<p>ಹಾಸನ: ಹಾವಿನ ಕೇಶವ ಆಡಿಸುತ್ತಿದ್ದ ಹಾವೊಂದು ಚನ್ನರಾಯಪಟ್ಟಣ ಮೂಲದ ಯಾಸೀನ್ ಎಂಬುವವರನ್ನು ಕಚ್ಚಿ, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ಹಾಸನದಲ್ಲಿ ನಡೆದಿದೆ.<br /> <br /> ತನ್ನ ಕಾರಿನಲ್ಲೇ ಕೆಲವು ಹಾವು ಗಳನ್ನಿಟ್ಟುಕೊಂಡು ಅಲ್ಲಿ ಇಲ್ಲಿ ಅವುಗಳನ್ನು ಆಟವಾಡಿಸಿ, ಪ್ರದರ್ಶಿಸಿ ಹಣ ಸಂಪಾದನೆ ಮಾಡುತ್ತಿದ್ದ ಕೇಶವ, ಮಂಗಳವಾರ ಸಂಜೆ ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಈ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲವು ಜನರೂ ಸೇರಿದ್ದರು. ಈ ಸಂದರ್ಭದಲ್ಲಿ ಯಾಸೀನ್ (25) ಅಲ್ಲಿಗೆ ಬಂದಿದ್ದರು. ಹಾವುಗಳನ್ನು ನೋಡಿದ ಬಳಿಕ ಕೇಶವನಿಗೆ ಹಣ ನೀಡಲು ನಿರಾಕರಿಸಿದಾಗ ಕೇಶವ ಹಾವೊಂದನ್ನು ಯಾಸೀನ್ ಸಮೀಪಕ್ಕೆ ತಂದಿದ್ದರು. ಹೆದರಿದ ಯಾಸಿನ್, `ಹಾವಿನಲ್ಲಿ ವಿಷ ಇದೆಯಾ?' ಎಂದು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಕೇಶವ, `ನೀನೇ ನೋಡಿಕೋ' ಎಂದು ಹಾವನ್ನು ಯಾಸೀನ್ ಮೈಮೇಲೆ ಎಸೆದರು.<br /> <br /> ಈ ಸಂದರ್ಭದಲ್ಲಿ ಹಾವು ಯಾಸೀನ್ ಗದ್ದಕ್ಕೆ ಕಚ್ಚಿತು ಎಂದು ಯಾಸೀನ್ ಕಡೆಯವರು ತಿಳಿಸಿದ್ದಾರೆ.<br /> ಯಾಸೀನ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.<br /> <br /> ಘಟನೆ ನಡೆಯುತ್ತಿದ್ದಂತೆ ಕೇಶವ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಆದರೆ ನಗರ ಠಾಣೆ ಪೊಲೀಸರು ಅವರನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಹಾವಿನ ಕೇಶವ ಆಡಿಸುತ್ತಿದ್ದ ಹಾವೊಂದು ಚನ್ನರಾಯಪಟ್ಟಣ ಮೂಲದ ಯಾಸೀನ್ ಎಂಬುವವರನ್ನು ಕಚ್ಚಿ, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ಹಾಸನದಲ್ಲಿ ನಡೆದಿದೆ.<br /> <br /> ತನ್ನ ಕಾರಿನಲ್ಲೇ ಕೆಲವು ಹಾವು ಗಳನ್ನಿಟ್ಟುಕೊಂಡು ಅಲ್ಲಿ ಇಲ್ಲಿ ಅವುಗಳನ್ನು ಆಟವಾಡಿಸಿ, ಪ್ರದರ್ಶಿಸಿ ಹಣ ಸಂಪಾದನೆ ಮಾಡುತ್ತಿದ್ದ ಕೇಶವ, ಮಂಗಳವಾರ ಸಂಜೆ ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಈ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲವು ಜನರೂ ಸೇರಿದ್ದರು. ಈ ಸಂದರ್ಭದಲ್ಲಿ ಯಾಸೀನ್ (25) ಅಲ್ಲಿಗೆ ಬಂದಿದ್ದರು. ಹಾವುಗಳನ್ನು ನೋಡಿದ ಬಳಿಕ ಕೇಶವನಿಗೆ ಹಣ ನೀಡಲು ನಿರಾಕರಿಸಿದಾಗ ಕೇಶವ ಹಾವೊಂದನ್ನು ಯಾಸೀನ್ ಸಮೀಪಕ್ಕೆ ತಂದಿದ್ದರು. ಹೆದರಿದ ಯಾಸಿನ್, `ಹಾವಿನಲ್ಲಿ ವಿಷ ಇದೆಯಾ?' ಎಂದು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಕೇಶವ, `ನೀನೇ ನೋಡಿಕೋ' ಎಂದು ಹಾವನ್ನು ಯಾಸೀನ್ ಮೈಮೇಲೆ ಎಸೆದರು.<br /> <br /> ಈ ಸಂದರ್ಭದಲ್ಲಿ ಹಾವು ಯಾಸೀನ್ ಗದ್ದಕ್ಕೆ ಕಚ್ಚಿತು ಎಂದು ಯಾಸೀನ್ ಕಡೆಯವರು ತಿಳಿಸಿದ್ದಾರೆ.<br /> ಯಾಸೀನ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.<br /> <br /> ಘಟನೆ ನಡೆಯುತ್ತಿದ್ದಂತೆ ಕೇಶವ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಆದರೆ ನಗರ ಠಾಣೆ ಪೊಲೀಸರು ಅವರನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>