<p><br /> ರಾಮಚಂದ್ರ ಗುಹ ಅವರ ‘ಬಾಪೂ ನಂತರದ ಭಾರತ’ ಕೃತಿಯ ಓದು ಎರಡು ರೀತಿಯ ಭಾವನೆಗಳನ್ನು ಮೂಡಿಸಬಲ್ಲದು. ಮೊದಲನೆಯದು, ವಿಷಾದ ಭಾವ- ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶ ಎದುರಿಸಬೇಕಾದ ಘಟನೆಗಳಿಂದ ಉಂಟಾಗುವಂಥದ್ದು. ಎರಡನೆಯ ಭಾವ ನಿರುಮ್ಮಳದ್ದು- ಏನೆಲ್ಲ ಗಂಡಾಂತರಗಳ ನಡುವೆಯೂ ಭಾರತದಲ್ಲಿ ಪ್ರಜಾಸತ್ತೆ ಉಳಿದಿರುವುದಕ್ಕೆ. <br /> <br /> ಗುಹ ಅವರು ತಮ್ಮ ಬೃಹತ್ಕಥನದಲ್ಲಿ ಚರಿತ್ರೆಯ ಅಂಕಿಅಂಶಗಳನ್ನಷ್ಟೇ ಮಂಡಿಸುವುದಿಲ್ಲ. ಘಟನೆಗಳ ಹಿಂದಿನ ಕಾರಣಗಳನ್ನೂ, ನಂತರದ ಪರಿಣಾಮಗಳನ್ನೂ ಅವರು ವಿಶ್ಲೇಷಿಸುತ್ತಾರೆ. ಆ ಕಾರಣದಿಂದಾಗಿ ಅವರ ಬರಹ ಶುಷ್ಕ ಇತಿಹಾಸವಾಗದೆ, ‘ಜೀವಂತ ಭಾರತ’ದ ರಾಜಕೀಯ ಕಥನವಾಗಿ ಗಮನಸೆಳೆಯುತ್ತದೆ. ಸಂಶೋಧಕನ ಶಿಸ್ತು-ವಿದ್ವತ್ತು, ವಿಶ್ಲೇಷಕನ ಒಳನೋಟಗಳು ಹಾಗೂ ಸೃಜನಶೀಲ ಬರಹಗಾರನ ಆರ್ದ್ರತೆ- ಈ ಮೂರೂ ಗುಣಗಳನ್ನು ಹೊಂದಿರುವ ಕಾರಣದಿಂದಾಗಿ ‘ಬಾಪೂ ನಂತರದ ಭಾರತ’ ವಿಶಿಷ್ಟ ಕೃತಿಯಾಗಿದೆ.<br /> <br /> ಈ ಕೃತಿಯಲ್ಲಿ ಗುಹ ಕಾಣಿಸುವ ಭಾರತದ ಚರಿತ್ರೆಯ ಬೀಸು ವಿಸ್ತಾರವಾದುದು. ಕಳೆದ ಅರವತ್ತೈದು ವರ್ಷಗಳ ಸ್ವತಂತ್ರ ಭಾರತದ ರಾಜಕೀಯ-ಸಾಂಸ್ಕೃತಿಕ ಕಥನವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಪಾತ್ರಧಾರಿಗಳಾದರೂ ಯಾರು? ಗಾಂಧೀಜಿ ಇದ್ದಾರೆ. ನೆಹರೂ, ಮೊರಾರ್ಜಿ ದೇಸಾಯಿ, ಅಂಬೇಡ್ಕರ್, ಜಿನ್ನಾ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಅನೇಕ ಚೇತನಗಳು ಈ ಕೃತಿಯಲ್ಲಿ ನೆರೆದಿದ್ದಾರೆ. ವಿಶ್ವದ ಅತಿ ಡೊಡ್ಡ ಪ್ರಜಾಸತ್ತೆಗಳಲ್ಲಿ ಒಂದಾದ ದೇಶದ ಚಾರಿತ್ರಿಕ ಕಥನ ಮೇಲ್ನೋಟಕ್ಕೆ ರಾಜಕೀಯ ಕಥನದಂತೆ ಕಾಣಿಸಿದರೂ, ಅದು ಈ ನೆಲದ ಸಾಂಸ್ಕೃತಿಕ ಕಥನವೂ ಆಗಿದೆ.<br /> <br /> ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭ ಕೃತಿಯಲ್ಲಿ ಕಣ್ಣಿಗೆ ಕಟ್ಟಿದಂತಿದೆ. ಈ ಬಿಕ್ಕಟ್ಟಿಗೆ ಕಾರಣರಾದವರಾರು? ಅವರ ಮನಃಸ್ಥಿತಿಗಳು ಎಂಥವು? ಇದರಿಂದಾದ ಪರಿಣಾಮಗಳೇನು ಎನ್ನುವುದನ್ನು ಗುಹ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಚರಿತ್ರೆಯನ್ನು ಕಥೆಯಂತೆಯೂ ಹೇಳಬಹುದು ಎನ್ನುವುದಕ್ಕೆ ಉದಾಹರಣೆಯಂತಿರುವ ಈ ಕೃತಿ ಒಂದು ಅತ್ಯುತ್ತಮ ಕಥನ-ಕಾದಂಬರಿಯಂತೆ ಓದಿಸಿಕೊಳ್ಳಬಲ್ಲದು.<br /> <br /> ರಾಜಕಾರಣದ ಕೊಳಕು ಕಣ್ಣಿಗೆ ರಾಚುತ್ತಿರುವ ಸಂದರ್ಭದಲ್ಲಿ, ‘ಬಾಪೂ ನಂತರದ ಭಾರತ’ ಕೃತಿಯ ಓದು ಬೇರೆಯದೇ ಅನುಭವವನ್ನು ಕೊಡಬಲ್ಲದು. ನಾಯಕರ ಬಗ್ಗೆ ಅಭಿಮಾನವನ್ನೂ ನಿರಾಶೆಯನ್ನೂ ಮೂಡಿಸುವ ಈ ಕಥನ, ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಹೆಚ್ಚು ತಿಳಿಗೊಳಿಸುವಂತಿದೆ. <br /> <br /> ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಅವರು ‘ಗುಹಾ ಕಥನ’ವನ್ನು ಕನ್ನಡಕ್ಕೆ ತಂದಿದ್ದಾರೆ. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಬಾಪೂ ನಂತರದ ಭಾರತ’ ಎಲ್ಲ ಸಾಹಿತ್ಯ-ಚರಿತ್ರೆಯ ವಿದ್ಯಾರ್ಥಿಗಳಷ್ಟೇ ಅಲ್ಲ, ಎಲ್ಲ ಸಹೃದಯರೂ ಗಮನಿಸಬೇಕಾದ ಪುಸ್ತಕ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ರಾಮಚಂದ್ರ ಗುಹ ಅವರ ‘ಬಾಪೂ ನಂತರದ ಭಾರತ’ ಕೃತಿಯ ಓದು ಎರಡು ರೀತಿಯ ಭಾವನೆಗಳನ್ನು ಮೂಡಿಸಬಲ್ಲದು. ಮೊದಲನೆಯದು, ವಿಷಾದ ಭಾವ- ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶ ಎದುರಿಸಬೇಕಾದ ಘಟನೆಗಳಿಂದ ಉಂಟಾಗುವಂಥದ್ದು. ಎರಡನೆಯ ಭಾವ ನಿರುಮ್ಮಳದ್ದು- ಏನೆಲ್ಲ ಗಂಡಾಂತರಗಳ ನಡುವೆಯೂ ಭಾರತದಲ್ಲಿ ಪ್ರಜಾಸತ್ತೆ ಉಳಿದಿರುವುದಕ್ಕೆ. <br /> <br /> ಗುಹ ಅವರು ತಮ್ಮ ಬೃಹತ್ಕಥನದಲ್ಲಿ ಚರಿತ್ರೆಯ ಅಂಕಿಅಂಶಗಳನ್ನಷ್ಟೇ ಮಂಡಿಸುವುದಿಲ್ಲ. ಘಟನೆಗಳ ಹಿಂದಿನ ಕಾರಣಗಳನ್ನೂ, ನಂತರದ ಪರಿಣಾಮಗಳನ್ನೂ ಅವರು ವಿಶ್ಲೇಷಿಸುತ್ತಾರೆ. ಆ ಕಾರಣದಿಂದಾಗಿ ಅವರ ಬರಹ ಶುಷ್ಕ ಇತಿಹಾಸವಾಗದೆ, ‘ಜೀವಂತ ಭಾರತ’ದ ರಾಜಕೀಯ ಕಥನವಾಗಿ ಗಮನಸೆಳೆಯುತ್ತದೆ. ಸಂಶೋಧಕನ ಶಿಸ್ತು-ವಿದ್ವತ್ತು, ವಿಶ್ಲೇಷಕನ ಒಳನೋಟಗಳು ಹಾಗೂ ಸೃಜನಶೀಲ ಬರಹಗಾರನ ಆರ್ದ್ರತೆ- ಈ ಮೂರೂ ಗುಣಗಳನ್ನು ಹೊಂದಿರುವ ಕಾರಣದಿಂದಾಗಿ ‘ಬಾಪೂ ನಂತರದ ಭಾರತ’ ವಿಶಿಷ್ಟ ಕೃತಿಯಾಗಿದೆ.<br /> <br /> ಈ ಕೃತಿಯಲ್ಲಿ ಗುಹ ಕಾಣಿಸುವ ಭಾರತದ ಚರಿತ್ರೆಯ ಬೀಸು ವಿಸ್ತಾರವಾದುದು. ಕಳೆದ ಅರವತ್ತೈದು ವರ್ಷಗಳ ಸ್ವತಂತ್ರ ಭಾರತದ ರಾಜಕೀಯ-ಸಾಂಸ್ಕೃತಿಕ ಕಥನವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಪಾತ್ರಧಾರಿಗಳಾದರೂ ಯಾರು? ಗಾಂಧೀಜಿ ಇದ್ದಾರೆ. ನೆಹರೂ, ಮೊರಾರ್ಜಿ ದೇಸಾಯಿ, ಅಂಬೇಡ್ಕರ್, ಜಿನ್ನಾ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಅನೇಕ ಚೇತನಗಳು ಈ ಕೃತಿಯಲ್ಲಿ ನೆರೆದಿದ್ದಾರೆ. ವಿಶ್ವದ ಅತಿ ಡೊಡ್ಡ ಪ್ರಜಾಸತ್ತೆಗಳಲ್ಲಿ ಒಂದಾದ ದೇಶದ ಚಾರಿತ್ರಿಕ ಕಥನ ಮೇಲ್ನೋಟಕ್ಕೆ ರಾಜಕೀಯ ಕಥನದಂತೆ ಕಾಣಿಸಿದರೂ, ಅದು ಈ ನೆಲದ ಸಾಂಸ್ಕೃತಿಕ ಕಥನವೂ ಆಗಿದೆ.<br /> <br /> ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭ ಕೃತಿಯಲ್ಲಿ ಕಣ್ಣಿಗೆ ಕಟ್ಟಿದಂತಿದೆ. ಈ ಬಿಕ್ಕಟ್ಟಿಗೆ ಕಾರಣರಾದವರಾರು? ಅವರ ಮನಃಸ್ಥಿತಿಗಳು ಎಂಥವು? ಇದರಿಂದಾದ ಪರಿಣಾಮಗಳೇನು ಎನ್ನುವುದನ್ನು ಗುಹ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಚರಿತ್ರೆಯನ್ನು ಕಥೆಯಂತೆಯೂ ಹೇಳಬಹುದು ಎನ್ನುವುದಕ್ಕೆ ಉದಾಹರಣೆಯಂತಿರುವ ಈ ಕೃತಿ ಒಂದು ಅತ್ಯುತ್ತಮ ಕಥನ-ಕಾದಂಬರಿಯಂತೆ ಓದಿಸಿಕೊಳ್ಳಬಲ್ಲದು.<br /> <br /> ರಾಜಕಾರಣದ ಕೊಳಕು ಕಣ್ಣಿಗೆ ರಾಚುತ್ತಿರುವ ಸಂದರ್ಭದಲ್ಲಿ, ‘ಬಾಪೂ ನಂತರದ ಭಾರತ’ ಕೃತಿಯ ಓದು ಬೇರೆಯದೇ ಅನುಭವವನ್ನು ಕೊಡಬಲ್ಲದು. ನಾಯಕರ ಬಗ್ಗೆ ಅಭಿಮಾನವನ್ನೂ ನಿರಾಶೆಯನ್ನೂ ಮೂಡಿಸುವ ಈ ಕಥನ, ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಹೆಚ್ಚು ತಿಳಿಗೊಳಿಸುವಂತಿದೆ. <br /> <br /> ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಅವರು ‘ಗುಹಾ ಕಥನ’ವನ್ನು ಕನ್ನಡಕ್ಕೆ ತಂದಿದ್ದಾರೆ. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಬಾಪೂ ನಂತರದ ಭಾರತ’ ಎಲ್ಲ ಸಾಹಿತ್ಯ-ಚರಿತ್ರೆಯ ವಿದ್ಯಾರ್ಥಿಗಳಷ್ಟೇ ಅಲ್ಲ, ಎಲ್ಲ ಸಹೃದಯರೂ ಗಮನಿಸಬೇಕಾದ ಪುಸ್ತಕ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>