<p><strong>ಹಿರೇಕೆರೂರ: </strong>ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ದೊಡ್ಡಕೆರೆ ಸೇತುವೆಯ ಒಂದು ಬದಿಯಲ್ಲಿನ ಗೋಡೆ ಉರುಳಿ ಬ್ದ್ದಿದು ಮೂರು ತಿಂಗಳಾಗಿದ್ದು, ಸಂಚಾ ರಕ್ಕೆ ಅಡಚಣೆಯಾಗಿದೆ. ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.<br /> <br /> ಪಂಚಾಯತ್ರಾಜ್ ಎಂಜಿನಿ ಯರಿಂಗ್ ಇಲಾಖೆಗೆ ಸೇರಿರುವ ದೊಡ್ಡ ಕೆರೆ ಪಕ್ಕದಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ನಿರ್ಮಿಸಿದ್ದ ಸೇತುವೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದನ್ನು ದುರಸ್ತಿ ಮಾಡಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. <br /> <br /> ಮಳೆಗಾಲ ಆರಂಭವಾದರೆ ಓಡಾಡಲು ಬಾರ ದಂತಾಗಿ ರೈತರು ತೀವ್ರ ತೊಂದರೆ ಎದುರಿಸ ಬೇಕಾಗುತ್ತದೆ. ಕಾರಣ ಸೇತುವೆ ದುರಸ್ತಿಗೆ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಕೆರೆಯಲ್ಲಿ ಭರ್ತಿ ತುಂಬಿರುವ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> ದುರಸ್ತಿಗೆ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಬಸಣ್ಣ ಬಣಕಾರ, ಶಿವಪುತ್ರಪ್ಪ ಬಿದರಿ, ಸುರೇಶ ತಳವಾರ, ಗದಿಗೆಪ್ಪ ತಳವಾರ, ಚಂದ್ರು ಬಣಕಾರ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ: </strong>ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ದೊಡ್ಡಕೆರೆ ಸೇತುವೆಯ ಒಂದು ಬದಿಯಲ್ಲಿನ ಗೋಡೆ ಉರುಳಿ ಬ್ದ್ದಿದು ಮೂರು ತಿಂಗಳಾಗಿದ್ದು, ಸಂಚಾ ರಕ್ಕೆ ಅಡಚಣೆಯಾಗಿದೆ. ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.<br /> <br /> ಪಂಚಾಯತ್ರಾಜ್ ಎಂಜಿನಿ ಯರಿಂಗ್ ಇಲಾಖೆಗೆ ಸೇರಿರುವ ದೊಡ್ಡ ಕೆರೆ ಪಕ್ಕದಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ನಿರ್ಮಿಸಿದ್ದ ಸೇತುವೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದನ್ನು ದುರಸ್ತಿ ಮಾಡಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. <br /> <br /> ಮಳೆಗಾಲ ಆರಂಭವಾದರೆ ಓಡಾಡಲು ಬಾರ ದಂತಾಗಿ ರೈತರು ತೀವ್ರ ತೊಂದರೆ ಎದುರಿಸ ಬೇಕಾಗುತ್ತದೆ. ಕಾರಣ ಸೇತುವೆ ದುರಸ್ತಿಗೆ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಕೆರೆಯಲ್ಲಿ ಭರ್ತಿ ತುಂಬಿರುವ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> ದುರಸ್ತಿಗೆ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಬಸಣ್ಣ ಬಣಕಾರ, ಶಿವಪುತ್ರಪ್ಪ ಬಿದರಿ, ಸುರೇಶ ತಳವಾರ, ಗದಿಗೆಪ್ಪ ತಳವಾರ, ಚಂದ್ರು ಬಣಕಾರ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>