ಸೋಮವಾರ, 17-10-1961
`ಅಭ್ಯರ್ಥಿಗಳ ಶಿಫಾರಸು~
ಬೆಂಗಳೂರು, ಅ. 16 -ಮೈಸೂರು ಕಾಂಗ್ರೆಸ್ಸಿನಲ್ಲಿ ಸದಸ್ಯರು ಪಕ್ಷದಲ್ಲಿನ ಯಾವ ಗುಂಪಿಗೇ ಸೇರಿದ್ದಿರಲಿ ಆ ಗಣನೆ ಇಲ್ಲದೆ ಪ್ರಕೃತ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದರಲ್ಲಿ ನ್ಯಾಯ ಸಲ್ಲುವುದೆಂದು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಇಲ್ಲಿ ಆಶಿಸಿದರು.
ಭೂ ಸುಧಾರಣೆಗೆ ವಿಳಂಬ
ಬೆಂಗಳೂರು, ಅ. 16 - ಭೂ ಸುಧಾರಣೆ ತರುವುದಾಗಿ 14 ವರ್ಷಗಳಿಂದ ಹೇಳುತ್ತಾ ಬಂದಿದ್ದು, ಕಾರ್ಯಗತ ಮಾಡುವುದು ಈಗಲೇ ತಡವಾಗಿದೆಯೆಂದೂ ಅದನ್ನು ತರಲೇ ಬೇಕಾಗಿದೆಯೆಂದೂ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ ರೆವಿನ್ಯೂ ಸಚಿವ ಶ್ರೀ ಕಡಿದಾಳ್ ಮಂಜಪ್ಪನವರು `ಜನಕ್ಕೆ ಮೋಸ ಮಾಡುವಂತಿಲ್ಲ~ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.