<p><strong>ಗದಗ ಜಿಲ್ಲೆ/ ವಿಶೇಷ ವರದಿ</strong><br /> <strong>ಗದಗ: </strong>ಮಧ್ಯ ಕರ್ನಾಟಕ ಭಾಗದ ಪ್ರಮುಖ ಹವಾಮಾನ ಕೇಂದ್ರವಾಗಿ ಹೊರಹೊಮ್ಮಲು ಗದಗ ಸಿದ್ಧವಾಗಿದೆ. ಇಲ್ಲಿನ ಸಂಭಾಪುರ ರಸ್ತೆಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಹವಾಮಾನ ಕೇಂದ್ರದ ಆಧುನೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.<br /> <br /> ಗದಗ ಜಿಲ್ಲೆಯಲ್ಲಿನ ಹವಾಮಾನ ಕೇಂದ್ರವನ್ನು ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವನ್ನಾಗಿ ಮಾಡಲು ಭಾರತೀಯ ಹವಾಮಾನ ಇಲಾಖೆ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ನಿರ್ಮಿಸಲಾಗಿದ್ದು. ಆರೋಹಣ ಬಲೂನ್ ವೀಕ್ಷಣಾಲಯ (ಪೈಲಟ್ ಬಲೂನ್ ಅಬ್ಸರ್ವೇಶನ್) ಸಹ ಕಾರ್ಯವನ್ನು ನಿರ್ವಹಿಸುತ್ತಿದೆ. <br /> <br /> ಪ್ರಸ್ತುತ ಸ್ವಯಂಚಾಲಿತ ಮಾಪನ ಕೇಂದ್ರಕ್ಕೆ ಬೇಕಾದ `ಫೀಲ್ಡ್ ಮೆಂಟೇನನ್ಸ್ ಯೂನಿಟ್~ (ಎಫ್ಎಂಯು) ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನಷ್ಟು ಯೋಜನೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.<br /> <br /> ಭಾರತೀಯ ಹವಾಮಾನ ಇಲಾಖೆಯು 2012ರಲ್ಲಿ ಆಧುನೀಕರಣ ಯೋಜನೆ ಅನುಷ್ಠಾನಗೊಳಿಸುತ್ತಿದೆ. ದೇಶದಲ್ಲಿನ ಎಲ್ಲ ಹವಾಮಾನ ಕೇಂದ್ರಗಳನ್ನು ಒಂದೇ ನೆಟ್ವರ್ಕ್ನ ಅಡಿಯಲ್ಲಿ ತರುವುದು ಈ ಯೋಜನೆಯ ಉದ್ದೇಶ. ಈ ಅಂಗವಾಗಿ ಗದುಗಿನ ಕೇಂದ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈ ಗೆತ್ತಿಕೊಳ್ಳಲಾಗುತ್ತದೆ. <br /> <br /> <strong>ಎರಡನೇ ಹಳೆಯ ಕೇಂದ್ರ</strong>: ಬೆಂಗಳೂರು ನಂತರ ರಾಜ್ಯದಲ್ಲಿ ಸ್ಥಾಪನೆಯಾದ ಎರಡನೇ ಹಳೆಯ ಕೇಂದ್ರ ಎನ್ನುವ ಕೀರ್ತಿ ಗದಗ ಹವಾಮಾನ ಕೇಂದ್ರದ್ದು. ಬ್ರಿಟಿಷರ ಕಾಲದಲ್ಲಿಯೇ ಇಲ್ಲಿ ಕೇಂದ್ರ ಕಾರ್ಯಾರಂಭ ಮಾಡಿದೆ ಎನ್ನಲಾಗಿದೆ. <br /> <br /> ರಾಜ್ಯದ ಹವಾಮಾನ ಕೇಂದ್ರಗಳ ಪೈಕಿ ಬೆಂಗಳೂರು ದಕ್ಷಿಣದ ಕೇಂದ್ರವಾಗಿರುವಂತೆ ಗದಗ ಉತ್ತರ ಹಾಗೂ ಮಧ್ಯ ಕರ್ನಾಟಕದ ಕೇಂದ್ರವಾಗುತ್ತಿದೆ. ಈ ಜಿಲ್ಲೆ ಸಮುದ್ರ ಮಟ್ಟಕ್ಕಿಂತ 659.8 ಮೀಟರ್ ಎತ್ತರದಲ್ಲಿದ್ದು, ಚೆನ್ನೈ ಮತ್ತು ಮುಂಬೈ ವಾಯುಮಾರ್ಗದ ನಡುವಿನ ಮಧ್ಯಭಾಗದಲ್ಲಿ ಬರುತ್ತದೆ. <br /> <br /> ಗದಗ ಹಮಾಮಾನ ಕೇಂದ್ರ ವ್ಯಾಪ್ತಿಗೆ ಸದ್ಯ ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳು ಬರುತ್ತವೆ. ಕೊಪ್ಪಳ, ರಾಯಚೂರು ಮೊದಲಾದ ಜಿಲ್ಲೆಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. <br /> <br /> ಕಳೆದ ಜನವರಿ 19ರಿಂದ ಇಲ್ಲಿ ಸ್ವಯಂಚಾಲಿತ ಹವಾಮಾನ ಮಾಪನ ಕೇಂದ್ರ ಕಾರ್ಯಾರಂಭ ಮಾಡಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಈ ರೀತಿಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. <br /> <br /> ಮಾನವ ಸಿಬ್ಬಂದಿಯ ಅಗತ್ಯವಿಲ್ಲದ ಈ ಕೇಂದ್ರಗಳು ಪ್ರತಿ ಗಂಟೆಗೊಮ್ಮೆ ಇಲ್ಲಿನ ಉಷ್ಣಾಂಶ, ಗಾಳಿಯ ದಿಕ್ಕು, ವೇಗ, ಒತ್ತಡ, ಮಳೆ ಪ್ರಮಾಣ ಇತ್ಯಾದಿಗಳನ್ನು ಸ್ವತಃ ದಾಖಲಿಸಿ ಪುಣೆಯಲ್ಲಿನ ಕೇಂದ್ರಕ್ಕೆ ವರದಿ ನೀಡುತ್ತವೆ. ಈ ವರದಿಯನ್ನು ಆಧರಿಸಿ ಹವಾಮಾನ ವಿಶ್ಲೇಷಿಸಲಾಗುತ್ತಿದೆ. <br /> <br /> ಆರೋಹಣ ಬಲೂನ್ ವೀಕ್ಷಣಾಲಯ ಕೂಡ ಇಲ್ಲಿದ್ದು, ಬಲೂನ್ ಹಾರಾಟದ ಮೂಲಕ ಮೇಲುಗಾಳಿಯ ವೇಗ, ದಿಕ್ಕು, ಅರಿಯಲಾಗುತ್ತಿದೆ. ವಿಮಾನಯಾನಕ್ಕೆ ಈ ಮಾಹಿತಿಗಳಿಂದ ಹೆಚ್ಚು ಅನುಕೂಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಗದಗದಲ್ಲಿ ಮಾತ್ರವೇ ಈ ವ್ಯವಸ್ಥೆ ಇದೆ ಎನ್ನುತ್ತಾರೆ ಗದಗದ ಹಿರಿಯ ವೀಕ್ಷಣಾಧಿಕಾರಿ ನಟರಾಜ ಸವಡಿ ಹಾಗೂ ಹವಾಮಾನ ಸಹಾಯಕ ರಾಜು ರೋಖಡೆ, <br /> <br /> ಸದ್ಯ ಇಲ್ಲಿನ ಕೃಷಿ ಮಾರುಕಟ್ಟೆ ಒಳಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಇಲಾಖೆಯು ಕಾಮಗಾರಿ ಮುಕ್ತಾಯದ ಬಳಿಕ ಹೊಸ ಜಾಗಕ್ಕೆ ಸ್ಥಳಾಂತರಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ ಜಿಲ್ಲೆ/ ವಿಶೇಷ ವರದಿ</strong><br /> <strong>ಗದಗ: </strong>ಮಧ್ಯ ಕರ್ನಾಟಕ ಭಾಗದ ಪ್ರಮುಖ ಹವಾಮಾನ ಕೇಂದ್ರವಾಗಿ ಹೊರಹೊಮ್ಮಲು ಗದಗ ಸಿದ್ಧವಾಗಿದೆ. ಇಲ್ಲಿನ ಸಂಭಾಪುರ ರಸ್ತೆಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಹವಾಮಾನ ಕೇಂದ್ರದ ಆಧುನೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.<br /> <br /> ಗದಗ ಜಿಲ್ಲೆಯಲ್ಲಿನ ಹವಾಮಾನ ಕೇಂದ್ರವನ್ನು ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವನ್ನಾಗಿ ಮಾಡಲು ಭಾರತೀಯ ಹವಾಮಾನ ಇಲಾಖೆ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ನಿರ್ಮಿಸಲಾಗಿದ್ದು. ಆರೋಹಣ ಬಲೂನ್ ವೀಕ್ಷಣಾಲಯ (ಪೈಲಟ್ ಬಲೂನ್ ಅಬ್ಸರ್ವೇಶನ್) ಸಹ ಕಾರ್ಯವನ್ನು ನಿರ್ವಹಿಸುತ್ತಿದೆ. <br /> <br /> ಪ್ರಸ್ತುತ ಸ್ವಯಂಚಾಲಿತ ಮಾಪನ ಕೇಂದ್ರಕ್ಕೆ ಬೇಕಾದ `ಫೀಲ್ಡ್ ಮೆಂಟೇನನ್ಸ್ ಯೂನಿಟ್~ (ಎಫ್ಎಂಯು) ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನಷ್ಟು ಯೋಜನೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.<br /> <br /> ಭಾರತೀಯ ಹವಾಮಾನ ಇಲಾಖೆಯು 2012ರಲ್ಲಿ ಆಧುನೀಕರಣ ಯೋಜನೆ ಅನುಷ್ಠಾನಗೊಳಿಸುತ್ತಿದೆ. ದೇಶದಲ್ಲಿನ ಎಲ್ಲ ಹವಾಮಾನ ಕೇಂದ್ರಗಳನ್ನು ಒಂದೇ ನೆಟ್ವರ್ಕ್ನ ಅಡಿಯಲ್ಲಿ ತರುವುದು ಈ ಯೋಜನೆಯ ಉದ್ದೇಶ. ಈ ಅಂಗವಾಗಿ ಗದುಗಿನ ಕೇಂದ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈ ಗೆತ್ತಿಕೊಳ್ಳಲಾಗುತ್ತದೆ. <br /> <br /> <strong>ಎರಡನೇ ಹಳೆಯ ಕೇಂದ್ರ</strong>: ಬೆಂಗಳೂರು ನಂತರ ರಾಜ್ಯದಲ್ಲಿ ಸ್ಥಾಪನೆಯಾದ ಎರಡನೇ ಹಳೆಯ ಕೇಂದ್ರ ಎನ್ನುವ ಕೀರ್ತಿ ಗದಗ ಹವಾಮಾನ ಕೇಂದ್ರದ್ದು. ಬ್ರಿಟಿಷರ ಕಾಲದಲ್ಲಿಯೇ ಇಲ್ಲಿ ಕೇಂದ್ರ ಕಾರ್ಯಾರಂಭ ಮಾಡಿದೆ ಎನ್ನಲಾಗಿದೆ. <br /> <br /> ರಾಜ್ಯದ ಹವಾಮಾನ ಕೇಂದ್ರಗಳ ಪೈಕಿ ಬೆಂಗಳೂರು ದಕ್ಷಿಣದ ಕೇಂದ್ರವಾಗಿರುವಂತೆ ಗದಗ ಉತ್ತರ ಹಾಗೂ ಮಧ್ಯ ಕರ್ನಾಟಕದ ಕೇಂದ್ರವಾಗುತ್ತಿದೆ. ಈ ಜಿಲ್ಲೆ ಸಮುದ್ರ ಮಟ್ಟಕ್ಕಿಂತ 659.8 ಮೀಟರ್ ಎತ್ತರದಲ್ಲಿದ್ದು, ಚೆನ್ನೈ ಮತ್ತು ಮುಂಬೈ ವಾಯುಮಾರ್ಗದ ನಡುವಿನ ಮಧ್ಯಭಾಗದಲ್ಲಿ ಬರುತ್ತದೆ. <br /> <br /> ಗದಗ ಹಮಾಮಾನ ಕೇಂದ್ರ ವ್ಯಾಪ್ತಿಗೆ ಸದ್ಯ ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳು ಬರುತ್ತವೆ. ಕೊಪ್ಪಳ, ರಾಯಚೂರು ಮೊದಲಾದ ಜಿಲ್ಲೆಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. <br /> <br /> ಕಳೆದ ಜನವರಿ 19ರಿಂದ ಇಲ್ಲಿ ಸ್ವಯಂಚಾಲಿತ ಹವಾಮಾನ ಮಾಪನ ಕೇಂದ್ರ ಕಾರ್ಯಾರಂಭ ಮಾಡಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಈ ರೀತಿಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. <br /> <br /> ಮಾನವ ಸಿಬ್ಬಂದಿಯ ಅಗತ್ಯವಿಲ್ಲದ ಈ ಕೇಂದ್ರಗಳು ಪ್ರತಿ ಗಂಟೆಗೊಮ್ಮೆ ಇಲ್ಲಿನ ಉಷ್ಣಾಂಶ, ಗಾಳಿಯ ದಿಕ್ಕು, ವೇಗ, ಒತ್ತಡ, ಮಳೆ ಪ್ರಮಾಣ ಇತ್ಯಾದಿಗಳನ್ನು ಸ್ವತಃ ದಾಖಲಿಸಿ ಪುಣೆಯಲ್ಲಿನ ಕೇಂದ್ರಕ್ಕೆ ವರದಿ ನೀಡುತ್ತವೆ. ಈ ವರದಿಯನ್ನು ಆಧರಿಸಿ ಹವಾಮಾನ ವಿಶ್ಲೇಷಿಸಲಾಗುತ್ತಿದೆ. <br /> <br /> ಆರೋಹಣ ಬಲೂನ್ ವೀಕ್ಷಣಾಲಯ ಕೂಡ ಇಲ್ಲಿದ್ದು, ಬಲೂನ್ ಹಾರಾಟದ ಮೂಲಕ ಮೇಲುಗಾಳಿಯ ವೇಗ, ದಿಕ್ಕು, ಅರಿಯಲಾಗುತ್ತಿದೆ. ವಿಮಾನಯಾನಕ್ಕೆ ಈ ಮಾಹಿತಿಗಳಿಂದ ಹೆಚ್ಚು ಅನುಕೂಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಗದಗದಲ್ಲಿ ಮಾತ್ರವೇ ಈ ವ್ಯವಸ್ಥೆ ಇದೆ ಎನ್ನುತ್ತಾರೆ ಗದಗದ ಹಿರಿಯ ವೀಕ್ಷಣಾಧಿಕಾರಿ ನಟರಾಜ ಸವಡಿ ಹಾಗೂ ಹವಾಮಾನ ಸಹಾಯಕ ರಾಜು ರೋಖಡೆ, <br /> <br /> ಸದ್ಯ ಇಲ್ಲಿನ ಕೃಷಿ ಮಾರುಕಟ್ಟೆ ಒಳಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಇಲಾಖೆಯು ಕಾಮಗಾರಿ ಮುಕ್ತಾಯದ ಬಳಿಕ ಹೊಸ ಜಾಗಕ್ಕೆ ಸ್ಥಳಾಂತರಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>