<p>ಆ ಮನೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಬಾಗಿಲಿಗೆ ಅಭಿಮುಖವಾಗಿದ್ದ ಎರಡೂವರೆ ಅಡಿ ಎತ್ತರದ ಗೋಡೆ ಗಡಿಯಾರ ಗಮನ ಸೆಳೆಯಿತು. ಏಳು ಗಂಟೆ ಸೂಚಿಸುತ್ತಿತ್ತು. ಕೆಟ್ಟಿದೆ ಅಂದುಕೊಂಡೆ. <br /> <br /> ಅದನ್ನರಿತುಕೊಂಡವರಂತೆ ಮನೆ ಯಜಮಾನ ಶ್ರಿಧರಬಾಬು, `ಬೆನ್ನು ಹಿಡಿದುಕೊಂಡಿದೆ. ಕೀ ಕೊಡಲಾಗುತ್ತಿಲ್ಲ. ಕೀ ಕೊಟ್ಟರೆ ಸಾಕು ಒಂದೂ ದಿನ ಕೆಡದೆ ಕೆಲಸ ಮಾಡುತ್ತದೆ, 150 ವರ್ಷ ದುಡಿಯೋದು ಅಂದ್ರೇನು ತಮಾಷೇನಾ?~... ತಾತನಿಗೇ ಅಂದಂತೆ ಅಕ್ಕರೆಯ ಮಾತಾಡಿದರು. `ಅದು ಹೊಡೆದುಕೊಂಡರೇನೇ ನಮ್ಮ ಮಕ್ಕಳು ಎದ್ದು ಶಾಲೆಗೆ ರೆಡಿಯಾಗೋದು. <br /> <br /> ಆಯಿಲಿಂಗೂ ಮಾಡಿಲ್ಲ. ಅದೇ ತರಹ ಹೊಳೀತಾ ಇದೆ~ ಎಂದು ಇನ್ನೊಂದಷ್ಟು ಹೊಗಳಿದರು. ಹೊರಗಿನ ಬಿಸಿಲಿಗೆ ಗಡಿಯಾರದ ಸಾಗುವಾನಿ ಚೌಕಟ್ಟು, ಕಿರೀಟದಂತಹ ಕುಸುರಿ ವಿನ್ಯಾಸ, ಕರ್ರಗಿನ ಎಣ್ಣೆ ಮೈ ಕೋರೈಸಿತು. ಅದನ್ನು ಜರ್ಮನಿಯಿಂದ ಆಮದು ಮಾಡಿಸಿಕೊಂಡ ತಾತ ಕಣ್ಣು ಮಿಟುಕಿಸಿದರೇನೊ?<br /> <br /> ಶ್ರಿಧರಬಾಬು ಇದ್ದಕ್ಕಿದ್ದಂತೆ ಸ್ಟೂಲ್ ಇಟ್ಟು ಹತ್ತಿ 10 ಅಡಿ ಎತ್ತರದಲ್ಲಿದ್ದ ಆ ಗಡಿಯಾರದ ಬಾಗಿಲು ತೆರೆದು ದಪ್ಪದ ಕೀಲಿಕೈಯಿಂದ ಕಿರ್ರ್ ಕಿರ್ರ್ ಅಂತ ಮೂರು ಸುತ್ತು ಕೀಲಿ ತಿರುವಿದರು. ಟಕ್ ಟಕ್ ಶುರುವಾಯ್ತು. ಮುಳ್ಳುಗಳನ್ನು ಹೊಂದಿಸಿ 12 ಮಾಡಿದರು. ಗಂಟೆಯು ಢಣ್ ಢಣ್ ಬಾರಿಸಿತು! ಕಂಚಿನ ಕಡಾಯಿಗೆ ಸುತ್ತಿಗೆಯಲ್ಲಿ ಬಡಿದಂತಾಯಿತು.<br /> <br /> ಅದರ ಎಡಬಲದ ಗೋಡೆಯಲ್ಲಿ ಆಳೆತ್ತರದ ಎರಡು ಕನ್ನಡಿಗಳು, `ಹಲೋ ನಾವೂ ಇದ್ದೇವೆ~ ಅಂತ ಕಣ್ಣು ಮಿಟುಕಿಸಿದವು. 150 ವರ್ಷಗಳ ಹಿಂದೆ ದೂರದ ಬೆಲ್ಜಿಯಂನಿಂದ ಈ ಮನೆಗೆ ಬಂದಿರುವ ಸದಸ್ಯರು ಅವರು. ಕರೆಸಿಕೊಂಡವರು ಶ್ರೀಧರಬಾಬು ಅವರ ಮುತ್ತಾತ ವೆಂಕಟಪ್ಪ. (ವೆಂಕಟಪ್ಪನವರ ಮಗ ಎಚ್. ವಿ. ತಿಮ್ಮಯ್ಯ (ಅವಿವಾಹಿತ); ಅವರ ತಮ್ಮನ ಹೆಂಡತಿ ಶಾರದಮ್ಮ; ಅವರ ಮಗಳು ಸಾವಿತ್ರಮ್ಮ, ಈ ಶ್ರೀಧರ್ಬಾಬು ತಾಯಿ).<br /> <br /> -ಹೀಗೆ, ನಾಲ್ಕು ತಲೆಮಾರುಗಳಿಗೆ `ಚಾಕರಿ~ ಮಾಡಿ ಐದನೇ ತಲೆಮಾರಿಗೆ ಬಡ್ತಿ ಪಡೆದಿರುವ ಈ ಆ್ಯಂಟಿಕ್ ಪೀಸ್ಗಳು ಇರುವುದು ಬಳೆಪೇಟೆಯ ಮಡಿಲಲ್ಲಿರುವ ಹೂವಾಡಿಗರ ಗಲ್ಲಿಯಲ್ಲಿ.<br /> <br /> ಬಳೆಪೇಟೆಯ ಬಗ್ಗೆ ಏನೋ ಮಾಹಿತಿ ಹುಡುಕುತ್ತಿದ್ದಾಗ ಈ ಶ್ರಿಧರಬಾಬು ಅವರ ವಿಳಾಸದಲ್ಲಿ ಗಮನ ಸೆಳೆದದ್ದು `ಹೂವಾಡಿಗರ ಗಲ್ಲಿ~ (ಹೂವಾಡಿಗರ ಲೇನ್... ಫ್ಲೋರಿಸ್ಟ್ ಲೇನ್ ಅಲ್ಲ!) ಎಂಬ ಹೆಸರು. ರಸ್ತೆ, ಗಲ್ಲಿಯ ತುಂಬಾ ಹೂವಿನ ಘಮಲು ಆವರಿಸಿಕೊಂಡಿದ್ದೀತು ಎಂಬ ಭ್ರಮೆ ಬರಿ ಭ್ರಮೆಯೇ ಆಯಿತು. ಯಾವ ಗಲ್ಲಿಯಲ್ಲಿಯೂ ಓಣಿಯಲ್ಲಿಯೂ ಹೂಗಂಧದ ಸುಳಿವಿರಲಿಲ್ಲ. <br /> <br /> ಅಸಲಿಗೆ, ಹೂವಾಡಿಗರ ಗಲ್ಲಿ ಎಂಬ ಈ ಹಳೆ ಬೆಂಗಳೂರಿನ ಪಳೆಯುಳಿಕೆಯಲ್ಲಿ ಈಗ ಇರುವ ಹೂವಾಡಿಗರ ಸಂಖ್ಯೆ ಬೆರಳೆಣಿಕೆಯಷ್ಟು..ಒಂದು ಕಾಲದಲ್ಲಿ ಹೂ ಕಟ್ಟುವವರಿಗೆ, ಮಾರುವವರಿಗೆ ಬದುಕಿನ ಬುತ್ತಿಯಾಗಿದ್ದ ತಾಣ ಈ ಹೂವಾಡಿಗರ ಗಲ್ಲಿ. <br /> <br /> ಆದರೆ ಈಗ ಬಗೆಬಗೆ ವ್ಯಾಪಾರ, ವಹಿವಾಟುಗಳವರ ಹೆಜ್ಜೆಗುರುತು. ಅಂತಹ ಬೆರಳೆಣಿಕೆಯ ಹೂವಾಡಿಗರ ಮನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೇ ಈ ಶ್ರಿಧರಬಾಬು. ಮುತ್ತಾತನ ಕಾಲದಿಂದಲೂ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ವೃತ್ತಿಗೆ ಅಂಟಿಕೊಂಡಿರಲಾಗದೆ ಒಂದು ಹಂತದಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನೌಕರಿ ಹಿಡಿದರೂ ಹೂವಿನ ಗಂಧ ಅವರನ್ನು ಮತ್ತೆ ಹೂವಾಡಿಗರ ಗಲ್ಲಿಗೇ ಎಳೆತಂದಿದ್ದನ್ನು ಅವರು ಸೊಗಸಾಗಿ ವಿವರಿಸುತ್ತಾರೆ.<br /> <br /> ಹೂವಾಡಿಗರ ಗಲ್ಲಿಯಲ್ಲಿ ಹೂ ಗಂಧವೇ ಇಲ್ಲವಲ್ಲ ಅಂತ ಬೇಸರಿಸಲು ಅವಕಾಶವೇ ಕೊಡದಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಈ ಮನೆ. ವಯಸ್ಸು... ಮತ್ತದೇ... 150 ವರ್ಷ!ಹೊಸ್ತಿಲಾಚೆ ನಿಂತು ನೋಡಿದರೆ `ಯಾವುದೋ ಒಂದು ಹಳೆಯ ಕಟ್ಟಡ~ವಾಗಿ ಕಾಣಿಸಿದರೂ ಇದು ಅಪ್ಪಟ ಪುರಾತನ ವಸ್ತು ಸಂಗ್ರಹಾಲಯ! ಅಲ್ಲಿ ಈಗ ಇರುವುದು ಐದನೇ ತಲೆಮಾರಿನ ಸದಸ್ಯರು. <br /> <br /> ಈಗಿನ ಯಜಮಾನ ಶ್ರೀಧರಬಾಬು ಪಾಲಿಗೆ ಈ ಮನೆಯೆ ಒಂದು ಅನುಭೂತಿ. `ಹೆಂಡತಿ ಮನೆಗೆ ಹೋದವನು ಅಲ್ಲಿ ನಿದ್ದೆ ಬಾರದೆ ಮಧ್ಯರಾತ್ರಿ ಎರಡು ಗಂಟೆಗೆ ಇಲ್ಲಿಗೆ ಬಂದದ್ದೂ ಇದೆ~ ಎಂಬ ಅವರ ಮಾತಿನಲ್ಲೇ ಮನೆಯೊಂದಿಗಿನ ಅವರ ನಂಟಿನ ಸೆಳಕಿದೆ.<br /> <br /> `ನಮ್ಮ ಮುತ್ತಾತ ಮತ್ತು ತಾತ ವೈಭೋಗದಲ್ಲಿ ಬದುಕಿದವರು. ವಿದೇಶದಿಂದ ವಿಲಾಸಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದು ಅವರಿಗೆ ಶೋಕಿ. ಬೆಲೆಯ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ ಅವರು. ಮುತ್ತಾತ ಆಗಿನ ಕಾಲದಲ್ಲೇ ಮುಂಚೂಣಿ ಹೂವಿನ ವ್ಯಾಪಾರಿ. <br /> <br /> ಅವರ ಪತ್ನಿ, ನಮ್ಮ ಮುತ್ತಜ್ಜಿಯೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರಂತೆ. ಅದೇ ಪರಂಪರೆ ತಾತನ ಕಾಲದಲ್ಲೂ ಮುಂದುವರಿಯಿತು. ಈ ಮನೆ ಮುಂದೆ ನಮ್ಮ ತಾಯಿ ಸಾವಿತ್ರಮ್ಮನವರಿಗೆ ವಂಶಪಾರಂಪರ್ಯವಾಗಿ ಬಂತು. ನಮ್ಮ ಅಪ್ಪ-ಅಮ್ಮ ಇಬ್ಬರೂ ಹೂವಾಡಿಗರ ಗಲ್ಲಿಯಲ್ಲಿ ನಂಬರ್ ಒನ್ ಹೂ ವ್ಯಾಪಾರಿಗಳಾಗಿದ್ದವರು.<br /> <br /> ನನ್ನ ಐದನೇ ವಯಸ್ಸಿಗೇ ಅಪ್ಪನನ್ನು ಕಳಕೊಂಡಿದ್ದರಿಂದ ಅವರ ವಹಿವಾಟಿನ ವಿಚಾರ ಗೊತ್ತಿಲ್ಲ. ಆದರೆ ತಾಯಿ ಎಲ್ಲ ಸವಾಲುಗಳನ್ನು ಎದುರಿಸಿ ನಂಬರ್ ಒನ್ ಸ್ಥಾನದಲ್ಲೇ ಮುಂದುವರಿದರು. ಈರೋಡ್ನಲ್ಲಿ ನೆಲೆಸಿದ್ದ ನೀಲಗಿರೀಸ್ ಕುಟುಂಬ ಹಾಗೂ ಖೋಡೇಸ್ ಕುಟುಂಬಕ್ಕೆ ನಮ್ಮ ತಾಯಿಯೇ ಫ್ಲೋರಿಸ್ಟ್ ಆಗಿದ್ದರು~ ಎಂದು ನೆನಪಿನ ಬುತ್ತಿ ಬಿಚ್ಚುತ್ತಾರೆ.<br /> <br /> ಹೀಗೆ ಮಾತು ಸಾಗಿರುವಾಗ ಅಡುಗೆ ಮನೆಯಿಂದ ಒಂದು ಊಟದ ತಟ್ಟೆ ತಂದರು ಶೈಲಾ. ಕನಿಷ್ಠ ಮೂರು ಕೆ.ಜಿ. ತೂಗುವ ಕಂಚಿನ ತಟ್ಟೆ. ಮುತ್ತಾತ ವೆಂಕಟಪ್ಪ ಅವರ `ಕಂಚಿ~! ಬೆನ್ನಲ್ಲೇ ತಾಮ್ರ ಮತ್ತು ಕಂಚಿನ ಪಾತ್ರೆಗಳು, ಕಾಲುದೀಪಗಳೂ ಬಂದವು. ಐದನೇ ತಲೆಮಾರಿನ ಸುಪರ್ದಿಯಲ್ಲೊಂದು ವಸ್ತು ಸಂಗ್ರಹಾಲಯ! <br /> <br /> ತಮ್ಮ ಮನೆಗೆ `ಆ್ಯಂಟಿಕ್ ಪೀಸ್~ನ ಮೌಲ್ಯವಿದೆ ಎಂಬ ಸತ್ಯವನ್ನು ಅರಿತಿರುವ ಶ್ರೀಧರಬಾಬು ದಂಪತಿ, ಇಡೀ ಗಲ್ಲಿಯ ಮನೆಗಳು, ಮನೆಗಳವರು ಆಧುನಿಕತೆಗೆ ತೆರೆದುಕೊಂಡರೂ ತಮ್ಮ ಮನೆಯ `ಇತಿಹಾಸ~ಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ವಿಶೇಷ. <br /> <br /> 110 ವರ್ಷಗಳಿಂದಲೂ ಗಟ್ಟಿಮುಟ್ಟಾಗಿ ಮನೆಯನ್ನು ಹೊತ್ತು ನಿಂತಿರುವ ಮಣ್ಣಿನ ಗೋಡೆ, ಹೊಸ್ತಿಲು, ಮೆಟ್ಟಿಲು, ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಮೆಷ್... ಈ ಮನೆಗೆ ಈ ಮನೆಯೇ ಸಾಟಿ! ಭೇಷ್...<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ ಮನೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಬಾಗಿಲಿಗೆ ಅಭಿಮುಖವಾಗಿದ್ದ ಎರಡೂವರೆ ಅಡಿ ಎತ್ತರದ ಗೋಡೆ ಗಡಿಯಾರ ಗಮನ ಸೆಳೆಯಿತು. ಏಳು ಗಂಟೆ ಸೂಚಿಸುತ್ತಿತ್ತು. ಕೆಟ್ಟಿದೆ ಅಂದುಕೊಂಡೆ. <br /> <br /> ಅದನ್ನರಿತುಕೊಂಡವರಂತೆ ಮನೆ ಯಜಮಾನ ಶ್ರಿಧರಬಾಬು, `ಬೆನ್ನು ಹಿಡಿದುಕೊಂಡಿದೆ. ಕೀ ಕೊಡಲಾಗುತ್ತಿಲ್ಲ. ಕೀ ಕೊಟ್ಟರೆ ಸಾಕು ಒಂದೂ ದಿನ ಕೆಡದೆ ಕೆಲಸ ಮಾಡುತ್ತದೆ, 150 ವರ್ಷ ದುಡಿಯೋದು ಅಂದ್ರೇನು ತಮಾಷೇನಾ?~... ತಾತನಿಗೇ ಅಂದಂತೆ ಅಕ್ಕರೆಯ ಮಾತಾಡಿದರು. `ಅದು ಹೊಡೆದುಕೊಂಡರೇನೇ ನಮ್ಮ ಮಕ್ಕಳು ಎದ್ದು ಶಾಲೆಗೆ ರೆಡಿಯಾಗೋದು. <br /> <br /> ಆಯಿಲಿಂಗೂ ಮಾಡಿಲ್ಲ. ಅದೇ ತರಹ ಹೊಳೀತಾ ಇದೆ~ ಎಂದು ಇನ್ನೊಂದಷ್ಟು ಹೊಗಳಿದರು. ಹೊರಗಿನ ಬಿಸಿಲಿಗೆ ಗಡಿಯಾರದ ಸಾಗುವಾನಿ ಚೌಕಟ್ಟು, ಕಿರೀಟದಂತಹ ಕುಸುರಿ ವಿನ್ಯಾಸ, ಕರ್ರಗಿನ ಎಣ್ಣೆ ಮೈ ಕೋರೈಸಿತು. ಅದನ್ನು ಜರ್ಮನಿಯಿಂದ ಆಮದು ಮಾಡಿಸಿಕೊಂಡ ತಾತ ಕಣ್ಣು ಮಿಟುಕಿಸಿದರೇನೊ?<br /> <br /> ಶ್ರಿಧರಬಾಬು ಇದ್ದಕ್ಕಿದ್ದಂತೆ ಸ್ಟೂಲ್ ಇಟ್ಟು ಹತ್ತಿ 10 ಅಡಿ ಎತ್ತರದಲ್ಲಿದ್ದ ಆ ಗಡಿಯಾರದ ಬಾಗಿಲು ತೆರೆದು ದಪ್ಪದ ಕೀಲಿಕೈಯಿಂದ ಕಿರ್ರ್ ಕಿರ್ರ್ ಅಂತ ಮೂರು ಸುತ್ತು ಕೀಲಿ ತಿರುವಿದರು. ಟಕ್ ಟಕ್ ಶುರುವಾಯ್ತು. ಮುಳ್ಳುಗಳನ್ನು ಹೊಂದಿಸಿ 12 ಮಾಡಿದರು. ಗಂಟೆಯು ಢಣ್ ಢಣ್ ಬಾರಿಸಿತು! ಕಂಚಿನ ಕಡಾಯಿಗೆ ಸುತ್ತಿಗೆಯಲ್ಲಿ ಬಡಿದಂತಾಯಿತು.<br /> <br /> ಅದರ ಎಡಬಲದ ಗೋಡೆಯಲ್ಲಿ ಆಳೆತ್ತರದ ಎರಡು ಕನ್ನಡಿಗಳು, `ಹಲೋ ನಾವೂ ಇದ್ದೇವೆ~ ಅಂತ ಕಣ್ಣು ಮಿಟುಕಿಸಿದವು. 150 ವರ್ಷಗಳ ಹಿಂದೆ ದೂರದ ಬೆಲ್ಜಿಯಂನಿಂದ ಈ ಮನೆಗೆ ಬಂದಿರುವ ಸದಸ್ಯರು ಅವರು. ಕರೆಸಿಕೊಂಡವರು ಶ್ರೀಧರಬಾಬು ಅವರ ಮುತ್ತಾತ ವೆಂಕಟಪ್ಪ. (ವೆಂಕಟಪ್ಪನವರ ಮಗ ಎಚ್. ವಿ. ತಿಮ್ಮಯ್ಯ (ಅವಿವಾಹಿತ); ಅವರ ತಮ್ಮನ ಹೆಂಡತಿ ಶಾರದಮ್ಮ; ಅವರ ಮಗಳು ಸಾವಿತ್ರಮ್ಮ, ಈ ಶ್ರೀಧರ್ಬಾಬು ತಾಯಿ).<br /> <br /> -ಹೀಗೆ, ನಾಲ್ಕು ತಲೆಮಾರುಗಳಿಗೆ `ಚಾಕರಿ~ ಮಾಡಿ ಐದನೇ ತಲೆಮಾರಿಗೆ ಬಡ್ತಿ ಪಡೆದಿರುವ ಈ ಆ್ಯಂಟಿಕ್ ಪೀಸ್ಗಳು ಇರುವುದು ಬಳೆಪೇಟೆಯ ಮಡಿಲಲ್ಲಿರುವ ಹೂವಾಡಿಗರ ಗಲ್ಲಿಯಲ್ಲಿ.<br /> <br /> ಬಳೆಪೇಟೆಯ ಬಗ್ಗೆ ಏನೋ ಮಾಹಿತಿ ಹುಡುಕುತ್ತಿದ್ದಾಗ ಈ ಶ್ರಿಧರಬಾಬು ಅವರ ವಿಳಾಸದಲ್ಲಿ ಗಮನ ಸೆಳೆದದ್ದು `ಹೂವಾಡಿಗರ ಗಲ್ಲಿ~ (ಹೂವಾಡಿಗರ ಲೇನ್... ಫ್ಲೋರಿಸ್ಟ್ ಲೇನ್ ಅಲ್ಲ!) ಎಂಬ ಹೆಸರು. ರಸ್ತೆ, ಗಲ್ಲಿಯ ತುಂಬಾ ಹೂವಿನ ಘಮಲು ಆವರಿಸಿಕೊಂಡಿದ್ದೀತು ಎಂಬ ಭ್ರಮೆ ಬರಿ ಭ್ರಮೆಯೇ ಆಯಿತು. ಯಾವ ಗಲ್ಲಿಯಲ್ಲಿಯೂ ಓಣಿಯಲ್ಲಿಯೂ ಹೂಗಂಧದ ಸುಳಿವಿರಲಿಲ್ಲ. <br /> <br /> ಅಸಲಿಗೆ, ಹೂವಾಡಿಗರ ಗಲ್ಲಿ ಎಂಬ ಈ ಹಳೆ ಬೆಂಗಳೂರಿನ ಪಳೆಯುಳಿಕೆಯಲ್ಲಿ ಈಗ ಇರುವ ಹೂವಾಡಿಗರ ಸಂಖ್ಯೆ ಬೆರಳೆಣಿಕೆಯಷ್ಟು..ಒಂದು ಕಾಲದಲ್ಲಿ ಹೂ ಕಟ್ಟುವವರಿಗೆ, ಮಾರುವವರಿಗೆ ಬದುಕಿನ ಬುತ್ತಿಯಾಗಿದ್ದ ತಾಣ ಈ ಹೂವಾಡಿಗರ ಗಲ್ಲಿ. <br /> <br /> ಆದರೆ ಈಗ ಬಗೆಬಗೆ ವ್ಯಾಪಾರ, ವಹಿವಾಟುಗಳವರ ಹೆಜ್ಜೆಗುರುತು. ಅಂತಹ ಬೆರಳೆಣಿಕೆಯ ಹೂವಾಡಿಗರ ಮನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೇ ಈ ಶ್ರಿಧರಬಾಬು. ಮುತ್ತಾತನ ಕಾಲದಿಂದಲೂ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ವೃತ್ತಿಗೆ ಅಂಟಿಕೊಂಡಿರಲಾಗದೆ ಒಂದು ಹಂತದಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನೌಕರಿ ಹಿಡಿದರೂ ಹೂವಿನ ಗಂಧ ಅವರನ್ನು ಮತ್ತೆ ಹೂವಾಡಿಗರ ಗಲ್ಲಿಗೇ ಎಳೆತಂದಿದ್ದನ್ನು ಅವರು ಸೊಗಸಾಗಿ ವಿವರಿಸುತ್ತಾರೆ.<br /> <br /> ಹೂವಾಡಿಗರ ಗಲ್ಲಿಯಲ್ಲಿ ಹೂ ಗಂಧವೇ ಇಲ್ಲವಲ್ಲ ಅಂತ ಬೇಸರಿಸಲು ಅವಕಾಶವೇ ಕೊಡದಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಈ ಮನೆ. ವಯಸ್ಸು... ಮತ್ತದೇ... 150 ವರ್ಷ!ಹೊಸ್ತಿಲಾಚೆ ನಿಂತು ನೋಡಿದರೆ `ಯಾವುದೋ ಒಂದು ಹಳೆಯ ಕಟ್ಟಡ~ವಾಗಿ ಕಾಣಿಸಿದರೂ ಇದು ಅಪ್ಪಟ ಪುರಾತನ ವಸ್ತು ಸಂಗ್ರಹಾಲಯ! ಅಲ್ಲಿ ಈಗ ಇರುವುದು ಐದನೇ ತಲೆಮಾರಿನ ಸದಸ್ಯರು. <br /> <br /> ಈಗಿನ ಯಜಮಾನ ಶ್ರೀಧರಬಾಬು ಪಾಲಿಗೆ ಈ ಮನೆಯೆ ಒಂದು ಅನುಭೂತಿ. `ಹೆಂಡತಿ ಮನೆಗೆ ಹೋದವನು ಅಲ್ಲಿ ನಿದ್ದೆ ಬಾರದೆ ಮಧ್ಯರಾತ್ರಿ ಎರಡು ಗಂಟೆಗೆ ಇಲ್ಲಿಗೆ ಬಂದದ್ದೂ ಇದೆ~ ಎಂಬ ಅವರ ಮಾತಿನಲ್ಲೇ ಮನೆಯೊಂದಿಗಿನ ಅವರ ನಂಟಿನ ಸೆಳಕಿದೆ.<br /> <br /> `ನಮ್ಮ ಮುತ್ತಾತ ಮತ್ತು ತಾತ ವೈಭೋಗದಲ್ಲಿ ಬದುಕಿದವರು. ವಿದೇಶದಿಂದ ವಿಲಾಸಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದು ಅವರಿಗೆ ಶೋಕಿ. ಬೆಲೆಯ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ ಅವರು. ಮುತ್ತಾತ ಆಗಿನ ಕಾಲದಲ್ಲೇ ಮುಂಚೂಣಿ ಹೂವಿನ ವ್ಯಾಪಾರಿ. <br /> <br /> ಅವರ ಪತ್ನಿ, ನಮ್ಮ ಮುತ್ತಜ್ಜಿಯೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರಂತೆ. ಅದೇ ಪರಂಪರೆ ತಾತನ ಕಾಲದಲ್ಲೂ ಮುಂದುವರಿಯಿತು. ಈ ಮನೆ ಮುಂದೆ ನಮ್ಮ ತಾಯಿ ಸಾವಿತ್ರಮ್ಮನವರಿಗೆ ವಂಶಪಾರಂಪರ್ಯವಾಗಿ ಬಂತು. ನಮ್ಮ ಅಪ್ಪ-ಅಮ್ಮ ಇಬ್ಬರೂ ಹೂವಾಡಿಗರ ಗಲ್ಲಿಯಲ್ಲಿ ನಂಬರ್ ಒನ್ ಹೂ ವ್ಯಾಪಾರಿಗಳಾಗಿದ್ದವರು.<br /> <br /> ನನ್ನ ಐದನೇ ವಯಸ್ಸಿಗೇ ಅಪ್ಪನನ್ನು ಕಳಕೊಂಡಿದ್ದರಿಂದ ಅವರ ವಹಿವಾಟಿನ ವಿಚಾರ ಗೊತ್ತಿಲ್ಲ. ಆದರೆ ತಾಯಿ ಎಲ್ಲ ಸವಾಲುಗಳನ್ನು ಎದುರಿಸಿ ನಂಬರ್ ಒನ್ ಸ್ಥಾನದಲ್ಲೇ ಮುಂದುವರಿದರು. ಈರೋಡ್ನಲ್ಲಿ ನೆಲೆಸಿದ್ದ ನೀಲಗಿರೀಸ್ ಕುಟುಂಬ ಹಾಗೂ ಖೋಡೇಸ್ ಕುಟುಂಬಕ್ಕೆ ನಮ್ಮ ತಾಯಿಯೇ ಫ್ಲೋರಿಸ್ಟ್ ಆಗಿದ್ದರು~ ಎಂದು ನೆನಪಿನ ಬುತ್ತಿ ಬಿಚ್ಚುತ್ತಾರೆ.<br /> <br /> ಹೀಗೆ ಮಾತು ಸಾಗಿರುವಾಗ ಅಡುಗೆ ಮನೆಯಿಂದ ಒಂದು ಊಟದ ತಟ್ಟೆ ತಂದರು ಶೈಲಾ. ಕನಿಷ್ಠ ಮೂರು ಕೆ.ಜಿ. ತೂಗುವ ಕಂಚಿನ ತಟ್ಟೆ. ಮುತ್ತಾತ ವೆಂಕಟಪ್ಪ ಅವರ `ಕಂಚಿ~! ಬೆನ್ನಲ್ಲೇ ತಾಮ್ರ ಮತ್ತು ಕಂಚಿನ ಪಾತ್ರೆಗಳು, ಕಾಲುದೀಪಗಳೂ ಬಂದವು. ಐದನೇ ತಲೆಮಾರಿನ ಸುಪರ್ದಿಯಲ್ಲೊಂದು ವಸ್ತು ಸಂಗ್ರಹಾಲಯ! <br /> <br /> ತಮ್ಮ ಮನೆಗೆ `ಆ್ಯಂಟಿಕ್ ಪೀಸ್~ನ ಮೌಲ್ಯವಿದೆ ಎಂಬ ಸತ್ಯವನ್ನು ಅರಿತಿರುವ ಶ್ರೀಧರಬಾಬು ದಂಪತಿ, ಇಡೀ ಗಲ್ಲಿಯ ಮನೆಗಳು, ಮನೆಗಳವರು ಆಧುನಿಕತೆಗೆ ತೆರೆದುಕೊಂಡರೂ ತಮ್ಮ ಮನೆಯ `ಇತಿಹಾಸ~ಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ವಿಶೇಷ. <br /> <br /> 110 ವರ್ಷಗಳಿಂದಲೂ ಗಟ್ಟಿಮುಟ್ಟಾಗಿ ಮನೆಯನ್ನು ಹೊತ್ತು ನಿಂತಿರುವ ಮಣ್ಣಿನ ಗೋಡೆ, ಹೊಸ್ತಿಲು, ಮೆಟ್ಟಿಲು, ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಮೆಷ್... ಈ ಮನೆಗೆ ಈ ಮನೆಯೇ ಸಾಟಿ! ಭೇಷ್...<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>