<p><strong>ನವದೆಹಲಿ:</strong> ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದ ನೆರವು ಸಿಗುವ ಸಾಧ್ಯತೆಗಳಿಲ್ಲ. ಹೆಚ್ಚುವರಿ ವಿದ್ಯುತ್ ಪೂರೈಸುವಂತೆ ಮಂಗಳವಾರ ಮನವಿ ಮಾಡಿದ ರಾಜ್ಯಕೆ ಇಂಧನ ಸಚಿವಾಲಯ ಸ್ಪಷ್ಟ ಭರವಸೆ ಕೊಡದೆ `ಬಂದ ದಾರಿಗೆ ಸುಂಕ ಇಲ್ಲ~ ಎಂಬಂತೆ ಬರಿಗೈ ತೋರಿಸಿ ಕಳುಹಿಸಿದೆ.<br /> <br /> ~ರಾಜ್ಯವೇ ವಿದ್ಯುತ್ ಸಮಸ್ಯೆಗೆ ಪೂರ್ಣ ಹೊಣೆ. ಇದರಲ್ಲಿ ಕೇಂದ್ರದ ಪಾತ್ರವೇನೂ ಇಲ್ಲ. ವಿದ್ಯುತ್ ಸಮವರ್ತಿ ಪಟ್ಟಿಯಲ್ಲಿರುವ ವಿಷಯವಾದರೂ ನಮ್ಮಲ್ಲಿರುವ ಸೀಮಿತ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡುತ್ತಿದ್ದೇವೆ~ ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.<br /> <br /> ವಿದ್ಯುತ್ ಅಭಾವದಿಂದ ~ಲೋಡ್ ಶೆಡ್ಡಿಂಗ್~ ಸಮಸ್ಯೆ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಪೂರೈಸಬೇಕು ಎಂದು ಸುಶೀಲ್ ಕುಮಾರ್ ಶಿಂಧೆ ಅವರಿಗೆ ರಾಜ್ಯ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದರು. ಆದರೆ, ರಾಜ್ಯದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನ ದೊರೆಯಲಿಲ್ಲ.<br /> <br /> ~ಕರ್ನಾಟಕ ವಿದ್ಯುತ್ ಸಮಸ್ಯೆಗೆ ಕೇಂದ್ರದ ಕಡೆ ಬೆರಳು ತೋರುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ರಾಜ್ಯದ ಹೊಣೆ. ಆದರೂ ಕರ್ನಾಟಕದ ಮನವಿಯನ್ನು ಪರಿಶೀಲಿಸಲು ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಬುಧವಾರ ಬೆಳಿಗ್ಗೆ ರಾಜ್ಯದ ಅಧಿಕಾರಿಗಳ ಜತೆ ಸಭೆ ನಡೆಯಲಿದೆ~ ಎಂದು ಶಿಂಧೆ ತಿಳಿಸಿದರು.<br /> <br /> ~ವಿದ್ಯುತ್ ಹೆಸರಿನಲ್ಲಿ ರಾಜಕೀಯ ಮಾಡುವುದು ನನಗಂತೂ ಇಷ್ಟವಿಲ್ಲ. ಕರ್ನಾಟಕದ ಬಗೆಗೆ ಯುಪಿಎ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂದು ಹೇಳುವುದು ಸರಿಯಲ್ಲ. ವಿದ್ಯುತ್ ಸಮಸ್ಯೆ ಆ ರಾಜ್ಯದಲ್ಲಿ ಮಾತ್ರ ಇಲ್ಲ. ಮಹಾರಾಷ್ಟ್ರ, ದೆಹಲಿ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿದೆ~ ಎಂದು ಸ್ಪಷ್ಟಪಡಿಸಿದರು.<br /> <br /> ಕೇಂದ್ರ ಸರ್ಕಾರದ ಬಳಿ ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಇದೆ. ಅದನ್ನು ಎಲ್ಲರಿಗೂ ಹಂಚಿಕೆ ಮಾಡಲಾಗುತ್ತಿದೆ. ಎಲ್ಲವನ್ನು ಕೇಂದ್ರವೇ ಪೂರೈಸಬೇಕೆಂದು ನಿರೀಕ್ಷಿಸಬಾರದು. ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಬಾರದು. ಕಾಲಕಾಲಕ್ಕೆ ಅಗತ್ಯವಾದ ವಿದ್ಯುತ್ ಅನ್ನು ರಾಜ್ಯಗಳೇ ಉತ್ಪಾದಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.<br /> <br /> ನೆರವು ಭರವಸೆ: ಸಮಸ್ಯೆಗೆ ಸಿಕ್ಕಿರುವ ರಾಜ್ಯಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಸಭೆಯ ಬಳಿಕ ಶೋಭಾ ಸ್ಪಷ್ಟಪಡಿಸಿದರು. ರಾಜ್ಯಕ್ಕೆ ಕೊರತೆ ಆಗಿರುವ ವಿದ್ಯುತ್ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಚಿವರಿಗೆ ಕೇಳಲಾಗಿದೆ.<br /> <br /> ರಾಜ್ಯಕ್ಕೆ ಪ್ರತಿನಿತ್ಯ ಏಳು ಸಾವಿರ ಮೆ.ವಾ ವಿದ್ಯುತ್ ಅಗತ್ಯವಿದೆ. ಆದರೆ, ಆರು ಸಾವಿರ ಮೆ.ವಾ ಲಭ್ಯತೆ ಇದೆ. ಅಂತರ ಹೆಚ್ಚೇನೂ ಇಲ್ಲ. ಸಮಸ್ಯೆಯನ್ನು ಗಂಭೀರ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಬರೀ ಮಾಧ್ಯಮಗಳ ಸೃಷ್ಟಿ ಎಂದು ಇಂಧನ ಸಚಿವರು ದೂರಿದರು. <br /> <br /> ಛತ್ತೀಸ್ಗಢದಿಂದ 200 ಮೆ.ವಾ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ವಿತರಣಾ ಜಾಲದ ಸಮಸ್ಯೆಯಿಂದ ಕೇವಲ 16 ಮೆ.ವಾ ಮಾತ್ರ ಪೂರೈಕೆ ಆಗುತ್ತಿದೆ. ಈ ಕಾರಣಕ್ಕೆ ಪೂರ್ವದ ಬದಲಿಗೆ ಪಶ್ಚಿಮದ ಮಹಾರಾಷ್ಟ್ರ ಮತ್ತು ಗೋವಾದ ಮುಖಾಂತರ ವಿದ್ಯುತ್ ಒದಗಿಸುವಂತೆ ಕೋರಲಾಗಿದೆ ಎಂದು ಸ್ಪಷ್ಟಪಡಿಸಿದರು.<br /> <br /> ಬುಧವಾರ ಕಲ್ಲಿದ್ದಲು ಸಚಿವರನ್ನು ಭೇಟಿ ಮಾಡಲಾಗುತ್ತಿದೆ. ರಾಜ್ಯಕ್ಕೆ ಪ್ರತಿದಿನ 23 ಸಾವಿರ ದಶಲಕ್ಷ ಟನ್ ಕಲ್ಲಿದ್ದಲು ಅಗತ್ಯವಿದೆ. 11 ಸಾವಿರ ದಶಲಕ್ಷ ಟನ್ ಪೂರೈಕೆ ಆಗುತ್ತಿದೆ. ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಆಗಿದೆ ಎಂದು ಸಚಿವರು ಖಚಿತಪಡಿಸಿದರು.<br /> <br /> ಸಿಂಗರೇಣಿಯಿಂದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 10.5ದಶಲಕ್ಷ ಟನ್ ಕಲ್ಲಿದ್ದಲು ಬರಬೇಕಿತ್ತು. 5.5 ದಶಲಕ್ಷ ಟನ್ ಬಂದಿದೆ. ತಲಚೇರಿಯಿಂದ 14.5 ದಶಲಕ್ಷ ಟನ್ ಬರಬೇಕಿತ್ತು. ಎಂಟು ದಶಲಕ್ಷ ಟನ್ ಮಾತ್ರ ಪೂರೈಕೆ ಆಗಿದೆ. `ವೆಸ್ಟ್ ಕೋಸ್ಟ್~ ಗಣಿಯಿಂದ ಮಾತ್ರ ಸರಿಯಾದ ಪ್ರಮಾಣದ ಕಲ್ಲಿದ್ದಲು ಬಂದಿದೆ ಎಂದು ಸಚಿವರು ನುಡಿದರು.<br /> <br /> ಕರ್ನಾಟಕದ ದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್, ವಿಶೇಷ ಸಹಾಯಕ ಪ್ರತಿನಿಧಿ ಬೈಕೆರೆ ನಾಗೇಶ್, ರೆಸಿಡೆಂಟ್ ಕಮಿಷನರ್ ವಂದನಾ ಗುರ್ನಾನಿ, ಇಂಧನ ಇಲಾಖೆ ಅಧಿಕಾರಿಗಳಾದ ಶಮೀಮ್ ಬಾನು, ಯೋಗೇಂದ್ರ ತ್ರಿಪಾಠಿ ಮೊದಲಾದವರು ಸಚಿವರ ಜತೆಯಲ್ಲಿದ್ದರು.<br /> <br /> ಪೂರ್ವ ನಿಗದಿಯಂತೆ ಮುಖ್ಯಮಂತ್ರಿ ನೇತೃತ್ವದ ರಾಜ್ಯದ ನಿಯೋಗ ಈ ತಿಂಗಳ 14ರಂದು ದೆಹಲಿಗೆ ಬರುವುದಿತ್ತು. ಎರಡು ದಿನ ಮೊದಲೇ ಶೋಭಾ ಕರಂದ್ಲಾಜೆ ರಾಜಧಾನಿಗೆ ಧಾವಿಸಿ ಶಿಂಧೆ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಉಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದ ನೆರವು ಸಿಗುವ ಸಾಧ್ಯತೆಗಳಿಲ್ಲ. ಹೆಚ್ಚುವರಿ ವಿದ್ಯುತ್ ಪೂರೈಸುವಂತೆ ಮಂಗಳವಾರ ಮನವಿ ಮಾಡಿದ ರಾಜ್ಯಕೆ ಇಂಧನ ಸಚಿವಾಲಯ ಸ್ಪಷ್ಟ ಭರವಸೆ ಕೊಡದೆ `ಬಂದ ದಾರಿಗೆ ಸುಂಕ ಇಲ್ಲ~ ಎಂಬಂತೆ ಬರಿಗೈ ತೋರಿಸಿ ಕಳುಹಿಸಿದೆ.<br /> <br /> ~ರಾಜ್ಯವೇ ವಿದ್ಯುತ್ ಸಮಸ್ಯೆಗೆ ಪೂರ್ಣ ಹೊಣೆ. ಇದರಲ್ಲಿ ಕೇಂದ್ರದ ಪಾತ್ರವೇನೂ ಇಲ್ಲ. ವಿದ್ಯುತ್ ಸಮವರ್ತಿ ಪಟ್ಟಿಯಲ್ಲಿರುವ ವಿಷಯವಾದರೂ ನಮ್ಮಲ್ಲಿರುವ ಸೀಮಿತ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡುತ್ತಿದ್ದೇವೆ~ ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.<br /> <br /> ವಿದ್ಯುತ್ ಅಭಾವದಿಂದ ~ಲೋಡ್ ಶೆಡ್ಡಿಂಗ್~ ಸಮಸ್ಯೆ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಪೂರೈಸಬೇಕು ಎಂದು ಸುಶೀಲ್ ಕುಮಾರ್ ಶಿಂಧೆ ಅವರಿಗೆ ರಾಜ್ಯ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದರು. ಆದರೆ, ರಾಜ್ಯದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನ ದೊರೆಯಲಿಲ್ಲ.<br /> <br /> ~ಕರ್ನಾಟಕ ವಿದ್ಯುತ್ ಸಮಸ್ಯೆಗೆ ಕೇಂದ್ರದ ಕಡೆ ಬೆರಳು ತೋರುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ರಾಜ್ಯದ ಹೊಣೆ. ಆದರೂ ಕರ್ನಾಟಕದ ಮನವಿಯನ್ನು ಪರಿಶೀಲಿಸಲು ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಬುಧವಾರ ಬೆಳಿಗ್ಗೆ ರಾಜ್ಯದ ಅಧಿಕಾರಿಗಳ ಜತೆ ಸಭೆ ನಡೆಯಲಿದೆ~ ಎಂದು ಶಿಂಧೆ ತಿಳಿಸಿದರು.<br /> <br /> ~ವಿದ್ಯುತ್ ಹೆಸರಿನಲ್ಲಿ ರಾಜಕೀಯ ಮಾಡುವುದು ನನಗಂತೂ ಇಷ್ಟವಿಲ್ಲ. ಕರ್ನಾಟಕದ ಬಗೆಗೆ ಯುಪಿಎ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂದು ಹೇಳುವುದು ಸರಿಯಲ್ಲ. ವಿದ್ಯುತ್ ಸಮಸ್ಯೆ ಆ ರಾಜ್ಯದಲ್ಲಿ ಮಾತ್ರ ಇಲ್ಲ. ಮಹಾರಾಷ್ಟ್ರ, ದೆಹಲಿ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿದೆ~ ಎಂದು ಸ್ಪಷ್ಟಪಡಿಸಿದರು.<br /> <br /> ಕೇಂದ್ರ ಸರ್ಕಾರದ ಬಳಿ ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಇದೆ. ಅದನ್ನು ಎಲ್ಲರಿಗೂ ಹಂಚಿಕೆ ಮಾಡಲಾಗುತ್ತಿದೆ. ಎಲ್ಲವನ್ನು ಕೇಂದ್ರವೇ ಪೂರೈಸಬೇಕೆಂದು ನಿರೀಕ್ಷಿಸಬಾರದು. ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಬಾರದು. ಕಾಲಕಾಲಕ್ಕೆ ಅಗತ್ಯವಾದ ವಿದ್ಯುತ್ ಅನ್ನು ರಾಜ್ಯಗಳೇ ಉತ್ಪಾದಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.<br /> <br /> ನೆರವು ಭರವಸೆ: ಸಮಸ್ಯೆಗೆ ಸಿಕ್ಕಿರುವ ರಾಜ್ಯಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಸಭೆಯ ಬಳಿಕ ಶೋಭಾ ಸ್ಪಷ್ಟಪಡಿಸಿದರು. ರಾಜ್ಯಕ್ಕೆ ಕೊರತೆ ಆಗಿರುವ ವಿದ್ಯುತ್ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಚಿವರಿಗೆ ಕೇಳಲಾಗಿದೆ.<br /> <br /> ರಾಜ್ಯಕ್ಕೆ ಪ್ರತಿನಿತ್ಯ ಏಳು ಸಾವಿರ ಮೆ.ವಾ ವಿದ್ಯುತ್ ಅಗತ್ಯವಿದೆ. ಆದರೆ, ಆರು ಸಾವಿರ ಮೆ.ವಾ ಲಭ್ಯತೆ ಇದೆ. ಅಂತರ ಹೆಚ್ಚೇನೂ ಇಲ್ಲ. ಸಮಸ್ಯೆಯನ್ನು ಗಂಭೀರ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಬರೀ ಮಾಧ್ಯಮಗಳ ಸೃಷ್ಟಿ ಎಂದು ಇಂಧನ ಸಚಿವರು ದೂರಿದರು. <br /> <br /> ಛತ್ತೀಸ್ಗಢದಿಂದ 200 ಮೆ.ವಾ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ವಿತರಣಾ ಜಾಲದ ಸಮಸ್ಯೆಯಿಂದ ಕೇವಲ 16 ಮೆ.ವಾ ಮಾತ್ರ ಪೂರೈಕೆ ಆಗುತ್ತಿದೆ. ಈ ಕಾರಣಕ್ಕೆ ಪೂರ್ವದ ಬದಲಿಗೆ ಪಶ್ಚಿಮದ ಮಹಾರಾಷ್ಟ್ರ ಮತ್ತು ಗೋವಾದ ಮುಖಾಂತರ ವಿದ್ಯುತ್ ಒದಗಿಸುವಂತೆ ಕೋರಲಾಗಿದೆ ಎಂದು ಸ್ಪಷ್ಟಪಡಿಸಿದರು.<br /> <br /> ಬುಧವಾರ ಕಲ್ಲಿದ್ದಲು ಸಚಿವರನ್ನು ಭೇಟಿ ಮಾಡಲಾಗುತ್ತಿದೆ. ರಾಜ್ಯಕ್ಕೆ ಪ್ರತಿದಿನ 23 ಸಾವಿರ ದಶಲಕ್ಷ ಟನ್ ಕಲ್ಲಿದ್ದಲು ಅಗತ್ಯವಿದೆ. 11 ಸಾವಿರ ದಶಲಕ್ಷ ಟನ್ ಪೂರೈಕೆ ಆಗುತ್ತಿದೆ. ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಆಗಿದೆ ಎಂದು ಸಚಿವರು ಖಚಿತಪಡಿಸಿದರು.<br /> <br /> ಸಿಂಗರೇಣಿಯಿಂದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 10.5ದಶಲಕ್ಷ ಟನ್ ಕಲ್ಲಿದ್ದಲು ಬರಬೇಕಿತ್ತು. 5.5 ದಶಲಕ್ಷ ಟನ್ ಬಂದಿದೆ. ತಲಚೇರಿಯಿಂದ 14.5 ದಶಲಕ್ಷ ಟನ್ ಬರಬೇಕಿತ್ತು. ಎಂಟು ದಶಲಕ್ಷ ಟನ್ ಮಾತ್ರ ಪೂರೈಕೆ ಆಗಿದೆ. `ವೆಸ್ಟ್ ಕೋಸ್ಟ್~ ಗಣಿಯಿಂದ ಮಾತ್ರ ಸರಿಯಾದ ಪ್ರಮಾಣದ ಕಲ್ಲಿದ್ದಲು ಬಂದಿದೆ ಎಂದು ಸಚಿವರು ನುಡಿದರು.<br /> <br /> ಕರ್ನಾಟಕದ ದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್, ವಿಶೇಷ ಸಹಾಯಕ ಪ್ರತಿನಿಧಿ ಬೈಕೆರೆ ನಾಗೇಶ್, ರೆಸಿಡೆಂಟ್ ಕಮಿಷನರ್ ವಂದನಾ ಗುರ್ನಾನಿ, ಇಂಧನ ಇಲಾಖೆ ಅಧಿಕಾರಿಗಳಾದ ಶಮೀಮ್ ಬಾನು, ಯೋಗೇಂದ್ರ ತ್ರಿಪಾಠಿ ಮೊದಲಾದವರು ಸಚಿವರ ಜತೆಯಲ್ಲಿದ್ದರು.<br /> <br /> ಪೂರ್ವ ನಿಗದಿಯಂತೆ ಮುಖ್ಯಮಂತ್ರಿ ನೇತೃತ್ವದ ರಾಜ್ಯದ ನಿಯೋಗ ಈ ತಿಂಗಳ 14ರಂದು ದೆಹಲಿಗೆ ಬರುವುದಿತ್ತು. ಎರಡು ದಿನ ಮೊದಲೇ ಶೋಭಾ ಕರಂದ್ಲಾಜೆ ರಾಜಧಾನಿಗೆ ಧಾವಿಸಿ ಶಿಂಧೆ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಉಂಟುಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>