<p><span style="font-size:48px;">ತಂ</span>ದೆ ಈಗಾಗಲೇ ನಿರ್ದೇಶನದ ಏಣಿ ಹತ್ತಿದವರು. ತಾಯಿ ನಿರ್ಮಾಪಕಿ. ಕಿರಿಯ ಸಹೋದರ ಸಂಗೀತದ ಅಲೆಗಳ ಜೊತೆಗೆ ನಿರ್ದೇಶನದ ತಂತಿ ಮೀಟುತ್ತಿರುವವರು. ಅಣ್ಣ ಚಿತ್ರದ ನಾಯಕ. `ಯುವ ಸಾಮ್ರಾಟ್'ನ ವಿಶೇಷಗಳು ಇವು.<br /> <br /> `ಐಯಾಮ್ ಇನ್ ಲವ್' ಮೂಲಕ ಪ್ರೇಮಕತೆ ಹೇಳಿದ್ದ ನಿರ್ದೇಶಕ ನಂದಕುಮಾರ್ ಈ ಬಾರಿ ಕುಟುಂಬದ ಕನಸನ್ನು ನನಸಾಗಿಸಲು ಹೊರಟಿದ್ದಾರೆ. ಎರಡು ವರ್ಷದಿಂದ ತಮ್ಮ ಪುತ್ರ ಕಿರಣ್ಕುಮಾರ್ರನ್ನು ತೆರೆಗೆ ತರುವ ಯತ್ನ `ಯುವ ಸಾಮ್ರಾಟ್' ಮೂಲಕ ಸಾಕಾರಗೊಳ್ಳುತ್ತಿದೆ.</p>.<p>`ಅಭಿನಯ ತರಂಗ'ದಲ್ಲಿ ನಟನೆಯ ಮೊದಲ ಸೊಲ್ಲುಗಳನ್ನು ಕಲಿತ ಕಿರಣ್ ಎಂಟು ವರ್ಷಗಳಿಂದ ಸಮರಕಲೆ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಹದಿನೈದು ವರ್ಷಗಳ ನೃತ್ಯ ಅನುಭವವಿದೆ. ನಂದಕುಮಾರರ ಕಿರಿಯ ಪುತ್ರ ಯಶವಂತ್ ಅವರಿಗೆ ತಮ್ಮದೇ ಬ್ಯಾನರ್ನಲ್ಲಿ ಚಿತ್ರ ನಿರ್ಮಿಸುತ್ತಿರುವುದು ಎಲ್ಲಿಲ್ಲದ ಖುಷಿ ತಂದಿದೆಯಂತೆ.</p>.<p>ತಾಯಿ ನಿರ್ಮಾಪಕಿಯಾಗಿರುವುದು ಇನ್ನೊಂದು ಖುಷಿಯಾದರೆ ಅಣ್ಣ ನಾಯಕನಾಗುತ್ತಿರುವುದು ಮತ್ತೊಂದು ಖುಷಿ ಎನ್ನುತ್ತ ಖುಷಿಯ ಅಲೆಯಲ್ಲಿ ತೇಲಿದರು ಅವರು. ಯಶವಂತ್ ಅವರಿಗೆ ಸಂಗೀತದ ಮೇಲೂ ಒಲವು. ಆ ಜ್ಞಾನ ಚಿತ್ರದಲ್ಲಿ ಬಳಕೆಯಾಗುತ್ತಿದೆ.<br /> <br /> ಚಿತ್ರದ ನಾಯಕಿ ಕನ್ನಡದವರಲ್ಲ. ಹಾಗೆಂದು ಪಕ್ಕದ ರಾಜ್ಯದವರೂ ಅಲ್ಲ. ದೂರದ ಉಕ್ರೇನ್ ಅವರ ನೆಲೆ. ಹೆಸರು ಸ್ನಿಜ್ಹಾನಾ. ರೂಪದರ್ಶಿಗಳ ಲೋಕದಿಂದ ಜಿಗಿದ ಈ ಬೆಡಗಿ ಕಿರಣ್ರ `ರಾಕ್ಸ್ಟಾರ್'ನಲ್ಲಿಯೇ ನಾಯಕಿಯಾಗಬೇಕಿತ್ತು. ಅದರ ಬದಲು `ಯುವ ಸಾಮ್ರಾಟ್' ಕೈಗೆತ್ತಿಕೊಂಡಿದ್ದರಿಂದ ಸ್ನಿಜ್ಹಾನಾರ ಚಿತ್ರವೂ ಬದಲಾಯಿತು. ಇದು ಅವರ ಮೊದಲ ಚಿತ್ರ.</p>.<p>ನಿಜಜೀವನದಲ್ಲಿ ತಾವಿನ್ನೂ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಚಿತ್ರದ ಕಾಲೇಜು ಹುಡುಗಿಯ ಪಾತ್ರ ತಮಗೆಂದೇ ಹೇಳಿ ಮಾಡಿಸಿದಂತೆ ಇದೆ ಎಂದರವರು.<br /> <br /> ಕನ್ನಡದಲ್ಲಿ ನಾಯಕಿಯರು ಇರಲಿಲ್ಲವೇ ಎಂಬ ಪ್ರಶ್ನೆಗೂ ಚಿತ್ರತಂಡದ ಬಳಿ ಉತ್ತರವಿತ್ತು. ಇದ್ದರೂ ನಟಿಯರು ಸರಿಯಾದ ಸಮಯಕ್ಕೆ ಸಿಗಲಿಲ್ಲವಂತೆ. ಹಾಗಾಗಿ ಸ್ನಿಜ್ಹಾನಾ ಪ್ರವೇಶ ಸುಲಭವಾಗಿತ್ತು. <br /> <br /> ಸುಂದರ ಪ್ರೇಮಕತೆಯೊಂದಿಗೆ ತಂದೆ ಪ್ರೀತಿಯೂ ಚಿತ್ರದಲ್ಲಿ ಬೆರೆತಿದೆಯಂತೆ. ಅಂದಹಾಗೆ ತಂದೆಯ ಪಾತ್ರ ನಿರ್ವಹಿಸುತ್ತಿರುವುದು ಕಲಾವಿದ ಶ್ರೀನಿವಾಸಮೂರ್ತಿ. ಇದರ ಜೊತೆಗೆ ತಮಾಷೆಯ ಎಳೆ ಇರದಿದ್ದರೆ ಹೇಗೆ? ಅದರ ಹೊಣೆ ಹೊತ್ತವರು ನಟ ಎಂ.ಎಸ್. ಉಮೇಶ್.</p>.<p>ಇದೆಲ್ಲದರ ಜೊತೆಗೆ ಸಂದೇಶ ಸಾರುವ ಅಂಶವೊಂದು ಚಿತ್ರದ ದ್ವಿತೀಯಾರ್ಧದಲ್ಲಿ ಇಣುಕಲಿದೆಯಂತೆ. ಅದೇನೆಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ದೊರೆಯಲಿದೆ.<br /> <br /> ನಿರ್ಮಾಪಕಿ ವರಲಕ್ಷ್ಮೀ ನಂದಕುಮಾರ್ ಅವರಿಗೆ ಚಿಕ್ಕದಾಗಿ ಮಾತನಾಡುವುದರತ್ತ ಹೆಚ್ಚು ಒಲವು. `ನಮ್ಮ ಮಕ್ಕಳು ನಿಮ್ಮ ಮನೆ ಹುಡುಗರು. ನಮಗೆ ನೀಡಿದ ಬೆಂಬಲ ಅವರಿಗೂ ಬೇಕು' ಎಂದರು. ಶೇ 40ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರ.</p>.<p>ಜೊತೆಗೆ ಹಾಡುಗಳ ಚಿತ್ರೀಕರಣವೂ ನಡೆದಿದೆ. ಅಂದಹಾಗೆ ಕಿರಣ್ಕುಮಾರ್ ಹುಟುಹಬ್ಬದ ದಿನವಾದ ಮೇ 10ರಂದು ಚಿತ್ರದ ಮುಹೂರ್ತ ನಡೆದಿತ್ತು. ನಟಿ ಭಾರತಿ ವಿಷ್ಣುವರ್ಧನ್ ಆ ವೇಳೆ ಚಿತ್ರತಂಡವನ್ನು ಹಾರೈಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:48px;">ತಂ</span>ದೆ ಈಗಾಗಲೇ ನಿರ್ದೇಶನದ ಏಣಿ ಹತ್ತಿದವರು. ತಾಯಿ ನಿರ್ಮಾಪಕಿ. ಕಿರಿಯ ಸಹೋದರ ಸಂಗೀತದ ಅಲೆಗಳ ಜೊತೆಗೆ ನಿರ್ದೇಶನದ ತಂತಿ ಮೀಟುತ್ತಿರುವವರು. ಅಣ್ಣ ಚಿತ್ರದ ನಾಯಕ. `ಯುವ ಸಾಮ್ರಾಟ್'ನ ವಿಶೇಷಗಳು ಇವು.<br /> <br /> `ಐಯಾಮ್ ಇನ್ ಲವ್' ಮೂಲಕ ಪ್ರೇಮಕತೆ ಹೇಳಿದ್ದ ನಿರ್ದೇಶಕ ನಂದಕುಮಾರ್ ಈ ಬಾರಿ ಕುಟುಂಬದ ಕನಸನ್ನು ನನಸಾಗಿಸಲು ಹೊರಟಿದ್ದಾರೆ. ಎರಡು ವರ್ಷದಿಂದ ತಮ್ಮ ಪುತ್ರ ಕಿರಣ್ಕುಮಾರ್ರನ್ನು ತೆರೆಗೆ ತರುವ ಯತ್ನ `ಯುವ ಸಾಮ್ರಾಟ್' ಮೂಲಕ ಸಾಕಾರಗೊಳ್ಳುತ್ತಿದೆ.</p>.<p>`ಅಭಿನಯ ತರಂಗ'ದಲ್ಲಿ ನಟನೆಯ ಮೊದಲ ಸೊಲ್ಲುಗಳನ್ನು ಕಲಿತ ಕಿರಣ್ ಎಂಟು ವರ್ಷಗಳಿಂದ ಸಮರಕಲೆ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಹದಿನೈದು ವರ್ಷಗಳ ನೃತ್ಯ ಅನುಭವವಿದೆ. ನಂದಕುಮಾರರ ಕಿರಿಯ ಪುತ್ರ ಯಶವಂತ್ ಅವರಿಗೆ ತಮ್ಮದೇ ಬ್ಯಾನರ್ನಲ್ಲಿ ಚಿತ್ರ ನಿರ್ಮಿಸುತ್ತಿರುವುದು ಎಲ್ಲಿಲ್ಲದ ಖುಷಿ ತಂದಿದೆಯಂತೆ.</p>.<p>ತಾಯಿ ನಿರ್ಮಾಪಕಿಯಾಗಿರುವುದು ಇನ್ನೊಂದು ಖುಷಿಯಾದರೆ ಅಣ್ಣ ನಾಯಕನಾಗುತ್ತಿರುವುದು ಮತ್ತೊಂದು ಖುಷಿ ಎನ್ನುತ್ತ ಖುಷಿಯ ಅಲೆಯಲ್ಲಿ ತೇಲಿದರು ಅವರು. ಯಶವಂತ್ ಅವರಿಗೆ ಸಂಗೀತದ ಮೇಲೂ ಒಲವು. ಆ ಜ್ಞಾನ ಚಿತ್ರದಲ್ಲಿ ಬಳಕೆಯಾಗುತ್ತಿದೆ.<br /> <br /> ಚಿತ್ರದ ನಾಯಕಿ ಕನ್ನಡದವರಲ್ಲ. ಹಾಗೆಂದು ಪಕ್ಕದ ರಾಜ್ಯದವರೂ ಅಲ್ಲ. ದೂರದ ಉಕ್ರೇನ್ ಅವರ ನೆಲೆ. ಹೆಸರು ಸ್ನಿಜ್ಹಾನಾ. ರೂಪದರ್ಶಿಗಳ ಲೋಕದಿಂದ ಜಿಗಿದ ಈ ಬೆಡಗಿ ಕಿರಣ್ರ `ರಾಕ್ಸ್ಟಾರ್'ನಲ್ಲಿಯೇ ನಾಯಕಿಯಾಗಬೇಕಿತ್ತು. ಅದರ ಬದಲು `ಯುವ ಸಾಮ್ರಾಟ್' ಕೈಗೆತ್ತಿಕೊಂಡಿದ್ದರಿಂದ ಸ್ನಿಜ್ಹಾನಾರ ಚಿತ್ರವೂ ಬದಲಾಯಿತು. ಇದು ಅವರ ಮೊದಲ ಚಿತ್ರ.</p>.<p>ನಿಜಜೀವನದಲ್ಲಿ ತಾವಿನ್ನೂ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಚಿತ್ರದ ಕಾಲೇಜು ಹುಡುಗಿಯ ಪಾತ್ರ ತಮಗೆಂದೇ ಹೇಳಿ ಮಾಡಿಸಿದಂತೆ ಇದೆ ಎಂದರವರು.<br /> <br /> ಕನ್ನಡದಲ್ಲಿ ನಾಯಕಿಯರು ಇರಲಿಲ್ಲವೇ ಎಂಬ ಪ್ರಶ್ನೆಗೂ ಚಿತ್ರತಂಡದ ಬಳಿ ಉತ್ತರವಿತ್ತು. ಇದ್ದರೂ ನಟಿಯರು ಸರಿಯಾದ ಸಮಯಕ್ಕೆ ಸಿಗಲಿಲ್ಲವಂತೆ. ಹಾಗಾಗಿ ಸ್ನಿಜ್ಹಾನಾ ಪ್ರವೇಶ ಸುಲಭವಾಗಿತ್ತು. <br /> <br /> ಸುಂದರ ಪ್ರೇಮಕತೆಯೊಂದಿಗೆ ತಂದೆ ಪ್ರೀತಿಯೂ ಚಿತ್ರದಲ್ಲಿ ಬೆರೆತಿದೆಯಂತೆ. ಅಂದಹಾಗೆ ತಂದೆಯ ಪಾತ್ರ ನಿರ್ವಹಿಸುತ್ತಿರುವುದು ಕಲಾವಿದ ಶ್ರೀನಿವಾಸಮೂರ್ತಿ. ಇದರ ಜೊತೆಗೆ ತಮಾಷೆಯ ಎಳೆ ಇರದಿದ್ದರೆ ಹೇಗೆ? ಅದರ ಹೊಣೆ ಹೊತ್ತವರು ನಟ ಎಂ.ಎಸ್. ಉಮೇಶ್.</p>.<p>ಇದೆಲ್ಲದರ ಜೊತೆಗೆ ಸಂದೇಶ ಸಾರುವ ಅಂಶವೊಂದು ಚಿತ್ರದ ದ್ವಿತೀಯಾರ್ಧದಲ್ಲಿ ಇಣುಕಲಿದೆಯಂತೆ. ಅದೇನೆಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ದೊರೆಯಲಿದೆ.<br /> <br /> ನಿರ್ಮಾಪಕಿ ವರಲಕ್ಷ್ಮೀ ನಂದಕುಮಾರ್ ಅವರಿಗೆ ಚಿಕ್ಕದಾಗಿ ಮಾತನಾಡುವುದರತ್ತ ಹೆಚ್ಚು ಒಲವು. `ನಮ್ಮ ಮಕ್ಕಳು ನಿಮ್ಮ ಮನೆ ಹುಡುಗರು. ನಮಗೆ ನೀಡಿದ ಬೆಂಬಲ ಅವರಿಗೂ ಬೇಕು' ಎಂದರು. ಶೇ 40ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರ.</p>.<p>ಜೊತೆಗೆ ಹಾಡುಗಳ ಚಿತ್ರೀಕರಣವೂ ನಡೆದಿದೆ. ಅಂದಹಾಗೆ ಕಿರಣ್ಕುಮಾರ್ ಹುಟುಹಬ್ಬದ ದಿನವಾದ ಮೇ 10ರಂದು ಚಿತ್ರದ ಮುಹೂರ್ತ ನಡೆದಿತ್ತು. ನಟಿ ಭಾರತಿ ವಿಷ್ಣುವರ್ಧನ್ ಆ ವೇಳೆ ಚಿತ್ರತಂಡವನ್ನು ಹಾರೈಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>