<p><strong>ಸುಬ್ರಹ್ಮಣ್ಯ: </strong>ಬೆಂಡೋಡಿ ಶೀರೂರು ಸೇತುವೆ ನಿರ್ಮಾಣಕ್ಕೆ ರೂ 25 ಲಕ್ಷದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇದೀಗ ಸರಕಾರದ ಮಟ್ಟದಲ್ಲಿದೆ. ಅದನ್ನು ಶೀಘ್ರ ಮಂಜೂರು ಮಾಡಿ ಸೇತುವೆ ನಿರ್ಮಿಸುವಂತೆ ಊರವರು ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.<br /> <br /> ಬೆಂಡೋಡಿ ಪ್ರದೇಶಕ್ಕೆ ಶುಕ್ರವಾಋ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು ಜಿ.ಪಂ. ಸದಸ್ಯ ಕೆ.ಎಸ್.ದೇವರಾಜ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಈ ವಿನಂತಿ ಮಾಡಿದರು. <br /> <br /> ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ತಾರಾ ಮಲ್ಲಾರ, ಹರಿಹರ ಗ್ರಾ.ಪಂ. ಅಧ್ಯಕ್ಷೆ ಬಿಂದು. ಪಿ.ಎಸ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮಲ್ಲೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಜಿ.ಪಂ. ಎಇ ನಾರಾಯಣ ನಾಯ್ಕ, ಜೆಇ ಜನಾರ್ದನ, ಪಿ.ಡಿ.ಓ ವೆಂಕಟೇಶ್ ಇತರರು ಇದ್ದರು.<br /> <br /> ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರಪ್ಪ ತಳವಾರು, ಗ್ರಾಮ ಅರಣ್ಯ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಊರ ಪ್ರಮುಖರಾದ ಪುರುಷೋತ್ತಮ ಅಂಬೆಕಲ್ಲು, ಭಟ್ಯ ಕೊರಗ, ರಾಘವ ಕೊರಗ, ಶಿವಣ್ಣ ಗೌಡ ಚೊಕ್ಕಾಡಿ, ವಿಶ್ವನಾಥ ಹರಿಹರ ಇತರರು ಇದ್ದರು.<br /> <br /> ಸ್ವಾಮೀಜಿ ಮನವಿ: ಸುಳ್ಯ ತಾಲೂಕಿನ ಹಿಂದುಳಿದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೆಂಡೋಡಿ-ಶೀರೂರು ನಡುವೆ ಸೇತುವೆ ಆವಶ್ಯಕವಾಗಿದೆ. ಇದಿಲ್ಲದಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ 15ಕಿ.ಮೀ ಸುತ್ತು ಬಳಸಿ ಸಾಗಬೇಕಾಗಿದೆ.<br /> <br /> ಈ ಕಾರಣದಿಂದ ತಾವು ಅನುದಾನ ನೀಡುವ ಮೂಲಕ ಅತಿ ಶೀಘ್ರವಾಗಿ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಬ್ರಹ್ಮಣ್ಯ: </strong>ಬೆಂಡೋಡಿ ಶೀರೂರು ಸೇತುವೆ ನಿರ್ಮಾಣಕ್ಕೆ ರೂ 25 ಲಕ್ಷದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇದೀಗ ಸರಕಾರದ ಮಟ್ಟದಲ್ಲಿದೆ. ಅದನ್ನು ಶೀಘ್ರ ಮಂಜೂರು ಮಾಡಿ ಸೇತುವೆ ನಿರ್ಮಿಸುವಂತೆ ಊರವರು ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.<br /> <br /> ಬೆಂಡೋಡಿ ಪ್ರದೇಶಕ್ಕೆ ಶುಕ್ರವಾಋ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು ಜಿ.ಪಂ. ಸದಸ್ಯ ಕೆ.ಎಸ್.ದೇವರಾಜ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಈ ವಿನಂತಿ ಮಾಡಿದರು. <br /> <br /> ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ತಾರಾ ಮಲ್ಲಾರ, ಹರಿಹರ ಗ್ರಾ.ಪಂ. ಅಧ್ಯಕ್ಷೆ ಬಿಂದು. ಪಿ.ಎಸ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮಲ್ಲೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಜಿ.ಪಂ. ಎಇ ನಾರಾಯಣ ನಾಯ್ಕ, ಜೆಇ ಜನಾರ್ದನ, ಪಿ.ಡಿ.ಓ ವೆಂಕಟೇಶ್ ಇತರರು ಇದ್ದರು.<br /> <br /> ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರಪ್ಪ ತಳವಾರು, ಗ್ರಾಮ ಅರಣ್ಯ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಊರ ಪ್ರಮುಖರಾದ ಪುರುಷೋತ್ತಮ ಅಂಬೆಕಲ್ಲು, ಭಟ್ಯ ಕೊರಗ, ರಾಘವ ಕೊರಗ, ಶಿವಣ್ಣ ಗೌಡ ಚೊಕ್ಕಾಡಿ, ವಿಶ್ವನಾಥ ಹರಿಹರ ಇತರರು ಇದ್ದರು.<br /> <br /> ಸ್ವಾಮೀಜಿ ಮನವಿ: ಸುಳ್ಯ ತಾಲೂಕಿನ ಹಿಂದುಳಿದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೆಂಡೋಡಿ-ಶೀರೂರು ನಡುವೆ ಸೇತುವೆ ಆವಶ್ಯಕವಾಗಿದೆ. ಇದಿಲ್ಲದಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ 15ಕಿ.ಮೀ ಸುತ್ತು ಬಳಸಿ ಸಾಗಬೇಕಾಗಿದೆ.<br /> <br /> ಈ ಕಾರಣದಿಂದ ತಾವು ಅನುದಾನ ನೀಡುವ ಮೂಲಕ ಅತಿ ಶೀಘ್ರವಾಗಿ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>