<p>ಕೊಪ್ಪಳ: ಬಿಡುವಿರದ ಇಂದಿನ ದಿನಮಾನದಲ್ಲಿಯೂ ಸಂಗೀತ, ನೃತ್ಯದಂತಹ ಕಲೆಗಳು ಜನರನ್ನು ಆಕರ್ಷಿಸುತ್ತವೆ. ಅಂತಹ ಕಲೆಗಳನ್ನು ಆಸ್ವಾದಿಸಲು ಜನರೂ ಬಯಸುತ್ತಾರೆ. ಏಕತಾನತೆಯಿಂದ ಹೊರಬರಲು, ನಿತ್ಯದ ಜಂಜಡಗಳನ್ನು ಮರೆತು ಮೈ-ಮನಕ್ಕೆ ಚೇತನ ನೀಡಲು ಇವು ಸಹಕಾರಿ. <br /> <br /> ಏಕತಾನತೆಯನ್ನು ದೂರ ಮಾಡಿ, ಎಲ್ಲರೂ ಸಂಗೀತ-ನೃತ್ಯ ಆಸ್ವಾದಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಜನತೆಗೆ ಅವಕಾಶ ಒದಗಿಸಿ ಕೊಟ್ಟಿತ್ತು.<br /> <br /> ಕಿನ್ನಾಳ ಮೂಲದ ಶಾರದಾ ಸಂಗೀತ, ಕಲಾ ಶಿಕ್ಷಣ ಸಂಸ್ಥೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಹಯೋಗದಲ್ಲಿ ಈಚೆಗೆ ಶ್ರೀಮಠದ ಆವರಣದಲ್ಲಿ ನಡೆದ `ಸಾಂಸ್ಕೃತಿಕ ಸೌರಭ~ ಎಂಬ ಕಾರ್ಯಕ್ರಮ ಕಲಾ ಪ್ರೇಮಿಗಳಿಗೆ ರಸದೌತಣ ನೀಡಿದ್ದಂತೂ ನಿಜ. <br /> <br /> ಮೊದಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಂತರ ಬೆಂಗಳೂರು ಮೂಲದ ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ರೂಪಕ.<br /> <br /> ಈ ಶಾಲೆಯ ಮುಖ್ಯಸ್ಥ ಸತೀಶ ಬಾಬು ಹಾಗೂ ಶಿಷ್ಯೆಯರು ಪ್ರದರ್ಶಿಸಿದ ಶಿವ-ಪಾರ್ವತಿ ನೃತ್ಯ ಹಾಗೂ ಗೊಂಬೆಯ ವೈಭವ ಎಂಬ ನೃತ್ಯ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಪ್ರಕಾರದ ಬೊಂಬೆಗಳನ್ನು ಪಾತ್ರಧಾರಿಗಳನ್ನಾಗಿ ಮಾಡಿ ಅವುಗಳಿಂದ ನೃತ್ಯ ಮಾಡಿಸುವುದು, ನಟಿಸುವಂತೆ ಮಾಡಿ ರಂಜಿಸುವುದು ಸಾಮಾನ್ಯ. ಆದರೆ, ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರು ಈ ನೃತ್ಯರೂಪಕದಲ್ಲಿ ಬೊಂಬೆಗಳೇ ಆಗಿದ್ದರು!<br /> <br /> ನೃತ್ಯರೂಪಕ ನೋಡಿದ ಯಾರೂ ಪಾತ್ರಧಾರಿಗಳು ನಿಜವಾದ ಬೊಂಬೆಗಳೇ ಅಚ್ಚರಿಪಡುವಷ್ಟು ಅಚ್ಚುಕಟ್ಟು ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.<br /> <br /> ಕೊಯಿಮತ್ತೂರಿನ ರಮೇಶ ಕುಲಕರ್ಣಿ ಅವರು ಗಾಯನ ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶ. ರಾಗ ಪೂರಿಯ ಕಲ್ಯಾಣ ತಿನ್ತಾಲ್ ಹಾಗೂ ತರಾನ, ದಾಸರ ಪದಗಳನ್ನು ಪ್ರಸ್ತುತ ಪಡಿಸಿ ಮುದ ನೀಡಿದರು. <br /> <br /> ವೀರೇಶ ಹಿಟ್ನಾಳ ಅವರಿಂದ ಹಾರ್ಮೋನಿಯಂ ಸಾಥ್, ಶರಣಕುಮಾರ ಗುತ್ತರಗಿ, ಶ್ರೀನಿವಾಸ ಜೋಷಿ, ಶಿವಲಿಂಗಪ್ಪ ಕಿನ್ನಾಳ, ಬಸವರಾಜ ಇಟಗಿ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.<br /> <br /> ಸಂಗೀತ ಕಾರ್ಯಕ್ರಮದಲ್ಲಿ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಕಲಾವಿದ ಲಚ್ಚಣ್ಣ ಕಿನ್ನಾಳ, ಗಂಗಾಧರ.ಜಿ.ಅರಳಿಕಟ್ಟಿ, ವಾದಿರಾಜ ಪಾಟೀಲ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಬಿಡುವಿರದ ಇಂದಿನ ದಿನಮಾನದಲ್ಲಿಯೂ ಸಂಗೀತ, ನೃತ್ಯದಂತಹ ಕಲೆಗಳು ಜನರನ್ನು ಆಕರ್ಷಿಸುತ್ತವೆ. ಅಂತಹ ಕಲೆಗಳನ್ನು ಆಸ್ವಾದಿಸಲು ಜನರೂ ಬಯಸುತ್ತಾರೆ. ಏಕತಾನತೆಯಿಂದ ಹೊರಬರಲು, ನಿತ್ಯದ ಜಂಜಡಗಳನ್ನು ಮರೆತು ಮೈ-ಮನಕ್ಕೆ ಚೇತನ ನೀಡಲು ಇವು ಸಹಕಾರಿ. <br /> <br /> ಏಕತಾನತೆಯನ್ನು ದೂರ ಮಾಡಿ, ಎಲ್ಲರೂ ಸಂಗೀತ-ನೃತ್ಯ ಆಸ್ವಾದಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಜನತೆಗೆ ಅವಕಾಶ ಒದಗಿಸಿ ಕೊಟ್ಟಿತ್ತು.<br /> <br /> ಕಿನ್ನಾಳ ಮೂಲದ ಶಾರದಾ ಸಂಗೀತ, ಕಲಾ ಶಿಕ್ಷಣ ಸಂಸ್ಥೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಹಯೋಗದಲ್ಲಿ ಈಚೆಗೆ ಶ್ರೀಮಠದ ಆವರಣದಲ್ಲಿ ನಡೆದ `ಸಾಂಸ್ಕೃತಿಕ ಸೌರಭ~ ಎಂಬ ಕಾರ್ಯಕ್ರಮ ಕಲಾ ಪ್ರೇಮಿಗಳಿಗೆ ರಸದೌತಣ ನೀಡಿದ್ದಂತೂ ನಿಜ. <br /> <br /> ಮೊದಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಂತರ ಬೆಂಗಳೂರು ಮೂಲದ ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ರೂಪಕ.<br /> <br /> ಈ ಶಾಲೆಯ ಮುಖ್ಯಸ್ಥ ಸತೀಶ ಬಾಬು ಹಾಗೂ ಶಿಷ್ಯೆಯರು ಪ್ರದರ್ಶಿಸಿದ ಶಿವ-ಪಾರ್ವತಿ ನೃತ್ಯ ಹಾಗೂ ಗೊಂಬೆಯ ವೈಭವ ಎಂಬ ನೃತ್ಯ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಪ್ರಕಾರದ ಬೊಂಬೆಗಳನ್ನು ಪಾತ್ರಧಾರಿಗಳನ್ನಾಗಿ ಮಾಡಿ ಅವುಗಳಿಂದ ನೃತ್ಯ ಮಾಡಿಸುವುದು, ನಟಿಸುವಂತೆ ಮಾಡಿ ರಂಜಿಸುವುದು ಸಾಮಾನ್ಯ. ಆದರೆ, ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರು ಈ ನೃತ್ಯರೂಪಕದಲ್ಲಿ ಬೊಂಬೆಗಳೇ ಆಗಿದ್ದರು!<br /> <br /> ನೃತ್ಯರೂಪಕ ನೋಡಿದ ಯಾರೂ ಪಾತ್ರಧಾರಿಗಳು ನಿಜವಾದ ಬೊಂಬೆಗಳೇ ಅಚ್ಚರಿಪಡುವಷ್ಟು ಅಚ್ಚುಕಟ್ಟು ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.<br /> <br /> ಕೊಯಿಮತ್ತೂರಿನ ರಮೇಶ ಕುಲಕರ್ಣಿ ಅವರು ಗಾಯನ ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶ. ರಾಗ ಪೂರಿಯ ಕಲ್ಯಾಣ ತಿನ್ತಾಲ್ ಹಾಗೂ ತರಾನ, ದಾಸರ ಪದಗಳನ್ನು ಪ್ರಸ್ತುತ ಪಡಿಸಿ ಮುದ ನೀಡಿದರು. <br /> <br /> ವೀರೇಶ ಹಿಟ್ನಾಳ ಅವರಿಂದ ಹಾರ್ಮೋನಿಯಂ ಸಾಥ್, ಶರಣಕುಮಾರ ಗುತ್ತರಗಿ, ಶ್ರೀನಿವಾಸ ಜೋಷಿ, ಶಿವಲಿಂಗಪ್ಪ ಕಿನ್ನಾಳ, ಬಸವರಾಜ ಇಟಗಿ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.<br /> <br /> ಸಂಗೀತ ಕಾರ್ಯಕ್ರಮದಲ್ಲಿ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಕಲಾವಿದ ಲಚ್ಚಣ್ಣ ಕಿನ್ನಾಳ, ಗಂಗಾಧರ.ಜಿ.ಅರಳಿಕಟ್ಟಿ, ವಾದಿರಾಜ ಪಾಟೀಲ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>