<p><strong>ಚಾಮರಾಜನಗರ</strong>: ಹಸುಳೆಗಳು ಮೃತಪಟ್ಟರೆ ದೇಹವನ್ನು ಶವಸಂಸ್ಕಾರ ಮಾಡದೆ ಹುತ್ತದ ಕೋವಿಯೊಳಕ್ಕೆ ಹಾಕುವ ಪದ್ಧತಿ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಂತವಾಗಿದೆ.<br /> <br /> ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನ್ 4ರಂದು ಅನ್ನಪೂರ್ಣಮ್ಮ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಮೊದಲು ಹೆಣ್ಣು ಮಗು ಜನಿಸಿದೆ. ಆ ನಂತರ ಗಂಡು ಮಗು ಜನಿಸಿದ್ದು, ಹೆರಿಗೆಗೆ ಮೊದಲೇ ಮೃತಪಟ್ಟಿತ್ತು ಎನ್ನಲಾಗಿದೆ.<br /> <br /> ಅನ್ನಪೂರ್ಣಮ್ಮ ಹಾಗೂ ಪತಿ ಸಿದ್ದಮಲ್ಲಪ್ಪ ಅವರದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಯಲಚೆಟ್ಟಿ ಗ್ರಾಮ. ಕಬ್ಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರಿರುವ ಕಾರಣ ಈ ಕೇಂದ್ರದಲ್ಲಿಯೇ ಅನ್ನಪೂರ್ಣಮ್ಮ ಚಿಕಿತ್ಸೆ ಪಡೆದಿದ್ದರು. ಹೆಣ್ಣುಮಗುವಿನ ತೂಕ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸ್ದ್ದಿದರು.<br /> <br /> ಆದರೆ ಆಸ್ಪತ್ರೆಗೆ ತೆರಳುವ ಮೊದಲು ಅನ್ನಪೂರ್ಣಮ್ಮ ಅವರ ಕುಟುಂಬದ ಸದಸ್ಯರು ಕಬ್ಬಹಳ್ಳಿ ಹೊರವಲಯದ ಜಮೀನೊಂದರಲ್ಲಿರುವ ಹುತ್ತದ ಕೋವಿಯೊಳಕ್ಕೆ ಮಗುವಿನ ಶವ ಹಾಕಿದ್ದಾರೆ. ನಂತರ, ಅದರ ಮೇಲೆ ಪಾಪಸ್ ಕಳ್ಳಿ ಹಾಗೂ ಕಲ್ಲು ಇಟ್ಟು ಮೈಸೂರಿಗೆ ತೆರಳಿದ್ದಾರೆ. ಈ ಹುತ್ತವು ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ದಿ. ಕೆ.ಎಸ್. ನಾಗರತ್ನಮ್ಮ ಅವರ ಸಮಾಧಿ ಬಳಿಯಲ್ಲಿಯೇ ಇದೆ.<br /> <br /> ಗುರುವಾರ ಬೆಳಿಗ್ಗೆ ನಾಯಿಗಳು ಹುತ್ತದಲ್ಲಿದ್ದ ಮಗುವಿನ ಮೃತದೇಹವನ್ನು ರಸ್ತೆಯಲ್ಲಿ ಎಳೆದಾಡಿಕೊಂಡು ತಿನ್ನುತ್ತಿದ್ದ ದೃಶ್ಯ ಕಂಡ ಗ್ರಾಮಸ್ಥರು ಹೌಹಾರಿದರು. ತಕ್ಷಣವೇ ನಾಯಿಗಳನ್ನು ಓಡಿಸಿ ಮಗುವಿನ ಅಳಿದುಳಿದ ಅಂಗಾಂಗಗಳನ್ನು ಹೂತು ಹಾಕಿದರು. ಸ್ಥಳಕ್ಕೆ ಕಬ್ಬಹಳ್ಳಿಯ ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.<br /> <br /> <strong>ಏನಿದು ಪದ್ಧತಿ?</strong><br /> ನವಜಾತ ಶಿಶು ಮೃತಪಟ್ಟರೆ ಹುತ್ತದ ಕೋವಿಗಳ ಮೇಲ್ಭಾಗವನ್ನು ಕೊಂಚ ಕತ್ತರಿಸಲಾಗುತ್ತದೆ. ಆ ನಂತರ ಹುತ್ತದ ಒಳಭಾಗದಲ್ಲಿರುವ ದೊಡ್ಡ ಕೋವಿಯೊಳಕ್ಕೆ ಮಗುವಿನ ದೇಹವನ್ನು ಇಳಿಬಿಡಲಾಗುತ್ತದೆ. ಆ ಕೋವಿಯ ಮೇಲ್ಭಾಗದಲ್ಲಿ ಪಾಪಸ್ ಕಳ್ಳಿ ಇಟ್ಟು ಕಲ್ಲಿನಿಂದ ಮುಚ್ಚುವ ಪದ್ಧತಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಆಚರಣೆಯಲ್ಲಿದೆ.<br /> <br /> `ವಯಸ್ಕರು ಮೃತಪಟ್ಟರೆ ಅವರಿಗೆ ಧಾರ್ಮಿಕ ವಿಧಿವಿಧಾನ ಅನುಸರಿಸಿ ಶವಸಂಸ್ಕಾರ ನೆರವೇರಿಸುತ್ತೇವೆ. ಅಂತೆಯೇ, ಈ ಭಾಗದಲ್ಲಿ ನವಜಾತ ಶಿಶುಗಳು ಮೃತಪಟ್ಟರೆ ಹುತ್ತದ ಕೋವಿ ಅಗೆದು ಅದರೊಳಗೆ ಮೃತದೇಹ ಇಟ್ಟು ಮಣ್ಣು ಮುಚ್ಚಲಾಗುತ್ತದೆ. ಹಿಂದಿನಿಂದಲೂ ಈ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಎಲ್ಲ ಜಾತಿಗಳಲ್ಲೂ ಈ ಆಚರಣೆ ಇದೆ' ಎಂದು ಕಬ್ಬಹಳ್ಳಿಯ ವಯೋವೃದ್ಧೆ ಬಸಮ್ಮ `ಪ್ರಜಾವಾಣಿ'ಗೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಹಸುಳೆಗಳು ಮೃತಪಟ್ಟರೆ ದೇಹವನ್ನು ಶವಸಂಸ್ಕಾರ ಮಾಡದೆ ಹುತ್ತದ ಕೋವಿಯೊಳಕ್ಕೆ ಹಾಕುವ ಪದ್ಧತಿ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಂತವಾಗಿದೆ.<br /> <br /> ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನ್ 4ರಂದು ಅನ್ನಪೂರ್ಣಮ್ಮ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಮೊದಲು ಹೆಣ್ಣು ಮಗು ಜನಿಸಿದೆ. ಆ ನಂತರ ಗಂಡು ಮಗು ಜನಿಸಿದ್ದು, ಹೆರಿಗೆಗೆ ಮೊದಲೇ ಮೃತಪಟ್ಟಿತ್ತು ಎನ್ನಲಾಗಿದೆ.<br /> <br /> ಅನ್ನಪೂರ್ಣಮ್ಮ ಹಾಗೂ ಪತಿ ಸಿದ್ದಮಲ್ಲಪ್ಪ ಅವರದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಯಲಚೆಟ್ಟಿ ಗ್ರಾಮ. ಕಬ್ಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರಿರುವ ಕಾರಣ ಈ ಕೇಂದ್ರದಲ್ಲಿಯೇ ಅನ್ನಪೂರ್ಣಮ್ಮ ಚಿಕಿತ್ಸೆ ಪಡೆದಿದ್ದರು. ಹೆಣ್ಣುಮಗುವಿನ ತೂಕ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸ್ದ್ದಿದರು.<br /> <br /> ಆದರೆ ಆಸ್ಪತ್ರೆಗೆ ತೆರಳುವ ಮೊದಲು ಅನ್ನಪೂರ್ಣಮ್ಮ ಅವರ ಕುಟುಂಬದ ಸದಸ್ಯರು ಕಬ್ಬಹಳ್ಳಿ ಹೊರವಲಯದ ಜಮೀನೊಂದರಲ್ಲಿರುವ ಹುತ್ತದ ಕೋವಿಯೊಳಕ್ಕೆ ಮಗುವಿನ ಶವ ಹಾಕಿದ್ದಾರೆ. ನಂತರ, ಅದರ ಮೇಲೆ ಪಾಪಸ್ ಕಳ್ಳಿ ಹಾಗೂ ಕಲ್ಲು ಇಟ್ಟು ಮೈಸೂರಿಗೆ ತೆರಳಿದ್ದಾರೆ. ಈ ಹುತ್ತವು ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ದಿ. ಕೆ.ಎಸ್. ನಾಗರತ್ನಮ್ಮ ಅವರ ಸಮಾಧಿ ಬಳಿಯಲ್ಲಿಯೇ ಇದೆ.<br /> <br /> ಗುರುವಾರ ಬೆಳಿಗ್ಗೆ ನಾಯಿಗಳು ಹುತ್ತದಲ್ಲಿದ್ದ ಮಗುವಿನ ಮೃತದೇಹವನ್ನು ರಸ್ತೆಯಲ್ಲಿ ಎಳೆದಾಡಿಕೊಂಡು ತಿನ್ನುತ್ತಿದ್ದ ದೃಶ್ಯ ಕಂಡ ಗ್ರಾಮಸ್ಥರು ಹೌಹಾರಿದರು. ತಕ್ಷಣವೇ ನಾಯಿಗಳನ್ನು ಓಡಿಸಿ ಮಗುವಿನ ಅಳಿದುಳಿದ ಅಂಗಾಂಗಗಳನ್ನು ಹೂತು ಹಾಕಿದರು. ಸ್ಥಳಕ್ಕೆ ಕಬ್ಬಹಳ್ಳಿಯ ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.<br /> <br /> <strong>ಏನಿದು ಪದ್ಧತಿ?</strong><br /> ನವಜಾತ ಶಿಶು ಮೃತಪಟ್ಟರೆ ಹುತ್ತದ ಕೋವಿಗಳ ಮೇಲ್ಭಾಗವನ್ನು ಕೊಂಚ ಕತ್ತರಿಸಲಾಗುತ್ತದೆ. ಆ ನಂತರ ಹುತ್ತದ ಒಳಭಾಗದಲ್ಲಿರುವ ದೊಡ್ಡ ಕೋವಿಯೊಳಕ್ಕೆ ಮಗುವಿನ ದೇಹವನ್ನು ಇಳಿಬಿಡಲಾಗುತ್ತದೆ. ಆ ಕೋವಿಯ ಮೇಲ್ಭಾಗದಲ್ಲಿ ಪಾಪಸ್ ಕಳ್ಳಿ ಇಟ್ಟು ಕಲ್ಲಿನಿಂದ ಮುಚ್ಚುವ ಪದ್ಧತಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಆಚರಣೆಯಲ್ಲಿದೆ.<br /> <br /> `ವಯಸ್ಕರು ಮೃತಪಟ್ಟರೆ ಅವರಿಗೆ ಧಾರ್ಮಿಕ ವಿಧಿವಿಧಾನ ಅನುಸರಿಸಿ ಶವಸಂಸ್ಕಾರ ನೆರವೇರಿಸುತ್ತೇವೆ. ಅಂತೆಯೇ, ಈ ಭಾಗದಲ್ಲಿ ನವಜಾತ ಶಿಶುಗಳು ಮೃತಪಟ್ಟರೆ ಹುತ್ತದ ಕೋವಿ ಅಗೆದು ಅದರೊಳಗೆ ಮೃತದೇಹ ಇಟ್ಟು ಮಣ್ಣು ಮುಚ್ಚಲಾಗುತ್ತದೆ. ಹಿಂದಿನಿಂದಲೂ ಈ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಎಲ್ಲ ಜಾತಿಗಳಲ್ಲೂ ಈ ಆಚರಣೆ ಇದೆ' ಎಂದು ಕಬ್ಬಹಳ್ಳಿಯ ವಯೋವೃದ್ಧೆ ಬಸಮ್ಮ `ಪ್ರಜಾವಾಣಿ'ಗೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>