<p>ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಆರ್ಡಬ್ಲ್ಯುಎಫ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್ಎಚ್ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.<br /> <br /> ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್ಡಬ್ಲ್ಯುಎಫ್ ತಂಡ 5-2 ಗೋಲುಗಳಿಂದ ಆರ್ಬಿಐ ತಂಡವನ್ನು ಮಣಿಸಿತು. ಮೊಹಮ್ಮದ್ ಇಮ್ರಾನ್ (6ನೇ ನಿಮಿಷ), ಚೇತನ್ ಕೃಷ್ಣ (11), ಜಿತಿನ್ ಕಾಳಪ್ಪ (26), ಜಯರಾಜ್ (33) ಮತ್ತು ಪ್ರದೀಪ್ (50) ಅವರು ಆರ್ಡಬ್ಲ್ಯುಎಫ್ ಪರ ಗೋಲು ಗಳಿಸಿದರು.<br /> <br /> ಫ್ರೆಡ್ರಿಕ್ ದಾಸ್ (29) ಮತ್ತು ಗೀಲಾನಿ (31) ಚೆಂಡನ್ನು ಗುರಿಸೇರಿಸಿ ಆರ್ಬಿಐ ತಂಡದ ಸೋಲಿನ ಅಂತರ ತಗ್ಗಿಸಿದರು. <br /> <br /> ಬಿಎಸ್ಎನ್ಎಲ್ ಮತ್ತು ಎಂಇಜಿ ಬಾಯ್ಸ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು. ಮೊಹಮ್ಮದ್ ನಜೀಮ್ ಬೆಪಾರಿ 10ನೇ ನಿಮಿಷದಲ್ಲಿ ಬಿಎಸ್ಎನ್ಎಲ್ ತಂಡಕ್ಕೆ ಮೇಲುಗೈ ತಂದಿತ್ತರು.<br /> <br /> ಮರುಹೋರಾಟ ನಡೆಸಿದ ಎಂಇಜಿ ಬಾಯ್ಸ 18ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿತು. ಎಂ.ಎಸ್. ಬೋಪಣ್ಣ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಎರಡನೇ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.<br /> <br /> ಗುರುವಾರ ನಡೆಯುವ ಪಂದ್ಯದಲ್ಲಿ ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಎಂಇಜಿ ಬಾಯ್ಸ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಆರ್ಡಬ್ಲ್ಯುಎಫ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್ಎಚ್ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.<br /> <br /> ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್ಡಬ್ಲ್ಯುಎಫ್ ತಂಡ 5-2 ಗೋಲುಗಳಿಂದ ಆರ್ಬಿಐ ತಂಡವನ್ನು ಮಣಿಸಿತು. ಮೊಹಮ್ಮದ್ ಇಮ್ರಾನ್ (6ನೇ ನಿಮಿಷ), ಚೇತನ್ ಕೃಷ್ಣ (11), ಜಿತಿನ್ ಕಾಳಪ್ಪ (26), ಜಯರಾಜ್ (33) ಮತ್ತು ಪ್ರದೀಪ್ (50) ಅವರು ಆರ್ಡಬ್ಲ್ಯುಎಫ್ ಪರ ಗೋಲು ಗಳಿಸಿದರು.<br /> <br /> ಫ್ರೆಡ್ರಿಕ್ ದಾಸ್ (29) ಮತ್ತು ಗೀಲಾನಿ (31) ಚೆಂಡನ್ನು ಗುರಿಸೇರಿಸಿ ಆರ್ಬಿಐ ತಂಡದ ಸೋಲಿನ ಅಂತರ ತಗ್ಗಿಸಿದರು. <br /> <br /> ಬಿಎಸ್ಎನ್ಎಲ್ ಮತ್ತು ಎಂಇಜಿ ಬಾಯ್ಸ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು. ಮೊಹಮ್ಮದ್ ನಜೀಮ್ ಬೆಪಾರಿ 10ನೇ ನಿಮಿಷದಲ್ಲಿ ಬಿಎಸ್ಎನ್ಎಲ್ ತಂಡಕ್ಕೆ ಮೇಲುಗೈ ತಂದಿತ್ತರು.<br /> <br /> ಮರುಹೋರಾಟ ನಡೆಸಿದ ಎಂಇಜಿ ಬಾಯ್ಸ 18ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿತು. ಎಂ.ಎಸ್. ಬೋಪಣ್ಣ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಎರಡನೇ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.<br /> <br /> ಗುರುವಾರ ನಡೆಯುವ ಪಂದ್ಯದಲ್ಲಿ ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಎಂಇಜಿ ಬಾಯ್ಸ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>