<p>ತಿ.ನರಸೀಪುರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆಎತ್ತಿದೆ. ಅತಿಯಾದ ಬಿಸಿಲಿನಿಂದ ಅಂತರ್ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದರೆ, ಮತ್ತೊಂದೆಡೆ ಜಾತ್ರೆ, ಉತ್ಸವಗಳಲ್ಲಿ ಬೇಕಾಬಿಟ್ಟಿಯಾಗಿ ನೀರು ಪೋಲಾಗುತ್ತಿರುವುದೂ ಬವಣೆಗೆ ಕಾರಣವಾಗಿದೆ.<br /> <br /> ಸಾಮಾನ್ಯವಾಗಿ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಜಾತ್ರೆ, ಹಬ್ಬಗಳು ಬರುತ್ತವೆ. ಈ ಸಂದರ್ಭಗಳಲ್ಲಿ ಜನ ನೀರನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ಗ್ರಾಮಗಳ ಬಾವಿ, ಬೋರ್ವೆಲ್, ಕೆರೆ, ಕಟ್ಟೆಗಳಲ್ಲಿಯೂ ಈಗ ಜಲ ಪ್ರಮಾಣ ಕುಸಿದಿದೆ. ಆದರೆ, ತಾಲ್ಲೂಕಿನಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ಸ್ಥಿತಿ ಇಲ್ಲ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲೂ ಗ್ರಾಮೀಣರು ನೀರಿಗೆ ಪರಿತಪಿಸುವುದು ತಪ್ಪಿಲ್ಲ.<br /> <br /> ಪ್ರಸಕ್ತ ಸಾಲಿನ ವಿವಿಧ ಕುಡಿಯುವ ನೀರು ಯೋಜನೆಗಳಲ್ಲಿ ಬೆಟ್ಟಳ್ಳಿ. ಎಳವೇಗೌಡನಹುಂಡಿ., ಮಾರಗೌಡನಹಳ್ಳಿ, ಗರ್ಗೇಶ್ವರಿ, ಹನುಮನಾಳು, ಯಾಚೇನಹಳ್ಳಿ, ಇಂಡವಾಳು, ಆರ್.ಪಿ.ಹುಂಡಿ, ಯರಗನಹಳ್ಳಿ, ಡಣಾಯಕನಪುರ, ಮಾದಗಹಳ್ಳಿ ಸೇರಿದಂತೆ 13 ಕಡೆ ಓವರ್ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.<br /> <br /> ಕುಡಿಯುವ ನೀರಿನ ಪೂರೈಕೆ ತೊಂದರೆ ನಿವಾರಣೆ ಮಾಡಲು 79 ಕಡೆ ಪೈಪ್ಲೈನ್ ವಿಸ್ತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 65 ಕಡೆ ಕಾಮಗಾರಿ ಮುಗಿದಿದೆ. `ಕವರೇಜ್ 0 ಯಿಂದ 25 ಹಾಗೂ 25-50~ ಎಂಬ ಯೋಜನೆ ಯಡಿಯಲ್ಲಿ ಮುದ್ದುಬೀರನಹುಂಡಿ, ಎಡತೊರೆ, ಹಿರಿಯೂರು, ಮೂಗೂರು, ಚೌಹಳ್ಳಿ, ಹಿಟ್ಟುವಳ್ಳಿ, ನಿಲಸೋಗೆಗಳಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ.<br /> <br /> <strong>ಶುದ್ಧೀಕರಣಗೊಳ್ಳದ ನೀರು</strong>: ಪಟ್ಟಣ ಹಾಗೂ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕಪಿಲಾ ನದಿಯಿಂದ ಪೂರೈಕೆಯಾಗುತ್ತಿದೆ. ಈ ಪ್ರದೇಶದಲ್ಲಿ ವಿಪರೀತ ಮರಳು ತೆಗೆದಿದ್ದರಿಂದ ಗುಂಡಿಗಳು ಬಿದ್ದು ನೀರು ನಿಂತಿದೆ. ಇಲ್ಲಿ ತ್ಯಾಜ್ಯ ಸಂಗ್ರಹಣೆಯಾಗಿದೆ. ಹಲವು ವೇಳೆ ಕಲುಷಿತ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ನಾಗರಿಕರ ದೂರು.<br /> <br /> ಹುಳುಕನಹುಂಡಿ, ಕೆಂಡನಕೊಪ್ಪಲು, ವಾಟಾಳು, ಯಾಚೇನಹಳ್ಳಿ, ಎಸ್.ಮೇಗಡಹಳ್ಳಿ ಹಾಗೂ ಕನ್ನಹಳ್ಳಿ ಮೋಳೆಗಳಲ್ಲಿ ಕೊಳವೆಬಾವಿ ತೋಡಲು ತುರ್ತು ಕಾರ್ಯ (ಕಾರ್ಯಪಡೆ) ಯೋಜನೆಯಲ್ಲಿ 3.6 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ಕಳುಹಿಸಲಾಗಿದೆ.<br /> <br /> 15 ಲಕ್ಷ ರೂಪಾಯಿ ವೆಚ್ಚದ ಕಾರ್ಯಪಡೆ ಕಾಮಗಾರಿಯಲ್ಲಿ ಕನ್ನಹಳ್ಳಿ, ಕೊತ್ತೇಗಾಲ, ಕೆಂಡನಕೊಪ್ಪಲು, ವಾಟಾಳು, ಮಾರಗೊಂಡನಹಳ್ಳಿ, ವಡ್ಡರಕೊಪ್ಪಲು, ನಂಜಾಪುರ, ಚಂದಹಳ್ಳಿ, ಕಲಿಯೂರು ಹಾಗೂ ಹಳೇಕುಕ್ಕೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಎಸ್.ಆರ್. ಪುರುಷೋತ್ತಮ್ ತಿಳಿಸಿದ್ದಾರೆ.<br /> <br /> ತಾಲ್ಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೇವಾ ಕೇಂದ್ರ ಪ್ರಾರಂಭವಾಗಿದೆ. ಈ ಕೇಂದ್ರಕ್ಕೆ ದೂರು ನೀಡಿದ್ದಲ್ಲಿ ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಸೇವಾ ಕೇಂದ್ರ 24 ಗಂಟೆಗಳ ಸೇವೆಯಲ್ಲಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆಎತ್ತಿದೆ. ಅತಿಯಾದ ಬಿಸಿಲಿನಿಂದ ಅಂತರ್ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದರೆ, ಮತ್ತೊಂದೆಡೆ ಜಾತ್ರೆ, ಉತ್ಸವಗಳಲ್ಲಿ ಬೇಕಾಬಿಟ್ಟಿಯಾಗಿ ನೀರು ಪೋಲಾಗುತ್ತಿರುವುದೂ ಬವಣೆಗೆ ಕಾರಣವಾಗಿದೆ.<br /> <br /> ಸಾಮಾನ್ಯವಾಗಿ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಜಾತ್ರೆ, ಹಬ್ಬಗಳು ಬರುತ್ತವೆ. ಈ ಸಂದರ್ಭಗಳಲ್ಲಿ ಜನ ನೀರನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ಗ್ರಾಮಗಳ ಬಾವಿ, ಬೋರ್ವೆಲ್, ಕೆರೆ, ಕಟ್ಟೆಗಳಲ್ಲಿಯೂ ಈಗ ಜಲ ಪ್ರಮಾಣ ಕುಸಿದಿದೆ. ಆದರೆ, ತಾಲ್ಲೂಕಿನಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ಸ್ಥಿತಿ ಇಲ್ಲ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲೂ ಗ್ರಾಮೀಣರು ನೀರಿಗೆ ಪರಿತಪಿಸುವುದು ತಪ್ಪಿಲ್ಲ.<br /> <br /> ಪ್ರಸಕ್ತ ಸಾಲಿನ ವಿವಿಧ ಕುಡಿಯುವ ನೀರು ಯೋಜನೆಗಳಲ್ಲಿ ಬೆಟ್ಟಳ್ಳಿ. ಎಳವೇಗೌಡನಹುಂಡಿ., ಮಾರಗೌಡನಹಳ್ಳಿ, ಗರ್ಗೇಶ್ವರಿ, ಹನುಮನಾಳು, ಯಾಚೇನಹಳ್ಳಿ, ಇಂಡವಾಳು, ಆರ್.ಪಿ.ಹುಂಡಿ, ಯರಗನಹಳ್ಳಿ, ಡಣಾಯಕನಪುರ, ಮಾದಗಹಳ್ಳಿ ಸೇರಿದಂತೆ 13 ಕಡೆ ಓವರ್ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.<br /> <br /> ಕುಡಿಯುವ ನೀರಿನ ಪೂರೈಕೆ ತೊಂದರೆ ನಿವಾರಣೆ ಮಾಡಲು 79 ಕಡೆ ಪೈಪ್ಲೈನ್ ವಿಸ್ತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 65 ಕಡೆ ಕಾಮಗಾರಿ ಮುಗಿದಿದೆ. `ಕವರೇಜ್ 0 ಯಿಂದ 25 ಹಾಗೂ 25-50~ ಎಂಬ ಯೋಜನೆ ಯಡಿಯಲ್ಲಿ ಮುದ್ದುಬೀರನಹುಂಡಿ, ಎಡತೊರೆ, ಹಿರಿಯೂರು, ಮೂಗೂರು, ಚೌಹಳ್ಳಿ, ಹಿಟ್ಟುವಳ್ಳಿ, ನಿಲಸೋಗೆಗಳಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ.<br /> <br /> <strong>ಶುದ್ಧೀಕರಣಗೊಳ್ಳದ ನೀರು</strong>: ಪಟ್ಟಣ ಹಾಗೂ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕಪಿಲಾ ನದಿಯಿಂದ ಪೂರೈಕೆಯಾಗುತ್ತಿದೆ. ಈ ಪ್ರದೇಶದಲ್ಲಿ ವಿಪರೀತ ಮರಳು ತೆಗೆದಿದ್ದರಿಂದ ಗುಂಡಿಗಳು ಬಿದ್ದು ನೀರು ನಿಂತಿದೆ. ಇಲ್ಲಿ ತ್ಯಾಜ್ಯ ಸಂಗ್ರಹಣೆಯಾಗಿದೆ. ಹಲವು ವೇಳೆ ಕಲುಷಿತ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ನಾಗರಿಕರ ದೂರು.<br /> <br /> ಹುಳುಕನಹುಂಡಿ, ಕೆಂಡನಕೊಪ್ಪಲು, ವಾಟಾಳು, ಯಾಚೇನಹಳ್ಳಿ, ಎಸ್.ಮೇಗಡಹಳ್ಳಿ ಹಾಗೂ ಕನ್ನಹಳ್ಳಿ ಮೋಳೆಗಳಲ್ಲಿ ಕೊಳವೆಬಾವಿ ತೋಡಲು ತುರ್ತು ಕಾರ್ಯ (ಕಾರ್ಯಪಡೆ) ಯೋಜನೆಯಲ್ಲಿ 3.6 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ಕಳುಹಿಸಲಾಗಿದೆ.<br /> <br /> 15 ಲಕ್ಷ ರೂಪಾಯಿ ವೆಚ್ಚದ ಕಾರ್ಯಪಡೆ ಕಾಮಗಾರಿಯಲ್ಲಿ ಕನ್ನಹಳ್ಳಿ, ಕೊತ್ತೇಗಾಲ, ಕೆಂಡನಕೊಪ್ಪಲು, ವಾಟಾಳು, ಮಾರಗೊಂಡನಹಳ್ಳಿ, ವಡ್ಡರಕೊಪ್ಪಲು, ನಂಜಾಪುರ, ಚಂದಹಳ್ಳಿ, ಕಲಿಯೂರು ಹಾಗೂ ಹಳೇಕುಕ್ಕೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಎಸ್.ಆರ್. ಪುರುಷೋತ್ತಮ್ ತಿಳಿಸಿದ್ದಾರೆ.<br /> <br /> ತಾಲ್ಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೇವಾ ಕೇಂದ್ರ ಪ್ರಾರಂಭವಾಗಿದೆ. ಈ ಕೇಂದ್ರಕ್ಕೆ ದೂರು ನೀಡಿದ್ದಲ್ಲಿ ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಸೇವಾ ಕೇಂದ್ರ 24 ಗಂಟೆಗಳ ಸೇವೆಯಲ್ಲಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>