<p><strong>ಬೆಂಗಳೂರು:</strong> `ವಿಶಿಷ್ಟವಾದ ಪುಟ್ಟ `ಬ್ಯಾರಿ~ ಭಾಷೆ ಹಾಗೂ ಸಮುದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗಬೇಕೆಂಬ ಏಕೈಕ ಉದ್ದೇಶದಿಂದ ನಾನು `ಬ್ಯಾರಿ~ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಪ್ರಾದೇಶಿಕ ಮಟ್ಟದಲ್ಲಿ ಚಿತ್ರಕ್ಕೆ ಒಂದು ಸಣ್ಣ ಪ್ರಶಸ್ತಿ ಲಭಿಸಬಹುದು ಎಂದು ನಿರೀಕ್ಷಿಸಿದ್ದೆ.<br /> <br /> ಆದರೆ, `ಸ್ವರ್ಣ ಕಮಲ~ದಂತಹ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶತಮಾನದ ಹಿಂದಿನ `ಬ್ಯಾರಿ~ ಸಮುದಾಯದ ಸಂಸ್ಕೃತಿ ಹಾಗೂ ಜನಜೀವನದ ಕಥಾ ವಸ್ತುವನ್ನಾಗಿಟ್ಟುಕೊಂಡು ಕನ್ನಡದಲ್ಲಿಯೂ ಚಲನಚಿತ್ರ ನಿರ್ಮಿಸಲು ಉದ್ದೇಶ ಹೊಂದಿದ್ದೇನೆ~.<br /> <br /> ಇದು `ಸ್ವರ್ಣ ಕಮಲ~ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಮೊಟ್ಟ ಮೊದಲ `ಬ್ಯಾರಿ~ ಭಾಷೆಯ ಚಲನಚಿತ್ರ ನಿರ್ಮಾಪಕ ಹಾಗೂ ನಟ ಅಲ್ತಾಫ್ ಚೊಕ್ಕಬೆಟ್ಟು ಪ್ರತಿಕ್ರಿಯೆ.<br /> ಬೆಂಗಳೂರಿನ `ದಕ್ಷಿಣ ಕನ್ನಡಿಗರು~ ಬಳಗವು ವಾರ್ತಾ ಇಲಾಖೆಯ ಸುಲೋಚನಾ ಮಿನಿ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಪುಟ್ಟ ಸಂವಾದ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.<br /> <br /> `2002ರಲ್ಲಿ `ಚೈತ್ರ~ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಆದರೆ, ದುರದೃಷ್ಟವಶಾತ್ ಅದು ಅರ್ಧಕ್ಕೇ ನಿಂತಿತು. ಅಂದಿನಿಂದ ಯಾವುದೇ ಚಿತ್ರ ನಿರ್ಮಾಣ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ, ಬ್ಯಾರಿ ಭಾಷೆ ಹಾಗೂ ಜನಾಂಗದ ಮೇಲಿನ ಅಭಿಮಾನದಿಂದ `ಬ್ಯಾರಿ~ ಭಾಷೆಯಲ್ಲೇ ಚಿತ್ರ ನಿರ್ಮಿಸಿದೆ~ ಎಂದು ಹೇಳಿದರು.<br /> <br /> `ರಾಜ್ಯದಲ್ಲಿ ಸುಮಾರು 20 ಲಕ್ಷ ಬ್ಯಾರಿ ಜನಾಂಗದವರಿದ್ದಾರೆ. ಆದರೆ, `ಬ್ಯಾರಿ~ ಚಿತ್ರ ತೆರೆ ಕಂಡಾಗ ಅದನ್ನು ವೀಕ್ಷಿಸಿದವರು ಕೇವಲ ಒಂದು ಸಾವಿರ ಪ್ರೇಕ್ಷಕರು ಮಾತ್ರ. ಅದರಲ್ಲೂ 400 ಮಂದಿ ಮಾತ್ರ ಬ್ಯಾರಿ ಸಮುದಾಯದವರು ಚಿತ್ರ ವೀಕ್ಷಿಸಿದ್ದಾರೆ.~ ಎಂದರು.<br /> <br /> ಕನಸಿನಲ್ಲೂ ಊಹಿಸಿರಲಿಲ್ಲ: `ಬ್ಯಾರಿ~ ಚಿತ್ರಕ್ಕೆ `ಸ್ವರ್ಣಕಮಲ~ ಪ್ರಶಸ್ತಿ ಲಭಿಸುತ್ತದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.~ ಎಂದು ಚಿತ್ರದ ನಿರ್ದೇಶಕ ಕೆ.ಪಿ. ಸುವೀರನ್ ಪ್ರತಿಕ್ರಿಯಿಸಿದರು.<br /> <br /> ಅತ್ಯುತ್ತಮ ಛಾಯಾಗ್ರಹಣದಿಂದ ಚಲನಚಿತ್ರಕ್ಕೆ ತನ್ನದೇ ಆದ ವರ್ಚಸ್ಸು ತಂದುಕೊಟ್ಟಿರುವ ಮುರಳಿಕೃಷ್ಣ ಹಾಗೂ ಹಿರಿಯ ನಟ ಟಿ.ಕೆ. ಮಮ್ಮುಕೋಯ ತಮ್ಮ ಸಂತಸ ಹಂಚಿಕೊಂಡರು. ನಂತರ ನಟ-ನಿರ್ಮಾಪಕ ಅಲ್ತಾಫ್, ನಿರ್ದೇಶಕ ಕೆ.ಪಿ. ಸುವೀರನ್, ಛಾಯಾಗ್ರಾಹಕ ಮುರಳಿಕೃಷ್ಣ ಹಾಗೂ ನಟ ಮಮ್ಮುಕೋಯ, ಸಂಕಲನಕಾರ ಎಸ್. ಮನೋಹರ್ ಅವರನ್ನು ಸನ್ಮಾನಿಸಲಾಯಿತು. <br /> <br /> ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ, `ಸಣ್ಣ ಭಾಷೆ ಹಾಗೂ ಸಮುದಾಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಸನ್ನಿವೇಶದಲ್ಲಿ ಸಣ್ಣ ಸಮುದಾಯದವರೇ ಆಯಾ ಭಾಷೆಯಲ್ಲಿ ಚಿತ್ರ ನಿರ್ಮಿಸಿ `ಸ್ವರ್ಣಕಮಲ~ ಪ್ರಶಸ್ತಿ ಗೆದ್ದದ್ದು ಭಾಷೆಯ ಬಗೆಗಿನ ಸಂವಿಧಾನದ ಆಶಯಗಳಿಗೆ ದೊಡ್ಡ ಗೌರವ ತಂದುಕೊಟ್ಟಂತಾಗಿದೆ~ ಎಂದರು.<br /> <br /> ಮತ್ತೊಬ್ಬ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, `ಕಳೆದ ಮೂರು ದಶಕಗಳಲ್ಲಿ ಸಮುದಾಯದೊಳಗಿನ ಲೇಖಕರೇ ಕಥೆ, ಸಾಹಿತ್ಯ ಬರೆಯಲು ಶುರು ಮಾಡಿದರು. ಇದೀಗ ಸಣ್ಣ ಸಮುದಾಯದೊಳಗಿನವರೇ ಆಯಾ ಭಾಷೆಯಲ್ಲಿ ಚಲನಚಿತ್ರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ~ ಎಂದರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ನಟಿ ಉಮಾಶ್ರೀ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿದರು. ಕೆಪಿಸಿಸಿ ಮುಖಂಡ ಬಿ.ಎ. ಹಸನಬ್ಬ ಸ್ವಾಗತಿಸಿದರು. ಪತ್ರಕರ್ತ ಬಿ.ಎಂ. ಹನೀಫ್ ಕಾರ್ಯಕ್ರಮ ನಿರೂಪಿಸಿದರು. `ದಕ್ಷಿಣ ಕನ್ನಡಿಗರು~ ಬಳಗದ ಸಂಚಾಲಕ ಡಾ. ಮಕ್ಸೂದ್ ಅಹ್ಮದ್, ತುಳು ಕೂಟದ ಅಧ್ಯಕ್ಷ ರಮೇಶ್ ಹೆಗಡೆ, ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಫರೂಕ್, ಪ್ರಮುಖ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.<br /> </p>.<p><strong>ಕೃತಿ ಚೌರ್ಯ: ಪ್ರತಿಕ್ರಿಯೆ ಇಲ್ಲ</strong><br /> `ಬ್ಯಾರಿ~ ಚಲನಚಿತ್ರಕ್ಕೆ `ಚಂದ್ರಗಿರಿ ತೀರದಲ್ಲಿ~ನ ಕಾದಂಬರಿಯ ಕೃತಿಚೌರ್ಯ ಮಾಡಲಾಗಿದೆ ಎಂಬ ಲೇಖಕಿ ಸಾರಾ ಅಬೂಬಕರ್ ಆರೋಪದ ಬಗ್ಗೆ ಚಿತ್ರ ನಿರ್ಮಾಣ ತಂಡದ ಪ್ರಮುಖರು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ.<br /> <br /> `ಸದ್ಯಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಹಾಗೂ ಸಮುದಾಯದ ಪ್ರಮುಖರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಚಲನಚಿತ್ರ ನಿರ್ಮಾಪಕ ಅಲ್ತಾಫ್ ಅವರ ಸಂಬಂಧಿ ಬಿ.ಎ. ಹಸನಬ್ಬ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಿಶಿಷ್ಟವಾದ ಪುಟ್ಟ `ಬ್ಯಾರಿ~ ಭಾಷೆ ಹಾಗೂ ಸಮುದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗಬೇಕೆಂಬ ಏಕೈಕ ಉದ್ದೇಶದಿಂದ ನಾನು `ಬ್ಯಾರಿ~ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಪ್ರಾದೇಶಿಕ ಮಟ್ಟದಲ್ಲಿ ಚಿತ್ರಕ್ಕೆ ಒಂದು ಸಣ್ಣ ಪ್ರಶಸ್ತಿ ಲಭಿಸಬಹುದು ಎಂದು ನಿರೀಕ್ಷಿಸಿದ್ದೆ.<br /> <br /> ಆದರೆ, `ಸ್ವರ್ಣ ಕಮಲ~ದಂತಹ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶತಮಾನದ ಹಿಂದಿನ `ಬ್ಯಾರಿ~ ಸಮುದಾಯದ ಸಂಸ್ಕೃತಿ ಹಾಗೂ ಜನಜೀವನದ ಕಥಾ ವಸ್ತುವನ್ನಾಗಿಟ್ಟುಕೊಂಡು ಕನ್ನಡದಲ್ಲಿಯೂ ಚಲನಚಿತ್ರ ನಿರ್ಮಿಸಲು ಉದ್ದೇಶ ಹೊಂದಿದ್ದೇನೆ~.<br /> <br /> ಇದು `ಸ್ವರ್ಣ ಕಮಲ~ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಮೊಟ್ಟ ಮೊದಲ `ಬ್ಯಾರಿ~ ಭಾಷೆಯ ಚಲನಚಿತ್ರ ನಿರ್ಮಾಪಕ ಹಾಗೂ ನಟ ಅಲ್ತಾಫ್ ಚೊಕ್ಕಬೆಟ್ಟು ಪ್ರತಿಕ್ರಿಯೆ.<br /> ಬೆಂಗಳೂರಿನ `ದಕ್ಷಿಣ ಕನ್ನಡಿಗರು~ ಬಳಗವು ವಾರ್ತಾ ಇಲಾಖೆಯ ಸುಲೋಚನಾ ಮಿನಿ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಪುಟ್ಟ ಸಂವಾದ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.<br /> <br /> `2002ರಲ್ಲಿ `ಚೈತ್ರ~ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಆದರೆ, ದುರದೃಷ್ಟವಶಾತ್ ಅದು ಅರ್ಧಕ್ಕೇ ನಿಂತಿತು. ಅಂದಿನಿಂದ ಯಾವುದೇ ಚಿತ್ರ ನಿರ್ಮಾಣ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ, ಬ್ಯಾರಿ ಭಾಷೆ ಹಾಗೂ ಜನಾಂಗದ ಮೇಲಿನ ಅಭಿಮಾನದಿಂದ `ಬ್ಯಾರಿ~ ಭಾಷೆಯಲ್ಲೇ ಚಿತ್ರ ನಿರ್ಮಿಸಿದೆ~ ಎಂದು ಹೇಳಿದರು.<br /> <br /> `ರಾಜ್ಯದಲ್ಲಿ ಸುಮಾರು 20 ಲಕ್ಷ ಬ್ಯಾರಿ ಜನಾಂಗದವರಿದ್ದಾರೆ. ಆದರೆ, `ಬ್ಯಾರಿ~ ಚಿತ್ರ ತೆರೆ ಕಂಡಾಗ ಅದನ್ನು ವೀಕ್ಷಿಸಿದವರು ಕೇವಲ ಒಂದು ಸಾವಿರ ಪ್ರೇಕ್ಷಕರು ಮಾತ್ರ. ಅದರಲ್ಲೂ 400 ಮಂದಿ ಮಾತ್ರ ಬ್ಯಾರಿ ಸಮುದಾಯದವರು ಚಿತ್ರ ವೀಕ್ಷಿಸಿದ್ದಾರೆ.~ ಎಂದರು.<br /> <br /> ಕನಸಿನಲ್ಲೂ ಊಹಿಸಿರಲಿಲ್ಲ: `ಬ್ಯಾರಿ~ ಚಿತ್ರಕ್ಕೆ `ಸ್ವರ್ಣಕಮಲ~ ಪ್ರಶಸ್ತಿ ಲಭಿಸುತ್ತದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.~ ಎಂದು ಚಿತ್ರದ ನಿರ್ದೇಶಕ ಕೆ.ಪಿ. ಸುವೀರನ್ ಪ್ರತಿಕ್ರಿಯಿಸಿದರು.<br /> <br /> ಅತ್ಯುತ್ತಮ ಛಾಯಾಗ್ರಹಣದಿಂದ ಚಲನಚಿತ್ರಕ್ಕೆ ತನ್ನದೇ ಆದ ವರ್ಚಸ್ಸು ತಂದುಕೊಟ್ಟಿರುವ ಮುರಳಿಕೃಷ್ಣ ಹಾಗೂ ಹಿರಿಯ ನಟ ಟಿ.ಕೆ. ಮಮ್ಮುಕೋಯ ತಮ್ಮ ಸಂತಸ ಹಂಚಿಕೊಂಡರು. ನಂತರ ನಟ-ನಿರ್ಮಾಪಕ ಅಲ್ತಾಫ್, ನಿರ್ದೇಶಕ ಕೆ.ಪಿ. ಸುವೀರನ್, ಛಾಯಾಗ್ರಾಹಕ ಮುರಳಿಕೃಷ್ಣ ಹಾಗೂ ನಟ ಮಮ್ಮುಕೋಯ, ಸಂಕಲನಕಾರ ಎಸ್. ಮನೋಹರ್ ಅವರನ್ನು ಸನ್ಮಾನಿಸಲಾಯಿತು. <br /> <br /> ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ, `ಸಣ್ಣ ಭಾಷೆ ಹಾಗೂ ಸಮುದಾಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಸನ್ನಿವೇಶದಲ್ಲಿ ಸಣ್ಣ ಸಮುದಾಯದವರೇ ಆಯಾ ಭಾಷೆಯಲ್ಲಿ ಚಿತ್ರ ನಿರ್ಮಿಸಿ `ಸ್ವರ್ಣಕಮಲ~ ಪ್ರಶಸ್ತಿ ಗೆದ್ದದ್ದು ಭಾಷೆಯ ಬಗೆಗಿನ ಸಂವಿಧಾನದ ಆಶಯಗಳಿಗೆ ದೊಡ್ಡ ಗೌರವ ತಂದುಕೊಟ್ಟಂತಾಗಿದೆ~ ಎಂದರು.<br /> <br /> ಮತ್ತೊಬ್ಬ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, `ಕಳೆದ ಮೂರು ದಶಕಗಳಲ್ಲಿ ಸಮುದಾಯದೊಳಗಿನ ಲೇಖಕರೇ ಕಥೆ, ಸಾಹಿತ್ಯ ಬರೆಯಲು ಶುರು ಮಾಡಿದರು. ಇದೀಗ ಸಣ್ಣ ಸಮುದಾಯದೊಳಗಿನವರೇ ಆಯಾ ಭಾಷೆಯಲ್ಲಿ ಚಲನಚಿತ್ರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ~ ಎಂದರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ನಟಿ ಉಮಾಶ್ರೀ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿದರು. ಕೆಪಿಸಿಸಿ ಮುಖಂಡ ಬಿ.ಎ. ಹಸನಬ್ಬ ಸ್ವಾಗತಿಸಿದರು. ಪತ್ರಕರ್ತ ಬಿ.ಎಂ. ಹನೀಫ್ ಕಾರ್ಯಕ್ರಮ ನಿರೂಪಿಸಿದರು. `ದಕ್ಷಿಣ ಕನ್ನಡಿಗರು~ ಬಳಗದ ಸಂಚಾಲಕ ಡಾ. ಮಕ್ಸೂದ್ ಅಹ್ಮದ್, ತುಳು ಕೂಟದ ಅಧ್ಯಕ್ಷ ರಮೇಶ್ ಹೆಗಡೆ, ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಫರೂಕ್, ಪ್ರಮುಖ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.<br /> </p>.<p><strong>ಕೃತಿ ಚೌರ್ಯ: ಪ್ರತಿಕ್ರಿಯೆ ಇಲ್ಲ</strong><br /> `ಬ್ಯಾರಿ~ ಚಲನಚಿತ್ರಕ್ಕೆ `ಚಂದ್ರಗಿರಿ ತೀರದಲ್ಲಿ~ನ ಕಾದಂಬರಿಯ ಕೃತಿಚೌರ್ಯ ಮಾಡಲಾಗಿದೆ ಎಂಬ ಲೇಖಕಿ ಸಾರಾ ಅಬೂಬಕರ್ ಆರೋಪದ ಬಗ್ಗೆ ಚಿತ್ರ ನಿರ್ಮಾಣ ತಂಡದ ಪ್ರಮುಖರು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ.<br /> <br /> `ಸದ್ಯಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಹಾಗೂ ಸಮುದಾಯದ ಪ್ರಮುಖರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಚಲನಚಿತ್ರ ನಿರ್ಮಾಪಕ ಅಲ್ತಾಫ್ ಅವರ ಸಂಬಂಧಿ ಬಿ.ಎ. ಹಸನಬ್ಬ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>