<p><strong>ಹೆಬ್ರಿ: </strong>ಹೆಬ್ರಿ ಪಟ್ಟಣ ಸಮೀಪದ ರಿಂಗ್ ರೋಡ್ನ ಅಡಿಯಲ್ಲಿ ಸುಣ್ಣಮಣ್ಣಿನಿಂದ ಮಾಡಿದ ಹಳೆಯದಾದ ಬೃಹತ್ ಮಡಿಕೆಯೊಂದು ಪತ್ತೆಯಾಗಿದ್ದು ಜನತೆಗೆ ಕುತೂಹಲ ಕೆರಳಿಸಿದೆ. <br /> ಕೆಲವು ದಿನಗಳ ಹಿಂದೆಯೇ ರಸ್ತೆ ಕೆಲಸ ಮಾಡುವವರಿಗೆ ಇದರ ಕುರುಹು ದೊರೆತಿದ್ದರೂ ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಗುರುವಾರ ಪೇಟೆಯಾದ್ಯಂತ ಪ್ರಚಾರಗೊಂಡು ಹೆಬ್ರಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.<br /> <br /> ತುಂಬಾ ಹಳೆಯದಾದ ಸುಣ್ಣ ಮತ್ತು ಮಣ್ಣಿನಿಂದ ಮಾಡಿರುವ ದಪ್ಪದ ಮಡಿಕೆಯಾಗಿದ್ದು ರಸ್ತೆಯ ಅಡಿಯಲ್ಲಿ ಹೂತು ಇಡಲಾಗಿದೆ. ಇದರ ಒಳಗಿದ್ದ ವಸ್ತುವನ್ನು ಯಾರೋ ಹೊರತೆಗೆದಿದ್ದು ಆ ಗೆರೆಗಳು ಬಿದ್ದದ್ದು ತಿಳಿಯುತ್ತದೆ. ಯಾವ ಕಾರಣಕ್ಕೆ ಮಡಕೆಯನ್ನು ಇಲ್ಲಿಡಲಾಗಿದೆ ಎಂಬು ನಿಗೂಢವಾಗಿದೆ. <br /> <br /> ಹೆಬ್ರಿ ಠಾಣಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಮಾಡುವುದಾದರೆ ಪೊಲೀಸ್ ರಕ್ಷಣೆ ನೀಡುವುದಾಗಿ ತಿಳಿಸಿದ್ದಾರೆ. <br /> ರಸ್ತೆ ಕೆಲಸ ಮಾಡಿದವರಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ರಿ: </strong>ಹೆಬ್ರಿ ಪಟ್ಟಣ ಸಮೀಪದ ರಿಂಗ್ ರೋಡ್ನ ಅಡಿಯಲ್ಲಿ ಸುಣ್ಣಮಣ್ಣಿನಿಂದ ಮಾಡಿದ ಹಳೆಯದಾದ ಬೃಹತ್ ಮಡಿಕೆಯೊಂದು ಪತ್ತೆಯಾಗಿದ್ದು ಜನತೆಗೆ ಕುತೂಹಲ ಕೆರಳಿಸಿದೆ. <br /> ಕೆಲವು ದಿನಗಳ ಹಿಂದೆಯೇ ರಸ್ತೆ ಕೆಲಸ ಮಾಡುವವರಿಗೆ ಇದರ ಕುರುಹು ದೊರೆತಿದ್ದರೂ ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಗುರುವಾರ ಪೇಟೆಯಾದ್ಯಂತ ಪ್ರಚಾರಗೊಂಡು ಹೆಬ್ರಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.<br /> <br /> ತುಂಬಾ ಹಳೆಯದಾದ ಸುಣ್ಣ ಮತ್ತು ಮಣ್ಣಿನಿಂದ ಮಾಡಿರುವ ದಪ್ಪದ ಮಡಿಕೆಯಾಗಿದ್ದು ರಸ್ತೆಯ ಅಡಿಯಲ್ಲಿ ಹೂತು ಇಡಲಾಗಿದೆ. ಇದರ ಒಳಗಿದ್ದ ವಸ್ತುವನ್ನು ಯಾರೋ ಹೊರತೆಗೆದಿದ್ದು ಆ ಗೆರೆಗಳು ಬಿದ್ದದ್ದು ತಿಳಿಯುತ್ತದೆ. ಯಾವ ಕಾರಣಕ್ಕೆ ಮಡಕೆಯನ್ನು ಇಲ್ಲಿಡಲಾಗಿದೆ ಎಂಬು ನಿಗೂಢವಾಗಿದೆ. <br /> <br /> ಹೆಬ್ರಿ ಠಾಣಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಮಾಡುವುದಾದರೆ ಪೊಲೀಸ್ ರಕ್ಷಣೆ ನೀಡುವುದಾಗಿ ತಿಳಿಸಿದ್ದಾರೆ. <br /> ರಸ್ತೆ ಕೆಲಸ ಮಾಡಿದವರಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>