<p><strong>ನವ ದೆಹಲಿ (ಪಿಟಿಐ):</strong> ಚುನಾವಣಾ ನೀತಿ ಸಂಹಿತೆ ಬದಲಿಸುವ ಅಗತ್ಯವಿದೆ ಇತ್ತೀಚೆಗೆ ಕೆಲ ಸಚಿವರು ಹೇಳಿದ ವಿವಾಧಾತ್ನಕ ಹೇಳಿಕೆಗೆ ಪ್ರತ್ಯುತ್ತರವಾಗಿ ~ಚುನಾವಣಾ ಕಾನೂನಿಗೆ ಹೆಚ್ಚಿನ ಅಧಿಕಾರದ ಅಗತ್ಯವಿಲ್ಲ ಆದರೆ ಇರುವ ಕಾನೂನಿಗೆ ಇನ್ನಷ್ಟು ಬಲ ನೀಡುವ ಅಗತ್ಯವಿದೆ~ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅಭಿಪ್ರಾಯಪಟ್ಟರು.</p>.<p>ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು ~ಕಾನೂನು ಪ್ರಕಾರ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಬೇಕಾದ ಎಲ್ಲಾ ಸೌಲಭಗಳು ಆಯೋಗದ ಬಳಿ ಇವೆ. ಹೀಗಾಗಿ ಅದಕ್ಕೆ ಹೆಚ್ಚಿನ ಅಧಿಕಾರ ಅಗತ್ಯವಿಲ್ಲ. ಈಗಾಗಲೇ ಇರುವ ಕಾನೂನನ್ನು ಪರಿಪೂರ್ಣವಾಗಿ ಬಳಸಿ ಅದು ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ~ ಎಂದು ತಿಳಿಸಿದರು.</p>.<p>~ಸಧ್ಯ ಚುನಾವಣಾ ಕಾನೂನು ಉಲ್ಲಂಘಿಸಿದವರಿಗೆ ರೂ. 500 ದಂಡ ವಿಧಿಸಲಾಗುತ್ತಿದೆ. ಆದರೆ ದಂಡದ ಮೊತ್ತವನ್ನು ಸಧ್ಯದ ಪರಿಸ್ಥಿತಿಗೆ ತಕ್ಕಂತೆ ಮತ್ತಷ್ಟು ಹೆಚ್ಚಿಸಬೇಕಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವ ದೆಹಲಿ (ಪಿಟಿಐ):</strong> ಚುನಾವಣಾ ನೀತಿ ಸಂಹಿತೆ ಬದಲಿಸುವ ಅಗತ್ಯವಿದೆ ಇತ್ತೀಚೆಗೆ ಕೆಲ ಸಚಿವರು ಹೇಳಿದ ವಿವಾಧಾತ್ನಕ ಹೇಳಿಕೆಗೆ ಪ್ರತ್ಯುತ್ತರವಾಗಿ ~ಚುನಾವಣಾ ಕಾನೂನಿಗೆ ಹೆಚ್ಚಿನ ಅಧಿಕಾರದ ಅಗತ್ಯವಿಲ್ಲ ಆದರೆ ಇರುವ ಕಾನೂನಿಗೆ ಇನ್ನಷ್ಟು ಬಲ ನೀಡುವ ಅಗತ್ಯವಿದೆ~ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅಭಿಪ್ರಾಯಪಟ್ಟರು.</p>.<p>ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು ~ಕಾನೂನು ಪ್ರಕಾರ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಬೇಕಾದ ಎಲ್ಲಾ ಸೌಲಭಗಳು ಆಯೋಗದ ಬಳಿ ಇವೆ. ಹೀಗಾಗಿ ಅದಕ್ಕೆ ಹೆಚ್ಚಿನ ಅಧಿಕಾರ ಅಗತ್ಯವಿಲ್ಲ. ಈಗಾಗಲೇ ಇರುವ ಕಾನೂನನ್ನು ಪರಿಪೂರ್ಣವಾಗಿ ಬಳಸಿ ಅದು ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ~ ಎಂದು ತಿಳಿಸಿದರು.</p>.<p>~ಸಧ್ಯ ಚುನಾವಣಾ ಕಾನೂನು ಉಲ್ಲಂಘಿಸಿದವರಿಗೆ ರೂ. 500 ದಂಡ ವಿಧಿಸಲಾಗುತ್ತಿದೆ. ಆದರೆ ದಂಡದ ಮೊತ್ತವನ್ನು ಸಧ್ಯದ ಪರಿಸ್ಥಿತಿಗೆ ತಕ್ಕಂತೆ ಮತ್ತಷ್ಟು ಹೆಚ್ಚಿಸಬೇಕಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>