<p><strong>ಹುಬ್ಬಳ್ಳಿ:</strong> ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ತಮ್ಮ ಬಲಗೈನ ಎರಡೂ ಬೆರಳಿಗೆ ಬ್ಯಾಂಡೇಜ್ ಪಟ್ಟಿ ಹಾಕಿಕೊಂಡಿದ್ದರು. ತಮ್ಮ ಎಂದಿನ ಶಾಂತ ಮುಖಭಾವ ಮತ್ತು ಕಿರುನಗೆಯೊಂದಿಗೆ ಸುದ್ದಿಗಾರರ ಮುಂದೆ ಕುಳಿತರು.</p><p>ಐತಿಹಾಸಿಕ ಫೈನಲ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿರುವ ದೇವದತ್ತ ಪಕ್ಕದಲ್ಲಿ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಕೂಡ ಇದ್ದರು. ಇಬ್ಬರೂ ಸಮಚಿತ್ತದ ಮತ್ತು ಕರಾರುವಾಕ್ ಉತ್ತರಗಳನ್ನು ನೀಡಿದರು. </p><p>‘ರಣಜಿ ಟ್ರೋಫಿಯಂತಹ ಮಹತ್ವದ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ವಹಿಸುವುದು ಸವಾಲಿನದ್ದು. ಆದರೆ, ತಂಡದಲ್ಲಿ ಅನುಭವಿ ಆಟಗಾರರಿರುವುದರಿಂದ ಕಷ್ಟವಾಗಲಿಲ್ಲ’ ಎಂದು ಪಡಿಕ್ಕಲ್ ಹೇಳಿದರು.</p><p>ಉತ್ತರಾಖಂಡ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಅವರು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.</p><p>‘ಫೈನಲ್ ಪಂದ್ಯವೆಂದರೆ ಸಹಜವಾಗಿಯೇ ಒತ್ತಡ ಇರುತ್ತದೆ. ಆದರೆ, ತವರಿನ ಅಂಗಳದಲ್ಲಿ ಈ ಪಂದ್ಯ ಆಡುತ್ತಿರುವುದು ಖುಷಿಯ ವಿಚಾರ. ಫೈನಲ್ಗೆ ನಮ್ಮ ತಂಡ ಸಜ್ಜಾಗಿದೆ‘ ಎಂದು ಹೇಳಿದರು.</p><p>ರಾಜ್ಯದ ಎಲ್ಲ ಭಾಗಗಳಲ್ಲಿಯೂ ಉತ್ತಮ ಪ್ರತಿಭಾವಂತ ಆಟಗಾರರರಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಬಂದವರೂ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಯುವ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆಂದರೆ ಇಲ್ಲಿ ಹೆಚ್ಚು ಪಂದ್ಯಗಳು ನಡೆಯಬೇಕು ಎಂದರು.</p><p>ಪಾರಸ್ ಡೋಗ್ರಾ ಮಾತನಾಡಿ, ‘ಫೈನಲ್ ತಲುಪಿರುವುದು ಮಹತ್ವದ ಸಂಗತಿ. ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಬಂಗಾಳವನ್ನು ಸೋಲಿಸಿದ್ದರಿಂದ ನಮ್ಮ ಆಟಗಾರರದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಕರ್ನಾಟಕ ತಂಡ ದಲ್ಲಿ ಖ್ಯಾತ ಆಟಗಾರರಿದ್ದಾರೆ. ಆದರೆ, ನಾವು ನಮ್ಮ ಆಟ ಆಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ತಮ್ಮ ಬಲಗೈನ ಎರಡೂ ಬೆರಳಿಗೆ ಬ್ಯಾಂಡೇಜ್ ಪಟ್ಟಿ ಹಾಕಿಕೊಂಡಿದ್ದರು. ತಮ್ಮ ಎಂದಿನ ಶಾಂತ ಮುಖಭಾವ ಮತ್ತು ಕಿರುನಗೆಯೊಂದಿಗೆ ಸುದ್ದಿಗಾರರ ಮುಂದೆ ಕುಳಿತರು.</p><p>ಐತಿಹಾಸಿಕ ಫೈನಲ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿರುವ ದೇವದತ್ತ ಪಕ್ಕದಲ್ಲಿ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಕೂಡ ಇದ್ದರು. ಇಬ್ಬರೂ ಸಮಚಿತ್ತದ ಮತ್ತು ಕರಾರುವಾಕ್ ಉತ್ತರಗಳನ್ನು ನೀಡಿದರು. </p><p>‘ರಣಜಿ ಟ್ರೋಫಿಯಂತಹ ಮಹತ್ವದ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ವಹಿಸುವುದು ಸವಾಲಿನದ್ದು. ಆದರೆ, ತಂಡದಲ್ಲಿ ಅನುಭವಿ ಆಟಗಾರರಿರುವುದರಿಂದ ಕಷ್ಟವಾಗಲಿಲ್ಲ’ ಎಂದು ಪಡಿಕ್ಕಲ್ ಹೇಳಿದರು.</p><p>ಉತ್ತರಾಖಂಡ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಅವರು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.</p><p>‘ಫೈನಲ್ ಪಂದ್ಯವೆಂದರೆ ಸಹಜವಾಗಿಯೇ ಒತ್ತಡ ಇರುತ್ತದೆ. ಆದರೆ, ತವರಿನ ಅಂಗಳದಲ್ಲಿ ಈ ಪಂದ್ಯ ಆಡುತ್ತಿರುವುದು ಖುಷಿಯ ವಿಚಾರ. ಫೈನಲ್ಗೆ ನಮ್ಮ ತಂಡ ಸಜ್ಜಾಗಿದೆ‘ ಎಂದು ಹೇಳಿದರು.</p><p>ರಾಜ್ಯದ ಎಲ್ಲ ಭಾಗಗಳಲ್ಲಿಯೂ ಉತ್ತಮ ಪ್ರತಿಭಾವಂತ ಆಟಗಾರರರಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಬಂದವರೂ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಯುವ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆಂದರೆ ಇಲ್ಲಿ ಹೆಚ್ಚು ಪಂದ್ಯಗಳು ನಡೆಯಬೇಕು ಎಂದರು.</p><p>ಪಾರಸ್ ಡೋಗ್ರಾ ಮಾತನಾಡಿ, ‘ಫೈನಲ್ ತಲುಪಿರುವುದು ಮಹತ್ವದ ಸಂಗತಿ. ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಬಂಗಾಳವನ್ನು ಸೋಲಿಸಿದ್ದರಿಂದ ನಮ್ಮ ಆಟಗಾರರದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಕರ್ನಾಟಕ ತಂಡ ದಲ್ಲಿ ಖ್ಯಾತ ಆಟಗಾರರಿದ್ದಾರೆ. ಆದರೆ, ನಾವು ನಮ್ಮ ಆಟ ಆಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>