<p><span style="font-size: 26px;"><strong>ಭದ್ರಾವತಿ:</strong> ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಾಲಯದ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡ, ಗಂಟೆಗಳ ಸಾಲಿನಿಂದ ದೇವಸ್ಥಾನ ಒಳ ಭಾಗದಲ್ಲಿ ನೀರು ಜಿನುಗುತ್ತಿದೆ.</span><br /> <br /> 12ನೇ ಶತಮಾನದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ಈ ದೇವಾಲಯಕ್ಕೆ ಭಾನುವಾರ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿ ಭೇಟಿ ನೀಡಿ ನೀರು ಸೋರಿಕೆ ಬಗ್ಗೆ ಪರಿಶೀಲನೆ ನಡೆಸಿದರು.<br /> <br /> ಸರ್ಕಾರ 2013-14ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ರೂ 10ಲಕ್ಷ ಯೋಜನಾ ವಿವರಣಾ ಪಟ್ಟಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಶಿವಾನಂದ ಕಂಠಿ ಅವರು ದೇವಸ್ಥಾನ ವೀಕ್ಷಣೆ ನಡೆಸಿ ಹಲವು ಕ್ರಮಗಳ ಕುರಿತಂತೆ ವ್ಯವಸ್ಥಾಪನಾ ಸಮಿತಿ ಜತೆ ಸಮಾಲೋಚಿಸಿದರು.<br /> <br /> ದೇವಾಲಯ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡಗಳ ಸಾಲು, ಕಲ್ಲುಗಳ ನಡುವೆ ಬಿರುಕು ಸೃಷ್ಟಿಗೆ ಕಾರಣವಾಗಿದೆ. ಇದರಿಂದಾಗಿ ನೀರು ಸರಾಗವಾಗಿ ದೇವಸ್ಥಾನದ ಒಳ ಭಾಗದ ಪದರಕ್ಕೆ ಸಾಗುತ್ತಿದ್ದು, ಶೀತ ವಾತಾವರಣ ಸೃಷ್ಟಿಸಿದೆ.<br /> <br /> ಇದು ಹೀಗೆಯೇ ಮುಂದುವರಿದರೆ ಕಲ್ಲುಗಳ ನಡುವಿನ ಬಿರುಕು ಹೆಚ್ಚುವ ಜತೆಗೆ ಒಳ ಭಾಗದ ಪದರಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಸುಬ್ರಹ್ಮಣ್ಯ, ಜನಾರ್ಧನ ಅಯ್ಯಂಗಾರ್, ಸಹಾಯಕ ಅರ್ಚಕ ಶ್ರೀನಿವಾಸ್ ಅಧಿಕಾರಿಗಳ ಗಮನಕ್ಕೆ ತಂದರು.<br /> <br /> ದೇವಸ್ಥಾನ ವೀಕ್ಷಿಸಿದ ಅಧಿಕಾರಿಗಳು ನೀರು ಸೋರಿಕೆ ತಡೆಗೆ ಮಾಡಬೇಕಾದ ಕ್ರಮಗಳು ಹಾಗೂ ಶಿಲಾ ಪದರದ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿ ಅಂದಾಜು ರೂ 22ಲಕ್ಷ ಅಗತ್ಯವಿದೆ ಎಂದಿದ್ದಾರೆ.<br /> <br /> ಒಟ್ಟಿನಲ್ಲಿ ಈ ಕುರಿತು ಹೆಚ್ಚಿನ ಅನುದಾನ ಹಾಗೂ ಕಾಮಗಾರಿ ಪ್ರಸ್ತಾವಕ್ಕೆ ಅನುಮೋದನೆ ಪಡೆಯುವ ಸಲುವಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಇಲಾಖೆ ಜತೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಆಗ ಮಾತ್ರ ಐಸಿಹಾಸಿಕ ದೇಗುಲದ ಸಂರಕ್ಷಣೆ ಸಾಧ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಭದ್ರಾವತಿ:</strong> ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಾಲಯದ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡ, ಗಂಟೆಗಳ ಸಾಲಿನಿಂದ ದೇವಸ್ಥಾನ ಒಳ ಭಾಗದಲ್ಲಿ ನೀರು ಜಿನುಗುತ್ತಿದೆ.</span><br /> <br /> 12ನೇ ಶತಮಾನದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ಈ ದೇವಾಲಯಕ್ಕೆ ಭಾನುವಾರ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿ ಭೇಟಿ ನೀಡಿ ನೀರು ಸೋರಿಕೆ ಬಗ್ಗೆ ಪರಿಶೀಲನೆ ನಡೆಸಿದರು.<br /> <br /> ಸರ್ಕಾರ 2013-14ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ರೂ 10ಲಕ್ಷ ಯೋಜನಾ ವಿವರಣಾ ಪಟ್ಟಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಶಿವಾನಂದ ಕಂಠಿ ಅವರು ದೇವಸ್ಥಾನ ವೀಕ್ಷಣೆ ನಡೆಸಿ ಹಲವು ಕ್ರಮಗಳ ಕುರಿತಂತೆ ವ್ಯವಸ್ಥಾಪನಾ ಸಮಿತಿ ಜತೆ ಸಮಾಲೋಚಿಸಿದರು.<br /> <br /> ದೇವಾಲಯ ಹೊರಭಾಗದ ಶಿಲಾ ಪದರದ ನಡುವೆ ಬೆಳೆದಿರುವ ಗಿಡಗಳ ಸಾಲು, ಕಲ್ಲುಗಳ ನಡುವೆ ಬಿರುಕು ಸೃಷ್ಟಿಗೆ ಕಾರಣವಾಗಿದೆ. ಇದರಿಂದಾಗಿ ನೀರು ಸರಾಗವಾಗಿ ದೇವಸ್ಥಾನದ ಒಳ ಭಾಗದ ಪದರಕ್ಕೆ ಸಾಗುತ್ತಿದ್ದು, ಶೀತ ವಾತಾವರಣ ಸೃಷ್ಟಿಸಿದೆ.<br /> <br /> ಇದು ಹೀಗೆಯೇ ಮುಂದುವರಿದರೆ ಕಲ್ಲುಗಳ ನಡುವಿನ ಬಿರುಕು ಹೆಚ್ಚುವ ಜತೆಗೆ ಒಳ ಭಾಗದ ಪದರಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಸುಬ್ರಹ್ಮಣ್ಯ, ಜನಾರ್ಧನ ಅಯ್ಯಂಗಾರ್, ಸಹಾಯಕ ಅರ್ಚಕ ಶ್ರೀನಿವಾಸ್ ಅಧಿಕಾರಿಗಳ ಗಮನಕ್ಕೆ ತಂದರು.<br /> <br /> ದೇವಸ್ಥಾನ ವೀಕ್ಷಿಸಿದ ಅಧಿಕಾರಿಗಳು ನೀರು ಸೋರಿಕೆ ತಡೆಗೆ ಮಾಡಬೇಕಾದ ಕ್ರಮಗಳು ಹಾಗೂ ಶಿಲಾ ಪದರದ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿ ಅಂದಾಜು ರೂ 22ಲಕ್ಷ ಅಗತ್ಯವಿದೆ ಎಂದಿದ್ದಾರೆ.<br /> <br /> ಒಟ್ಟಿನಲ್ಲಿ ಈ ಕುರಿತು ಹೆಚ್ಚಿನ ಅನುದಾನ ಹಾಗೂ ಕಾಮಗಾರಿ ಪ್ರಸ್ತಾವಕ್ಕೆ ಅನುಮೋದನೆ ಪಡೆಯುವ ಸಲುವಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಇಲಾಖೆ ಜತೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಆಗ ಮಾತ್ರ ಐಸಿಹಾಸಿಕ ದೇಗುಲದ ಸಂರಕ್ಷಣೆ ಸಾಧ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>