂ.ರಾಮಯ್ಯ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಎಚ್.ವೀರಪ್ಪ, ಮಾಜಿ ಶಾಸಕಿ ಶಕುಂತಲಾ ಚೌಗ್ಲೆ ಅವರಿಗೆ ಜಸ್ಮಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. <br /> <br /> ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ರಘು, ಮಾಜಿ ಉಪಮೇಯರ್ ಎನ್.ದಯಾನಂದ್, ಬಿಬಿಎಂಪಿ ಸದಸ್ಯರಾದ ಎಂ.ಕೃಷ್ಣ, ಕೆ.ಚಂದ್ರಶೇಖರ್, ಜಸ್ಮಾ ದೇವಿ ಭವನದ ಶಿಲ್ಪಿ ಪ್ರಶಾಂತ್ ಜಿ.ಪೊಲ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>