<p><strong>ಶಿಡ್ಲಘಟ್ಟ: </strong>ರೇಷ್ಮೆ ಹುಳುಗಳಿಗೆ ರೋಗಗಳು ಬರದಂತೆ ಮತ್ತು ಹರಡದಂತೆ ತಡೆಯಲು ರೇಷ್ಮೆ ಇಲಾಖೆ ವತಿಯಿಂದ ಉಚಿತ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದ್ದು, ರೇಷ್ಮೆ ಕೃಷಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ವಿ.ಚಂದ್ರು ತಿಳಿಸಿದರು.<br /> <br /> ಜಿಲ್ಲಾಧಿಕಾರಿಯ ಪ್ರಕೃತಿ ವಿಕೋಪ ನಿಧಿಯಡಿ ಬಿಡುಗಡೆಯಾದ ಅನುದಾನದ ನೆರವಿನಿಂದ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದೆ. ರೇಷ್ಮೆ ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿದ ಅವರು, `ರೇಷ್ಮೆ ಬೆಳೆ ಸಫಲತೆಗೆ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ, ತಳಿ, ವಾತಾವರಣ ಹಾಗೂ ರೋಗ ರಹಿತ ಪರಿಸರದ ಬಗ್ಗೆ ಗಮನ ಹರಿಸಬೇಕು. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಉತ್ತಮ ಬೆಳೆ ಪಡೆಯುವುದು ಕಷ್ಟ. ಆದರೂ ಕೆಲವಾರು ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ತಿಳಿಸಿದರು.<br /> <br /> ಬೇಸಿಗೆಯಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮ: ಹೆಚ್ಚಿನ ಉಷ್ಣಾಂಶದಿಂದಾಗಿ ನೀರು ಬೇಗ ಆವಿಯಾಗುವುದರಿಂದ ಅವಶ್ಯಕತೆ ಅನುಗುಣವಾಗಿ ಹಿಪ್ಪೆ ನೇರಳೆ ತೋಟಕ್ಕೆ ನೀರುಣಿಸಬೇಕು. ನೀರು ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು.<br /> <br /> ಸೊಪ್ಪು ಬಿಡಿಸಿ ಶೇಖರಿಸಿ: ಇಡೀ ದಿನಕ್ಕೆ ಅಗತ್ಯವಾದ ಸೊಪ್ಪನ್ನು ಒಂದೇ ಬಾರಿ ತಂದು ಶೇಖರಿಸಿಡಬಾರದು. ತಂಪಾದ ವೇಳೆಯಲ್ಲಿ ಸೊಪ್ಪು ಬಿಡಿಸಿ, ಒದ್ದೆ ಮಾಡಿದ ಚೀಲದಲ್ಲಿ ಸಡಿಲವಾಗಿ ತುಂಬಿ ಸಾಗಿಸಬೇಕು. ಆಗಾಗ ನೀರು ಚಿಮುಕಿಸಿ ತಾಜಾತನ ಉಳಿಸಿಕೊಳ್ಳಬೇಕು. ಕೋಣೆಯಲ್ಲಿ ಗಾಳಿ ಸಂಚಾರಕ್ಕೆ ಗವಾಕ್ಷಿ ಇರಬೇಕು.<br /> <br /> ಹುಳು ಸಾಕಣೆ ಮನೆ: ಹುಳು ಸಾಕಣೆ ಪ್ರತ್ಯೇಕವಾದ ಮನೆಯಿರಬೇಕು. ಗಾಳಿ ಬೆಳಕು ಸರಾಗವಾಗಿರಲು ಎದುರು ಬದುರು ಕಿಟಕಿಗಳಿರಬೇಕು. ಮನೆ ಮೇಲ್ಬಾಗವನ್ನು ತೆಂಗಿನ ಗರಿಗಳಿಂದ ಅಥವಾ ಹುಲ್ಲಿನಿಂದ ಮುಚ್ಚುವುದರಿಂದ, ಚಪ್ಪರ ನಿರ್ಮಿಸುವುದರಿಂದ ಮತ್ತು ಸುತ್ತಲೂ ಮರಗಳನ್ನು ಬೆಳೆಸುವುದರಿಂದ ಉಷ್ಣಾಂಶ ತಗ್ಗಿಸಬಹುದು.<br /> <br /> ನಿಯಂತ್ರಣ: ಬೇಸಿಗೆಯಲ್ಲಿ ಹಾಲು ಮತ್ತು ಸಪ್ಪೆರೋಗದ ಹಾವಳಿ ಹೆಚ್ಚು. ಕ್ರಮಬದ್ಧ ಸೋಂಕು ನಿವಾರಣೆ, ಮೊಟ್ಟೆಗಳ ಪರಿಪಾಲನೆ, ಗುಣಮಟ್ಟದ ಸೊಪ್ಪು ನೀಡುವಿಕೆ, ವೈಜ್ಞಾನಿಕವಾಗಿ ಹುಳುಗಳ ಸಾಕಣೆ ಮತ್ತು ಅಗತ್ಯ ಉಷ್ಣಾಂಶದಿಂದ ರೋಗ ನಿಯಂತ್ರಿಸಬಹುದು.<br /> <br /> ಸೋಂಕು ನಿವಾರಣೆ: ಸಾಕಣೆ ಆರಂಭಿಸುವುದಕ್ಕಿಂತ ಮೊದಲು ಸೋಂಕು ನಿವಾರಣೆ ಪರಿಣಾಮಕಾರಿ ಮಾಡುವುದರಿಂದ ರೋಗಾಣು ನಿಯಂತ್ರಿಸಬಹುದು. ಇದಕ್ಕೆ ಬ್ಲೀಚಿಂಗ್ ಪೌಡರ್, ಅಸ್ತ್ರ, ಡೆಕಾಲ್ ಮುಂತಾದ ಸೋಂಕು ನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು.<br /> <br /> ಉಷ್ಣಾಂಶದಲ್ಲಿ ರೋಗಾಣು ವೃದ್ಧಿ ಬಹು ಬೇಗ ಆಗುತ್ತದೆ. ವಾತಾವರಣದಲ್ಲಿ ನೀರಿನಾಂಶದ ಕೊರತೆಯಿಂದ ಸೊಪ್ಪಿನ ಗುಣಮಟ್ಟ ಕುಸಿಯುತ್ತದೆ. ಇದರಿಂದ ರೇಷ್ಮೆ ಹುಳುಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ರೋಗಕ್ಕೆ ಬೆಳೆ ತುತ್ತಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ರೈತರು ಉತ್ತಮ ಬೆಳೆಯನ್ನು ಬೆಳೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ರೇಷ್ಮೆ ಹುಳುಗಳಿಗೆ ರೋಗಗಳು ಬರದಂತೆ ಮತ್ತು ಹರಡದಂತೆ ತಡೆಯಲು ರೇಷ್ಮೆ ಇಲಾಖೆ ವತಿಯಿಂದ ಉಚಿತ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದ್ದು, ರೇಷ್ಮೆ ಕೃಷಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ವಿ.ಚಂದ್ರು ತಿಳಿಸಿದರು.<br /> <br /> ಜಿಲ್ಲಾಧಿಕಾರಿಯ ಪ್ರಕೃತಿ ವಿಕೋಪ ನಿಧಿಯಡಿ ಬಿಡುಗಡೆಯಾದ ಅನುದಾನದ ನೆರವಿನಿಂದ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದೆ. ರೇಷ್ಮೆ ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿದ ಅವರು, `ರೇಷ್ಮೆ ಬೆಳೆ ಸಫಲತೆಗೆ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ, ತಳಿ, ವಾತಾವರಣ ಹಾಗೂ ರೋಗ ರಹಿತ ಪರಿಸರದ ಬಗ್ಗೆ ಗಮನ ಹರಿಸಬೇಕು. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಉತ್ತಮ ಬೆಳೆ ಪಡೆಯುವುದು ಕಷ್ಟ. ಆದರೂ ಕೆಲವಾರು ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ತಿಳಿಸಿದರು.<br /> <br /> ಬೇಸಿಗೆಯಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮ: ಹೆಚ್ಚಿನ ಉಷ್ಣಾಂಶದಿಂದಾಗಿ ನೀರು ಬೇಗ ಆವಿಯಾಗುವುದರಿಂದ ಅವಶ್ಯಕತೆ ಅನುಗುಣವಾಗಿ ಹಿಪ್ಪೆ ನೇರಳೆ ತೋಟಕ್ಕೆ ನೀರುಣಿಸಬೇಕು. ನೀರು ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು.<br /> <br /> ಸೊಪ್ಪು ಬಿಡಿಸಿ ಶೇಖರಿಸಿ: ಇಡೀ ದಿನಕ್ಕೆ ಅಗತ್ಯವಾದ ಸೊಪ್ಪನ್ನು ಒಂದೇ ಬಾರಿ ತಂದು ಶೇಖರಿಸಿಡಬಾರದು. ತಂಪಾದ ವೇಳೆಯಲ್ಲಿ ಸೊಪ್ಪು ಬಿಡಿಸಿ, ಒದ್ದೆ ಮಾಡಿದ ಚೀಲದಲ್ಲಿ ಸಡಿಲವಾಗಿ ತುಂಬಿ ಸಾಗಿಸಬೇಕು. ಆಗಾಗ ನೀರು ಚಿಮುಕಿಸಿ ತಾಜಾತನ ಉಳಿಸಿಕೊಳ್ಳಬೇಕು. ಕೋಣೆಯಲ್ಲಿ ಗಾಳಿ ಸಂಚಾರಕ್ಕೆ ಗವಾಕ್ಷಿ ಇರಬೇಕು.<br /> <br /> ಹುಳು ಸಾಕಣೆ ಮನೆ: ಹುಳು ಸಾಕಣೆ ಪ್ರತ್ಯೇಕವಾದ ಮನೆಯಿರಬೇಕು. ಗಾಳಿ ಬೆಳಕು ಸರಾಗವಾಗಿರಲು ಎದುರು ಬದುರು ಕಿಟಕಿಗಳಿರಬೇಕು. ಮನೆ ಮೇಲ್ಬಾಗವನ್ನು ತೆಂಗಿನ ಗರಿಗಳಿಂದ ಅಥವಾ ಹುಲ್ಲಿನಿಂದ ಮುಚ್ಚುವುದರಿಂದ, ಚಪ್ಪರ ನಿರ್ಮಿಸುವುದರಿಂದ ಮತ್ತು ಸುತ್ತಲೂ ಮರಗಳನ್ನು ಬೆಳೆಸುವುದರಿಂದ ಉಷ್ಣಾಂಶ ತಗ್ಗಿಸಬಹುದು.<br /> <br /> ನಿಯಂತ್ರಣ: ಬೇಸಿಗೆಯಲ್ಲಿ ಹಾಲು ಮತ್ತು ಸಪ್ಪೆರೋಗದ ಹಾವಳಿ ಹೆಚ್ಚು. ಕ್ರಮಬದ್ಧ ಸೋಂಕು ನಿವಾರಣೆ, ಮೊಟ್ಟೆಗಳ ಪರಿಪಾಲನೆ, ಗುಣಮಟ್ಟದ ಸೊಪ್ಪು ನೀಡುವಿಕೆ, ವೈಜ್ಞಾನಿಕವಾಗಿ ಹುಳುಗಳ ಸಾಕಣೆ ಮತ್ತು ಅಗತ್ಯ ಉಷ್ಣಾಂಶದಿಂದ ರೋಗ ನಿಯಂತ್ರಿಸಬಹುದು.<br /> <br /> ಸೋಂಕು ನಿವಾರಣೆ: ಸಾಕಣೆ ಆರಂಭಿಸುವುದಕ್ಕಿಂತ ಮೊದಲು ಸೋಂಕು ನಿವಾರಣೆ ಪರಿಣಾಮಕಾರಿ ಮಾಡುವುದರಿಂದ ರೋಗಾಣು ನಿಯಂತ್ರಿಸಬಹುದು. ಇದಕ್ಕೆ ಬ್ಲೀಚಿಂಗ್ ಪೌಡರ್, ಅಸ್ತ್ರ, ಡೆಕಾಲ್ ಮುಂತಾದ ಸೋಂಕು ನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು.<br /> <br /> ಉಷ್ಣಾಂಶದಲ್ಲಿ ರೋಗಾಣು ವೃದ್ಧಿ ಬಹು ಬೇಗ ಆಗುತ್ತದೆ. ವಾತಾವರಣದಲ್ಲಿ ನೀರಿನಾಂಶದ ಕೊರತೆಯಿಂದ ಸೊಪ್ಪಿನ ಗುಣಮಟ್ಟ ಕುಸಿಯುತ್ತದೆ. ಇದರಿಂದ ರೇಷ್ಮೆ ಹುಳುಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ರೋಗಕ್ಕೆ ಬೆಳೆ ತುತ್ತಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ರೈತರು ಉತ್ತಮ ಬೆಳೆಯನ್ನು ಬೆಳೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>