<p>ಬೆಂಗಳೂರು: `ಇಂಧನಕ್ಕೆ ಪರ್ಯಾಯವಾಗಿ ಹಸಿ ಹುಲ್ಲು ಮತ್ತು ಕಳೆ ಗಿಡಗಳಿಂದ ಇಂಧನವನ್ನು ಉತ್ಪಾದಿಸುವ ಕುರಿತು ಪ್ರಯೋಗಾತ್ಮಕ ಸಂಶೋಧನೆ ನಡೆಯುತ್ತಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ.ಎಚ್.ಎನ್. ಚಾಣಕ್ಯ ಹೇಳಿದರು.<br /> <br /> ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದಲ್ಲಿ ಶನಿವಾರ ನಡೆದ `ಸುಸ್ಥಿರ ಶಕ್ತಿ' ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಹುಲ್ಲು ಮತ್ತು ಕಳೆ ಗಿಡಗಳಿಂದಲೂ ಇಂಧನವನ್ನು ಉತ್ಪಾದಿಸಬಹುದು. ಒಂದು ಟನ್ ಹಸಿ ಹುಲ್ಲಿನಲ್ಲಿ 2 ರಿಂದ 3 ಗ್ಯಾಸ್ ಸಿಲಿಂಡರ್ನಷ್ಟು ಇಂಧನವನ್ನು ಉತ್ಪಾದಿಸಬಹುದು. ಈ ಕುರಿತು ಸಂಶೋಧನೆ ನಡೆಯುತ್ತಿದೆ' ಎಂದು ಹೇಳಿದರು.<br /> <br /> `ಹುಲ್ಲಿನಿಂದ ತಯಾರಾದ ಇಂಧನವನ್ನು ಬಸ್ಗಳಲ್ಲಿ ಮತ್ತು ಮನೆಯ ಉಪಯೋಗಕ್ಕೂ ಬಳಸಬಹುದು. ಇಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಜೈವಿಕ ಗೊಬ್ಬರವಾಗಿ ಗಿಡಗಳಿಗೂ ಬಳಸಬಹುದು' ಎಂದು ವಿವರಿಸಿದರು. `ಮುಂದಿನ ವರ್ಷಗಳಲ್ಲಿ ಇಂಧನದ ಪೂರೈಕೆಯೇ ಒಂದು ದೊಡ್ಡ ಸವಾಲಾಗಲಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಅನೇಕ ಇಂಧನ ಮೂಲಗಳನ್ನು ಮಿತಿಯಿಲ್ಲದೆ ಬಳಸುತ್ತಿರುವುದರಿಂದ ಮುಂದಿನ 20 ವರ್ಷಗಳಲ್ಲಿ ಅವುಗಳು ಮುಗಿಯುವ ಹಂತಕ್ಕೆ ಬಂದಿವೆ' ಎಂದು ವಿಷಾದಿಸಿದರು.<br /> <br /> `ನಮಗೆ ಬೇಕಾದ ಇಂಧನಗಳ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಹೊಸ ಸಂಶೋಧನೆಯನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇದರಿಂದ ಭಾರತೀಯ ವಿಜ್ಞಾನ ಸಂಸ್ಥೆಯು ಇದರ ಕಡೆಗೆ ಗಮನವನ್ನು ಹರಿಸುತ್ತಿದೆ' ಎಂದರು. `ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕಗಳನ್ನು ನಗರದಲ್ಲಿ ಮತ್ತೀಕೆರೆ, ಕೋರಮಂಗಲ ಸೇರಿದಂತೆ ಇನ್ನುಳಿದ ಎರಡು ಪ್ರದೇಶಗಳಲ್ಲಿ ತೆರೆಯಲಾಗುವುದು' ಎಂದು ಹೇಳಿದರು.<br /> <br /> <strong>ಸುಸ್ಥಿರ ಶಕ್ತಿಗಳ ಪ್ರದರ್ಶನ</strong><br /> ಗಾಳಿ ಶಕ್ತಿ, ಸೌರಶಕ್ತಿ, ಅಲೆಗಳ ಶಕ್ತಿ, ಭೂ ಶಾಖದ ಶಕ್ತಿ, ಉಬ್ಬರವಿಳಿತದ ಶಕ್ತಿಯನ್ನು ಪ್ರದರ್ಶಿಸುವ ಒಟ್ಟು 35 ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜುಲೈ 31 ರವರೆಗೆ ಪ್ರದರ್ಶನ ತೆರೆದಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಇಂಧನಕ್ಕೆ ಪರ್ಯಾಯವಾಗಿ ಹಸಿ ಹುಲ್ಲು ಮತ್ತು ಕಳೆ ಗಿಡಗಳಿಂದ ಇಂಧನವನ್ನು ಉತ್ಪಾದಿಸುವ ಕುರಿತು ಪ್ರಯೋಗಾತ್ಮಕ ಸಂಶೋಧನೆ ನಡೆಯುತ್ತಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ.ಎಚ್.ಎನ್. ಚಾಣಕ್ಯ ಹೇಳಿದರು.<br /> <br /> ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದಲ್ಲಿ ಶನಿವಾರ ನಡೆದ `ಸುಸ್ಥಿರ ಶಕ್ತಿ' ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಹುಲ್ಲು ಮತ್ತು ಕಳೆ ಗಿಡಗಳಿಂದಲೂ ಇಂಧನವನ್ನು ಉತ್ಪಾದಿಸಬಹುದು. ಒಂದು ಟನ್ ಹಸಿ ಹುಲ್ಲಿನಲ್ಲಿ 2 ರಿಂದ 3 ಗ್ಯಾಸ್ ಸಿಲಿಂಡರ್ನಷ್ಟು ಇಂಧನವನ್ನು ಉತ್ಪಾದಿಸಬಹುದು. ಈ ಕುರಿತು ಸಂಶೋಧನೆ ನಡೆಯುತ್ತಿದೆ' ಎಂದು ಹೇಳಿದರು.<br /> <br /> `ಹುಲ್ಲಿನಿಂದ ತಯಾರಾದ ಇಂಧನವನ್ನು ಬಸ್ಗಳಲ್ಲಿ ಮತ್ತು ಮನೆಯ ಉಪಯೋಗಕ್ಕೂ ಬಳಸಬಹುದು. ಇಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಜೈವಿಕ ಗೊಬ್ಬರವಾಗಿ ಗಿಡಗಳಿಗೂ ಬಳಸಬಹುದು' ಎಂದು ವಿವರಿಸಿದರು. `ಮುಂದಿನ ವರ್ಷಗಳಲ್ಲಿ ಇಂಧನದ ಪೂರೈಕೆಯೇ ಒಂದು ದೊಡ್ಡ ಸವಾಲಾಗಲಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಅನೇಕ ಇಂಧನ ಮೂಲಗಳನ್ನು ಮಿತಿಯಿಲ್ಲದೆ ಬಳಸುತ್ತಿರುವುದರಿಂದ ಮುಂದಿನ 20 ವರ್ಷಗಳಲ್ಲಿ ಅವುಗಳು ಮುಗಿಯುವ ಹಂತಕ್ಕೆ ಬಂದಿವೆ' ಎಂದು ವಿಷಾದಿಸಿದರು.<br /> <br /> `ನಮಗೆ ಬೇಕಾದ ಇಂಧನಗಳ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಹೊಸ ಸಂಶೋಧನೆಯನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇದರಿಂದ ಭಾರತೀಯ ವಿಜ್ಞಾನ ಸಂಸ್ಥೆಯು ಇದರ ಕಡೆಗೆ ಗಮನವನ್ನು ಹರಿಸುತ್ತಿದೆ' ಎಂದರು. `ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕಗಳನ್ನು ನಗರದಲ್ಲಿ ಮತ್ತೀಕೆರೆ, ಕೋರಮಂಗಲ ಸೇರಿದಂತೆ ಇನ್ನುಳಿದ ಎರಡು ಪ್ರದೇಶಗಳಲ್ಲಿ ತೆರೆಯಲಾಗುವುದು' ಎಂದು ಹೇಳಿದರು.<br /> <br /> <strong>ಸುಸ್ಥಿರ ಶಕ್ತಿಗಳ ಪ್ರದರ್ಶನ</strong><br /> ಗಾಳಿ ಶಕ್ತಿ, ಸೌರಶಕ್ತಿ, ಅಲೆಗಳ ಶಕ್ತಿ, ಭೂ ಶಾಖದ ಶಕ್ತಿ, ಉಬ್ಬರವಿಳಿತದ ಶಕ್ತಿಯನ್ನು ಪ್ರದರ್ಶಿಸುವ ಒಟ್ಟು 35 ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜುಲೈ 31 ರವರೆಗೆ ಪ್ರದರ್ಶನ ತೆರೆದಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>