<p>ಲಖನೌ (ಐಎಎನ್ಎಸ್): ಪಟ್ಟಣ ಪಂಚಾಯಿತಿ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರದ ಹರ್ಷಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡಿಗೆ 10 ವರ್ಷದ ಬಾಲಕನೊಬ್ಬ ಬಲಿಯಾದ ಘಟನೆ ಬರೇಲಿಯಲ್ಲಿ ಸಂಭವಿಸಿದೆ.<br /> <br /> ಇದರೊಂದಿಗೆ, ಹರ್ಷಾಚರಣೆ ವೇಳೆ ಗುಂಡು ಹಾರಿಸುವುದನ್ನು ಅಧಿಕೃತವಾಗಿ ನಿಷೇಧಿಸಿರುವುದರ ನಡುವೆಯೂ, ನಾಲ್ಕು ತಿಂಗಳಲ್ಲಿ ಮೂವರು ಬಾಲಕರು ಸೇರಿ ಒಟ್ಟು ಆರು ಜನ ಉತ್ತರ ಪ್ರದೇಶದಲ್ಲಿ ಇದೇ ರೀತಿ ಸಾವಿಗೀಡಾದಂತೆ ಆಗಿದೆ.<br /> <br /> ಇಲ್ಲಿಗೆ 250 ಕಿ.ಮೀ. ದೂರದಲ್ಲಿರುವ ಬರೇಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ರಿಯಾಜ್ ಅನ್ಸಾರಿ ಎಂಬುವವರು ಆಯ್ಕೆಯಾಗಿದ್ದು, ಸೋಮವಾರ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿತ್ತು. <br /> <br /> ಆಗ ಇದ್ದಕ್ಕಿದ್ದಂತೆ ಅನ್ಸಾರಿ ಬೆಂಬಲಿಗನೊಬ್ಬ ಆನಂದಾತಿರೇಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದ. ಬಂದೂಕಿನಿಂದ ಹಾರಿದ ಕೆಲವು ಗುಂಡುಗಳ ಪೈಕಿ ಒಂದು ಗುಂಡು ಘಟನೆಯನ್ನು ನೋಡುತ್ತಾ ನಿಂತಿದ್ದ ಮೆಹ್ತಾಬ್ ತಲೆಯನ್ನು ಹೊಕ್ಕು ಆತ ಸ್ಥಳದಲ್ಲೇ ಮೃತಪಟ್ಟ. ದಾನಿಷ್ ಎಂಬಾತ ಈ ಕೃತ್ಯದ ಆರೋಪಿಯಾಗಿದ್ದು, ಬಂದೂಕಿಗೆ ಗುಂಡು ತುಂಬುತ್ತಿದ್ದಾಗ, ಆಕಸ್ಮಿಕವಾಗಿ ಹಾರಿ ದುರ್ಘಟನೆ ಸಂಭವಿಸಿತು ಎಂದಿದ್ದಾನೆ.<br /> <br /> ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಅಲ್ಲಿನ ಮಧ್ಯ ಹಾಗೂ ಪಶ್ಚಿಮ ಭಾಗದಲ್ಲಿ ರಾಜಕೀಯ ವಿಜಯೋತ್ಸವದ ವೇಳೆ ಇಂತಹ ದುರ್ಘಟನೆಗಳು ಪದೇಪದೇ ಸಂಭವಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಖನೌ (ಐಎಎನ್ಎಸ್): ಪಟ್ಟಣ ಪಂಚಾಯಿತಿ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರದ ಹರ್ಷಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡಿಗೆ 10 ವರ್ಷದ ಬಾಲಕನೊಬ್ಬ ಬಲಿಯಾದ ಘಟನೆ ಬರೇಲಿಯಲ್ಲಿ ಸಂಭವಿಸಿದೆ.<br /> <br /> ಇದರೊಂದಿಗೆ, ಹರ್ಷಾಚರಣೆ ವೇಳೆ ಗುಂಡು ಹಾರಿಸುವುದನ್ನು ಅಧಿಕೃತವಾಗಿ ನಿಷೇಧಿಸಿರುವುದರ ನಡುವೆಯೂ, ನಾಲ್ಕು ತಿಂಗಳಲ್ಲಿ ಮೂವರು ಬಾಲಕರು ಸೇರಿ ಒಟ್ಟು ಆರು ಜನ ಉತ್ತರ ಪ್ರದೇಶದಲ್ಲಿ ಇದೇ ರೀತಿ ಸಾವಿಗೀಡಾದಂತೆ ಆಗಿದೆ.<br /> <br /> ಇಲ್ಲಿಗೆ 250 ಕಿ.ಮೀ. ದೂರದಲ್ಲಿರುವ ಬರೇಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ರಿಯಾಜ್ ಅನ್ಸಾರಿ ಎಂಬುವವರು ಆಯ್ಕೆಯಾಗಿದ್ದು, ಸೋಮವಾರ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿತ್ತು. <br /> <br /> ಆಗ ಇದ್ದಕ್ಕಿದ್ದಂತೆ ಅನ್ಸಾರಿ ಬೆಂಬಲಿಗನೊಬ್ಬ ಆನಂದಾತಿರೇಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದ. ಬಂದೂಕಿನಿಂದ ಹಾರಿದ ಕೆಲವು ಗುಂಡುಗಳ ಪೈಕಿ ಒಂದು ಗುಂಡು ಘಟನೆಯನ್ನು ನೋಡುತ್ತಾ ನಿಂತಿದ್ದ ಮೆಹ್ತಾಬ್ ತಲೆಯನ್ನು ಹೊಕ್ಕು ಆತ ಸ್ಥಳದಲ್ಲೇ ಮೃತಪಟ್ಟ. ದಾನಿಷ್ ಎಂಬಾತ ಈ ಕೃತ್ಯದ ಆರೋಪಿಯಾಗಿದ್ದು, ಬಂದೂಕಿಗೆ ಗುಂಡು ತುಂಬುತ್ತಿದ್ದಾಗ, ಆಕಸ್ಮಿಕವಾಗಿ ಹಾರಿ ದುರ್ಘಟನೆ ಸಂಭವಿಸಿತು ಎಂದಿದ್ದಾನೆ.<br /> <br /> ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಅಲ್ಲಿನ ಮಧ್ಯ ಹಾಗೂ ಪಶ್ಚಿಮ ಭಾಗದಲ್ಲಿ ರಾಜಕೀಯ ವಿಜಯೋತ್ಸವದ ವೇಳೆ ಇಂತಹ ದುರ್ಘಟನೆಗಳು ಪದೇಪದೇ ಸಂಭವಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>