<p><strong>ಭಾರತದ ಕೃಷಿ ಮೇಲೆ ಕವಿಯಲಿದೆ ಕಾರ್ಮೋಡ</strong></p>.<p><strong>ಲಂಡನ್ (ಪಿಟಿಐ): </strong>ಜಾಗತಿಕ ತಾಪಮಾನ ಏರಿಕೆ ಫಲ ವಾಗಿ ಮುಂದಿನ 200 ವರ್ಷಗಳಲ್ಲಿ ಭಾರತದಲ್ಲಿ ಮುಂಗಾರು ಮಳೆ ಕೈಕೊಡುವ ಸಾಧ್ಯತೆ ಇದೆ ಎಂಬ ಆತಂಕಕಾರಿ ಅಂಶವನ್ನು ಸಂಶೋಧನೆಯೊಂದು ಬೆಳಕಿಗೆ ತಂದಿದೆ.<br /> <br /> ತಾಪಮಾನ ಹೆಚ್ಚಳದಿಂದ ಮುಂಗಾರು ಮಳೆ ಶೇ 40ರಿಂದ 70 ರಷ್ಟು ಕುಂಠಿತಗೊಳ್ಳಲಿದೆ. ಇದರ ನೇರ ಪರಿಣಾಮ ಭಾರತೀಯ ಕೃಷಿ ಮತ್ತು ಆರ್ಥಿಕ ಕ್ಷೇತ್ರದ ಮೇಲಾಗಲಿದೆ. ದೇಶದಲ್ಲಿ ಆಹಾರ ಸರಬರಾಜು ವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.<br /> <br /> ಭಾರತದ ಕೃಷಿ ಕ್ಷೇತ್ರ ಪ್ರಮುಖವಾಗಿ ಮುಂಗಾರು ಮಳೆಯನ್ನು ನೆಚ್ಚಿಕೊಂಡಿದೆ. ಜೂನ್ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಮಳೆಯಲ್ಲಿ ಇಲ್ಲಿನ ರೈತರು ಅಕ್ಕಿ, ಗೋಧಿಯಂತಹ ಆಹಾರಧಾನ್ಯಗಳನ್ನು ಬೆಳೆಯುತ್ತಾರೆ. <br /> <br /> ದೇಶದಲ್ಲಿ ಶೇ 70ರಷ್ಟು ಮಳೆಯನ್ನು ನೈರುತ್ಯ ಮಾರುತ ಹೊತ್ತು ತರುತ್ತದೆ. ಹಿಂದೂ ಮಹಾಸಾಗರದ ಪಶ್ಚಿಮ ಭಾಗದಿಂದ ಭಾರತ ಪ್ರವೇಶಿಸುವ ಪೆಸಿಫಿಕ್ ಮಾರುತ (ಎಲ್ನಿನೋ ) ಈ ಮಳೆಗೆ ಕಾರಣವಾಗುತ್ತವೆ. ಆದರೆ, ಮುಂಬರುವ ದಿನಗಳಲ್ಲಿ ಈ ಮಾರುತಗಳು ಪೂರ್ವ ಭಾಗಕ್ಕೆ ತಮ್ಮ ದಿಕ್ಕನ್ನು ಬದಲಾಯಿಸುವ ಕಾರಣ ಮುಂಗಾರು ದುರ್ಬಲಗೊಳ್ಳುತ್ತದೆ, ಹವಾಮಾನ ವೈಪರೀತ್ಯ ಕಾಣಿಸಿಕೊಳ್ಳಲಿದೆ.<br /> <br /> ಪಾಟ್ಸ್ಡ್ಯಾಂ ವಿವಿ ಮತ್ತು ಹವಾಮಾನ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಪ್ರಕಾರ 22ನೇ ಶತಮಾನದಲ್ಲಿ ಮುಂಗಾರು ಮಾರುತಗಳ ವ್ಯವಸ್ಥೆ ಹದಗೆಡಲಿದೆ. ತಾಪಮಾನ ಮತ್ತು ಪೆಸಿಫಿಕ್ ಸಾಗರದ ಮಾರುತಗಳ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಲಿವೆ. `ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್~ ಸಂಶೋಧನಾ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.<br /> </p>.<p><strong>ಕುಗ್ಗುತ್ತಿರುವ ಜಲಚರಗಳ ಗಾತ್ರ</strong></p>.<p>ಜಾಗತಿಕ ತಾಪಮಾನ ಕೇವಲ ಭೂಮಿಯ ಮೇಲಿನ ಪ್ರಾಣಿಗಳ ಮೇಲಲ್ಲದೆ ಜಲ ಚರಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಲಂಡನ್ ಸಂಶೋಧಕರು ಬಹಿರಂಗಪಡಿಸಿದ್ದಾರೆ.<br /> <br /> ಜಾಗತಿಕ ತಾಪಮಾನದಿಂದಾಗಿ ಭೂಮಿ ಮೇಲಿನ ಪ್ರಾಣಿಗಳಿಗಿಂತ ಜಲಚರಗಳ ಗಾತ್ರ ಹತ್ತು ಪಟ್ಟು ಕುಗ್ಗುತ್ತಿದೆ ಎಂದು ಲಂಡನ್ ವಿಶ್ವವಿದ್ಯಾನಿಲಯದ ಕ್ವೀನ್ ಮೇರಿ ಕಾಲೇಜಿನ ಸಂಶೋಧಕರು ಹಾಗೂ ಲಿವರ್ಪೂಲ್ ವಿವಿಗಳ ವಿದ್ಯಾರ್ಥಿಗಳ ತಂಡ ಹೇಳಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತದ ಕೃಷಿ ಮೇಲೆ ಕವಿಯಲಿದೆ ಕಾರ್ಮೋಡ</strong></p>.<p><strong>ಲಂಡನ್ (ಪಿಟಿಐ): </strong>ಜಾಗತಿಕ ತಾಪಮಾನ ಏರಿಕೆ ಫಲ ವಾಗಿ ಮುಂದಿನ 200 ವರ್ಷಗಳಲ್ಲಿ ಭಾರತದಲ್ಲಿ ಮುಂಗಾರು ಮಳೆ ಕೈಕೊಡುವ ಸಾಧ್ಯತೆ ಇದೆ ಎಂಬ ಆತಂಕಕಾರಿ ಅಂಶವನ್ನು ಸಂಶೋಧನೆಯೊಂದು ಬೆಳಕಿಗೆ ತಂದಿದೆ.<br /> <br /> ತಾಪಮಾನ ಹೆಚ್ಚಳದಿಂದ ಮುಂಗಾರು ಮಳೆ ಶೇ 40ರಿಂದ 70 ರಷ್ಟು ಕುಂಠಿತಗೊಳ್ಳಲಿದೆ. ಇದರ ನೇರ ಪರಿಣಾಮ ಭಾರತೀಯ ಕೃಷಿ ಮತ್ತು ಆರ್ಥಿಕ ಕ್ಷೇತ್ರದ ಮೇಲಾಗಲಿದೆ. ದೇಶದಲ್ಲಿ ಆಹಾರ ಸರಬರಾಜು ವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.<br /> <br /> ಭಾರತದ ಕೃಷಿ ಕ್ಷೇತ್ರ ಪ್ರಮುಖವಾಗಿ ಮುಂಗಾರು ಮಳೆಯನ್ನು ನೆಚ್ಚಿಕೊಂಡಿದೆ. ಜೂನ್ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಮಳೆಯಲ್ಲಿ ಇಲ್ಲಿನ ರೈತರು ಅಕ್ಕಿ, ಗೋಧಿಯಂತಹ ಆಹಾರಧಾನ್ಯಗಳನ್ನು ಬೆಳೆಯುತ್ತಾರೆ. <br /> <br /> ದೇಶದಲ್ಲಿ ಶೇ 70ರಷ್ಟು ಮಳೆಯನ್ನು ನೈರುತ್ಯ ಮಾರುತ ಹೊತ್ತು ತರುತ್ತದೆ. ಹಿಂದೂ ಮಹಾಸಾಗರದ ಪಶ್ಚಿಮ ಭಾಗದಿಂದ ಭಾರತ ಪ್ರವೇಶಿಸುವ ಪೆಸಿಫಿಕ್ ಮಾರುತ (ಎಲ್ನಿನೋ ) ಈ ಮಳೆಗೆ ಕಾರಣವಾಗುತ್ತವೆ. ಆದರೆ, ಮುಂಬರುವ ದಿನಗಳಲ್ಲಿ ಈ ಮಾರುತಗಳು ಪೂರ್ವ ಭಾಗಕ್ಕೆ ತಮ್ಮ ದಿಕ್ಕನ್ನು ಬದಲಾಯಿಸುವ ಕಾರಣ ಮುಂಗಾರು ದುರ್ಬಲಗೊಳ್ಳುತ್ತದೆ, ಹವಾಮಾನ ವೈಪರೀತ್ಯ ಕಾಣಿಸಿಕೊಳ್ಳಲಿದೆ.<br /> <br /> ಪಾಟ್ಸ್ಡ್ಯಾಂ ವಿವಿ ಮತ್ತು ಹವಾಮಾನ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಪ್ರಕಾರ 22ನೇ ಶತಮಾನದಲ್ಲಿ ಮುಂಗಾರು ಮಾರುತಗಳ ವ್ಯವಸ್ಥೆ ಹದಗೆಡಲಿದೆ. ತಾಪಮಾನ ಮತ್ತು ಪೆಸಿಫಿಕ್ ಸಾಗರದ ಮಾರುತಗಳ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಲಿವೆ. `ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್~ ಸಂಶೋಧನಾ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.<br /> </p>.<p><strong>ಕುಗ್ಗುತ್ತಿರುವ ಜಲಚರಗಳ ಗಾತ್ರ</strong></p>.<p>ಜಾಗತಿಕ ತಾಪಮಾನ ಕೇವಲ ಭೂಮಿಯ ಮೇಲಿನ ಪ್ರಾಣಿಗಳ ಮೇಲಲ್ಲದೆ ಜಲ ಚರಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಲಂಡನ್ ಸಂಶೋಧಕರು ಬಹಿರಂಗಪಡಿಸಿದ್ದಾರೆ.<br /> <br /> ಜಾಗತಿಕ ತಾಪಮಾನದಿಂದಾಗಿ ಭೂಮಿ ಮೇಲಿನ ಪ್ರಾಣಿಗಳಿಗಿಂತ ಜಲಚರಗಳ ಗಾತ್ರ ಹತ್ತು ಪಟ್ಟು ಕುಗ್ಗುತ್ತಿದೆ ಎಂದು ಲಂಡನ್ ವಿಶ್ವವಿದ್ಯಾನಿಲಯದ ಕ್ವೀನ್ ಮೇರಿ ಕಾಲೇಜಿನ ಸಂಶೋಧಕರು ಹಾಗೂ ಲಿವರ್ಪೂಲ್ ವಿವಿಗಳ ವಿದ್ಯಾರ್ಥಿಗಳ ತಂಡ ಹೇಳಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>