<p><strong>ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಮಹಮದಾಲಿ ಆಯ್ಕೆ </strong><br /> ಬೆಂಗಳೂರು, ಜೂ. 23-ಪ್ರತಿಸ್ಪರ್ಧಿಯ ಮಾತಿನಲ್ಲೇ ಹೇಳುವುದಾದರೆ ಪ್ರಚಂಡ ಬಹುಮತದಿಂದ ಶ್ರೀ ಮಹಮದಾಲಿ ಅವರು ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಇಂದು ಪುನಃ ಚುನಾಯಿತರಾದರು.<br /> <br /> ನಿರೀಕ್ಷಿಸಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆದು ಶ್ರೀ ಮಹಮದಾಲಿ ಅವರು 201 ವೋಟುಗಳನ್ನೂ ಪ್ರತಿಸ್ಪರ್ಧಿ ಶ್ರೀ ಎಚ್.ಎಂ. ಚನ್ನಬಸಪ್ಪನವರು 23 ವೋಟುಗಳನ್ನೂ ಪಡೆದರು.<br /> <br /> ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಎಂ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತ ಮೇಲೆ ಸುಮಾರು 8 ತಿಂಗಳ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀ ಮಹಮದಾಲಿ ಅವರು ಅಧ್ಯಕ್ಷರಾದರು.<br /> <br /> <strong>ಚಿನ್ನದ ಹುಚ್ಚು ತ್ಯಜಿಸಲು ಚಳವಳಿ: ಕಾಂಗ್ರೆಸ್ಸಿಗರಿಗೆ ಮೊರಾರ್ಜಿ ಕರೆ</strong><br /> ಕಲ್ಕತ್ತ, ಜೂನ್ 23- ಜನರ ಚಿನ್ನದ ಹುಚ್ಚನ್ನು ನಿವಾರಿಸಲು `ಜನತಾ' ಚಳವಳಿಯೊಂದನ್ನು ಆರಂಭಿಸುವಂತೆ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಇಲ್ಲಿ ಕಾಂಗ್ರೆಸ್ಸಿಗರಿಗೆ ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಮಹಮದಾಲಿ ಆಯ್ಕೆ </strong><br /> ಬೆಂಗಳೂರು, ಜೂ. 23-ಪ್ರತಿಸ್ಪರ್ಧಿಯ ಮಾತಿನಲ್ಲೇ ಹೇಳುವುದಾದರೆ ಪ್ರಚಂಡ ಬಹುಮತದಿಂದ ಶ್ರೀ ಮಹಮದಾಲಿ ಅವರು ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಇಂದು ಪುನಃ ಚುನಾಯಿತರಾದರು.<br /> <br /> ನಿರೀಕ್ಷಿಸಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆದು ಶ್ರೀ ಮಹಮದಾಲಿ ಅವರು 201 ವೋಟುಗಳನ್ನೂ ಪ್ರತಿಸ್ಪರ್ಧಿ ಶ್ರೀ ಎಚ್.ಎಂ. ಚನ್ನಬಸಪ್ಪನವರು 23 ವೋಟುಗಳನ್ನೂ ಪಡೆದರು.<br /> <br /> ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಎಂ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತ ಮೇಲೆ ಸುಮಾರು 8 ತಿಂಗಳ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀ ಮಹಮದಾಲಿ ಅವರು ಅಧ್ಯಕ್ಷರಾದರು.<br /> <br /> <strong>ಚಿನ್ನದ ಹುಚ್ಚು ತ್ಯಜಿಸಲು ಚಳವಳಿ: ಕಾಂಗ್ರೆಸ್ಸಿಗರಿಗೆ ಮೊರಾರ್ಜಿ ಕರೆ</strong><br /> ಕಲ್ಕತ್ತ, ಜೂನ್ 23- ಜನರ ಚಿನ್ನದ ಹುಚ್ಚನ್ನು ನಿವಾರಿಸಲು `ಜನತಾ' ಚಳವಳಿಯೊಂದನ್ನು ಆರಂಭಿಸುವಂತೆ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಇಲ್ಲಿ ಕಾಂಗ್ರೆಸ್ಸಿಗರಿಗೆ ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>