<p><strong>ಹಿಂದೂ ಕಣಿವೆ ನಾಗರಿಕತೆ ಎಂದರೇನು?</strong><br /> ಆಧುನಿಕ ಪಾಕಿಸ್ತಾನ ಹಾಗೂ ವಾಯುವ್ಯ ಭಾರತದ ಹಿಂದೂ ನದಿ ಕಣಿವೆಯ ಪ್ರಾಚೀನ ನಾಗರಿಕತೆಯನ್ನು ‘ಹಿಂದೂ ಕಣಿವೆ ನಾಗರಿಕತೆ’ ಎಂದು ಗುರ್ತಿಸಲಾಗುತ್ತದೆ.<br /> <br /> ಇದನ್ನು ‘ಹರಪ್ಪ ಸಂಸ್ಕೃತಿ’ ಎಂದೂ ಕರೆಯುತ್ತಾರೆ. ಈ ನಾಗರಿಕತೆ ಬೆಳೆದುಬಂದ ಸ್ಥಳಗಳ ಉತ್ಖನನವು 1920ರ ದಶಕದಲ್ಲಿ ನಡೆದಿತ್ತು.</p>.<p><strong>ಹರಪ್ಪ ಸಂಸ್ಕೃತಿ ಇದ್ದ ನಗರಗಳು ಯಾವುವು?</strong><br /> ಹಿಂದೂ ನಾಗರಿಕತೆ ಬೆಳೆದು ಬಂದ 1000ಕ್ಕೂ ಹೆಚ್ಚು ನಗರಗಳನ್ನು ಪತ್ತೆ ಮಾಡಲಾಯಿತು. ಹರಪ್ಪ ಹಾಗೂ ಮೊಹೆಂಜೊದಾರೊ ಅವುಗಳಲ್ಲಿ ಮುಖ್ಯವಾದವು. ಈ ನಗರಗಳು ಪಾಕಿಸ್ತಾನದಲ್ಲಿವೆ.<br /> <br /> ಭಾರತದಲ್ಲಿ ಹಿಂದೂ ನದಿ ಕಣಿವೆ ನಾಗರಿಕತೆ ಬೆಳೆದ ನಗರಗಳಲ್ಲಿ ಗುಜರಾತ್ನ ಧೋಲಾವೀರ, ಲೋಥಲ್, ರಾಜಸ್ಥಾನದ ಕಾಲೀಬಂಗನ್ ಹಾಗೂ ಹರಿಯಾಣದ ರಾಖೀಗಢಿ ಪ್ರಮುಖವಾದವು.</p>.<p><strong>ಈ ನಾಗರಿಕತೆಯ ವೈಶಿಷ್ಟ್ಯವೇನು?</strong><br /> ನಗರಗಳು ವ್ಯವಸ್ಥಿತ ರೀತಿಯ ಯೋಜನೆ, ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತವೆ. ಇಟ್ಟಿಗೆಯಲ್ಲಿ ನಿರ್ಮಿತವಾದ ಸಾಲುಸಾಲು ಮನೆಗಳು, ಹಗೇವುಗಳು, ಕೋಟೆಗಳು, ಸ್ಮಶಾನಗಳು, ಬೃಹತ್ ಸ್ನಾನದ ಗೃಹಗಳು ಎಲ್ಲವೂ ಅಲ್ಲಿದ್ದವು.<br /> <br /> ಉತ್ತಮ ಚರಂಡಿ ವ್ಯವಸ್ಥೆಯೂ ಅಲ್ಲಿತ್ತೆನ್ನುವುದು ವಿಶೇಷ. ಮಡಕೆಗಳನ್ನು ಮಾಡುವ ಹಾಗೂ ಲೋಹದ ಮೂರ್ತಿಗಳನ್ನು ತಯಾರಿಸುವ ಕುಶಲ ಕಲೆಯೂ ಆ ಕಾಲದ ಜನರಿಗೆ ಗೊತ್ತಿತ್ತು ಎನ್ನುವುದು ಉತ್ಖನನದಿಂದ ಸ್ಪಷ್ಟವಾಯಿತು. ಆಗ ವಸ್ತುಗಳನ್ನು ಅಳೆಯುವ ಮಾನದಂಡಗಳನ್ನೂ ಕಂಡುಕೊಂಡಿದ್ದರು.</p>.<p><strong>ಯಾವ್ಯಾವ ಕುಶಲ ವಸ್ತುಗಳು ಪತ್ತೆಯಾದವು?</strong><br /> ಮುದ್ರೆಗಳು, ಬೊಂಬೆಗಳು, ಒಡವೆಗಳು ಹಾಗೂ ಮಡಕೆಗಳ ಪಳೆಯುಳಿಕೆಗಳು ಪತ್ತೆಯಾದವು. ‘ಪ್ರೀಸ್ಟ್ ಕಿಂಗ್’ (ಪೂಜಾರಿ ದೊರೆ) ಹೆಸರಿನ ಗಡ್ಡಧಾರಿ ವ್ಯಕ್ತಿಯ ಮೂರ್ತಿಯೂ ಸಿಕ್ಕಿತು. ‘ಡಾನ್ಸಿಂಗ್ ಗರ್ಲ್’ (ನೃತ್ಯಗಾತಿ) ಹೆಸರಿನ ಮೂರ್ತಿಯೂ ದೊರೆಯಿತು.</p>.<p><strong>ಆ ನಾಗರಿಕತೆ ಪತನವಾದದ್ದು ಯಾಕೆ?</strong><br /> ವಿಜ್ಞಾನಿಗಳ ಪ್ರಕಾರ ಕ್ರಿ.ಪೂ. 1900ರ ಹೊತ್ತಿಗೆ ನಾಗರಿಕತೆಯ ಅವನತಿ ಪ್ರಾರಂಭವಾಯಿತು. ನೆರೆ, ಬರದಂತಹ ಪ್ರಕೃತಿ ವಿಕೋಪಗಳಿಂದ ಅಪಾರ ಸಂಖ್ಯೆಯಲ್ಲಿ ಸಾವು ಸಂಭವಿಸಿತು.<br /> <br /> ಮುಂಗಾರು ಕ್ಷೀಣಿಸಿದ್ದರಿಂದ ನದಿಗಳಲ್ಲಿ ನೀರು ಇಲ್ಲದಂತಾಗಿ ಜನರು ಈ ನಗರಗಳನ್ನು ತೊರೆದರು ಎಂದು ಇತ್ತೀಚೆಗೆ ಪತ್ತೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿಂದೂ ಕಣಿವೆ ನಾಗರಿಕತೆ ಎಂದರೇನು?</strong><br /> ಆಧುನಿಕ ಪಾಕಿಸ್ತಾನ ಹಾಗೂ ವಾಯುವ್ಯ ಭಾರತದ ಹಿಂದೂ ನದಿ ಕಣಿವೆಯ ಪ್ರಾಚೀನ ನಾಗರಿಕತೆಯನ್ನು ‘ಹಿಂದೂ ಕಣಿವೆ ನಾಗರಿಕತೆ’ ಎಂದು ಗುರ್ತಿಸಲಾಗುತ್ತದೆ.<br /> <br /> ಇದನ್ನು ‘ಹರಪ್ಪ ಸಂಸ್ಕೃತಿ’ ಎಂದೂ ಕರೆಯುತ್ತಾರೆ. ಈ ನಾಗರಿಕತೆ ಬೆಳೆದುಬಂದ ಸ್ಥಳಗಳ ಉತ್ಖನನವು 1920ರ ದಶಕದಲ್ಲಿ ನಡೆದಿತ್ತು.</p>.<p><strong>ಹರಪ್ಪ ಸಂಸ್ಕೃತಿ ಇದ್ದ ನಗರಗಳು ಯಾವುವು?</strong><br /> ಹಿಂದೂ ನಾಗರಿಕತೆ ಬೆಳೆದು ಬಂದ 1000ಕ್ಕೂ ಹೆಚ್ಚು ನಗರಗಳನ್ನು ಪತ್ತೆ ಮಾಡಲಾಯಿತು. ಹರಪ್ಪ ಹಾಗೂ ಮೊಹೆಂಜೊದಾರೊ ಅವುಗಳಲ್ಲಿ ಮುಖ್ಯವಾದವು. ಈ ನಗರಗಳು ಪಾಕಿಸ್ತಾನದಲ್ಲಿವೆ.<br /> <br /> ಭಾರತದಲ್ಲಿ ಹಿಂದೂ ನದಿ ಕಣಿವೆ ನಾಗರಿಕತೆ ಬೆಳೆದ ನಗರಗಳಲ್ಲಿ ಗುಜರಾತ್ನ ಧೋಲಾವೀರ, ಲೋಥಲ್, ರಾಜಸ್ಥಾನದ ಕಾಲೀಬಂಗನ್ ಹಾಗೂ ಹರಿಯಾಣದ ರಾಖೀಗಢಿ ಪ್ರಮುಖವಾದವು.</p>.<p><strong>ಈ ನಾಗರಿಕತೆಯ ವೈಶಿಷ್ಟ್ಯವೇನು?</strong><br /> ನಗರಗಳು ವ್ಯವಸ್ಥಿತ ರೀತಿಯ ಯೋಜನೆ, ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತವೆ. ಇಟ್ಟಿಗೆಯಲ್ಲಿ ನಿರ್ಮಿತವಾದ ಸಾಲುಸಾಲು ಮನೆಗಳು, ಹಗೇವುಗಳು, ಕೋಟೆಗಳು, ಸ್ಮಶಾನಗಳು, ಬೃಹತ್ ಸ್ನಾನದ ಗೃಹಗಳು ಎಲ್ಲವೂ ಅಲ್ಲಿದ್ದವು.<br /> <br /> ಉತ್ತಮ ಚರಂಡಿ ವ್ಯವಸ್ಥೆಯೂ ಅಲ್ಲಿತ್ತೆನ್ನುವುದು ವಿಶೇಷ. ಮಡಕೆಗಳನ್ನು ಮಾಡುವ ಹಾಗೂ ಲೋಹದ ಮೂರ್ತಿಗಳನ್ನು ತಯಾರಿಸುವ ಕುಶಲ ಕಲೆಯೂ ಆ ಕಾಲದ ಜನರಿಗೆ ಗೊತ್ತಿತ್ತು ಎನ್ನುವುದು ಉತ್ಖನನದಿಂದ ಸ್ಪಷ್ಟವಾಯಿತು. ಆಗ ವಸ್ತುಗಳನ್ನು ಅಳೆಯುವ ಮಾನದಂಡಗಳನ್ನೂ ಕಂಡುಕೊಂಡಿದ್ದರು.</p>.<p><strong>ಯಾವ್ಯಾವ ಕುಶಲ ವಸ್ತುಗಳು ಪತ್ತೆಯಾದವು?</strong><br /> ಮುದ್ರೆಗಳು, ಬೊಂಬೆಗಳು, ಒಡವೆಗಳು ಹಾಗೂ ಮಡಕೆಗಳ ಪಳೆಯುಳಿಕೆಗಳು ಪತ್ತೆಯಾದವು. ‘ಪ್ರೀಸ್ಟ್ ಕಿಂಗ್’ (ಪೂಜಾರಿ ದೊರೆ) ಹೆಸರಿನ ಗಡ್ಡಧಾರಿ ವ್ಯಕ್ತಿಯ ಮೂರ್ತಿಯೂ ಸಿಕ್ಕಿತು. ‘ಡಾನ್ಸಿಂಗ್ ಗರ್ಲ್’ (ನೃತ್ಯಗಾತಿ) ಹೆಸರಿನ ಮೂರ್ತಿಯೂ ದೊರೆಯಿತು.</p>.<p><strong>ಆ ನಾಗರಿಕತೆ ಪತನವಾದದ್ದು ಯಾಕೆ?</strong><br /> ವಿಜ್ಞಾನಿಗಳ ಪ್ರಕಾರ ಕ್ರಿ.ಪೂ. 1900ರ ಹೊತ್ತಿಗೆ ನಾಗರಿಕತೆಯ ಅವನತಿ ಪ್ರಾರಂಭವಾಯಿತು. ನೆರೆ, ಬರದಂತಹ ಪ್ರಕೃತಿ ವಿಕೋಪಗಳಿಂದ ಅಪಾರ ಸಂಖ್ಯೆಯಲ್ಲಿ ಸಾವು ಸಂಭವಿಸಿತು.<br /> <br /> ಮುಂಗಾರು ಕ್ಷೀಣಿಸಿದ್ದರಿಂದ ನದಿಗಳಲ್ಲಿ ನೀರು ಇಲ್ಲದಂತಾಗಿ ಜನರು ಈ ನಗರಗಳನ್ನು ತೊರೆದರು ಎಂದು ಇತ್ತೀಚೆಗೆ ಪತ್ತೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>